ಬಿಟ್ಟುಬಿಡು ಈಗೆನ್ನ ಎನ್ನ ಭಾವಸಮಾಧಿಯೊಳು
ಮಂದ್ರ ಸ್ಥಾಯಿಯಲೀಗ ಹಾಡಿಕೊಳಲೇ?
ಆರ ಭಜಿಸಲಿ ಈ ಗಾಢ ತಿಮಿರದೊಳು
ಮನದ ಕದವನು ಈಗ ಮುಚ್ಚಿಕೊಳಲೇ?
ಬಿಟ್ಟುಬಿಡು ಈಗೆನ್ನ ದೈತ್ಯ ತೆರೆಗಳ ನಡುವೆ
ರೇತ ಸಮುದ್ರದಲೀಗ ತೇಲಿಕೊಳಲೇ?
ಅತ್ತು ಬಳಲಿದ ಕಣ್ಣ ಹನಿ ಬತ್ತಿಹೋಗಿರಲು
ಕ್ಷುದ್ರ ರೆಪ್ಪೆಯನೊಮ್ಮೆ ಮುಚ್ಚಿಕೊಳಲೇ?
ಕಂಡ ಕನಸುಗಳೆಲ್ಲ ವಿಚ್ಛಿದ್ರವಾಗಿರಲು
ಎದೆಯ ಬಯಕೆಯನೀಗ ಬಿಚ್ಚಿಕೊಳಲೇ?
ಎಲ್ಲ ಕೊನೆಗೊಳುವ ಮುನ್ನ ಮನವೀಗ ಬೇಡುತಿದೆ
ಎನ್ನ ಕರ್ಕಶ ಸ್ವರದಿಂದೊಮ್ಮೆ ಹಾಡಿಕೊಳಲೇ?
[soundcloud url="https://api.soundcloud.com/tracks/86459760" width="100%" height="166" iframe="true" /]
Subscribe to:
Post Comments (Atom)
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...
No comments:
Post a Comment