Sunday, October 5, 2025

ಜಾತಿಗಣತಿಯ ಆ60 ಪ್ರಶ್ನೆಗಳು

ಜಾತಿಗಣತಿಯ ಆ 60 ಪ್ರಶ್ನೆಗಳು 

ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025) ಜಾರಿಯಲ್ಲಿದೆ. ಸಾಮಾಜಿಕ ನ್ಯಾಯವನ್ನೊದಗಿಸುವ ಅದ್ಭುತ ಪ್ರಕ್ರಿಯೆಯೆಂದು ಕರೆಯಿಸಿಕೊಂಡ ಜಾತಿ ಸಮೀಕ್ಷೆ ಆಡಳಿತಾತ್ಮಕ ಪ್ರಹಸನ ಮತ್ತು ರಾಜಕೀಯ ವಿಡಂಬನೆಯ ವಸ್ತುವಾಗಿ ಒಡ್ಡಿಕೊಳ್ಳುತ್ತಲಿದೆ.


ಸಮೀಕ್ಷೆ ಮುಂದುವರಿಯುತ್ತಿರುವಂತೆಯೇ ವ್ಯವಸ್ಥೆಯಲ್ಲಿ ಒಡಮೂಡಿರುವ ಬಿರುಕುಗಳು  ಎದ್ದುತೋರಿಕೊಳ್ಳುತ್ತಲಿವೆ. ತಾಂತ್ರಿಕ ದೋಷಗಳು, ಶಿಸ್ತು ಕ್ರಮದ ಬೆದರಿಕೆಗಳು, ಸಮುದಾಯಗಳ ನಡುವಣ ಕಲಹ ಮತ್ತು ನ್ಯಾಯಾಂಗದ ಎಚ್ಚರಿಕೆಗಳು - ಇವೆಲ್ಲವೂ ಈ ಪರಿಪಾಟದ ಸಿಂಧುತ್ವವನ್ನು ಪ್ರಶ್ನಿಸುತ್ತಲಿವೆ. 

ಕರ್ನಾಟಕ ರಾಜ್ಯ ಸರಕಾರವು ಸಮಾಜ ಕಲ್ಯಾಣ ಅಥವಾ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಬಹುದಾದರೂ ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸಮಗ್ರ ಜಾತಿ ಜನಗಣತಿಯನ್ನು ನಡೆಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಕಾನೂನುಬದ್ಧವಾಗಿ ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ.

ಆ ಅರುವತ್ತು ಪ್ರಶ್ನೆಗಳು ಯಾವುವು ಎಂದು ಕೇಳಿದರೆ ಉತ್ತರ ಇಲ್ಲಿದೆ.

ಸಮೀಕ್ಷೆಗೆ ಬೇಕಾಗಿರುವ ದಾಖಲೆಗಳು

  • ರೇಷನ್ ಕಾರ್ಡ್
  • ಮನೆಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
  • ಚುನಾವಣಾ ಐಡಿ ಕಾರ್ಡ್
ಅದರ ಮಾದರಿಯೊಂದನ್ನು ಇಲ್ಲಿ ನೋಡಬಹುದು.

ಸದ್ದು ಮಾಡುತ್ತಲಿರುವ ಸುದ್ದಿಗಳು

  • ಕೊಡಗಿನಲ್ಲಿ ರೊಚ್ಚಿಗೇಳುತ್ತಿರುವ ಶಿಕ್ಷಕರು: ಕೊಡಗು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಗಣತಿದಾರರಾಗಿ ಸೇವೆ ಸಲ್ಲಿಸಲು ಒತ್ತಾಯಪೂರ್ವಕವಾಗಿ ನೇಮಿಸಲ್ಪಟ್ಟಿದ್ದಾರೆ. ದುರ್ಬಲ ಮೊಬೈಲ್ ನೆಟ್‌ವರ್ಕ್, ಡೇಟಾವನ್ನು ಅಪ್‌ಲೋಡ್ ಮಾಡುವ ಅಸೌಲಭ್ಯ, ತಪ್ಪಾದ ಜಿಪಿಎಸ್ ನಮೂದುಗಳು ಮತ್ತು ಅರಣ್ಯ ಪ್ರದೇಶದಲ್ಲಿನ ಸುರಕ್ಷತಾ ಅಪಾಯಗಳ ಬಗೆಗೆ ಅವರರು ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
  • ಕೆಲಸ ಮಾಡಲು ನಿರಾಕರಿಸಿದ ಗಣತಿದಾರರ ಮೇಲೆ ರಾಜ್ಯ ಸರಕಾರದ ದೌರ್ಜನ್ಯ: ಸಮೀಕ್ಷೆಯ ಸಂದರ್ಭದಲ್ಲಿ "ಕರ್ತವ್ಯಗಳನ್ನು ನಿರ್ಲಕ್ಷಿಸುವ" ಸರಕಾರಿ ಸಿಬ್ಬಂದಿ ಅಥವಾ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಎಚ್ಚರಿಸಿದೆ.
  • ಎರಡು ದಿನದಲ್ಲಿ 71 ಸಾವಿರ ಮಂದಿಯನ್ನೊಳಗೊಂಡ ಸಮೀಕ್ಷೆ: ಆ್ಯಪ್‌ನಲ್ಲಿ ಮುಂದುವರಿದ ದೋಷ, ಅಡಚಣೆ, ಗೊಂದಲ: ಬೆಂಗಳೂರಿನಲ್ಲಾದ ಸಮೀಕ್ಷೆಯ 2 ನೇ ದಿನದಲ್ಲಿ 18,487 ಮನೆಗಳಲ್ಲಿ 71,004 ಜನರಿಂದ ಡೇಟಾವನ್ನು ಸಂಗ್ರಹಿಸಲಾಗಿದೆ - ಆದರೆ ತಾಂತ್ರಿಕ ದೋಷ, ಸರ್ವರ್‌ ಸಮಸ್ಯೆಗಳು, ಒಟಿಪಿ ವೈಫಲ್ಯಗಳು ಮತ್ತು ಅಜಾಗರೂಕ ಅಪ್‌ಲೋಡ್‌ಗಳಿಂದಾಗಿ ಅನೇಕ ಫಾರ್ಮ್‌ಗಳು ಅಪೂರ್ಣವಾಗಿ ಉಳಿದಿವೆ.
  • ನ್ಯಾಯಾಲಯವು ಎಚ್ಚರಿಕೆಗಳೊಂದಿಗೆ ಸಮೀಕ್ಷೆಯನ್ನು ಮುಂದುವರಿಸಲು ಅನುಮತಿಸಿತು: ಕರ್ನಾಟಕ ಹೈಕೋರ್ಟ್ ಸಮೀಕ್ಷೆಯನ್ನು ತಡೆಯಲು ನಿರಾಕರಿಸಿತು ಆದರೆ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸಬಾರದು ಎಂದು ಆದೇಶಿಸಿತು.
  • ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಗಡುವು ನಿಗದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 7 ರ ಮುನ್ನ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಮತ್ತು ರಾಜ್ಯದ 1.43 ಕೋಟಿ ಮನೆಗಳಲ್ಲಿ ದಿನಕ್ಕೆ ಗಣತಿದಾರರು 10% ರಷ್ಟು ಸಮೀಕ್ಷೆಯನ್ನು ಒಳಗೊಳ್ಳುವಂತೆ ಒತ್ತಾಯಿಸಿದ್ದಾರೆ.
  • ಜಾತಿ ಗಣತಿ ಮಾಹಿತಿ ಸ್ವಯಂ ಇಚ್ಛೆಗೆ ಬಿಟ್ಟ ಸಂಗತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಜನರನ್ನೂ ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ ಪ್ರಸ್ತುತ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಜನರ/ ಕುಟುಂಬಗಳ ಸ್ವಯಂ ಇಚ್ಛೆಗೆ ಬಿಟ್ಟಿದ್ದು ಎಂಬುದಾಗಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್‌ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
  • ಅಪರ್ಯಾಪ್ತ ವೇತನ ನಿಗದಿ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ 1.20 ಲಕ್ಷ ಸಮೀಕ್ಷಕರಿಗೆ ಮೊದಲ ಕಂತಿನ ಗೌರವಧನವಾಗಿ ತಲಾ 5000 ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 60.36 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ
  • ಮುಸ್ಲಿಮರಿಂದ ಅಪಸ್ವರ: ಜಾತಿ ಸಮೀಕ್ಷೆ - ಮುಸ್ಲಿಮರಲ್ಲಿ ಗೊಂದಲ. ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ೧೧.೦೯.೨೦೨೫ (ವರದಿ: ಮುಹಮ್ಮದ್ ಆರಿಫ್ ಮಂಗಳೂರು) 
  • ಪ್ರತ್ಯೇಕತಾವಾದಿಗಳಿಗೊಂದು ಸುವರ್ಣಾವಕಾಶ: ಸಂದರ್ಭಕ್ಕಾಗಿ ಕಾದಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರತ್ಯೇಕತಾವಾದಿಗಳು "ಹಿಂದೂ ಧರ್ಮ" ಎಂದು ನಮೂದಿಸದೆ "ಲಿಂಗಾಯತ ಧರ್ಮ" ಎಂದು ನಮೂದಿಸುವಂತೆ ಸಾರ್ವಜನಿಕವಾಗಿ ಕೇಳಿಕೊಂಡಿದ್ದಾರೆ.
  • ನ್ಯಾಯಾಲಯದ ಆದೇಶ ಎತ್ತಿಹಿಡಿದ ಬ್ರಾಹ್ಮಣ ಮಹಾಸಭಾ: ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಒಪ್ಪಿಗೆ ಸ್ವಯಂಪ್ರೇರಿತವಾಗಿರಬೇಕು ಎಂದು ಸಾರುವ ನ್ಯಾಯಾಲಯದ ಆದೇಶವನ್ನು ಬ್ರಾಹ್ಮಣ ಮಹಾಸಭಾ ಎತ್ತಿಹಿಡಿದಿದೆ.  
  • ತನ್ನ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯದ ನಡುವಣ ವ್ಯತ್ಯಾಸ ತಿಳಿಯದ ರಾಜ್ಯ ಸರಕಾರ: ₹420 ಕೋಟಿ ಬಜೆಟ್‌ ಹೊಂದಿದ ಈ ಪರಿಪಾಟವು ಪರಸ್ಪರ ವಿರುದ್ಧವಾದ ಊಹೆಗಳ ಮೇಲೆ ನೆಲೆಗೊಂಡಿದೆ. ಸಾವಿರಾರು ಜಾತಿಗಳನ್ನು ಅಚ್ಚುಕಟ್ಟಾಗಿ ವರ್ಗೀಕರಿಸಬಹುದು, ಅವುಗಳ ಗಣನೆ ಸಂಪೂರ್ಣವಾಗಿ ರಾಜಕೀಯೇತರವಾಗಿದೆ ಮತ್ತು ರಾಜ್ಯ ಸರಕಾರದ ವ್ಯವಸ್ಥೆ ಅವುಗಳನ್ನು ಪರಿಪೂರ್ಣವಾಗಿ ಕಾರ್ಯಗತಗೊಳಿಸಲು ಸಮರ್ಥವಾಗಿದೆ ಎನ್ನುವಂತಹವು ಆ ಊಹೆಗಳು. ಅದೃಷ್ಟವೋ ದುರದೃಷ್ಟವೋ ಎನ್ನುವಂತೆ ಈ ಊಹೆಗಳಲ್ಲಿ ಯಾವುದೂ ನಿಜವಲ್ಲ.






Tuesday, September 30, 2025

ಕರ್ನಾಟಕದ ಜಾತಿಗಣತಿ 2025: ಗಮನಿಸಬೇಕಾದ ಅಂಶಗಳು

 ಕರ್ನಾಟಕದ ಜಾತಿಗಣತಿ 2025: ಗಮನಿಸಬೇಕಾದ ಅಂಶಗಳು


* ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಅವರನ್ನು ಮನವೊಲಿಸಬಾರದು ಎಂದು ಜನರಿಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳುತ್ತದೆ. [1]


* ಪ್ರಸ್ತುತ ಜಾರಿಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಎಂದು ಕರೆಯಿಸಿಕೊಂಡ ಜಾತಿ ಗಣತಿಯನ್ನು ನಿಷೇಧಿಸಲು ಕರ್ನಾಟಕದ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಆದರೆ ನ್ಯಾಯಾಲಯದ ಆದೇಶದ ಪ್ರಕಾರ ಕೆಲವು ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅದರ ಪ್ರಕಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು "ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ ಮತ್ತು ಯಾವುದೇ ವ್ಯಕ್ತಿಯು ಕೋರಿದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಬಾಧ್ಯತೆಯಿಲ್ಲ" ಎಂದು ಜನರಿಗೆ ಸ್ಪಷ್ಟವಾಗಿ ತಿಳಿಯಪಡಿಸುವ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಬೇಕು.


* ಸಮೀಕ್ಷೆಯಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಬಾಧ್ಯತೆ ಗಣತಿದಾರರು ಜನರಿಗೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳುವ ಮೊದಲು, ಮಿತಿ ಹಂತದಲ್ಲಿ ಸಮೀಕ್ಷೆಯಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಬಾಧ್ಯತೆಯಿಲ್ಲ ಎಂದು ಆಯೋಗವು ಎಲ್ಲಾ ಜನರಿಗೆ ತಿಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.


* ಸಮೀಕ್ಷೆಯಲ್ಲಿ ಭಾಗವಹಿಸುವವರು ವಿವರಗಳನ್ನು ಒದಗಿಸಲು ನಿರಾಕರಿಸಿದರೆ ಅವರನ್ನು ಮನವೊಲಿಸುವ ಅಥವಾ ಅನುನಯಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಅನುಮತಿ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


* ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ರಾಜ್ಯ ಸರ್ಕಾರ ಮತ್ತು ಆಯೋಗವು ಅಂತಹ ಸಮೀಕ್ಷೆಯನ್ನು ನಡೆಸುವ ಅಧಿಕಾರವನ್ನು ಪ್ರಶ್ನಿಸಿ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಮಹಾಸಭಾದ ಹಲವಾರು ಸದಸ್ಯರು ಮತ್ತು ಇತರ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳ ಗುಂಪಿನ ಮೇಲೆ ಮಧ್ಯಂತರ ಆದೇಶವನ್ನು ಹೊರಡಿಸಿದೆ.


* ಸಂಗ್ರಹಿಸಿದ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗಿದೆಯೆಂದೂ ಆಯೋಗವನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಸೇರಿದಂತೆ ಯಾವುದೇ ವ್ಯಕ್ತಿಗೆ ಪ್ರವೇಶಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳನ್ನು ಬಹಿರಂಗಪಡಿಸುವ ಒಂದು ಕೆಲಸದ ದಿನದೊಳಗೆ ಅಫಿಡವಿಟ್ ಸಲ್ಲಿಸಲು ನ್ಯಾಯಪೀಠ ಆಯೋಗಕ್ಕೆ ನಿರ್ದೇಶನ ನೀಡಿತು.


ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬ ನೆಪದಲ್ಲಿ ಜಾತಿ ಜನಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಕಾನೂನಿನಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರು ಗುರುತಿಸಿದ್ದಾರೆ. ಅದಲ್ಲದೆ ಆಧಾರ್ ಮತ್ತು ಇತರ ಮಾಹಿತಿಗಳನ್ನು ರಾಜ್ಯ ಸರಕಾರ ಸಂಗ್ರಹಿಸುವುದು ಜನರ ಗೌಪ್ಯತೆಯ ಹಕ್ಕಿಗೆ ವಿರುದ್ಧವಾಗಿದೆ ಎಂಬುದು ಕೂಡ ಅರ್ಜಿದಾರರ ಅಹವಾಲಾಗಿತ್ತು.


* ಈ ಹಿಂದಣ ವಿಚಾರಣೆಯ ಸಂದರ್ಭದಲ್ಲಿ "ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಸಂಗ್ರಹಿಸಿದ ಡೇಟಾವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಆಯೋಗ ಕೈಗೊಳ್ಳಲಿದೆ" ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನ್ಯಾಯಾಲಯಕ್ಕೆ ತಿಳಿಯಪಡಿಸಿತ್ತು.


ತಿಳಿದಿರಲಿ:

ಭಾರತದ ಸಂವಿಧಾನದ ಪ್ರಕಾರ ಜಾತಿ ಮಾಹಿತಿಯನ್ನೊಳಗೊಂಡ ಜನಗಣತಿಯನ್ನು ನಡೆಸುವ ಪ್ರಾಥಮಿಕ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. 246 ನೇ ವಿಧಿ ಮತ್ತು ಏಳನೇ ಷೆಡ್ಯೂಲ್ "ಜನಗಣತಿ ಮತ್ತು ಅಂಕಿಅಂಶಗಳನ್ನು" ಯೂನಿಯನ್ ಪಟ್ಟಿಯಲ್ಲಿ ವರ್ಗೀಕರಿಸುತ್ತದೆ ಮತ್ತು ಸಂಸತ್ತಿಗೆ ಅದರ ಮೇಲೆ ಕಾನೂನು ರಚಿಸಲು ವಿಶೇಷ ಅಧಿಕಾರವನ್ನು ನೀಡುತ್ತದೆ. ರಾಜ್ಯಗಳು ರಾಜ್ಯ ಪಟ್ಟಿಯ ಅಡಿಯಲ್ಲಿ ಸಾಮಾಜಿಕ-ಆರ್ಥಿಕ ಮಾಹಿತಿಗಳನ್ನು ಸಂಗ್ರಹಿಸಬಹುದಾಗಿದೆ. ಆದರೆ ಪೂರ್ಣ ಪ್ರಮಾಣದ ಜಾತಿ ಸಮೀಕ್ಷೆ ಕೇಂದ್ರ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಭಾರತದ ಸಂವಿಧಾನದ 246 ನೇ ವಿಧಿ ಹೀಗೆ ಸಾರುತ್ತದೆ:


"ಯೂನಿಯನ್  ಪಟ್ಟಿಯಲ್ಲಿ ನಮೂದಿಸಲಾದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲು ಸಂಸತ್ತು ವಿಶೇಷ ಅಧಿಕಾರವನ್ನು ಹೊಂದಿದೆ; ರಾಜ್ಯ ಪಟ್ಟಿಯಲ್ಲಿ ನಮೂದಿಸಲಾದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲು ರಾಜ್ಯದ ಶಾಸಕಾಂಗವು ವಿಶೇಷ ಅಧಿಕಾರವನ್ನು ಹೊಂದಿದೆ."


