Tuesday, August 13, 2013

ಬಿಟ್ಟುಬಿಡು

ಬಿಟ್ಟುಬಿಡು ಈಗೆನ್ನ ಎನ್ನ ಭಾವಸಮಾಧಿಯೊಳು
ಮಂದ್ರ ಸ್ಥಾಯಿಯಲೀಗ ಹಾಡಿಕೊಳಲೇ?
ಆರ ಭಜಿಸಲಿ ಈ ಗಾಢ ತಿಮಿರದೊಳು
ಮನದ ಕದವನು ಈಗ ಮುಚ್ಚಿಕೊಳಲೇ?

ಬಿಟ್ಟುಬಿಡು ಈಗೆನ್ನ ದೈತ್ಯ ತೆರೆಗಳ ನಡುವೆ
ರೇತ ಸಮುದ್ರದಲೀಗ ತೇಲಿಕೊಳಲೇ?
ಅತ್ತು ಬಳಲಿದ ಕಣ್ಣ ಹನಿ ಬತ್ತಿಹೋಗಿರಲು
ಕ್ಷುದ್ರ ರೆಪ್ಪೆಯನೊಮ್ಮೆ ಮುಚ್ಚಿಕೊಳಲೇ?

ಕಂಡ ಕನಸುಗಳೆಲ್ಲ ವಿಚ್ಛಿದ್ರವಾಗಿರಲು
ಎದೆಯ ಬಯಕೆಯನೀಗ ಬಿಚ್ಚಿಕೊಳಲೇ?
ಎಲ್ಲ ಕೊನೆಗೊಳುವ ಮುನ್ನ ಮನವೀಗ ಬೇಡುತಿದೆ
ಎನ್ನ ಕರ್ಕಶ ಸ್ವರದಿಂದೊಮ್ಮೆ ಹಾಡಿಕೊಳಲೇ?

[soundcloud url="https://api.soundcloud.com/tracks/86459760" width="100%" height="166" iframe="true" /]

 

No comments:

Post a Comment

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...