ನನ್ನ ವೀಣೆಯ ತಂತಿಗಳಿಂದ
ಬರವು ಇನ್ನೂ ನಾದ ಹಲವು
ಹಾಡಬಯಸಿದುದನ್ನೂ ಹಾಡದಾದೆನು
ಎದೆಯ ಮಾತ ಹೇಳಲೇಕೋ
ಕೂಡಿ ಬರದು ಕಾಲವೇಕೋ
ಹೇಳಬಯಸಿದುದೆಲ್ಲಾ ಉಳಿದುಹೋಯಿತು
ಮೊಗ್ಗು ಏಕೆ ಅರಳದೀಗ
ಗಾಳಿಯೇಕೆ ಆಡದೀಗ
ಕಾಣುತಿದ್ದ ಮುಖವೂ ಕಾಣದಾಯಿತು
ನನ್ನ ಮನೆಯ ಬೀದಿಯ ಮುಂದೆ
ಕಿಟಕಿಯಲ್ಲಿ ಕಂಡ ಮುಖವ
ಒಮ್ಮೆ ಕರೆಯುವ ಮೊದಲೇ ಬೆಳಕು ಆರಿತು
ಮತ್ತೆ ಎದುರುಗೊಳ್ಳುವ ತನಕ
ಮತ್ತೊಮ್ಮೆ ಅವಳ ಕಾಣುವ ತವಕ
ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು
Subscribe to:
Post Comments (Atom)
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...
No comments:
Post a Comment