ಕರ್ನಾಟಕವು ಸಮಾಜ ಕಲ್ಯಾಣ ಅಥವಾ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಬಹುದಾದರೂ, ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸಮಗ್ರ ಜಾತಿ ಜನಗಣತಿಯನ್ನು ನಡೆಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಕಾನೂನುಬದ್ಧವಾಗಿ ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ.

Friday, September 26, 2025

ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು

 ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು 

ಅತ್ತ ಬಲಕ್ಕೂ ವಾಲದೆ ಇತ್ತ ಎಡಕ್ಕೂ ವಾಲದಿದ್ದ ಭೈರಪ್ಪನವರು ಎಡಪಂಥೀಯರಿಗೆ ಅಪಥ್ಯರಾಗಿಯೇ ಉಳಿದರು. ಕಾಲದಲ್ಲಿ ಸರಿದುಹೋದ ಘಟನೆಗಳ ವಾಸ್ತವಿಕ ಚಿತ್ರಣ ಆವರಣದೊಳಗೆ ಬಂದಿಯಾದ ಸತ್ಯಗಳ ಅನಾವರಣವೂ ಆದಾಗ ಹಿಂದು ಮೂಲಭೂತವಾದಿಯಂತೆ ಕಂಡವರು; ಸಾಂಪ್ರದಾಯಿಕ ಸಮಾಜದ ಅಹಿತ ಸತ್ಯಗಳ ಚಿತ್ರಣದ ಮೂಲಕ ಸಾಂಪ್ರದಾಯಿಕರಿಂದಲೂ ದೂರ ಉಳಿದರು. ಅದ್ಭುತ ಬರೆಹಗಾರರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಲಿದ್ದವರೊಬ್ಬರು ಭೈರಪ್ಪನವರಿಗೆ ಕಾದಂಬರಿ ಬರೆಯಲು ಗೊತ್ತಿಲ್ಲ ಎಂದು ಜರೆದಿದ್ದೂ ಉಂಟು. ಆದರೆ ತಮ್ಮ ಸತ್ಯಾನ್ವೇಷಣೆಯಲ್ಲಿ ತಾವು ಕಂಡುಕೊಂಡ ವಿಚಾರಗಳನ್ನು ವಿಶದಪಡಿಸಿದಾಗ ಆ ಅದ್ಭುತ ಬರೆಹಗಾರರಿಂದ ತಾರ್ಕಿಕ ಪ್ರತ್ಯುತ್ತರಗಳು ಬಂದ ಮಾಹಿತಿ ಇಂದಿನವರೆಗೆ ದೊರಕಲಿಲ್ಲ.


ಹೌದು—ಭೈರಪ್ಪ ಎಲ್ಲರೂ ಇಷ್ಟಪಡುವ ವ್ಯಕ್ತಿಯೇನೂ ಆಗಿರಲಿಲ್ಲ. ಆದರೆ ಅವರು ಎಲ್ಲರಿಗೂ ಇಷ್ಟವಾಗಬೇಕೆಂದು ಬದುಕಿದ ವ್ಯಕ್ತಿಯೂ ಆಗಿರಲಿಲ್ಲ. ಸಾಹಿತ್ಯದ ಉದ್ದೇಶ ಸಾಂತ್ವನ ನೀಡುವುದು ಮಾತ್ರವಲ್ಲ, ಸತ್ಯವನ್ನು ಬಹಿರಂಗಪಡಿಸುವುದು ಕೂಡ ಆಗಿರುತ್ತದೆ ಎಂಬುದನ್ನು ತಮ್ಮ ಜೀವನದುದ್ದಕ್ಕೂ ಸಾಬೀತುಪಡಿಸುತ್ತ ಬದುಕಿದವರು ಅವರು . ಇದೇ ಕಾರಣದಿಂದ ಭೈರಪ್ಪ ಎಂದಿಗೂ ಪ್ರಸಕ್ತರು.


~ಕೃಷ್ಣಪ್ರಕಾಶ ಬೊಳುಂಬು

எஸ். எல். பயிரப்ப (1931 – 2025): ஒரு அஞ்சலி

 இலக்கிய உலகம் ஒரு ஒளிரும் நட்சத்திரத்தை இழந்துவிட்டது. கன்னட இலக்கியத்தில் ஆன்மா தேடல், உண்மை தேடுதல் மற்றும் தத்துவ சிந்தனையின் அடையாளமாக நின்ற எஸ்.எல். பைரப்பா இப்போது இல்லை. அவரது காலம் கடந்துவிட்டாலும், அவரது பேனாவால் ஒளிரும் எண்ணங்கள் இன்னும் நம் மனதில் எதிரொலிக்கின்றன. இந்த அஞ்சலி அந்த மகத்தான மனிதரின் நினைவுகளுக்கு அர்ப்பணிக்கப்பட்டுள்ளது.

எஸ். எல். பயிரப்ப (1931 – 2025): ஒரு அஞ்சலி

2025 செப்டம்பர் 24 அன்று ஒரு மாபெரும் திறமை மறைந்தது. எஸ். எல். பயிரப்ப எம்மை விட்டுப் போய்விட்டார். கன்னட இலக்கியத்திற்கு அவர் ஒரு எழுத்தாளர் மட்டுமல்ல—ஒரு குரு, ஒரு சிந்தனையாளர், ஒரு சத்தியத் தேடுபவர்.

அவரது படைப்புகளுடன் வளர்ந்த எங்களுக்கு, பயிரப்ப ஒரு எழுத்தாளர் மட்டுமல்ல—வாழ்க்கையின் ஆழங்களில் எங்களை அழைத்துச் சென்ற ஒரு வழிகாட்டி. பர்வ வாசிக்கும் போது, புராணங்கள் வெறும் கதைகள் அல்ல, நம் சொந்தப் போராட்டங்களின் பிரதிபலிப்புகள் என்று அவர் கற்றுக் கொடுத்தார். ஆவரண எங்களை வரலாற்றின் மறைகளைக் களைந்து உண்மையை எதிர்கொள்ளச் செய்தது. ஒவ்வொரு நாவலிலும் அவர் எங்களை கேள்வி கேட்கவும், அசௌகரியமான சத்தியங்களைத் தைரியமாகச் சந்திக்கவும் வற்புறுத்தினார்.

அவரது மொழிக்குச் சடங்கு போன்ற ஒரு கம்பீரம் இருந்தது; சிந்தனைகளுக்கு ஒருபோதும் வணங்காத உறுதியும் இருந்தது. ஆனால் அதன் அடியில் மனிதர்களின் மீதான பரிவு, கருணை எப்போதும் ஓடியது. மனிதர்கள், குடும்பங்கள், நினைவும் மாற்றமும் இடையில் திணறும் பண்பாட்டுகள்—இவை அனைத்தும் அவரது எழுத்தின் மையமாக இருந்தன.

பத்மபூஷண், சாகித்ய அகாடமி புலமைப்பரிசில், சரஸ்வதி சம்மான் போன்ற பல விருதுகள் அவரை நாடி வந்தன. ஆனால், அவரது உண்மையான பரிசு வாசகர்களின் இதயங்களில் நிலைத்திருந்த அமைதியான பக்தியே.

இன்று நாம் துயரப்படுகிறோம்; அதே நேரத்தில் நன்றியும் செலுத்துகிறோம். ஏனெனில் பயிரப்பாவின் சொற்கள் இன்னும் ஒளிரும் விளக்குகள் போல நம்மை வழிநடத்துகின்றன, நம்மை கேள்வி கேட்க வைக்கின்றன. காலம் கடந்து மறையாத ஓசை இதுவே என்பதை நினைவுகூர்ந்து, பயிரப்பாவிற்கு எங்களின் அஞ்சலிகள். 🌹

ఎస్. ఎల్. భైరప్ప (1931 – 2025): ఒక నివాళి

 

సాహిత్య ప్రపంచం ఒక వెలుగు నక్షత్రాన్ని కోల్పోయింది. కన్నడ సాహిత్యంలో ఆత్మశోధనకు, సత్యాన్వేషణకు, తత్త్వ చింతనకు ప్రతీకగా నిలిచిన ఎస్. ఎల్. భైరప్ప ఇక లేరు. ఆయన కాలం ముగిసినా, ఆయన కలం వెలిగించిన ఆలోచనలు ఇంకా మన మనసుల్లో ప్రతిధ్వనిస్తూనే ఉంటాయి. ఈ నివాళి, ఆ మహానుభావుడి స్మృతులకు అంకితం.

ఎస్. ఎల్. భైరప్ప (1931 – 2025): ఒక నివాళి

2025 సెప్టెంబర్ 24న ఒక మహత్తర ప్రతిభ అస్తమించింది. ఎస్. ఎల్. భైరప్ప ఇకలేరు. కన్నడ సాహిత్యానికి ఆయన ఒక రచయిత మాత్రమే కాదు—ఒక గురువు, ఒక తత్త్వవేత్త, ఒక సత్యాన్వేషి కూడా.

ఆయన రచనలతో పెరిగినవారికి భైరప్ప కేవలం రచయితగానే కాక, జీవితపు లోతుల్లోకి నడిపిన ఒక గురువుగానూ నిలిచారు. పర్వ చదువుతున్నప్పుడు మహాభారతం కేవలం ఇతిహాసం కాదని, మన స్వంత పోరాటాల ప్రతిబింబమని ఆయన మాకు నేర్పించారు. ఆవరణ చరిత్రపు పొరల వెనుక దాగి ఉన్న నిజాలను ఎదుర్కొనమని ప్రేరేపించింది. ప్రతి నవల మమ్మల్ని ప్రశ్నించమని, అసౌకర్యమైన సత్యాలను ధైర్యంగా ఎదుర్కోవాలని కోరింది.

ఆయన భాషకు ఒక ఆచరణాత్మక గంభీరత ఉండేది; ఆలోచనలకు మాత్రం ఎప్పటికీ వంగని దృఢత్వం. కానీ ఆ గంభీరత లోపల ఎల్లప్పుడూ మనుషుల పట్ల కరుణ, ప్రేమ ప్రవహించేది. మనుషులు, కుటుంబాలు, జ్ఞాపకాలు మరియు మార్పు మధ్య తడబడే సంస్కృతులు—ఇవి ఆయన రచనల కేంద్రముగా నిలిచాయి.

పద్మభూషణ్, సాహిత్య అకాడమీ ఫెలోషిప్, సరస్వతి సమ్మాన్ వంటి అనేక గౌరవాలు ఆయనను అనుసరించాయి. కానీ ఆయనకు నిజమైన బహుమతి, పాఠకుల హృదయాల్లో స్థిరంగా నిలిచిన నిశ్శబ్దమైన అభిమానమే.

ఈరోజు మనం దుఃఖిస్తున్నాం; కానీ కృతజ్ఞతను కూడా తెలియజేస్తున్నాం. ఎందుకంటే భైరప్ప వాక్యాలు ఇంకా వెలుగుల దీపాల్లా మనల్ని నడిపిస్తున్నాయి, మనల్ని ప్రశ్నిస్తున్నాయి. ప్రళయకాలం వరకు మాయమయ్యే స్వరం కాదు ఇది అని గుర్తుచేసుకుంటూ, భైరప్పకు నివాళులు అర్పిద్దాం. 🌹

Thursday, September 25, 2025

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

 ಸಾಹಿತ್ಯ ಲೋಕವು ಒಂದು ಹೊಳೆಯುವ ನಕ್ಷತ್ರವನ್ನು ಕಳೆದುಕೊಂಡಿದೆ. ಕನ್ನಡ ಸಾಹಿತ್ಯದಲ್ಲಿ ಆತ್ಮಶೋಧನೆ, ಸತ್ಯಾನ್ವೇಷಣೆ ಮತ್ತು ತಾತ್ವಿಕ ಚಿಂತನೆಯ ಸಂಕೇತವಾಗಿ ನಿಂತಿದ್ದ ಎಸ್.ಎಲ್. ಭೈರಪ್ಪ ಇನ್ನಿಲ್ಲ. ಅವರ ಕಾಲ ಕಳೆದರೂ, ಅವರ ಲೇಖನಿಯಿಂದ ಬೆಳಗಿದ ಆಲೋಚನೆಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲಿವೆ. ಈ ಮೂಲಕ ಎಸ್.ಎಲ್.ಭೈರಪ್ಪನವರಿಗೆ ಅಂತಿಮ ನಮನಗಳನ್ನು ಸಲ್ಲಿಸುವುದಾಗಿದೆ.

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

ಸೆಪ್ಟೆಂಬರ್ 24, 2025 ರಂದು ಎಸ್. ಎಲ್. ಭೈರಪ್ಪ ಎಂಬ ದೈತ್ಯ ಪ್ರತಿಭೆಯೊಂದು ನಮ್ಮನ್ನಗಲಿತು. ಬರೆಹಗಾರನಿಗಿಂತ ಹೆಚ್ಚಿಗೆ ಗುರುವಾಗಿಯೂ, ಚಿಂತಕನಾಗಿಯೂ  ನಿರಂತರ ಸತ್ಯಾನ್ವೇಷಕರೂ ಅವರು ಛಾಪುಗಳನ್ನೊತ್ತಿದವರೆಂದು ನಾವು ನೆನಪಿಸಿಕೊಳ್ಳುತ್ತೇವೆ.

ಭೈರಪ್ಪನವರ ಕೃತಿಗಳೊಂದಿಗೆ ಬೆಳೆದವರಿಗೆ ಅವರು ಬರಿಯ ಬರೆಹಗಾರರಾಗಿರಲಿಲ್ಲ. ಅವರು ಜೀವನದ ಉದ್ದ ಅಗಲಗಳನ್ನು ಕಣ್ಣ ಮುಂದೆ ತೆರೆದಿಟ್ಟ ಪಥಪ್ರದರ್ಶಕನಾದ ಗುರುವೂ ಅವರಾಗಿದ್ದರು. "ಪರ್ವ" ಕೃತಿಯ ಓದಿನೊಂದಿಗೆ ಇತಿಹಾಸಗಳು ಬರಿಯ ಕಟ್ಟುಕಥೆಗಳಲ್ಲ, ಜೀವನದ ಹೋರಾಟಗಳ ಪ್ರತಿಬಿಂಬಗಳು ಅವು ಎಂದು ಭೈರಪ್ಪ ನಮಗೆ ತೋರಿಸಿಕೊಟ್ತರು. "ಆವರಣ", "ಸಾರ್ಥ" ಕೃತಿಗಳು ಸರಿದುಹೋದ ಚರಿತ್ರೆಯ ವಾಸ್ತವಿಕ ಚಿತ್ರಣಗಳನ್ನು ತೆರೆದಿಟ್ಟಿತು. ಪ್ರತಿಯೊಂದು ಕಾದಂಬರಿಯಲ್ಲಿಯೂ ಅವರು ನಮಗೆ ಪ್ರಶ್ನಿಸಲಿಕ್ಕೆ ಮತ್ತು ಅಹಿತಕರ ಸತ್ಯಗಳನ್ನು ಧೈರ್ಯದಿಂದ ಎದುರಿಸಲಿಕ್ಕೆ  ಹೇಳಿಕೊಟ್ಟರು.

ಅವರ ಭಾಷೆ ಗಂಭೀರವಾಗಿತ್ತು ಮತ್ತು ವಿಮರ್ಶೆಗಳಿಗೆ ಬಾಗದ ದೃಢ ನಿಲುವುಗಳು ಅವರವಾಗಿದ್ದುವು. ಆದರೆ ಅವೆಲ್ಲದರ ಅಂತರಾಳದಲ್ಲಿ ಸದಾ ಸ್ಫುರಿಸುವ ಮಾನವಪ್ರೇಮ ನೆಲೆಗೊಂಡಿತ್ತು. ಮನುಷ್ಯರು ಮತ್ತು ಅವರ ಕುಟುಂಬಗಳು, ನೆನಪುಗಳು ಮತ್ತು ಬದಲಾವಣೆಗಳ ನಡುವೆ ಸಿಲುಕಿ ನರಳುವ ಸ್ಥಳೀಯ ಸಂಸ್ಕೃತಿಗಳು ಅವರ ಕೃತಿಗಳ ಕೇಂದ್ರಬಿಂದುಗಳು.

