ಜಾತಿಗಣತಿಯ ಆ 60 ಪ್ರಶ್ನೆಗಳು
ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025) ಜಾರಿಯಲ್ಲಿದೆ. ಸಾಮಾಜಿಕ ನ್ಯಾಯವನ್ನೊದಗಿಸುವ ಅದ್ಭುತ ಪ್ರಕ್ರಿಯೆಯೆಂದು ಕರೆಯಿಸಿಕೊಂಡ ಜಾತಿ ಸಮೀಕ್ಷೆ ಆಡಳಿತಾತ್ಮಕ ಪ್ರಹಸನ ಮತ್ತು ರಾಜಕೀಯ ವಿಡಂಬನೆಯ ವಸ್ತುವಾಗಿ ಒಡ್ಡಿಕೊಳ್ಳುತ್ತಲಿದೆ.
ಆ ಅರುವತ್ತು ಪ್ರಶ್ನೆಗಳು ಯಾವುವು ಎಂದು ಕೇಳಿದರೆ ಉತ್ತರ ಇಲ್ಲಿದೆ.
- ರೇಷನ್ ಕಾರ್ಡ್
- ಮನೆಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
- ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
- ಚುನಾವಣಾ ಐಡಿ ಕಾರ್ಡ್
- ಕೊಡಗಿನಲ್ಲಿ ರೊಚ್ಚಿಗೇಳುತ್ತಿರುವ ಶಿಕ್ಷಕರು: ಕೊಡಗು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಗಣತಿದಾರರಾಗಿ ಸೇವೆ ಸಲ್ಲಿಸಲು ಒತ್ತಾಯಪೂರ್ವಕವಾಗಿ ನೇಮಿಸಲ್ಪಟ್ಟಿದ್ದಾರೆ. ದುರ್ಬಲ ಮೊಬೈಲ್ ನೆಟ್ವರ್ಕ್, ಡೇಟಾವನ್ನು ಅಪ್ಲೋಡ್ ಮಾಡುವ ಅಸೌಲಭ್ಯ, ತಪ್ಪಾದ ಜಿಪಿಎಸ್ ನಮೂದುಗಳು ಮತ್ತು ಅರಣ್ಯ ಪ್ರದೇಶದಲ್ಲಿನ ಸುರಕ್ಷತಾ ಅಪಾಯಗಳ ಬಗೆಗೆ ಅವರರು ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
- ಕೆಲಸ ಮಾಡಲು ನಿರಾಕರಿಸಿದ ಗಣತಿದಾರರ ಮೇಲೆ ರಾಜ್ಯ ಸರಕಾರದ ದೌರ್ಜನ್ಯ: ಸಮೀಕ್ಷೆಯ ಸಂದರ್ಭದಲ್ಲಿ "ಕರ್ತವ್ಯಗಳನ್ನು ನಿರ್ಲಕ್ಷಿಸುವ" ಸರಕಾರಿ ಸಿಬ್ಬಂದಿ ಅಥವಾ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಎಚ್ಚರಿಸಿದೆ.
- ಎರಡು ದಿನದಲ್ಲಿ 71 ಸಾವಿರ ಮಂದಿಯನ್ನೊಳಗೊಂಡ ಸಮೀಕ್ಷೆ: ಆ್ಯಪ್ನಲ್ಲಿ ಮುಂದುವರಿದ ದೋಷ, ಅಡಚಣೆ, ಗೊಂದಲ: ಬೆಂಗಳೂರಿನಲ್ಲಾದ ಸಮೀಕ್ಷೆಯ 2 ನೇ ದಿನದಲ್ಲಿ 18,487 ಮನೆಗಳಲ್ಲಿ 71,004 ಜನರಿಂದ ಡೇಟಾವನ್ನು ಸಂಗ್ರಹಿಸಲಾಗಿದೆ - ಆದರೆ ತಾಂತ್ರಿಕ ದೋಷ, ಸರ್ವರ್ ಸಮಸ್ಯೆಗಳು, ಒಟಿಪಿ ವೈಫಲ್ಯಗಳು ಮತ್ತು ಅಜಾಗರೂಕ ಅಪ್ಲೋಡ್ಗಳಿಂದಾಗಿ ಅನೇಕ ಫಾರ್ಮ್ಗಳು ಅಪೂರ್ಣವಾಗಿ ಉಳಿದಿವೆ.
- ನ್ಯಾಯಾಲಯವು ಎಚ್ಚರಿಕೆಗಳೊಂದಿಗೆ ಸಮೀಕ್ಷೆಯನ್ನು ಮುಂದುವರಿಸಲು ಅನುಮತಿಸಿತು: ಕರ್ನಾಟಕ ಹೈಕೋರ್ಟ್ ಸಮೀಕ್ಷೆಯನ್ನು ತಡೆಯಲು ನಿರಾಕರಿಸಿತು ಆದರೆ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸಬಾರದು ಎಂದು ಆದೇಶಿಸಿತು.
- ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಗಡುವು ನಿಗದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 7 ರ ಮುನ್ನ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಮತ್ತು ರಾಜ್ಯದ 1.43 ಕೋಟಿ ಮನೆಗಳಲ್ಲಿ ದಿನಕ್ಕೆ ಗಣತಿದಾರರು 10% ರಷ್ಟು ಸಮೀಕ್ಷೆಯನ್ನು ಒಳಗೊಳ್ಳುವಂತೆ ಒತ್ತಾಯಿಸಿದ್ದಾರೆ.
- ಜಾತಿ ಗಣತಿ ಮಾಹಿತಿ ಸ್ವಯಂ ಇಚ್ಛೆಗೆ ಬಿಟ್ಟ ಸಂಗತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಜನರನ್ನೂ ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ ಪ್ರಸ್ತುತ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಜನರ/ ಕುಟುಂಬಗಳ ಸ್ವಯಂ ಇಚ್ಛೆಗೆ ಬಿಟ್ಟಿದ್ದು ಎಂಬುದಾಗಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
- ಅಪರ್ಯಾಪ್ತ ವೇತನ ನಿಗದಿ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ 1.20 ಲಕ್ಷ ಸಮೀಕ್ಷಕರಿಗೆ ಮೊದಲ ಕಂತಿನ ಗೌರವಧನವಾಗಿ ತಲಾ 5000 ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 60.36 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
- ಮುಸ್ಲಿಮರಿಂದ ಅಪಸ್ವರ: ಜಾತಿ ಸಮೀಕ್ಷೆ - ಮುಸ್ಲಿಮರಲ್ಲಿ ಗೊಂದಲ. ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ೧೧.೦೯.೨೦೨೫ (ವರದಿ: ಮುಹಮ್ಮದ್ ಆರಿಫ್ ಮಂಗಳೂರು)
- ಪ್ರತ್ಯೇಕತಾವಾದಿಗಳಿಗೊಂದು ಸುವರ್ಣಾವಕಾಶ: ಸಂದರ್ಭಕ್ಕಾಗಿ ಕಾದಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರತ್ಯೇಕತಾವಾದಿಗಳು "ಹಿಂದೂ ಧರ್ಮ" ಎಂದು ನಮೂದಿಸದೆ "ಲಿಂಗಾಯತ ಧರ್ಮ" ಎಂದು ನಮೂದಿಸುವಂತೆ ಸಾರ್ವಜನಿಕವಾಗಿ ಕೇಳಿಕೊಂಡಿದ್ದಾರೆ.
- ನ್ಯಾಯಾಲಯದ ಆದೇಶ ಎತ್ತಿಹಿಡಿದ ಬ್ರಾಹ್ಮಣ ಮಹಾಸಭಾ: ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಒಪ್ಪಿಗೆ ಸ್ವಯಂಪ್ರೇರಿತವಾಗಿರಬೇಕು ಎಂದು ಸಾರುವ ನ್ಯಾಯಾಲಯದ ಆದೇಶವನ್ನು ಬ್ರಾಹ್ಮಣ ಮಹಾಸಭಾ ಎತ್ತಿಹಿಡಿದಿದೆ.
- ತನ್ನ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯದ ನಡುವಣ ವ್ಯತ್ಯಾಸ ತಿಳಿಯದ ರಾಜ್ಯ ಸರಕಾರ: ₹420 ಕೋಟಿ ಬಜೆಟ್ ಹೊಂದಿದ ಈ ಪರಿಪಾಟವು ಪರಸ್ಪರ ವಿರುದ್ಧವಾದ ಊಹೆಗಳ ಮೇಲೆ ನೆಲೆಗೊಂಡಿದೆ. ಸಾವಿರಾರು ಜಾತಿಗಳನ್ನು ಅಚ್ಚುಕಟ್ಟಾಗಿ ವರ್ಗೀಕರಿಸಬಹುದು, ಅವುಗಳ ಗಣನೆ ಸಂಪೂರ್ಣವಾಗಿ ರಾಜಕೀಯೇತರವಾಗಿದೆ ಮತ್ತು ರಾಜ್ಯ ಸರಕಾರದ ವ್ಯವಸ್ಥೆ ಅವುಗಳನ್ನು ಪರಿಪೂರ್ಣವಾಗಿ ಕಾರ್ಯಗತಗೊಳಿಸಲು ಸಮರ್ಥವಾಗಿದೆ ಎನ್ನುವಂತಹವು ಆ ಊಹೆಗಳು. ಅದೃಷ್ಟವೋ ದುರದೃಷ್ಟವೋ ಎನ್ನುವಂತೆ ಈ ಊಹೆಗಳಲ್ಲಿ ಯಾವುದೂ ನಿಜವಲ್ಲ.