ನೋಡನೋಡುತ್ತಿರೆ ಮೂಡಿಬಂದಿತು ಕಣ್ಣ ಮುಂದೊಂದು ಪಟಲ
ತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲ
ಕೇಳಿದರು ಗೆಳತಿಯರು ಯಾರವನು ಯಾರವನು
ನಿನ್ನ ಪಟಲವನು ತುಂಬಿದವನು
ಉತ್ತರವ ನಾನರಿಯೆ ನಾನರಿಯೆ ಎನದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಎದೆಯ ಕೆನ್ವಾಸಿನ ಮೇಲೆ ಬರೆದಿದ್ದೆ ಪಟವೊಂದು
ಕಂಡ ಕನಸುಗಳ ಮಾರೊಡಲನಾಂತು
ಎದೆಯೊಳವಿತಿಟ್ಟ ಗುಟ್ಟುಗಳಿ ಗುತ್ತರವ ನೀಯದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಬಲು ದೀರ್ಘವಾಗಿದ್ದ ಕನಸಿನಿಂದೆಚ್ಚರಗೊಂಡೆ
ಸುತ್ತ ಕಂಡುಬಂದುದು ಬರಿಯ ಹೊದಿಕೆಯ ಅರಿವೆ
Subscribe to:
Post Comments (Atom)
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...
No comments:
Post a Comment