ಭೈರಪ್ಪನವರು ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದರು. ಆದರೆ ಅವರಿಗೆ ಸಂದ ನಿಜವಾದ ಪ್ರಶಸ್ತಿ ಅವರ ಓದುಗರ ಹೃದಯದ ಮೌನವಾಗಿ ನೆಲೆಸಿದ ಆರಾಧನೆಯ ಭಾವನೆ.

ನಮಗಿಂದು ದುಃಖವಿದೆ; ಅದರೊಂದಿಗೆ ನಾವು ಭೈರಪ್ಪನವರಿಗೆ ಕೃತಜ್ಞತೆಗಳನ್ನೂ ಸಲ್ಲಿಸುತ್ತೇವೆ. ಏಕೆಂದರೆ ಭೈರಪ್ಪನವರ ಮಾತುಗಳು, ಎಂದಿಗೂ ಬೆಳಗುವ ನಂದಾದೀಪಗಳಾಗಿ ನಮಗೆ ಮಾರ್ಗದರ್ಶನ ನೀಡುತ್ತಲಿರಬಲ್ಲುವು ಮತ್ತು ಪ್ರಶ್ನಿಸಲು ಪ್ರೇರಣೆ ನೀಡುತ್ತಲಿರಬಲ್ಲುವು. ಇದು ಯುಗಗಳ ಅಂತ್ಯಕಾಲದವರೆಗೆ ಮಸುಕಾಗದ ಧ್ವನಿಯೆಂದು ನೆನಪಿಸಿಕೊಳ್ಳುತ್ತ ಭೈರಪ್ಪನವರಿಗೆ ಅಂತಿಮ ನಮನಗಳು.

 ಕೃಷ್ಣಪ್ರಕಾಶ ಬೊಳುಂಬು



Tuesday, September 23, 2025

ಇದು ಕಾಸರಗೋಡಿನಲ್ಲಿ ಆದ ಘಟನೆಯೇ?

 ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆಯೊಂದನ್ನು ಕಟ್ಟಿ ಕ್ಲಾಸ್ ಮಾಡುತ್ತಿರುವ ಚಿತ್ರವೊಂದು ಕಾಸರಗೋಡಿನಲ್ಲಿ ಆದ ಘಟನೆ ಎಂಬಂತೆ ಕನ್ನಡ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಲಿದೆ. ಇದು ಕಾಸರಗೋಡಿನಲ್ಲಿ ಆದುದು ನಿಜವೇ? ಈಚೆಗೆ ಕನ್ನಡ ಪತ್ರಿಕೆಗಳು ಕೇರಳದ ಯಾವುದೇ ಸುದ್ದಿಗೆ ಕಾಸರಗೋಡು ಎಂದು ಬರೆಯುತ್ತಿವೆ. ಕೇರಳದ ಅನ್ಯ ಸ್ಥಾನದಲ್ಲಿ ನಡೆದ ಘಟನೆಗೆ ಕಾಸರಗೋಡು ಎಂಬ ಉಪಶೀರ್ಷಿಕೆ ಕೊಟ್ಟುದು ನಿಜವೇ ಆಗಿದ್ದರೆ ಇದು ಅಕ್ಷಮ್ಯ ಅಪರಾಧ. ಕೇರಳದಲ್ಲಿ ನಡೆದ ಯಾವುದೇ ಘಟನೆಯನ್ನು ಕಾಸರಗೋಡಿನಲ್ಲಿ ನಡೆದುದು ಎಂಬಂತೆ ಬಿಂಬಿಸುವುದು ಕನ್ನಡದ ಮಾಧ್ಯಮ ವರದಿಗಾರರಲ್ಲಿ ಬೇರೂರುತ್ತಿರುವ ದುರಭ್ಯಾಸವೂ ಆಗಿ ಬದಲಾಗುತ್ತಲಿದೆ.  

ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರ ಸಂಖ್ಯೆ ಇಳಿಮುಖವಾಗಿ ಆ ಸ್ಥಾನದಲ್ಲಿ ಅಬ್ಬರದಲ್ಲಿ ಬೊಬ್ಬೆ ಹೊಡೆಯುವ ಮುಜಾಹಿದರು ಹೆಚ್ಚಿಕೊಳ್ಳುತ್ತಿದ್ದಾರೆ. ಅವರಿಗೆ ಆದರೆ ಸ್ತ್ರೀ ಪುರುಷರ ಮಧ್ಯೆ ಪರದೆ ಇರಲೇ ಬೇಕು ಮತ್ತು ಹಧೀಸುಗಳ ಪಾಲನೆ 100% ಆಗಬೇಕು. ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರಾದರೋ ಅಲ್ಲೊಬ್ಬ ಮಹಿಳೆ ಬುರುಕ ತೊಟ್ಟು ಊರಿನ ಸಾಂಸ್ಕತಿಕ ಆಚರಣೆಯಲ್ಲಿ ಭಾಗಿಯಾಗುವುದು, ಇಲ್ಲೊಬ್ಬ ಮಾನಸಾಂತರ ಪೂರ್ವದ ತನ್ನ ಸಾಂಸ್ಕತಿಕ ಹಿನ್ನೆಲೆಯನ್ನು ಒಪ್ಪುವುದು ಎಂದು ಮುಂತಾದ ರೀತಿಗಳಲ್ಲಿ ಇದ್ದುಕೊಂಡಿದೆ.

ನಿಜವಾಗಿ ಈ ಘಟನೆ ಕೊಚ್ಚಿಯಲ್ಲಿ ನಡೆದುದು. ತೀವ್ರ ಇಸ್ಲಾಮಿಕ್ ದೃಷ್ಟಿಕೋನವಾದ ಮುಜಾಹಿದ್ ಚಳುವಳಿಯ ಅನುಯಾಯಿಗಳು ಸಂಘಟಿಸಿದ ಕಾರ್ಯಕ್ರಮ ಇದು. ಮುಜಾಹಿದ್ ದೃಷ್ಟಿಕೋನದಿಂದ ಇದಕ್ಕೆ ಉತ್ತರವನ್ನು ಈ ಕೆಳಗಿನಂತೆ ಊಹಿಸಬಹುದು.

೧. ನಾವು ಸ್ತ್ರೀಯರನ್ನು ಪರದೆ ಕಟ್ಟಿ ದೂರ ಇಟ್ಟಿಲ್ಲ, ಬದಲಿಗೆ ಪುರುಷರನ್ನು ಸ್ತ್ರೀಯರಿಂದ ದೂರ ಇಟ್ಟಿದ್ದೇವೆ. ಸ್ತ್ರೀ ಪುರುಷರ ಮಧ್ಯೆ ನಾವು ಕಟ್ಟಿದ ಪರದೆ ಸ್ತ್ರೀ ವಿರುದ್ಧವಾದುದು ಎಂದು ತಿಳಿಯುವುದು ತಪ್ಪು. ಅದನ್ನು ಯಾಕೆ ಪುರುಷ ವಿರುದ್ಧ ಎಂದು ಕರೆಯಬಾರದು? ಇದು ಸ್ತ್ರೀ ವಿರುದ್ಧವಲ್ಲ ಎಂದು ನಾವು ತಿಳಿಯುತ್ತೇವೆ. ಸ್ತ್ರೀ ಪುರುಷರ ಮಧ್ಯೆ ಇರುವ ಪ್ರತ್ಯೇಕತೆ ವಾಸ್ತವವೇ ಆಗಿದೆ. ಅದು ಇಂದು ನಿನ್ನೆಯದಲ್ಲ. ಅಲ್ಲಾಹು ನಮ್ಮನ್ನು ಸೃಷ್ಟಿಸಿದುದು ಹೀಗೆಯೇ ಎಂದು ತಿಳಿಯಬೇಕು.

೨. ಸ್ತ್ರೀ ಪುರುಷರ ಮಧ್ಯೆ ಇರುವ ಪರದೆಯನ್ನು ನೀವು ನೋಡುತ್ತೀರಿ ಆದರೆ ಮಸೀದಿಗಳಲ್ಲಿ ಸ್ತ್ರೀ ಪುರುಷರ ಮಧ್ಯೆ ಇರುವ ಗೋಡೆಯನ್ನು ಯಾಕೆ ನೋಡುವುದಿಲ್ಲ. [ಕೆಲವು ಪಂಥಗಳಿಗೆ ಸೇರಿದ ಮಸೀದಿಗಳಲ್ಲಿ ಸ್ತ್ರೀಯರಿಗೂ ನಮಾಜ್ಃ ಸಲ್ಲಿಸುವ ಅವಕಾಶವಿದೆ.]

೩. ಮುಸ್ಲಿಮರು ಯಾಕೆ ಯಾವಾಗಲೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಲೇ ಇರಬೇಕು? ಅದು ಸಾಧ್ಯವಿಲ್ಲ- ನಾವು (ಮುಸಲ್ಮಾನರು) ಇರುವುದೇ ಹೀಗೆ, ನಮ್ಮ ಜೀವನವೇ ಹೀಗೆ ಎನ್ನುತ್ತೇವೆ. 

೪.  ಅನ್ಯ ಸ್ತ್ರೀ ಪುರುಷರು ನಿರ್ದಿಷ್ಟ ಮಿತಿಯನ್ನು ಮೀರಿ ಒಡನಾಡಿದರೆ ಏನಾಗಬಹುದು ಎಂದು ನಾವು ಊಹಿಸಬಹುದು. ಪಾಪಗಳಿಗೆ ದಾರಿ ಮಾಡಿಕೊಡುವುದು ಇಂತಹ ಪ್ರವೃತ್ತಿಗಳು ಎಂದು ತಿಳಿಯಬೇಕು. ವ್ಯಭಿಚಾರ ತಪ್ಪೆಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಪುರುಷರಲ್ಲಿ ಹಾರ್ಮೋನುಗಳ ವ್ಯತ್ಯಯದ ಮೂಲಕ ಮತ್ತು ಸ್ತ್ರೀಯರಿಗೆ ತಮ್ಮೊಡನೆ ಕಾಳಜಿ ತೋರಿಸುವವರೊಂದಿಗೆ ಮೂಲಕ ಉಂಟಾಗುವ ಪ್ರೀತಿ ಪರಸ್ಪರ ಆತ್ಮೀಯತೆಗೆ ದಾರಿಮಾಡಿಕೊಡುತ್ತದೆ. ಆತ್ಮೀಯತೆ ನಿರ್ದಿಷ್ಟ ಮಿತಿಯನ್ನು ಮೀರಿದಾಗಲೇ ಅದು ವ್ಯಭಿಚಾರ ಎನಿಸಿಕೊಳ್ಳುತ್ತದೆ.      

೫. ಯಾವುದೇ ರೀತಿಯ ಅನಾಚಾರಗಳಿಗೆ ಆಸ್ಪದ ಕೊಡದಿರುವುದು ಇಸ್ಲಾಮ್ ಮತದ ವೈಶಿಷ್ಟ್ಯ. ವ್ಯಭಿಚಾರಕ್ಕೆ ಆಸ್ಪದ ಕೊಡುವ ದಾರಿಗಳನ್ನೂ ಕೂಡ ಇಸ್ಲಾಮ್ ಇಲ್ಲವಾಗಿಸುತ್ತದೆ. "ವಾಲಾ ತಕ್ರಬು ಝಿಃನ" - (ವ್ಯಭಿಚಾರದಿಂದ ದೂರವಿರಿ) ಎನ್ನುವುದು ಇಸ್ಲಾಮಿನ ವೈಶಿಷ್ಟ್ಯ, ವ್ಯಭಿಚಾರ ಮಾಡಬಾರದು ಎಂದು ಮಾತ್ರವೇ ಅಲ್ಲ ಎಂದು ತಿಳಿಯಬೇಕು. ತಪ್ಪುಗಳನ್ನು ಮಾಡಬಾರದು ಎಂದು ಮಾತ್ರವಲ್ಲ ತಪ್ಪುಗಳತ್ತ ಮುನ್ನಡೆಸುವ ದಾರಿಗಳನ್ನೂ ಸಹ ಕುರಾನ್ ಇಲ್ಲವಾಗಿಸುತ್ತದೆ. ಸ್ತ್ರೀಯರು ಪುರುಷರನ್ನು ನೋಡಿದರೆ ಅಥವಾ ಪುರುಷರು ಸ್ತ್ರೀಯರನ್ನು ನೋಡಿದೊಡನೆ ಲೈಂಗಿಕ ಭಾವನೆಗಳು ಮಾತ್ರವಲ್ಲದೆ ಸ್ನೇಹದ ಅಥವಾ ಇತರ ಭಾವನೆಗಳು ಕೂಡ ಉಂಟಾಗಬಹುದು. ಅದನ್ನು ನಾವು ಅಲ್ಲಗಳೆಯುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟೂ ಪ್ರತ್ಯೇಕತೆಯನ್ನು ಪಾಲಿಸುವುದು ನಾವು ಇಸ್ಲಾಮನ್ನು ಅನುಸರಿಸುವ ರೀತಿ.  

೬. ಪ್ರತ್ಯೇಕತೆಯೆಂಬುದು ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದೆ. ಹಾಗಾಗಿ ನಾವು ಸ್ವಯಂ ಹಿಜಾಬ್ ಧರಿಸಬೇಕು. ಸ್ತ್ರೀಯರಿಗೂ ಪುರುಷರಿಗೂ ಹಿಜಾಬ್ ಇದೆ. ಸ್ತ್ರೀಯರು ಧರಿಸುವ ಪರದಾ ಹಿಜಾಬ್ ಆಗಿದ್ದರೆ ಪುರುಷರಿಗೆ ತಮ್ಮ ದೃಷ್ಟಿಯನ್ನು ಕೆಳಗೆ ಹಾಯಿಸುವುದು ಅವರಿಗೆ ಹಿಜಾಬ್ ಆಗಿದೆ. ಇಸ್ಲಾಂ ದೈವಿಕ ಮತವಾದ ಕಾರಣ ಪಾಪಕ್ಕೆ ದಾರಿಮಾಡಿಕೊಡುವ ಯಾವುದೇ ಅಂಶಗಳನ್ನು ಇಲ್ಲವಾಗಿಸುವುದು ಸಹಜ. ಇದನ್ನು ಎಲ್ಲರೂ ಮಾಡಬೇಕೆಂದು ನಾವು ಹೇಳುವುದಿಲ್ಲ. ಮುಸಲ್ಮಾನರು ಇದನ್ನು ಅನುಸರಿಸಿದರೆ ಇತರರು ಯಾಕೆ ಪ್ರಶ್ನೆ ಮಾಡಬೇಕು?

 ----------------

ಊಹೆ ಸರಿಯಾಗಿದೆಯೋ ತಪ್ಪೋ ಎಂದು ಅನುಮಾನವಿದ್ದರೆ ಕೆಳಗಿನ ವಿಡಿಯೋ ನೋಡಬಹುದು. [https://www.youtube.com/watch?v=oFULP4uF9T4&t=31s] ಅದು ಮಲೆಯಾಳ ಭಾಷೆಯಲ್ಲಿ ಇರುವ ಕಾರಣ ೧೦೦% ಅರ್ಥವಾಗದೆಯೂ ಇರಬಹುದು. ಒಟ್ಟಂದದಲ್ಲಿ ಆ ಸಂಭಾಷಣೆಯ ಭಾವಗ್ರಹಣ ಇಲ್ಲಿ ಆಗಿದೆ ಎಂದು ತಿಳಿದುಕೊಳ್ಳಬಹುದು. 

~ಕೃಷ್ಣಪ್ರಕಾಶ ಬೊಳುಂಬು

#ಕಾಸರಗೋಡು  #ಹಿಜಾಬ್ #ಮುಜಾಹಿದ್ 


Sunday, September 7, 2025

ಸಾರ್ವಜನಿಕ ಜೀವನದಲ್ಲಿ ಶಿರ್ಕ್ ಅಂಶಗಳು

ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮುಸಲ್ಮಾನರ ಸಂಪ್ರದಾಯದಲ್ಲಿ 'ಶಿರ್ಕ್' ಎಂಬ ಅಂಶವಿದೆ. ಇದು ಅಲ್ಲಾಹುವಿನ ಹೊರತಾದ ಅನ್ಯದೇವತಾರಾಧನೆಗಳನ್ನು ಪ್ರಾರ್ಥನೆಗಳಲ್ಲಿ ಸೇರಿಸಿಕೊಳ್ಳುವುದನ್ನು ಖಡಾಖಡಿ ನಿರಾಕರಿಸುವ ಅಂಶ. ಇದು ಇಸ್ಲಾಮಿಕ್ ಮತಾಚರಣೆಯೆಂಬ ವಿಚಾರ ವಿದಿತವೇ ಆಗಿದ್ದರೂ ಸಾರ್ವಜನಿಕ ಆಚರಣೆಗಳಲ್ಲಿ ಮಿತತ್ವವನ್ನು ರೂಢಿಸಿಕೊಂಡ ನಾಗರಿಕರು ಸರ್ವಸಾಮಾನ್ಯವಾಗಿ ನಮ್ಮ ಮುಂದಿರುವ ಮುಸಲ್ಮಾನರು. ಮಿತತ್ವವನ್ನು ರೂಢಿಸಿಕೊಳ್ಳಬಲ್ಲವರಾದ ನಟ ಮಮ್ಮುಟ್ಟಿಯೇ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸುತ್ತಾರೆ. (ಮಿತತ್ವವನ್ನು ರೂಢಿಸಿಕೊಂಡವರು ಸೆಲೆಬ್ರಿಟಿಗಳು ಮಾತ್ರ ಎನ್ನುವುದು ನನ್ನ ಉದ್ದೇಶವಾಗಿಲ್ಲ.) ಆದರೆ ಇಸ್ಲಾಮ್ ಮತಸ್ಥರೇ ಆದ ಇನ್ನು ಕೆಲವರು 'ಶಿರ್ಕ್' ಮುಂದಿಟ್ಟುಕೊಂಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಲು ನಿರಾಕರಿಸುತ್ತಾರೆ.

