ಅನುಭವ
ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ
ಜನಿಮರಣಂಗಳಲ್ಲೂ ಇಹಪರಂಗಳಲ್ಲೂ (೨)
ಬಿಡದಲೆ ಕಾಯುತ್ತ ದಾರಿಗಾಣಿಸಿದೆ
ಹೊಸತನು ಅರಿತಾಗ ಹಳತನು ತೊರೆದಾಗ
ಅಪರವೆಂಬುದು ಕಾಣೆ ನಿನ್ನ ಸೃಷ್ಟಿಯೊಳಗೆ
ನಿನ್ನನು ಅರಿತಾಗ ಮುಚ್ಚಿದ್ದು ತೆರೆದಾಗ
ನೀನೇ ನೀನಿದ್ದುದ ಕಂಡೆ ನಿನ್ನ ಸೃಷ್ಟುಯೊಳಾಗೆ
ಬರಿದೊಂದು ಸ್ಪರ್ಶದ ಮೋಹಕ ಮಾಯೆಯಲಿ
ಅರಿಯದ ತೀರದೊಳು ಎನ್ನ ತಂದು ಕೂರಿಸಿದೆ
ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ
Wednesday, February 19, 2014
Subscribe to:
Posts (Atom)
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...
-
ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಬಹಿರಂಗಪಡಿಸಿದ ರೀತಿ ಅನ್ಯಾದೃಶವಾದುದು. ರಮಣ ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ...
-
Appeasement and the Mirage of Harmony: Lessons from History Across Indian history, well-intentioned efforts to create harmony through com...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...