ನೀನೊಮ್ಮೆ ಉಲಿಯುವ ತನಕ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
ಇರುಳು ಕಳೆಯುವವರೆಗೆ
ಇರುಳಿನೊಲು ಕಾವೆನು ನಾನು
ಬೆಳಗ್ಗಿನಾ ಬೆಳಕಿನ ಬರವ ತಾಳ್ಮೆಯಲಿ ತಾಳ್ದು
ಬೆಳಗು ಬೆಳಗಲೇ ಬೇಕು
ಇರುಳು ಮಾಸಲೇ ಬೇಕು
ನಿನ್ನಿನಿದಾದ ಮಾತುಗಳ ಹೊಳೆ ಹರಿಯಬೇಕು
ಇನಿದಾದ ಮಾತಿನ ಒಳಗೆ
ಕೇಳರಿಯದಾ ಗಾನ
ಆಕಾಶ ಗೋಪುರವ ಛೇದಿಸಲೇ ಬೇಕು
ಎನ್ನೆದೆಯ ಗೂಡಿನೊಳಿರುವ
ಹಕ್ಕಿಗಳ ಚಿಲಿಪಿಲಿಯಿಂದ
ಗಾನಕ್ಕೆ ಮೇಳವನು ಕೂಡಿಸಲೇ ಬೇಕು
ಆ ಗಾನಮೇಳದಿಂದೆ
ಹೂವುಗಳು ತಾವು ಅರಳಿ
ಇಳೆಯ ಹೂದೋಟಗಳ ವ್ಯಾಪಿಸಲೇ ಬೇಕು
ನೀನೊಮ್ಮೆ ಉಲಿಯುವ ತನಕ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
[soundcloud url="https://api.soundcloud.com/tracks/85846689" width="100%" height="166" iframe="true" /]
Tuesday, August 13, 2013
Subscribe to:
Post Comments (Atom)
ಜಾತಿಗಣತಿಯ ಆ60 ಪ್ರಶ್ನೆಗಳು
ಜಾತಿಗಣತಿಯ ಆ 60 ಪ್ರಶ್ನೆಗಳು ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ...

-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...
No comments:
Post a Comment