ಆ ಇನ್ನು ಕೆಲವರು ಯಾರು ಎಂದು ಗಮನಿಸುವುದಾದರೆ ಅವರು ತೀವ್ರ ಮತಧೋರಣೆಯನ್ನು ಹೊಂದಿರುವವರು. ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳ ಮುಖೇನ ತೀವ್ರ ಇಸ್ಲಾಮಿಕ್ ಪ್ರಚಾರವನ್ನು ಕೈಗೊಳ್ಳುತ್ತಿರುವವರು ಇವರೇ. ಇವರ ಅನುಯಾಯಿಗಳು ಕಂಡಕಂಡಲ್ಲಿ ದಾವಾ ಕಾರ್ಯಕ್ರಮ ನಡೆಯಿಸಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಸ್ಲಾಮಿಗೆ ಅನುಯಾಯಿಗಳನ್ನು ಸೇರಿಸಿಕೊಳ್ಳಬೇಕು ಎನ್ನುವವರು ಇವರು. ಅಲ್ಲಾಹುವಿನ ಹೊರತಾದ ಅನ್ಯದೇವತೆಗಳನ್ನು ಆರಾಧಿಸಿದರೆ ನರಕದ ಬೆಂಕಿಯಿಂದ ವಿಮುಕ್ತಿಯಿಲ್ಲ ಎಂದು ತೀವ್ರವಾಗಿ ನಂಬಿದವರು. "ಲವ್ ಜಿಹಾದ್" ಸೇರಿದಂತೆ ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎಂದು ಸಾರುವುದು ತಪ್ಪು. ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎನ್ನುವಾಗ ತಮ್ಮ ವೈಯಕ್ತಿಕ ಆಚರಣೆಗಳನ್ನು "ಜಿಹಾದ್" ಎಂದು ಬಗೆದು ಅತೀವ ಶ್ರದ್ಧೆಯಿಂದ ತಮ್ಮ ಮತಾಚರಣೆಗಳನ್ನು ಅನುಸರಿಸುವ ಮಿತತ್ವವಾದಿಗಳಿಗೆ ಘಾಸಿಯಾಗುವುದು ಸಹಜವೇ ಆಗಿದೆ. ಹೀಗಾಗಿ "ಲವ್ ಜಿಹಾದ್" ಎಂಬ ಪದಪ್ರಯೋಗ ತಪ್ಪಾಗಿದೆಯೆಂದು ಮನಗಾಣಬೇಕು.

ಮುಸಲ್ಮಾನ ಸಾಹಿತಿಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಸಂದರ್ಭವಿದ್ದರೆ ಅವರ ಮತಾಚಾರ ಪೂರ್ವಕವಾದ ಅಂಶಗಳಿಗೆ ಪೂರಕವೋ ಬಾಧಕವೋ ಆಗಿರಬಹುದಾದ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟು ಅವರ ಸಮ್ಮತವಿದೆಯೆಂದು ದೃಢೀಕರಿಸಿದ ನಂತರವೇ ಅವರನ್ನು ಔಪಚಾರಿಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸೂಕ್ತ.


ತಮ್ಮ ಸಂಪ್ರದಾಯಗಳನ್ನು ಟೀಕಿಸಿಯೋ ದೂರುತ್ತಲೋ ಬರೆಯುವ ಮುಸಲ್ಮಾನ ಸಾಹಿತಿಗಳು ತೀವ್ರ ಮತಧೋರಣೆಯನ್ನು ಹೊಂದಿರುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಆದರೂ ಅವರ ಸಾಹಿತ್ಯದಲ್ಲಿ; ತಮ್ಮಲ್ಲಿ ಇರಬಹುದಾದ ಆಚರಣೆಗಳಲ್ಲಿ ಅನಪೇಕ್ಷಣೀಯವೆಂದು ಅವರಿಗೆ ತೋರಿದ ವಿಷಯಗಳನ್ನು ಟೀಕಿಸುತ್ತಲೋ ಪ್ರತಿರೋಧಿಸುತ್ತಲೋ ಬರೆಯುವಾಗಲೂ ಇಂದಿನ ಕಾಲದಲ್ಲಿ ಜಾರಿಗೆ ಬಂದಿರುವ ತೀವ್ರ ಮತಧೋರಣೆಯನ್ನು ನಿರಾಕರಿಸುವುದು ಕಂಡುಬಾರದಿರುವುದೂ ವಾಸ್ತವವೇ. ಉದಾಹರಣೆಗೆ, ಕಾಸರಗೋಡಿನ ತಳಂಗರೆ ಮಸೀದಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೆಂದೂ ಅದು ಪ್ರವಾದಿಗಳ ಕಾಲದಲ್ಲಿ ಕಟ್ಟಲ್ಪಟ್ಟ ಮಸೀದಿಯೆಂದೂ ಎಡಪಂಥೀಯರಾದ ಸಾರಾ ಅಬೂಬಕ್ಕರ್ ಬರೆದಿದ್ದಾರೆ. 

~ಕೃಷ್ಣಪ್ರಕಾಶ ಬೊಳುಂಬು

#ಶಿರ್ಕ್ 

Sunday, August 31, 2025

ಅಹ್ಮದಿಯಾ ಮುಸ್ಲಿಂ ಜಮಾಯತ್

 ಅಹ್ಮದಿಯಾ ಮುಸ್ಲಿಂ ಜಮಾಯತ್ (ಭಾರತದ ಅಹ್ಮದಿಯಾ ಸಂಘಟನೆ) ಚೌಧರಿ ಜಾಪರುಲ್ಲಾ ಖಾನ್ ಮುಂತಾದವರ ನೇತೃತ್ವದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿತು, ತನ್ಮೂಲಕ ಪಾಕಿಸ್ಥಾನದ ನಿರ್ಮಾಣದಲ್ಲಿ ಮಹತ್ತರ ಪಾತ್ರವನ್ನು ವಹಿಸಿತು. ಆದರೆ ಕಾಲಕ್ರಮೇಣ ಅಹ್ಮದಿಯಾ ಪಂಥದವರನ್ನು ಪಾಕಿಸ್ಥಾನ ಕಡೆಗಣಿಸಿರುವುದು ಚರಿತ್ರೆ. ಈಗ ಪಾಕಿಸ್ಥಾನದ ಅಹ್ಮದಿಯಾ ಮುಸ್ಲಿಮರ ಮುಂದಿರುವ ಏಕೈಕ ಆಯ್ಕೆ ಏನೆಂದರೆ ದ್ವಿರಾಷ್ಟ್ರ ಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಮತ್ತು ಭಾರತೀಯರು ಎಲ್ಲರೂ ಒಂದೇ ಮತ್ತು ತಾವು ಭಾರತ ಮೂಲದವರೆಂದು ಪ್ರತಿಪಾದಿಸುವುದು. ತಾವು ಭಾರತ ಮೂಲದವರೆಂದು ಪ್ರತಿಪಾದಿಸಿ ಸಾಂಸ್ಕೃತಿಕವಾಗಿ ತಾವು ಭಾರತೀಯರೇ ಆಗಿರುವುದನ್ನು ಒಪ್ಪಿದರೆ ಅವರಿಗೆ ಭಾರತದೊಂದಿಗೆ ಯಾವುದೇ ಸಮಸ್ಯೆ ಇರಬೇಕಾದ ಅಗತ್ಯ ಇರುವುದಿಲ್ಲ. 

ಭಾರತದಲ್ಲಿ ಅಹ್ಮದಿಯಾ ಮತ್ತು ಮೂಲ ಸೂಫಿ ಪರಂಪರೆಗೆ ಪ್ರತ್ಯೇಕ ಸ್ಥಾನ ಕೊಡಬೇಕು ಮತ್ತು ಅಹ್ಮದಿಯಾ ಮತ್ತು ಮೂಲ ಸೂಫಿ ಪರಂಪರೆಯನ್ನು ಅವಮಾನಿಸುವವರಿಗೆ ಕಠಿನ ಶಿಕ್ಷೆ ವಿಧಿಸಬೇಕು. ಇದರಿಂದ ತೀವ್ರವಾದಿ ಸ್ವಭಾವದವರಾದ ಜಮಾತೆ ಮತ್ತು ವಹಾಬೀ ಪಂಥದವರಿಗೆ (ದೇವಾಲಯಗಳು ವೇಶ್ಯಾಲಯಗಳೆಂದು ಪ್ರತಿಪಾದಿಸುವ) ಹಿನ್ನಡೆಯಾಗುವುದು ನಿಶ್ಚಿತ.


~ಕೃಷ್ಣಪ್ರಕಾಶ ಬೊಳುಂಬು

#ಅಹ್ಮದಿಯಾ_ಮುಸ್ಲಿಂ_ಜಮಾಯತ್

Wednesday, August 27, 2025

ತಳಂಗರೆ ಶಿಲಾಶಾಸನ

 ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ.

ವಿಜಯ ಕರ್ನಾಟಕ

ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ ಇಚ್ಛೆಯೇನೆಂದು ಜಯಸಿಂಹ ರಾಜ ಕೇಳಿದಾಗ ಅವಳು ನಿರ್ಜನವಾದ ಕಲ್ಲು ಮುಳ್ಳುಗಳಿಂದ ಕೂಡಿದ ಬರಪೀಡಿತ ಪ್ರದೇಶವೊಂದಕ್ಕಾಗಿ ಬೇಡಿದಳು. ಮಾತಿಗೆ ತಪ್ಪದ ಜಯಸಿಂಹ ರಾಜ ಅವಳು ಬಯಸಿದಂತೆ ರಾಜಧಾನಿಯಿಂದ ಬಲು ದೂರದಲ್ಲಿದ್ದ ನಿರ್ಜನ ಪ್ರದೇಶವೊಂದನ್ನು ಅವಳಿಗೆ ಉಡುಗೊರೆಯಾಗಿ ನೀಡಿದನು.

ಮೋಚಿಕಬ್ಬೆ ಆ ಭೂಮಿಯನ್ನು ಸ್ವಚ್ಛವಾಗಿಸಿ ನೀರಾವರಿಗಾಗಿ ಕಾಲುವೆಯೊಂದನ್ನು ಅಲ್ಲಿಗೆ ಹರಿಯುವಂತೆ ಮಾಡಿದಳು. ನೀರಿನ ಉಳಿತಾಯಕ್ಕಾಗಿ ಯೋಜನೆಗಳನ್ನು ಹಾಕಿ ಬರಪೀಡಿತ ಭೂಮಿಯನ್ನು ಜನವಾಸಕ್ಕೂ ಕೃಷಿಗೂ ಯೋಗ್ಯವಾಗುವಂತೆ ಪರಿವರ್ತಿಸಿದಳು. ಉದ್ಯಾನಗಳನ್ನೂ ಹಂಚಿನ ಮನೆಗಳನ್ನೂ ನಿರ್ಮಿಸಿ ಅದನ್ನು ಜನರ ಉಪಯೋಗಕ್ಕಾಗಿ ಮೋಚಿಕಬ್ಬೆ ದಾನ ಕೊಟ್ಟಳು.

ಮೇಲ್ಕಂಡ ಶಿಲಾಶಾಸನದಿಂದಲೇ ತಿಳಿದುಬರುವಂತೆ ಆ ಭೂಮಿ ಕಳ್ಳಕಾಕರ ಆಡುಂಬೊಲವಾಯಿತು. ರಾಣಿ ಮೋಚಿಕಬ್ಬೆ ಕೊಲೆ ಕಳ್ಳತನದಂಥ ಅಪರಾಧಗಳನ್ನು ಎಸಗಿದವರಿಗೆ ತಾತ್ಕಾಲಿಕ ಕ್ಷಮಾದಾನವನ್ನೂ ನೀಡಿದ್ದಳು. ರಾಣಿ ಮನುಷ್ಯರ ಮನಸ್ಸನ್ನು ಬಲ್ಲವಳಾಗಿದ್ದಳು. ಅಪರಾಧಗಳನ್ನು ಎಸಗಲು ಪ್ರೇರಣೆಯೊದಗಿಸುವ ವಿಚಾರಗಳನ್ನು ಅರಿತುಕೊಂಡು ಅಪರಾಧಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅನುವಾಗುವ ತಾಣವೊದನ್ನು ರಾಣಿ ಮೋಚಿಕಬ್ಬೆ ಒದಗಿಸಿದಳು. ಶಿಲಾಶಾಸನ ಮುಂದುವರಿದು ಅಪರಾಧಿಗಳು ಅಧಿಕಾರಿಗಳಿಗೆ ಶರಣಾದರೆಂದೂ ರಾಣಿ ಮೋಚಿಕಬ್ಬೆಯಿಂದಲಾಗಿ ರಾಜ್ಯದಲ್ಲಿ ಶಾಂತಿ ನೆಲಸುವಂತಾಯಿತೆಂದೂ ಸಾರುತ್ತದೆ.

ಹೆಚ್ಚಿಗೆ ಓದಲು
*ಡಾ. ಜ್ಯೋತ್ಸ್ನಾ ಕಾಮತ್ http://www.kamat.com/jyotsna/blog/blog.php?BlogID=452

*ಪಿ. ಗುರುರಾಜ ಭಟ್ (1975). Studies in Tuluva History and Culture.

*ಡಾ. ಸದಾನಂದ ಪೆರ್ಲ - ಕಾಸರಗೋಡಿನ ಕನ್ನಡ ಹೋರಾಟ , ಕನ್ನಡ ಪುಸ್ತಕ ಪ್ರಾಧಿಕಾರ 

*ವಿಜಯ ಕರ್ನಾಟಕ https://vijaykarnataka.com/news/kasaragod/kasaragod-news-in-kannada/articleshow/58240024.cms



Sunday, August 24, 2025

ಮಹಾರಾಜ ಶುದ್ಧೋದನ ಮತ್ತು ಮಹಾರಾಣಿ ಮಾಯಾದೇವಿ

 ಶಾಕ್ಯ ಜನಾಂಗದ ರಾಜ ಶುದ್ಧೋದನನು ಅನೇಕ ರಾಣಿಯರನ್ನು ಮದುವೆಯಾಗಿದ್ದನು. ಅವರಲ್ಲಿ ಅವನಿಗೆ ಅತ್ಯಂತ ಪ್ರಿಯವಾದವಳು ಮಾಯಾದೇವಿ.

ಅವಳು ಅತ್ಯಂತ ಸುಂದರಿಯಾಗಿದ್ದಳು. ಲಕ್ಷ್ಮಿಯೇ ದಾರಿ ತಪ್ಪಿ ಭೂಲೋಕಕ್ಕಿಳಿದಂತೆ ಅವಳಿದ್ದಳು. ಅವಳ ಮಾತುಗಳು ವಸಂತಕಾಲದ ಹಕ್ಕಿಗಳ ಕಲರವವಾಗಿದ್ದುವು. ಅವಳ ಬೆನ್ನಿಗೆ ಇಳಿಯಬಿಡಲ್ಪಟ್ಟಿದ್ದ ಹೆಣೆದ ಕೂದಲಿನ ಜಡೆ ಸುಗಂಧಗಳನ್ನು ಸೂಸುವ ಹೂವುಗಳಿಂದ ಅಲಂಕೃತವಾಗಿತ್ತು. ಅವಳ ಹಣೆ ವಜ್ರದಂತೆ ಪರಿಶುದ್ಧವಾಗಿತ್ತು. ಅವಳ ಕಣ್ಣುಗಳು ಕಮಲದ ಹೂವುಗಳನ್ನು ಹೋಲುತ್ತಿದ್ದುವು. ಅವಳ ಸೊಗಸಾದ ಹುಬ್ಬುಗಳ ವಕ್ರರೇಖೆ ರಾಜನಿಗೆ ಅತ್ಯಂತ ಆಪ್ಯಾಯಮಾನವಾಗಿತ್ತು. ಅವಳ ಬೆರಳುಗಳು ಕಮಲದ ಮೊಗ್ಗುಗಳೇ ತಾವಾಗಿದ್ದುವು.

ಮಾಯಾದೇವಿ ಗುಣವಂತೆ; ಅವಳು ಸದಾ ತನ್ನ ಪ್ರಜೆಗಳ ಸುಖವನ್ನು ಬಯಸುತ್ತಿದ್ದವಳು. ಅವಳು ತನ್ನ ಕುಲಗುರುಗಳ ಆಜ್ಞೆಗಳನ್ನು ಎಂದಿಗೂ ಮೀರಿದವಳಲ್ಲ. ಅವಳು ಸತ್ಯಕ್ಕೆ ನಿಷ್ಠಳಾಗಿದ್ದಳು ಮತ್ತು ಧರ್ಮದ ಹಾದಿಯಲ್ಲಿ ನಡೆಯುವವಳಾಗಿದ್ದಳು. ಇಂತು ಮಹಾರಾಜ ಶುದ್ಧೋದನ ಮತ್ತು ಮಹಾರಾಣಿ ಮಾಯಾದೇವಿ ಕಪಿಲವಸ್ತುವಿನಲ್ಲಿ ಶಾಂತವಾಗಿಯೂ ಸಂತೋಷದಿಂದಲೂ ಜೀವಿಸುತ್ತಲಿದ್ದರು.

