Tuesday, August 13, 2013

ಸ್ಫೂರ್ತಿ

ಮರೆತೊಂದು ನೆನಪನ್ನು ಮೀಂಟಿ ಮೀಂಟುತ ಮತ್ತೆ
ಕೇಳಲು ಇಂಪಾದ ನಾದವಾಗಿಸು
ಇರದಿದ್ದ ಕನಸುಗಳ ತೋರಿ ತೋರುತ ಮತ್ತೆ
ಇರುಳಿನ ನಶೆಯೊಳಗೆ ತೇಲಿತೇಲಿಸು

ಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳ
ಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸು
ಬಂಧದೊಳು ಸಿಲುಕಿದ ಶೂನ್ಯವಾದ ಮನಸ್ಸಿಗೆ
ದಿಕ್ಕುಗಳ ತೋರಿಸುತ್ತ ವಿಷಾದವ ನೀಗಿಸು || ೧||

ಕವಿದಿರುಳಲಿ ತುಂಬು ಬೆಳದಿಂಗಳ
ಮೊಗೆ ಮೊಗೆದೀಯುತ ಬೊಗಸೆಯಲಿ
ಇರದೊಂದು ಕನಸನ್ನು ಇರಗೊಡುತಲಿ ಮತ್ತೆ
ರಾಗಗಳಲೆಯೊಳು ತೇಲಿತೇಲಿಸು || ೨ ||

 

[soundcloud url="https://api.soundcloud.com/tracks/69280433" width="100%" height="166" iframe="true" /]

2 comments:

  1. ಸರ್ ನಿಮ್ಮ ಕವನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ ಆದರೆ ಒಂದು ಮಾತು ಕೇಳ್ತೇನೆ ಇಂತಹ ಅಸಾಮಾನ್ಯ ಕವನ ಕನ್ನಡ ಕವನದಲ್ಲಿ ಪೋಸ್ಟ್ ಮಾಡುವ ಮೂಲಕ ಕನ್ನಡ ಕವನ ಗ್ರೂಪನ್ನು ಅತಿ ಎತ್ತರದಲ್ಲಿ ನಿಲ್ಲಿಸಿದ್ದೀರಿ ಅನಂತಾನಂತ ಧನ್ಯವಾದಗಳು ನಿಮಗೆ

    ReplyDelete
  2. ನಿಮ್ಮ ಪ್ರೀತಿಗಾಗಿ ಕೃತಜ್ಞತೆಗಳು, ಜಯರಾಮ್.

    ReplyDelete

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ ಬ್ರಿಟಿಷರಿಂದ ಆರಂಭಗೊಂಡಿತೇ ಹೊರತು ಕೇವಲ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಯಿತೆನ್ನುವುದು ಪೆರಮೆ. ದಮನಕಾರಿ ಬ್ರಿಟಿಷ್ ಆಡಳಿತ ನೀತಿಗಳು...