ಎಣೆಯಿಲ್ಲದ ಚೆಲುವೆ,
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂ
ಕಣ್ಣಲ್ಲೆ ನುಡಿವವಳು;
ತನ್ನ ಕಣ್ಣಲ್ಲೆ ನುಡಿವವಳು
ನಾಲಗೆ ನುಡಿಯದ ಮಾತುಗಳೆಲ್ಲವ
ತನ್ನ ಕಣ್ಣಲ್ಲೆ ನುಡಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಮೈಹೊಳಪಿನ ಕಾಂತಿಯೆ ಇಲ್ಲದೆ ಹೋದರೂ
ಬಂಗಾರದಂಥವಳು;
ಮನದೆ ಬಂಗಾರದಂಥವಳು
ಮೈಬಣ್ಣದ ಭ್ರಾಂತಿಗೆ ಸೋಲದೆ ಇದ್ದರೂ ಬಂಗಾರದಂಥವಳು;
ಮನದೆ ಬಂಗಾರದಂಥವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಮಾತುಗಳಾಡುತ ಮೈಯ ಮರೆವವಳಲ್ಲ
ಮಾತನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ಮಿತಿಗಳನರಿಯದೆ ಆಡದೆ ಇದ್ದರೂ
ಹಿತವನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ನಾ ನುಡಿಯದೆ ಇದ್ದರೂ ಮನಸ್ಸಿನ ಮಾತನು
ತಾನಾಗಿ ಅರಿವವಳು
ತಾನಾಡದೆ ಒಂದನೂ ಉಳಿಸದೆ ಇದ್ದರೂ ತಾನಾಗಿ ಅರಿವವಳು;
ಎಲ್ಲವ ತಾನಾಗಿ ಅರಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
Wednesday, September 18, 2019
Subscribe to:
Posts (Atom)
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...
-
ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಬಹಿರಂಗಪಡಿಸಿದ ರೀತಿ ಅನ್ಯಾದೃಶವಾದುದು. ರಮಣ ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ...
-
Appeasement and the Mirage of Harmony: Lessons from History Across Indian history, well-intentioned efforts to create harmony through com...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...