Saturday, August 16, 2025

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ


"ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ ಭಾಷೆ. ಆಡುವ ಭಾಷೆಗೂ ಬರೆಯುವ ಭಾಷೆಗೂ ಬಹಳ ವ್ಯತ್ಯಾಸವಿದೆ."

ಎನ್ನುತ್ತಾರೆ.



ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎನ್ನುವುದಾದರೆ ಮಲೆಯಾಳ, ಉರ್ದು ಮೊದಲಾದ ಭಾಷೆಗಳು ಕೃತಕ ಭಾಷೆಗಳೆಂದೇ ಆಗುತ್ತದೆ. ಇಂದಿನ ಮಲೆಯಾಳ ಭಾಷೆಯ ವಿಷಯಕ್ಕೆ ಬರುವುದಾದರೆ, ಆಧುನಿಕ ಮಲೆಯಾಳ ಭಾಷೆ ನಿಂತಿರುವುದು ಕೇರಳ ಪಾಣಿನೀಯದ ಆಧಾರದಲ್ಲಿ ಮತ್ತು ಕೇರಳ ಪಾಣಿನೀಯ ಅತ್ಯಂತ ಕೃತಕವಾದುದು ಮತ್ತು ಸಂಸ್ಕೃತ ಮತ್ತು ಪ್ರಾಕೃತ ವ್ಯಾಕರಣಗಳನ್ನು ಆಧರಿಸಿ ಬರೆದುದಾಗಿದೆ. ಕೇರಳ ಪಾಣಿನೀಯದ ರಚನೆಯಲ್ಲಿ ತೌಲನಿಕವಾದ ದಾಕ್ಷಿಣಾತ್ಯ ವ್ಯಾಕರಣವನ್ನೂ ಗಮನದಲ್ಲಿ ಇರಿಸಿಕೊಳ್ಳಲಾಗಿದೆಯೆಂದು ಹತ್ತೊಂಬನೆಯ ಶತಮಾನದ ಕೊನೆಯ ಭಾಗದಲ್ಲಿ ಆ ಗ್ರಂಥವನ್ನು ರಚಿಸಿದ ರಚನಕಾರರೇ ಹೇಳಿದ್ದಾರೆ. ಹಾಗಾಗಿ ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ ಎಂಬ ಮಾನದಂಡವನ್ನು ಇಟ್ಟುಕೊಂಡರೆ ಇಂದಿನ ಮಲೆಯಾಳ ಭಾಷೆಯನ್ನು ಕತೃಕ ಭಾಷೆಯೆಂದೇ ಕರೆಯಬೇಕು.


ಖಡಿಬೋಲಿ ವ್ಯಾಕರಣದ ಕಟ್ಟುಗೆಯಲ್ಲಿ ಅರೇಬಿಕ್ ಮತ್ತು ಪಾರಸಿ ಭಾಷೆಯ ಮೇಲ್ಮೈ ಹೊದೆಯಿಸಿದ; ಭಾಷೆಯಲ್ಲದ ಭಾಷೆ ಉರ್ದು. ಖಡಿಬೋಲಿ ವ್ಯಾಕರಣ ಎನ್ನುವಂಥದ್ದು ಸಂಸ್ಕೃತ ಮೂಲದ ಇಂಡಿಕ್ ವ್ಯಾಕರಣ ವ್ಯವಸ್ಥೆಯಲ್ಲಿ ನೆಲೆಗೊಂಡದ್ದು ಮತ್ತು ಅದು ಪ್ರಾಕೃತ ಮೂಲವನ್ನು ಹೊಂದಿದೆ. ಉರ್ದು ಭಾಷೆ ಸಹಜವಾಗಿ ಬೆಳೆದುಬಂದ ಭಾಷೆ ಎನ್ನುವವರು ಇಂಡಿಕ್ ವ್ಯಾಕರಣ ವ್ಯವಸ್ಥೆಯನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. 

ಮುಂದೆ ಹೋಗಿ 
"ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಮಾತೃಭಾಷೆ ಆಗಿ ಬಳಸುವ ಜನಾಂಗಗಳು ಇವೆ"
ಎನ್ನುತ್ತಾರೆ.


 ಇದು ವಾಸ್ತವಕ್ಕೆ ವಿರುದ್ಧವಾದುದು. ಆಭಿಜಾತ್ಯ ಗ್ರೀಕ್ ಇಂದು ಬಳಕೆಯಲ್ಲಿ ಇಲ್ಲ ಮತ್ತು ಇಂದು ಬಳಕೆಯಲ್ಲಿರುವ ಆಧುನಿಕ ಗ್ರೀಕ್ ಭಾಷೆಗೂ ಪರಸ್ಪರ ಸಾಂಗತ್ಯವಿಲ್ಲ. ಪ್ರಾಚೀನ ಗ್ರೀಕಿನಲ್ಲಿ ಹೇಳಿದ ಹೇಳಿಕೆ ಅರ್ಥವಾಗಬೇಕೆಂದಿದ್ದರೆ ಆಧುನಿಕ ಗ್ರೀಕ್ ಮಾತನಾಡುವವನು ಪ್ರಾಚೀನ ಗ್ರೀಕ್ ಭಾಷೆಯನ್ನು ಪ್ರತ್ಯೇಕವಾಗಿ ಕಲಿಯಬೇಕು. ಹಾಗೆಂದರೆ ಆಧುನಿಕ ಹಿಂದಿ ಭಾಷೆಗೂ ಸಂಸ್ಕೃತಕ್ಕೂ ಇರುವ ಅಂತರದಷ್ಟೇ ಅಗಾಧವಾದ ಅಂತರ ಪ್ರಾಚೀನ ಗ್ರೀಕ್ ಭಾಷೆಗೂ ಆಧುನಿಕ ಗ್ರೀಕ್ ಭಾಷೆಗೂ ನಡುವೆ ಇದ್ದುಕೊಂಡಿದೆ ಎನ್ನುವಾಗ ಪ್ರಾಚೀನ ಗ್ರೀಕ್ ಇಂದಿಗೂ ಬಳಕೆಯಲ್ಲಿದೆ ಎನ್ನುವುದು ಅಸತ್ಯವೆನಿಸುತ್ತದೆ.

ಸಂಸ್ಕೃತ ಯಾರಿಗೂ ಮಾತೃಭಾಷೆ ಅಲ್ಲವೇ? ೨೦೧೧ರ ಜನಗಣತಿಯಲ್ಲಿ ೧೪,೧೩೫ ಜನರು ಸಂಸ್ಕೃತವನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದ್ದಾರೆ. ೨೦೧೮ರ ಹೊತ್ತಿಗೆ ಈ ಸಂಖ್ಯೆ ೨೪,೮೨೧ ಆಗಿದೆ. ಪೂರಕ ಮಾಹಿತಿಗಳನ್ನೂ ಗಮನಿಸಬಹುದು. (ಮಾಹಿತಿಯಲ್ಲಿ ಉದ್ಧರಿಸಲ್ಪಟ್ಟ ವಾರ್ತಾ ಲೇಖನಗಳು ನೆಗೆಟಿವ್ ಆಗಿದ್ದರೂ ವಿಷಯ ಹೂರಣವನ್ನು ಗ್ರಹಿಸಲಿಕ್ಕೆ ಇದು ಸಾಲುತ್ತದೆ.) ೧


ಸಂಸ್ಕೃತ ಸಾರ್ವತ್ರಿಕ ಪ್ರಯೋಜನಕ್ಕೆ ಒದಗಬಲ್ಲುದು ಮತ್ತು ಅದು ಸನಾತನ ಧಾರ್ಮಿಕ ವ್ಯವಸ್ಥೆಯನ್ನು ಮೀರಿಯೂ ಅದು ನೆಲೆಗೊಂಡಿದೆ. ಸಂಸ್ಕೃತಕ್ಕೆ ಸಾವಿಲ್ಲ, ಸಂಸ್ಕೃತಕ್ಕೆ ಮಿತಿಯೂ ಇಲ್ಲ. ಮತಕ್ಕೆ ಸೀಮಿತವಾದ ಭಾಷೆ ಮತ ಇರುವಷ್ಟು ದಿನ ಇರಬಲ್ಲುದು. 


ಉಲ್ಲೇಖಗಳು

 ೧. https://www.cnbctv18.com/india/only-24821-people-in-india-have-sanskrit-as-mother-tongue-govt-data-14819891.htm
 

 ಕೃಷ್ಣಪ್ರಕಾಶ ಬೊಳುಂಬು

 #ಸಂಸ್ಕೃತ 

Friday, August 15, 2025

ರಾಹುಲ್ ಗಾಂಧಿಯ ನಿಜವಾದ ಉದ್ದೇಶವೇನು?

 ರಾಹುಲ್ ಗಾಂಧಿಯ ನಿಜವಾದ ಉದ್ದೇಶವೇನು?



ರಾಹುಲ್ ಗಾಂಧಿ ನಮ್ಮ ದೇಶದ ಮಿಲಿಟರಿಯನ್ನು ನಂಬದಿದ್ದರೂ ಚೀನಾ, ಪಾಕಿಸ್ತಾನ ಮತ್ತು ಅಮೇರಿಕವನ್ನು ನಂಬುತ್ತಾನೆ. ಹಾಗೆಯೇ ರಾಹುಲ್ ಗಾಂಧಿ ನ್ಯಾಯಾಲಯಗಳನ್ನು ನಂಬದಿದ್ದರೂ ತನಗೆ ಅಗತ್ಯವಿದ್ದರೆ ಮಾತ್ರ ನ್ಯಾಯಾಲಯಗಳ ಆದೇಶಗಳನ್ನು ಎತ್ತಿ ಹಿಡಿಯುತ್ತಾನೆ. 

ಈಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ನಂಬಿಕೆ ಕಳೆದುಕೊಂಡಿದ್ದಾನೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಮತ್ತು ಅದನ್ನು ಮಾಡಿದ್ದು ಬಿಜೆಪಿ ಎಂಬ ಹೇಳಿಕೆಯೂ ಇದರ ಒಂದು ಭಾಗವಾಗಿತ್ತು.

ಸುಳ್ಳು ಮಾಹಿತಿಯನ್ನು ತರುವ ಮೂಲಕ ತನಗೆ ತಾನೇ ಕೊಡಲಿಯೇಟು ಕೊಟ್ಟುಕೊಂಡ ಪರಿಸ್ಥಿತಿ ಈಗ ರಾಹುಲ್ ಗಾಂಧಿಯದ್ದಾಗಿದೆ. ಇಷ್ಟೇ ಸಾಲದೆಂಬಂತೆ, ತನ್ನ ಸ್ವಂತ ಕ್ಷೇತ್ರ ರಾಯ್ ಬರೇಲಿ ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಅವರ ವಯನಾಡ್ ಕ್ಷೇತ್ರ ಸೇರಿದಂತೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳಾಗಿವೆ ಎಂದು ಗೋಳಿಡುವ ಮೂಲಕ ಬಿಜೆಪಿಯನ್ನು ಎದುರಿಸಲು ಹವಣಿಸುತ್ತಿದ್ದಾನೆ. 

ರಾಹುಲ್ ಗಾಂಧಿ ಸ್ಫೋಟಿಸಿದ ಅಣು ಬಾಂಬ್ ಬಿಜೆಪಿಗೆ ಇನ್ನೊಂದು ಅವಕಾಶವನ್ನು ತೆರೆದುಕೊಟ್ಟಿರುವುದು ಇಂದಿನ ವಾಸ್ತವ.

NRC ಅಥವಾ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೆ ತರುವ ಮೂಲಕ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಕೂಡಲೆ ಗುರುತಿಸಿ ಅವರಿಗೆ ದಾರಿತೋರಿಸುವುದು ಜಾಗರೂಕ ಸರಕಾರದ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲಿಕ್ಕೆ ಸಂವಿಧಾನದ ಪ್ರಕಾರ ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (S.I.R) ನಡೆಸುವ ಅವಕಾಶ ಇದೀಗ ಒದಗಿಬಂದಿದೆ. ಅದಾದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಮತಗಣನೆ ಮಾಡಿ ನಾಗರಿಕ ನೋಂದಣಿಯನ್ನು ರಚಿಸಲು ಅವಕಾಶಗಳಿವೆ. 

 ಕೃಷ್ಣಪ್ರಕಾಶ ಬೊಳುಂಬು

# ರಾಹುಲ್ ಗಾಂಧಿ


Wednesday, August 13, 2025

ಕಪಿಲವಸ್ತು

 ಕಪಿಲವಸ್ತು

ಅದೊಂದು ಪ್ರಶಾಂತ ಸುಂದರವಾದ ನಗರ. ಅಲ್ಲಿ ಒಂದಾನೊಂದು ಕಾಲದಲ್ಲಿ ಮಹಾ ತಪಸ್ವಿ ಕಪಿಲ ವಾಸಿಸುತ್ತಿದ್ದನು. ಆಕಾಶದ ಭಾಗವೊಂದನ್ನು ಕೆತ್ತಿ ಅದನ್ನು ನಿರ್ಮಿಸಲಾಗಿದೆಯೆಂಬಂತೆ ಕಂಡುಬರುತ್ತಿತ್ತು. ನಗರವನ್ನು ಸುತ್ತುವರಿದಿದ್ದ ಅನೇಕ ಕಟ್ಟಡಗಳ ಗೋಡೆಗಳು ಬೆಳಕಿನ ಪುಂಜಗಳಂತೆ ಕಂಗೊಳಿಸುತ್ತಿದ್ದುವು. ಮನೆಗಳು ಮತ್ತು ಉದ್ಯಾನಗಳು ದೈವಿಕ ಕಳೆಗಳನ್ನು ಹೊರಹೊಮ್ಮಿಸುತ್ತಿದ್ದುವು. ಎಲ್ಲೆಡೆ ಅಮೂಲ್ಯವಾದ ಮುತ್ತುರತ್ನಗಳ ಹೊಳಪು ನೋಡುಗರ ಮನಸೆಳೆಯುತ್ತಿದ್ದುವು. ರಾತ್ರಿಯ ಬೆಳದಿಂಗಳಿನಲ್ಲಿ ನಗರದ ಗೋಪುರಗಳು ಸರೋವರದ ನಡುವಣ ನೈದಿಲೆ ಹೂವುಗಳಂದದಲ್ಲಿ ಮೆರೆಯುತ್ತಿದ್ದುವು. ಹಗಲಿನ ಹೊತ್ತು ಮಹಡಿಗಳು ಚಿನ್ನದ ಕಾಂತಿಯ ಸೂರ್ಯನ ಬೆಳಕು ಸೋಕಿದಾಗ ಆ ನಗರವು ಕಮಲದ ನದಿಯಂತೆ ರಮಣೀಯವಾಗಿದ್ದಿತು.


