ಎಣೆಯಿಲ್ಲದ ಚೆಲುವೆ,
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂ
ಕಣ್ಣಲ್ಲೆ ನುಡಿವವಳು;
ತನ್ನ ಕಣ್ಣಲ್ಲೆ ನುಡಿವವಳು
ನಾಲಗೆ ನುಡಿಯದ ಮಾತುಗಳೆಲ್ಲವ
ತನ್ನ ಕಣ್ಣಲ್ಲೆ ನುಡಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಮೈಹೊಳಪಿನ ಕಾಂತಿಯೆ ಇಲ್ಲದೆ ಹೋದರೂ
ಬಂಗಾರದಂಥವಳು;
ಮನದೆ ಬಂಗಾರದಂಥವಳು
ಮೈಬಣ್ಣದ ಭ್ರಾಂತಿಗೆ ಸೋಲದೆ ಇದ್ದರೂ ಬಂಗಾರದಂಥವಳು;
ಮನದೆ ಬಂಗಾರದಂಥವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಮಾತುಗಳಾಡುತ ಮೈಯ ಮರೆವವಳಲ್ಲ
ಮಾತನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ಮಿತಿಗಳನರಿಯದೆ ಆಡದೆ ಇದ್ದರೂ
ಹಿತವನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ನಾ ನುಡಿಯದೆ ಇದ್ದರೂ ಮನಸ್ಸಿನ ಮಾತನು
ತಾನಾಗಿ ಅರಿವವಳು
ತಾನಾಡದೆ ಒಂದನೂ ಉಳಿಸದೆ ಇದ್ದರೂ ತಾನಾಗಿ ಅರಿವವಳು;
ಎಲ್ಲವ ತಾನಾಗಿ ಅರಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
Wednesday, September 18, 2019
Subscribe to:
Posts (Atom)
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...