ನೀನೊಮ್ಮೆ ಬಾರೆಯಾ
ನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾ
ಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾ
ಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿ
ಒಳಗಿರುವ ನನ್ನನ್ನು ಎಬ್ಬಿಸಿದೆ ನೀ
ಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆ
ಛಲವನ್ನು ಎನಗಿತ್ತು ನಡೆಯಿಸಿದೆ ನೀ
ಬಾಳ್ವೆಯಲಿ ನಲಿವನ್ನೂ ಹದವಾಗಿ ನೋವನ್ನೂ
ಬೆರೆಸುತ್ತ ಊಡಿಸುತ ಬದುಕಿಸಿದೆ ನೀ
ಕ್ಷಣದೊಂದು ಮಾಯೆಯಲಿ ಹಲವಾರು ಬಣ್ಣಗಳ
ತಡೆಯಿರದೆ ಎಲ್ಲೆಲ್ಲೂ ಪ್ರೋಕ್ಷಿಸಿದೆ ನೀ
ಹಲವಾರು ರೂಪಿನಲಿ ಮಾರೊಡಲನ್ನಾಂತು
ಎಲ್ಲವನ್ನು ಎನಗಿತ್ತು ಬದುಕಿಸಿದೆ ನೀ
[soundcloud url="https://api.soundcloud.com/tracks/87050448" width="100%" height="166" iframe="true" /]
Subscribe to:
Post Comments (Atom)
ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ
ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ ಬ್ರಿಟಿಷರಿಂದ ಆರಂಭಗೊಂಡಿತೇ ಹೊರತು ಕೇವಲ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಯಿತೆನ್ನುವುದು ಪೆರಮೆ. ದಮನಕಾರಿ ಬ್ರಿಟಿಷ್ ಆಡಳಿತ ನೀತಿಗಳು...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...
No comments:
Post a Comment