ರಾಜ ಶುದ್ಧೋದನ ಕಪಿಲವಸ್ತುವಿನ ರಾಜ. ಅವನು ಅದರ ಅತ್ಯಂತ ಪ್ರಕಾಶಮಾನವಾದ ಆಭರಣವೂ ಆಗಿ ಮೆರೆಯುತ್ತಿದ್ದನು. ಅವನು ಅತ್ಯಂತ ದಯಾವಂತ, ಉದಾರ, ವಿನಮ್ರ ಮತ್ತು ನ್ಯಾಯಪರನಾಗಿದ್ದವನು. ಅವನು ತನ್ನ ಭೀಕರ ಶತ್ರುಗಳನ್ನು ಹಿಂಬಾಲಿಸಿ ಹೊಡೆದ ಧೈರ್ಯಶಾಲಿ. ಇಂದ್ರನ ವಜ್ರಾಯುಧದ ಆಘಾತಕ್ಕೆ ನಲುಗಿದ ಅಸುರರ ಪಡೆಯಂತೆ ಅವರು ಅವನೊಂದಿಗೆ ಸೋತು ನಿರ್ವಿಣ್ಣರಾದರು. ಸೂರ್ಯನ ತೀಕ್ಷ್ಣ ಕಿರಣಗಳಿಂದ ಕತ್ತಲೆ ಕರಗಿದಂತೆ ದುಷ್ಟರು ಅವನ ಪರಾಕ್ರಮದ ಮುಂದೆ ಸೋತು ಶರಣಾದರು. ಅವನು ಲೋಕಕ್ಕೆ ಬೆಳಕನ್ನು ತಂದನು ಮತ್ತು ಅವನು ತನ್ನ ಆಪ್ತರಾದವರಿಗೆ ನಿಜವಾದ ಮಾರ್ಗವನ್ನು ತೋರಿಸಿದನು. ಅವನ ವಿವೇಕ ಮತ್ತು ಪ್ರಜ್ಞಾವಂತಿಕೆ ಅವನಿಗೆ ಅನೇಕ ಧೈರ್ಯಶಾಲಿಗಳೂ ವಿವೇಚನಾಶೀಲರೂ ಆದ ಸ್ನೇಹಿತರನ್ನು ಗಳಿಸಿಕೊಟ್ಟಿತು. ನಕ್ಷತ್ರಗಳ ಬೆಳಕು ಚಂದ್ರನ ಪ್ರಕಾಶವನ್ನು ತೀವ್ರಗೊಳಿಸಿದಂತೆ ಅವರ ತೇಜಸ್ಸು ಅವನ ವೈಭವವನ್ನು ಹೆಚ್ಚಿಸಿತು. ( ಅತ್ಯಂತ ಪ್ರಭಾಯುತನಾದ ನಕ್ಷತ್ರಕ್ಕೆ ಸೂರ್ಯನೆಂದು ಹೆಸರು)


 ಕೃಷ್ಣಪ್ರಕಾಶ ಬೊಳುಂಬು

#ಕಪಿಲವಸ್ತು, #ಶುದ್ಧೋದನ 

Saturday, August 2, 2025

ಅಳಿಯ ಸಂತಾನ ಕಟ್ಟಿನ ನಿಜವಾದ ಚರಿತ್ರೆ ಪಾದೂರು ಗುರುರಾಜ ಭಟ್ಟರು ಕಂಡಂತೆ

 ಅಳಿಯ ಸಂತಾನ ಕಟ್ಟಿನ ನಿಜವಾದ ಚರಿತ್ರೆ ಪಾದೂರು ಗುರುರಾಜ ಭಟ್ಟರು ಕಂಡಂತೆ





ಅಳಿಯ ಸಂತಾನ ಕಟ್ಟು ಭೂತಾಳ ಪಾಂಡ್ಯನಿಂದ ಆರಂಭವಾದುದಲ್ಲ. ಪ್ರಸಕ್ತ ಕಾಲಮಾನ 1441ರಿಂದ 1444ರವರೆಗೆ ತುಳುವವನ್ನಾಳಿದ ಕುಲಶೇಖರನು ಅಧಿಕಾರವನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಟ್ಟು ತನ್ನ ಅಲೂಪ ವಂಶದಲ್ಲಿ ಅಳಿಯ ಸಂತಾನ ಕಟ್ಟನ್ನು ಜಾರಿಗೆ ತಂದನು ಮತ್ತು ಪ್ರಸಕ್ತ ಕಾಲಮಾನ 1506ರಲ್ಲಿ ಕೆಳದಿಯ ರಾಜನಾಗಿದ್ದ ಚೌಡಪ್ಪ ನಾಯಕನು 'ಅಳಿಯ ಸಂತಾನ ಕಟ್ಟಿ'ಗೆ ಶಿಲಾಶಾಸನದ ಮುಖಾಂತರ ಮುದ್ರೆಯೊತ್ತಿದನು. ಹೀಗೆ ಸುಮಾರು ಹದಿಮೂರನೆಯ ಶತಮಾನದವರೆಗೆ ಬರಿಯ ಪದ್ಧತಿಯಾಗಿದ್ದ 'ಅಳಿಯ ಸಂತಾನ ಕಟ್ಟು' ಕ್ರಮೇಣ ರಾಜರುಗಳ ಮನ್ನಣೆಗೆ ಪಾತ್ರವಾಗಿ ಅಲೂಪ ರಾಜರುಗಳಿಂದ ಸ್ವೀಕರಿಸಲ್ಪಟ್ಟು ಕೆಳದಿಯ ರಾಜರ ಅಂಗೀಕಾರ ಮುದ್ರೆಯನ್ನೂ ಪಡೆದು  ಪ್ರಸಕ್ತ ಕಾಲಮಾನ ಹದಿನಾರನೆಯ ಶತಮಾನದಿಂದ ಅದೊಂದು ರಾಜಶಾಸನವಾಗಿ ಪರಿಣಮಿಸಿರುವುದು ಚರಿತ್ರೆಯ ಭಾಗ. 



 ಕೃಷ್ಣಪ್ರಕಾಶ ಬೊಳುಂಬು

#ಪಾದೂರು ಗುರುರಾಜ ಭಟ್ಟರು, #ತುಳುನಾಡು, #ಭೂತಾಳ ಪಾಂಡ್ಯ 

Wednesday, July 30, 2025

ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರಿಗೆ ಬರೆದ ಪತ್ರದ ಪೂರ್ಣ ಪಠ್ಯ: ಅನುವಾದ


ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರಿಗೆ ಬರೆದ ಪತ್ರದ ಪೂರ್ಣ ಪಠ್ಯ: ಅನುವಾದ 


ಕಳೆದ ಮಾರ್ಚ್ 25ರಿಂದ ಪೂರ್ವ ಬಂಗಾಳದಲ್ಲಿ ಮತ್ತು ಭಾರತದಲ್ಲಿ ನಡೆದ ಘಟನೆಗಳ ದುರಂತ ಮತ್ತು ಅಸಹನೀಯ ಪರಿಣಾಮಗಳ ಬಗ್ಗೆ ಭಾರತ ಸರ್ಕಾರವು ನಿಮ್ಮ ಸರ್ಕಾರಕ್ಕೆ ಮತ್ತು ನಿಮ್ಮ ಜನರಿಗೆ ಮಾಹಿತಿ ನೀಡಬಯಸುತ್ತೇವೆ.  ಇಲ್ಲಿ ತಲೆದೋರಿರುವ ಪರಿಸ್ಥಿತಿಯನ್ನು ಕುರಿತು ನಮ್ಮ ರಾಜತಾಂತ್ರಿಕ ಪ್ರತಿನಿಧಿಗಳ ಮೂಲಕ ನಾವು ನಿಮಗೆ ಕಾಲಕಾಲಕ್ಕೆ ವಿವರಿಸುತ್ತಲೇ ಬಂದಿದ್ದೇವೆ. ಪೂರ್ವ ಬಂಗಾಳದಲ್ಲಿ ಪಾಕಿಸ್ಥಾನ ಸರ್ಕಾರವು ಅನುಸರಿಸಿದ ದಮನಕಾರಿ, ಕ್ರೂರ ಮತ್ತು ವಸಾಹತುಶಾಹಿ ನೀತಿಯು ಮಾರ್ಚ್ 25, 1971 ರಿಂದ ನರಮೇಧ ಮತ್ತು ಬೃಹತ್ ಹಿಂಸಾಚಾರದಲ್ಲಿ ಕೊನೆಗೊಂಡಿತು. ಇದು ನಿಮಗೆ ತಿಳಿದಿರುವಂತೆ 10 ಮಿಲಿಯ ಪೂರ್ವ ಬಂಗಾಳಿ ಪ್ರಜೆಗಳು ಭಾರತಕ್ಕೆ ವಲಸೆ ಹೋಗಲು ಕಾರಣವಾಗಿದೆ ಮತ್ತು ಅಂತಹವರ ಸಂಖ್ಯೆ ಇನ್ನೂ ಹೆಚ್ಚುತ್ತಲಿದೆ.

ಈ ಘಟನೆಗಳ ಹೊರೆಯನ್ನು ನಾವು ಹೊತ್ತಿದ್ದೇವೆ ಮತ್ತು ಅಂತಹ ಸಂದರ್ಭಗಳಲ್ಲಿ ಯಾವುದೇ ದೇಶ ಎದುರಿಸಬಹುದಾದ ದೊಡ್ಡ ಒತ್ತಡವನ್ನು ತಡೆದುಕೊಳ್ಳುತ್ತಿದ್ದೇವೆ. ಪಾಕಿಸ್ಥಾನ ನೀಡುತ್ತಿರುವ ನಿರಂತರ ಪ್ರಚೋದನೆಗಳ ನಡುವೆಯೂ ನಾವು ಅತ್ಯಂತ ಸಂಯಮದಿಂದ ವರ್ತಿಸಿದ್ದೇವೆ.

ಪರಿಸ್ಥಿತಿಯ ವಾಸ್ತವಗಳ ಬಗೆಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ನಾವು ತಿಳಿಸಬಯಸುವುದು ಏನೆಂದರೆ: ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ನಮ್ಮ ಪ್ರಯತ್ನಗಳು ಮತ್ತು ನನ್ನ ಸಹೋದ್ಯೋಗಿಗಳು ಮತ್ತು ನಾನು ಕೈಗೊಂಡ ಭೇಟಿಗಳು ಯಾವುದೇ ಫಲಿತಾಂಶಗಳನ್ನು ನೀಡಿಲ್ಲ. ಪೂರ್ವ ಬಂಗಾಳದ ಜನರ ಚುನಾಯಿತ ನಾಯಕರೊಂದಿಗೆ ನೇರವಾಗಿ ವ್ಯವಹರಿಸಲು ಮತ್ತು ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಸಾಧಿಸಲು ಅಧ್ಯಕ್ಷ ಯಾಹ್ಯಾ ಖಾನ್ ಅವರನ್ನು ಮನವೊಲಿಸಲು ವಿಶ್ವದ ರಾಜಕಾರಣಿಗಳ ವಿವೇಚನಾಶೀಲ ಸಲಹೆಗಳು ಸಫಲವಾಗಲಿಲ್ಲ.

ಪಾಕಿಸ್ಥಾನದ ಯುದ್ಧೋತ್ಸುಕತೆಯನ್ನು ಕುರಿತ ನಿರ್ವಿವಾದವಾದ ಪುರಾವೆಗಳು ಈಗ ನಮಗೆ ದೊರೆತಿವೆ. ಡಿಸೆಂಬರ್ 3 1971 ರಂದು ಅಪರಾಹ್ನ ಅಧ್ಯಕ್ಷ ಯಾಹ್ಯಾ ಖಾನ್ ನೇತೃತ್ವದ ಪಾಕಿಸ್ಥಾನ ಸರ್ಕಾರ ತನ್ನ ಪಶ್ಚಿಮ ಗಡಿಗಳ ಮೂಲಕ ಭಾರತದ ಮೇಲೆ ದಾಳಿ ಮಾಡಲು ಆದೇಶಿಸಿತು. ಇದಾದ ನಂತರ ಡಿಸೆಂಬರ್ 4 1971 ರ ಬೆಳಿಗ್ಗೆ ಪಾಕಿಸ್ಥಾನ ಸರ್ಕಾರವು ಭಾರತದ ವಿರುದ್ಧ ಯುದ್ಧ ಸಾರುವುದಾಗಿ ಘೋಷಿಸುವ ಅಸಾಧಾರಣ ಗೆಜೆಟ್ ಪ್ರಕಟಿಸಿತು.

ಡಿಸೆಂಬರ್ 3 ರಂದು ಸಾಯಂಕಾಲ ಐದುವರೆ ಗಂಟೆಯ ಹೊತ್ತಿಗೆ ಪಾಕಿಸ್ಥಾನ ನಮ್ಮ ದೇಶದ ಮೇಲೆ ಪಶ್ಚಿಮ ಗಡಿಯುದ್ದಕ್ಕೂ ಬೃಹತ್ ವಾಯು ಮತ್ತು ನೆಲದ ದಾಳಿಯನ್ನು ಪ್ರಾರಂಭಿಸಿತು ಎಂದು ನಿಮಗೆ ತಿಳಿಸಲು ನಾನು ವಿಷಾದಿಸುತ್ತೇನೆ. ಅವರ ವಿಮಾನಗಳು ಶ್ರೀನಗರ, ಅಮೃತಸರ, ಪಠಾಣ್‌ಕೋಟ್, ಉತ್ತರಾಲಿ, ಅಂಬಾಲ, ಆಗ್ರಾ, ಜೋಧ್‌ಪುರ ಮತ್ತು ಅವಂತಿಪುರದ ಮೇಲೆ ಬಾಂಬ್ ದಾಳಿ ನಡೆಸಿದುವು. ಅಂಬಾಲಾ, ಫಿರೋಜ್‌ಪುರ, ಸುಲೈಮಂಕಿ, ಖೇಮ್ಕರನ್, ಪೂಂಚ್, ಮೆಹ್ದೀಪುರ ಮತ್ತು ಜೈಸೆಲ್ಮೇರೆಗಳ ಗಡಿ ನಗರಗಳು ಮತ್ತು ಪಟ್ಟಣಗಳ ಮೇಲೆ ಭಾರೀ ಶೆಲ್ ದಾಳಿ ನಡೆದಿದೆ. ಭಾರತದ ವಿರುದ್ಧದ ದಾಳಿಯನ್ನು ಎಚ್ಚರಿಕೆಯಿಂದ ಆಯೋಜಿಸಲಾಗಿದೆ ಮತ್ತು ಅದು ಪೂರ್ವಯೋಜಿತವಾಗಿತ್ತು. ಪಾಕಿಸ್ಥಾನ ಸೇನೆ ಜೈಸೆಲ್ಮೇರಿನಿಂದ ಕಾಶ್ಮೀರದವರೆಗೆ ವಿಸ್ತರಿಸಿರುವ ಭಾರತದ ಪಶ್ಚಿಮ ಗಡಿಗಳಲ್ಲಿ ಮೂರು ಗಂಟೆಯಿಂದ ಮೂರು ಗಂಟೆಯವರೆಗೆ ದಾಳಿ ನಡೆಸಿದೆ ಎಂಬ ಅಂಶದಿಂದ ಇದು ಸಾಬೀತಾಗಿದೆ.

ಈ ಆಕ್ರಮಣ ಪೂರ್ವನಿಯೋಜಿತವಾಗಿದೆ ಎಂಬುದು ನವೆಂಬರ್ 25 ರಂದು ಅಧ್ಯಕ್ಷ ಯಾಹ್ಯಾ ಖಾನ್ ಅವರು "ಹತ್ತು ದಿನಗಳಲ್ಲಿ ಯುದ್ಧಕ್ಕೆ ಹೋಗುತ್ತೇನೆ" ಎಂದು ಘೋಷಿಸಿದ್ದರು ಎಂಬ ಅಂಶದಿಂದ ಸ್ಪಷ್ಟವಾಗುತ್ತದೆ. ನಾನು ಸ್ವತಃ ಕಲ್ಕತ್ತಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಮತ್ತು ಸಂಪುಟದ ಹೆಚ್ಚಿನ ಹಿರಿಯ ಸಹೋದ್ಯೋಗಿಗಳು ದೇಶದ ವಿವಿಧ ಭಾಗಗಳಲ್ಲಿದ್ದಾಗ ಪಾಕಿಸ್ಥಾನ ದಾಳಿಯನ್ನು ಪ್ರಾರಂಭಿಸಲು ಆಯ್ಕೆ ಮಾಡಿತು. ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ಪಾಕಿಸ್ಥಾನದ ಪ್ರಚಾರ ಮಾಧ್ಯಮವು ಭಾರತವು ಮಧ್ಯಾಹ್ನದ ಮೊದಲು ಪಶ್ಚಿಮ ಪಾಕಿಸ್ಥಾನದ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿ ದುರುದ್ದೇಶಪೂರಿತ ಪ್ರಚಾರ ದಾಳಿಯನ್ನು ಪ್ರಾರಂಭಿಸಿತು ಎಂಬುದು ಗಮನಾರ್ಹ.

ಭಾರತ ಮತ್ತು ಪಾಕಿಸ್ಥಾನ ಸ್ವಾತಂತ್ರ್ಯ ಪಡೆದ ನಂತರ ಪಾಕಿಸ್ಥಾನ ಭಾರತದ ಮೇಲೆ ದಾಳಿ ಮಾಡುತ್ತಿರುವುದು ಇದು ನಾಲ್ಕನೇ ಬಾರಿ ಎಂಬುದನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ. 1947, 1948 ಮತ್ತು 1965 ರ ನಮ್ಮ ಕಹಿ ಅನುಭವಗಳು, ಪಾಕಿಸ್ಥಾನವು ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಭದ್ರತೆಗೆ ಎಲ್ಲಾ ರೀತಿಯಿಂದಲೂ ಬೆದರಿಕೆ ಹಾಕಲು ದೃಢನಿಶ್ಚಯ ಹೊಂದಿದೆ ಎಂದು ನಮಗೆ ಕಲಿಸಿದೆ - ಈ ಬಾರಿ ವಿಶೇಷವಾಗಿ ಪೂರ್ವ ಬಂಗಾಳದೊಳಗಿನ ತನ್ನ ವಸಾಹತುಶಾಹಿ ಮತ್ತು ದಮನಕಾರಿ ನೀತಿಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಸಮಸ್ಯೆಯನ್ನು ಅಂತರರಾಷ್ಟ್ರೀಯಗೊಳಿಸಲು.

ನನ್ನ ದೇಶ ಮತ್ತು ನನ್ನ ಜನರಿಗೆ ಗಂಭೀರ ಅಪಾಯ ಮತ್ತು ಅಪಾಯದ ಕ್ಷಣದಲ್ಲಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಪಾಕಿಸ್ಥಾನ ಮಿಲಿಟರಿ ಯಂತ್ರದ ಸಾಹಸದಿಂದಲಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಯ ಯಶಸ್ಸು ಈಗ ಭಾರತದ ಮೇಲಿನ ಯುದ್ಧವಾಗಿ ಮಾರ್ಪಟ್ಟಿದೆ. ಇದು ನಮ್ಮ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಕಡ್ಡಾಯ ಜವಾಬ್ದಾರಿಯನ್ನು ನನ್ನ ಜನರು ಮತ್ತು ನನ್ನ ಸರ್ಕಾರದ ಮೇಲೆ ಹೇರಿದೆ. ನಮ್ಮ ದೇಶವನ್ನು ಯುದ್ಧಭೂಮಿಯಲ್ಲಿ ಇರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಆದುದರಿಂದ ನಾವು ಭಾರತದ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದೇವೆ. ಪಾಕಿಸ್ಥಾನವು ನಮ್ಮೆಲ್ಲರ ಮೇಲೆ ಅಪ್ರಚೋದಿತ ದಾಳಿಯನ್ನು ಅನುಸರಿಸುವ ಗಂಭೀರ ಪರಿಣಾಮಗಳು ಪಾಕಿಸ್ಥಾನ ಸರ್ಕಾರದ ಏಕೈಕ ಜವಾಬ್ದಾರಿಯಾಗಿರುತ್ತದೆ. ನಾವು ಶಾಂತಿಪ್ರಿಯ ಜನರು ಆದರೆ ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಜೀವನ ವಿಧಾನವನ್ನು ನಾವು ರಕ್ಷಿಸದಿದ್ದರೆ ಶಾಂತಿ ಉಳಿಯಲು ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ. ನಾವು ನಮ್ಮ ಪ್ರಾದೇಶಿಕ ಸಮಗ್ರತೆಗಾಗಿ ಮಾತ್ರ ಹೋರಾಡುತ್ತಿಲ್ಲ, ಆದರೆ ನನ್ನ ದೇಶಕ್ಕೆ ಬಲವನ್ನು ನೀಡಿದ ಮತ್ತು ಭಾರತದ ಸಂಪೂರ್ಣ ಭವಿಷ್ಯವನ್ನು ಅವಲಂಬಿಸಿರುವ ಮೂಲ ಆದರ್ಶಗಳಿಗಾಗಿ ಹೋರಾಡುತ್ತಿದ್ದೇವೆ. ಈ ಉದ್ದೇಶಪೂರ್ವಕ ಮತ್ತು ಅಪ್ರಚೋದಿತ ಆಕ್ರಮಣವನ್ನು ನಿರ್ಣಾಯಕವಾಗಿ ಮತ್ತು ಅಂತಿಮವಾಗಿ ಒಮ್ಮೆ ಮತ್ತು ಶಾಶ್ವತವಾಗಿ ಹಿಮ್ಮೆಟ್ಟಿಸಬೇಕು ಎಂದು ಜನರು ಮತ್ತು ಭಾರತ ಸರ್ಕಾರವು ದೃಢನಿಶ್ಚಯವನ್ನು ಹೊಂದಿದೆ ಎಂದು ನಾನು ನಿಮಗೆ ಒತ್ತಿ ಹೇಳಬೇಕು; ಇಡೀ ಭಾರತವು ಈ ದೃಢಸಂಕಲ್ಪದಲ್ಲಿ ಒಗ್ಗಟ್ಟಾಗಿ ನಿಂತಿದೆ ಮತ್ತು ಅಂತರರಾಷ್ಟ್ರೀಯ ಸಮುದಾಯವು ನಮ್ಮ ಸಂಕಷ್ಟವನ್ನು ಮೆಚ್ಚುತ್ತದೆ ಮತ್ತು ನಮ್ಮ ಉದ್ದೇಶದ ನ್ಯಾಯಯುತತೆಯನ್ನು ಅಂಗೀಕರಿಸುತ್ತದೆ ಎಂದು ನಿರೀಕ್ಷಿಸುತ್ತದೆ.

ಈ ಅಪಾಯದ ಸಮಯದಲ್ಲಿ ಭಾರತ ಸರ್ಕಾರ ಮತ್ತು ಜನರು ನಿಮ್ಮ ತಿಳುವಳಿಕೆಯನ್ನು ಬಯಸುತ್ತಾರೆ ಮತ್ತು ಪಾಕಿಸ್ಥಾನ ದುರದೃಷ್ಟವಶಾತ್ ಕೈಗೊಂಡಿರುವ ಉದ್ದೇಶಪೂರ್ವಕ ಆಕ್ರಮಣಶೀಲತೆ ಮತ್ತು ಮಿಲಿಟರಿ ಸಾಹಸ ನೀತಿಯಿಂದ ತಕ್ಷಣವೇ ಹಿಂದೆ ಸರಿಯುವಂತೆ ಮನವೊಲಿಸುವಂತೆ ನಿಮ್ಮನ್ನು ಒತ್ತಾಯಿಸುತ್ತಾರೆ. ಭಾರತದ ವಿರುದ್ಧದ ಆಕ್ರಮಣಕಾರಿ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಪಾಕಿಸ್ಥಾನದ ಮಾತ್ರವಲ್ಲದೆ ಇಡೀ ಉಪಖಂಡದ ಜನರಿಗೆ ಹಲವು ಪರೀಕ್ಷೆಗಳು ಮತ್ತು ಕ್ಲೇಶಗಳನ್ನು ಉಂಟುಮಾಡಿರುವ ಪೂರ್ವ ಬಂಗಾಳದ ಸಮಸ್ಯೆಯ ಮೂಲವನ್ನು ತಕ್ಷಣವೇ ನಿಭಾಯಿಸಲು ಪಾಕಿಸ್ಥಾನ ಸರ್ಕಾರದ ಮೇಲೆ ನಿಮ್ಮ ನಿಸ್ಸಂದೇಹವಾದ ಪ್ರಭಾವವನ್ನು ಬಳಸಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆ.


ಇದು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸುವ ಬಗೆಗೆ ಅವರು ಘೋಷಿಸಿಕೊಂಡ ಕಾರಣಗಳಲ್ಲಿ ಒಂದಾಗಿದ್ದರೆ ನಿಜವಾದ ಕಾರಣ ಬೇರೆಯೇ ಇತ್ತೆಂದು ಚರಿತ್ರೆಯಿಂದ ತಿಳಿದುಬರುತ್ತದೆ. 


ಇದನ್ನು ಕುರಿತ ಬಿಬಿಸಿ ವರದಿ

ಜೂನ್ 25, 1975 ರ ಮಧ್ಯರಾತ್ರಿಯಲ್ಲಿ ಯುವ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತಿದೊಡ್ಡ ದೇಶವಾದ ಭಾರತವು ಸ್ಥಗಿತಗೊಂಡಿತು. ಯಾಕೆಂದರೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಆಗ ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಲಾಯಿತು, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಯಿತು, ಪತ್ರಿಕಾ ಬಾಯಿ ಮುಚ್ಚಲಾಯಿತು ಮತ್ತು ಸಂವಿಧಾನವು ಸಂಪೂರ್ಣ ಕಾರ್ಯಕಾರಿ ಅಧಿಕಾರದ ಸಾಧನವಾಗಿ ಬದಲಾಯಿತು. ಮುಂದಿನ 21 ತಿಂಗಳುಗಳ ಕಾಲ, ಭಾರತವು ತಾಂತ್ರಿಕವಾಗಿ ಪ್ರಜಾಪ್ರಭುತ್ವವಾಗಿತ್ತು ಆದರೆ ಸಂಪೂರ್ಣವಾಗಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ರೀತಿಯಲ್ಲಿ ಕಾರ್ಯನಿರ್ವಹಿಸಿತು.

ಅಲಹಾಬಾದ್ ಹೈಕೋರ್ಟ್‌ನ ಸ್ಫೋಟಕ ತೀರ್ಪು ಇಂದಿರಾ ಗಾಂಧಿಯವರನ್ನು ಚುನಾವಣಾ ದುಷ್ಕೃತ್ಯದಲ್ಲಿ ತಪ್ಪಿತಸ್ಥರೆಂದು ಘೋಷಿಸಿತು ಮತ್ತು 1971 ರ ಚುನಾವಣಾ ಗೆಲುವನ್ನು ಅಮಾನ್ಯಗೊಳಿಸಿತು. ರಾಜಕೀಯ ಅನರ್ಹತೆ ಮತ್ತು ಹಿರಿಯ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಬೀದಿ ಪ್ರತಿಭಟನೆಗಳ ಹೆಚ್ಚುತ್ತಿರುವ ಅಲೆಯನ್ನು ಎದುರಿಸುತ್ತಿದ್ದ ಗಾಂಧಿಯವರು, ರಾಷ್ಟ್ರೀಯ ಸ್ಥಿರತೆಗೆ ಬೆದರಿಕೆಗಳನ್ನು ಉಲ್ಲೇಖಿಸಿ ಸಂವಿಧಾನದ 352 ನೇ ವಿಧಿಯ ಅಡಿಯಲ್ಲಿ "ಆಂತರಿಕ ತುರ್ತು ಪರಿಸ್ಥಿತಿ"ಯನ್ನು ಘೋಷಿಸಲು ಆಯ್ಕೆ ಮಾಡಿಕೊಂಡರು. 

ಇತಿಹಾಸಕಾರ ಶ್ರೀನಾಥ್ ರಾಘವನ್ ಅವರು ಇಂದಿರಾ ಗಾಂಧಿಯವರ ಕುರಿತಾದ ತಮ್ಮ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ಸಂವಿಧಾನವು ತುರ್ತು ಪರಿಸ್ಥಿತಿಯ ಸಮಯದಲ್ಲಿ ವ್ಯಾಪಕವಾದ ಅಧಿಕಾರಗಳನ್ನು ಅನುಮತಿಸಿತು. ಆದರೆ ನಂತರ ಏನಾಯಿತು ಎಂದರೆ "ಅಸಾಧಾರಣ ಮತ್ತು ಅಭೂತಪೂರ್ವ ಕಾರ್ಯಕಾರಿ ಅಧಿಕಾರವನ್ನು ಬಲಪಡಿಸುವುದು... ನ್ಯಾಯಾಂಗ ಪರಿಶೀಲನೆಯಿಂದ ನಿಯಂತ್ರಿಸಲ್ಪಡಲಿಲ್ಲ".

ಮೊರಾರ್ಜಿ ದೇಸಾಯಿ, ಜ್ಯೋತಿ ಬಸು ಮತ್ತು ಎಲ್.ಕೆ. ಅಡ್ವಾಣಿ ಮುಂತಾದ ಪ್ರಮುಖ ವಿರೋಧ ಪಕ್ಷದ ರಾಜಕೀಯ ವ್ಯಕ್ತಿಗಳು ಸೇರಿದಂತೆ 110,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಬಲಪಂಥೀಯರಿಂದ ಹಿಡಿದು ತೀವ್ರ ಎಡಪಂಥೀಯ ಗುಂಪುಗಳ ಮೇಲೆ ನಿಷೇಧ ಹೇರಲಾಯಿತು. ಜೈಲುಗಳು ಕಿಕ್ಕಿರಿದು ತುಂಬಿದ್ದುವು ಮತ್ತು ಜನರಿಗೆ ವಿನಾಕಾರಣ ಚಿತ್ರಹಿಂಸೆ ನೀಡುವುದು ವಾಡಿಕೆಯಾಗಿತ್ತು.

ಹೀಗೆ ಮುಂದುವರಿಯುತ್ತದೆ.

ಉಲ್ಲೇಖಗಳು

೧. https://www.bbc.com/news/articles/cn0gnvq72lko

 ಕೃಷ್ಣಪ್ರಕಾಶ ಬೊಳುಂಬು

#ಇಂದಿರಾ ಗಾಂಧಿ, # ಪಾಕಿಸ್ಥಾನ, #ನಿಕ್ಸನ್, 


Tuesday, July 8, 2025

ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರು ಸೂಚನೆ

 ಪಿ ಮಹಮ್ಮದ್ ಹೇಳುತ್ತಾರೆ: 

~~ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರನ್ನು (<ವ್ಯಕ್ತಿಯೊಬ್ಬರ ಹೆಸರು>) ಸೂಚಿಸಿದ್ದಾರೆ...~~

ನಿಜವಾಗಿ ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರು ಸೂಚಿಸಿದವನು ಪಾಕಿಸ್ಥಾನದ ಫೇಲ್ಡ್ ಮಾರ್ಷಲ್ ಆಸಿಫ್ ಮುನೀರನ ಕೈಗೊಂಬೆ ಪ್ರಧಾನಮಂತ್ರಿ ಶೆಹಬಾಜ್ ಶರೀಫ್. ಇದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ವರದಿಯಾಗಿದೆ.



 "ನಮಗೆ ನಿಮ್ಮ ವಾಯುಪ್ರದೇಶ ಬೇಕಾಗಬಹುದು", "ಅಂತಾರಾಷ್ಟ್ರೀಯ ರಾಜ್ಯತಂತ್ರದ ನಿರ್ಣಾಯಕ ಘಟ್ಟಗಳಲ್ಲಿ ನಮಗೆ ನಿಮ್ಮ ಮೌನ ಬೇಕಾಗಬಹುದು" ಮುಂತಾದ ಬಗೆಯಲ್ಲಿ ಅನ್ಯ ದೇಶಗಳು ತೋರಿಸುವ ಪ್ರೀತಿಗೆ ಪಾಕಿಸ್ಥಾನ ಅರ್ಹವೇ ಆಗಿದೆ. ಆದರೆ ಭಾರತ ದೇಶಕ್ಕೆ ಈ ಬಗೆಯ ಪ್ರೀತಿ ಅಗತ್ಯವಿಲ್ಲ ಮತ್ತು ಇಂಥ ಅಗತ್ಯಗಳಿಂದ ಭಾರತ ಎಂದೋ ಮುಂದೆ ಸರಿದಾಗಿದೆ.

ಕೃಷ್ಣಪ್ರಕಾಶ ಬೊಳುಂಬು

#ಭಾರತ #ಟ್ರಂಪ್  #ಪಾಕಿಸ್ಥಾನ #ವಾರ್ತಾಭಾರತಿ

Sunday, June 22, 2025

ಪಾಕಿಸ್ಥಾನ ಪ್ರೇಮಿ ಡೊನಾಲ್ಡ್ ಟ್ರಂಪ್

 ರಾಷ್ಟ್ರಗಳೊಳಗಿನ ಪರಸ್ಪರ ಮೈತ್ರಿಗಳು, ಪೈಪೋಟಿಗಳು ಮತ್ತು ರಾಜಕೀಯದ ಬಗ್ಗೆ ಮಾತನಾಡುವಾಗ ನಾವು ಶತಮಾನಗಳ ಚಾರಿತ್ರಿಕ ಘಟನೆಯೊಂದನ್ನು ಗ್ರಹಿಸಿ ಅದರ ಸುತ್ತ ಸಮಸ್ತ ವಿದ್ಯಮಾನಗಳನ್ನು ಒಂದು ವಾಕ್ಯದಲ್ಲಿ ವಿವರಿಸುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಆದರೆ ಆ ಘಟನೆಗಳ ಹಿಂದಿರುವ ಅದಕ್ಕಿಂತ ಆಳವಾದ ಏನೋ ಒಂದನ್ನು ಗ್ರಹಿಸದಿರುತ್ತೇವೆ. ಯಾರಾದರೂ "ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಬಗ್ಗೆ ಮೆಚ್ಚುಗೆಯನ್ನು ಏಕೆ ತೋರಿಸುತ್ತಾನೆ?" ಅಥವಾ "ಯುನೈಟೆಡ್ ಸ್ಟೇಟ್ಸ್ ಭಾರತದ ಬಗ್ಗೆ ಏಕೆ ನಿರ್ಲಿಪ್ತವಾಗಿದೆ?" ಎಂದು ಕೇಳಿದರೆ ಅವರು ನಿಜವಾಗಿ ಕೇಳುತ್ತಿರುವುದು ಅದಕ್ಕಿಂತ ಆಳವಾದ ವಿಷಯವೆಂದು ಗ್ರಹಿಸಬೇಕು. ತೆರೆಮರೆಯ ಕಥೆಗಳನ್ನು, ಭಾವನೆಗಳನ್ನು, ಇತಿಹಾಸಗಳನ್ನು ಗ್ರಹಿಸದೆ ಇದನ್ನು ಅರ್ಥೈಸಿಕೊಳ್ಳುವುದು ಅಸಂಭವವೇ ಹೌದು.

ದೇಶವೊಂದು ಆರ್ಥಿಕವಾಗಿ ವಿಕಸಿಸುವ ಘಟ್ಟದಲ್ಲಿ ಅದು ಆರ್ಥಿಕತೆಯಲ್ಲಿ ಮುಂದುವರಿಯುವುದು ಮಾತ್ರವಲ್ಲದೆ ಆ ದೇಶದೆಡೆಗಿನ ಜಾಗತಿಕ ದೃಷ್ಟಿಕೋನವೂ ಬದಲಾಗತೊಡಗುತ್ತದೆ. ಜಾಗತಿಕ ಉಪಸ್ಥಿತಿಯಲ್ಲಿ ಅದು ನಿಜವಾಗಿ ಮೇಲುಮೇಲಕ್ಕೆ ಏರುವುದು ಗಮನಕ್ಕೆ ಬರುತ್ತದೆ. ಇದನ್ನು ಕೆಲವರು ಸಂತೋಷದಿಂದ ಸ್ವೀಕರಿಸಿದರೆ ಇನ್ನು ಕೆಲವರು ಭಯಭೀತರಾಗಬಹುದು, ಮತ್ತೂ ಕೆಲವರು ನಿರ್ಲಿಪ್ತರಾಗಿರಬಹುದು. ಭಾರತ ಈಗ ಬೆಳೆಯುತ್ತಿರುವ ದೇಶವಲ್ಲ, ಅದು ಪ್ರಜ್ವಲಿಸುತ್ತಿದೆ. ಹಳೆಯ ಕಾಲದ ವ್ಯವಸ್ಥೆಯಲ್ಲಿ ಎಂದಿಗೂ ಯೋಜಿಸಲಾಗದ ಸಂಗತಿಗಳು ಇಲ್ಲಿ ಘಟಿಸುತ್ತಲಿವೆ. ದೇಶವೊಂದು ತನ್ನ ವಿಧಿಯನ್ನು ತಾನೇ ನಿರ್ಣಯಿಸಿಕೊಳ್ಳುವುದು ಇಲ್ಲಿ ಗಮನಕ್ಕೆ ಬಂದಿದೆ. 

ಪಾಕಿಸ್ಥಾನವನ್ನು ನಾನು ಪ್ರೀತಿಸುತ್ತೇನೆ ಎನ್ನುವ ಟ್ರಂಪ್ ಇನ್ನೇನಾದರೂ ಗುರಿಯಿಟ್ಟುಕೊಂಡು ಇದನ್ನು ಹೇಳುತ್ತಿದ್ದಾನೆಯೇ ಎಂದು ಯೋಚಿಸಬೇಕು. ಪಾಕಿಸ್ಥಾನದ ಸೇನಾ ಮುಖ್ಯಸ್ಥನಿಗೆ ಪಾಕಿಸ್ಥಾನದ ಮೇಲಣ ಪರಮ ಪ್ರೀತಿಯಿಂದ ಊಟ ಬಡಿಸಿದ ಡೊನಾಲ್ಡ್ ಟ್ರಂಪ್ ನೋಬೆಲ್ ಪುರಸ್ಕಾರವನ್ನು ಗುರಿಯಾಗಿಟ್ಟುಕೊಂಡುದು ನಿಜವೇ ಆಗಿದ್ದರೆ ಆ ಪ್ರೀತಿಯನ್ನು ಈ ಬಗೆಯಲ್ಲಿ ವಿಶ್ಲೇಷಿಸಬಹುದು. ಒಂದು ದೇಶ ಇನ್ನೊಂದು ದೇಶವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ ಆ ಮೆಚ್ಚುಗೆಗೆ ಏನು ಬೆಲೆ ಮತ್ತು ಅದು ಏನು ಖರೀದಿಸುತ್ತದೆ ಎಂದು ಕೇಳಬೇಕಾಗುತ್ತದೆ. ಅದು ಪ್ರೀತಿಯೋ ಅಥವಾ ಹತೋಟಿಯೋ; ಅದು ನಿಜವಾದದ್ದೋ ಅಥವಾ ಸ್ವಂತ ಅನುಕೂಲಕ್ಕಾಗಿ ಮಾಡಿಕೊಂಡ ಸಂಬಂಧವೋ? ಇವು ಸರಳ ಪ್ರಶ್ನೆಗಳಲ್ಲ ಮತ್ತು ಅವುಗಳ ಉತ್ತರಗಳೂ ಸರಳವಾಗಿರಲೊಲ್ಲವು.ಸತ್ಯವೇನೆಂದರೆ ಶಕ್ತಿಶಾಲಿ ತನ್ನ ನೆಲೆಯಲ್ಲಿ ತಾನು ಸ್ಥಿತವಾಗಿರುತ್ತಾನೆ. ಅವನಿಗೆ ಯಾರ ಅನುಮತಿಯೂ ಬೇಕಾಗದು. ನಿಜವಾದ ಶಕ್ತಿಯೆಂಬುದು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ ಅಥವಾ ಎಂದಿಗೂ ಯಾರಿಗೂ ತಲೆಬಾಗುವುದಿಲ್ಲ. 

ಡೊನಾಲ್ಡ್ ಟ್ರಂಪ್ ಅವರಂತಹ ಯಾರಾದರೂ ಪಾಕಿಸ್ಥಾನವನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗ ಆ ಪ್ರೀತಿ ಸರಸಮಯ ಪ್ರೇಮ ಸಂಭಾಷಣೆಯದಲ್ಲ, ತೋರಿಸಿದ ಪ್ರೀತಿ ಪ್ರೀತಿಯ ಬಗೆಗಿನದಲ್ಲ, ಅದು ಇತಿಹಾಸ ಅಥವಾ ಸ್ನೇಹದ ಬಗೆಗಿನದ್ದೂ ಅಲ್ಲ. ಇದು ಅನುಕೂಲಸಿಂಧು, ಇದು ರಾಜ್ಯತಂತ್ರಕ್ಕೆ ಸಂಬಂಧಪಟ್ಟುದು ಮತ್ತು ಚದುರಂಗದ ಹಲಗೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ಚಾತುರ್ಯವೆಂದು ಯೋಚಿಸಬೇಕು. ರಾಜಕೀಯ ಜಗತ್ತಿನಲ್ಲಿ ಪ್ರೀತಿ ಪದಗಳಿಗಿಂತ ಹೆಚ್ಚಾಗಿ ಕ್ರಿಯೆಗಳ ಮೂಲಕ ಮಾತನಾಡುತ್ತದೆ. ಒಬ್ಬ ಪ್ರಭಾವಿ ವ್ಯಕ್ತಿ ವೇದಿಕೆಯ ಮೇಲೆ ನಿಂತು "ನಾನು ಈ ದೇಶವನ್ನು ಪ್ರೀತಿಸುತ್ತೇನೆ" ಎಂದು ಹೇಳಿದಾಗ ಅವನ ನಿಜವಾದ ಉದ್ದೇಶ ಸುತ್ತಲಿನ ದೇಶಗಳಿಗೆ ಸೂಚನೆ ಕೊಡುವುದೇ ಆಗಿರುತ್ತದೆ. ಇದು ಆಟದ ಭಾಗವಾದ ಚಲನೆ ಮತ್ತು ನಾವು ನೋಡುತ್ತಿರುವುದು ಬಹಿರಂಗವಾದ ಚಲನೆಗಳನ್ನು ಮಾತ್ರ. ಹೊರಗೆ ಕಂಡುಬರುವುದು ನಗುವ ಮುಖಗಳು, ವ್ಯಂಗ್ಯವಾಡುವ ನಾಲಗೆಗಳು ಮತ್ತು ಬಾಹ್ಯ ಪರಿಣಾಮಗಳು ಮಾತ್ರ. ಹಾಗಾದರೆ ಪಾಕಿಸ್ಥಾನ ಎಲ್ಲಿದೆ ಎಂದು ಕೇಳಿದರೆ ಪಾಕಿಸ್ಥಾನವು ಈ ಮೊದಲು ಎಲ್ಲಿತ್ತೋ ಈಗಲೂ ಅದೇ ಸ್ಥಾನದಲ್ಲಿದೆ. ಅದು ಎಷ್ಟೇ ಆಂತರಿಕ ಹೋರಾಟಗಳನ್ನು ಕಂಡಿರುವ ದೇಶವಾದರೂ ಆರ್ಥಿಕತೆಯಲ್ಲಿ ಎಷ್ಟೇ ಕುಸಿದುಹೋಗಿದ್ದರೂ ಜಾಗತಿಕ ರಾಜ್ಯತಂತ್ರದ ಪ್ರಮುಖ ನೆಲೆಗಳಾದ ಅಫ್ಘಾನಿಸ್ಥಾನ, ಚೀನಾ ಮತ್ತು ಮಧ್ಯಪ್ರಾಚ್ಯ ದೇಶಗಳೊಂದಿಗೆ ಆಳವಾದ ಸಂಬಂಧಗಳನ್ನು ಹೊಂದಿರುವ ದೇಶ ಅದು. ಜನರು ಇಷ್ಟಪಟ್ಟರೂ ಇಷ್ಟಪಡದಿದ್ದರೂ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ದೇಶಗಳಲ್ಲಿ ಒಂದಾಗಿದೆ. ಅವರ ಪ್ರೀತಿಯಿದ್ದರೆ ಯಾರಿಗಾದರೂ ಎಂದಿಗಾದರೂ ಪ್ರಯೋಜನ ಆಗಬಲ್ಲುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ "ನಮಗೆ ನಿಮ್ಮ ವಾಯುಪ್ರದೇಶ ಬೇಕಾಗಬಹುದು", "ಅಂತಾರಾಷ್ಟ್ರೀಯ ರಾಜ್ಯತಂತ್ರದ ನಿರ್ಣಾಯಕ ಘಟ್ಟಗಳಲ್ಲಿ ನಮಗೆ ನಿಮ್ಮ ಮೌನ ಬೇಕಾಗಬಹುದು" ಮುಂತಾದ ಬಗೆಯಲ್ಲಿ ಅನ್ಯ ದೇಶಗಳು ತೋರಿಸುವ ಪ್ರೀತಿಗೆ ಪಾಕಿಸ್ಥಾನ ಅರ್ಹವೇ ಆಗಿದೆ. ಆದರೆ ಭಾರತ ದೇಶಕ್ಕೆ ಈ ಬಗೆಯ ಪ್ರೀತಿ ಅಗತ್ಯವಿಲ್ಲ ಮತ್ತು ಇಂಥ ಅಗತ್ಯಗಳಿಂದ ಭಾರತ ಎಂದೋ ಮುಂದೆ ಸರಿದಾಗಿದೆ.


ಪಾಕಿಸ್ಥಾನವನ್ನು ಪ್ರೀತಿಸುವವರು ಭಾರತದಲ್ಲಿ ಯಾವ ಕೊರತೆ ಕಂಡಿದ್ದಾರೆ ಎಂದು ಚಿಂತಿಸುವ ಅಗತ್ಯವೇ ಇಲ್ಲ. ಭಾರತ ನೆತ್ತಿಯ ಮೇಲಿನ ಸೂರ್ಯ. ಇದು ಇಲ್ಲಿನ ಲಭ್ಯ ತಂತ್ರಜ್ಞಾನದಿಂದಲೂ, ಸ್ಟಾರ್ಟ್‌ಅಪ್‌ಗಳಲ್ಲಿ ಹೆಚ್ಚಿನ ತೊಡಗುವಿಕೆಯಿಂದಲೂ, ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಾಗಿಯಾಗುವ ರೀತಿಯಿಂದಲೂ ವೇದ್ಯವಾಗುತ್ತದೆ. ಭಾರತದ ಪರವಾದ ಮತ್ತು ಭಾರತದ್ದಾದ ಧ್ವನಿಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ಗಟ್ಟಿಯಾಗಿಯೂ ಹೆಮ್ಮೆಯಿಂದಲೂ ಮೊಳಗುತ್ತಲಿರುವುದು ಇದೇ ಮೊದಲಿಗೆ ಎಂಬಂತೆ ಗೋಚರಿಸುತ್ತಲಿದೆ. ಇದು ನಿಶ್ಶಬ್ದವಾದ ವಿಕಸನವಲ್ಲ; ಇದು ಪರಾಕ್ರಮಶಾಲಿಯೂ ಉತ್ಸಾಹಭರಿತವೂ ಆಧ್ಯಾತ್ಮಿಕವೂ ಬೌದ್ಧಿಕವೂ ಆದ ವಿಕಸನವಾಗಿದೆ. ಇದು ಹೊಸದಾದ ಆತ್ಮವಿಶ್ವಾಸ; ಇಂದಿನ ದಿನಮಾನಗಳಲ್ಲಿ ಭಾರತವನ್ನು ತಡೆಯಬಲ್ಲ ಶಕ್ತಿ ಈ ಲೋಕದಲ್ಲಿಲ್ಲ.

ಕೃಷ್ಣಪ್ರಕಾಶ ಬೊಳುಂಬು

#ಭಾರತ #ಟ್ರಂಪ್  #ಪಾಕಿಸ್ಥಾನ

Saturday, June 21, 2025

ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು

ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು



ತುಳುನಾಡಿನ ಬಗೆಗಿನ  "ತುಳುನಾಡು"  ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾರೆ:

"ಮುಳಿಯ ತಿಮ್ಮಪ್ಪಯ್ಯನವರು ಹೇಳಿದಂತೆ ಕಾಸರಗೋಡು ತಾಲೂಕಿನ ಚಂದ್ರಗಿರಿ ಹೊಳೆಯಿಂದ ಬಡಗಣ ಭಾಗದಲ್ಲಿ (ಕುಂಬಳೆ ಸೀಮೆ) ಹಿಂದಿನಿಂದ ಇಂದಿನವರೆಗೆ ಒಂದೇ ಒಂದು ಮಲೆಯಾಳ ಸಾಹಿತ್ಯ ಗ್ರಂಥವಾಗಲಿ, ಮಲೆಯಾಳ ಶಾಸನವಾಗಲಿ ತಲೆದೋರಿದಂತೆ ಕಂಡುಬರುವುದಿಲ್ಲ. ಬದಲಾಗಿ ಕನ್ನಡ ಯಕ್ಷಗಾನ ಪ್ರಬಂಧಗಳೇ ಮೊದಲಾದ ಉತ್ತಮ ಸಾಹಿತ್ಯ ಗ್ರಂಥಗಳೂ ಹಲವಾರು ಕನ್ನಡ ಶಾಸನಗಳೂ ಉದಯಿಸಿದುದು ಕಂಡುಬರುತ್ತದೆ."

ಕೃಷ್ಣಪ್ರಕಾಶ ಬೊಳುಂಬು

#ಕಾಸರಗೋಡು

Saturday, June 7, 2025

ತಮಿಳಿನಿಂದ ಕನ್ನಡ ಎನ್ನುವ ಅಂಧಾಭಿಮಾನಿಗಳು

 ತಮಿಳಿನಿಂದ ಕನ್ನಡ ಎನ್ನುವ ಅಂಧಾಭಿಮಾನಿಗಳು ತಮಿಳು ಎಲ್ಲಿಂದ ಸೇರಿಕೊಳ್ಳುತ್ತದೆಂದು ಗಮನಿಸಬೇಕು.


Monday, May 19, 2025

ಗುಳ್ಳೆನರಿಗಳು

ಗುಳ್ಳೆನರಿಗಳಾದ ಶಶಿ ತರೂರ್ ಮತ್ತು ಜೋನ್ ಬ್ರಿಟಾಸ್ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಲು ಹೊರದೇಶಗಳಿಗೆ ಕಳುಹಿಸುವ ನಿಯೋಗದ ಮುಖ್ಯ ಸದಸ್ಯರು! ಜೊತೆಗೆ ಅಸಾದುದಿನ್ ಒವೈಸಿ!! 

#ಗುಳ್ಳೆನರಿ

ಕೃಷ್ಣಪ್ರಕಾಶ ಬೊಳುಂಬು


Thursday, May 15, 2025

How to verify your architect?

Not everyone who calls himself an “Architect” is an architect. That is why it is important to verify your architect. The process to verify your architect is very simple.  It is as follows:

1Go to https://www.coa.gov.in/ver_arch.php?lang=1

2.Type in the CA Reg. No. in the box shown and enter captcha details.

3.  The format for entering Reg. No. is CA/XXXX/XXXXX wherein XXXX is the year of registration and XXXXX is the registration number.

4. Look for the picture below for easy understanding.

#architect

ಕೃಷ್ಣಪ್ರಕಾಶ ಬೊಳುಂಬು

Sunday, May 4, 2025

Essence of Nationalism


Nationalism should be that which allows you to express yourself. One need not forego of one's identity in the name of nationalism. One's true identity is based on regional cultures. In fact, one has to recognize the true identity of oneself and then he will be able to evolve out of it to accept the larger nationalist identity. In that sense, Hindi cannot be the national language the way it is being propagated right now. To be able to make Hindi the national language, the essence of Indic language Base needs to be recognized. Three Language Policy is a good initiative in that sense and an effective way to propagate it would be to assign one more language in addition to the existing state languages. Then nobody should feel the imposition of Hindi over regional languages. 

In that sense, if someone is a nationalist, he can also demand for a Kannada song in a limited atmosphere where the audience is Kannadigas by and large. To identify oneself with the regional culture should not be a crime. It would be a broad gesture to learn the regional language is spite of getting the best of offers. People have always accepted "outsiders" like PBS, SPB, Chitra, et al and they would have sung a Kannada song even before you would have made a demand for it.  


#Nationalism 

ಕೃಷ್ಣಪ್ರಕಾಶ ಬೊಳುಂಬು


Saturday, May 3, 2025

೧೦೦% ಸ್ವದೇಶಿ

 ಪ್ರವಾಸಿ ವೀಸಾದಲ್ಲಿ ಭಾರತ ಪ್ರವೇಶಿಸಿ, ಭಾರತೀಯ ಪ್ರಜೆಯ ಪತ್ನಿಯಾಗಿ ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸುವ ಮೂಲಕ ಭಾರತೀಯ ಪ್ರಜೆಗೆ ಸಮಾನವಾಗಿ ಬದುಕುವವರು ಇನ್ನೂ ಎಷ್ಟಿದ್ದಾರೋ ಯಾರಿಗೆ ಗೊತ್ತು? ಆ ಭಾರತೀಯ ಪ್ರಜೆ ಸಿಆರ್‍'ಪಿಎಫ್ ಜವಾನನೂ ಆಗಿದ್ದರೆ? ಅವರಿಗೆ ಹುಟ್ಟುವ ಮಕ್ಕಳು ಯಾವ ದೇಶಕ್ಕೆ ನಿಷ್ಠೆ ತೋರಿಸಬಲ್ಲರು?



#ಭಾರತೀಯ_ಪ್ರಜೆ

Thursday, May 1, 2025

ಪಹಲ್ಗಾಮ್ ಘಟನೆ ಭದ್ರತಾ ವೈಫಲ್ಯ?

ಪಹಲ್ಗಾಮ್ ಘಟನೆ ಭದ್ರತಾ ವೈಫಲ್ಯ ಆಗಿದ್ದರೆ ಶ್ರೀ ಪೆರುಂಬುದೂರಿನಲ್ಲಿ ನಡೆದ ಘಟನೆ ಭದ್ರತಾ ವೈಫಲ್ಯ ಆಗಿರಲಿಲ್ಲವೇ? ೧೯೮೪ರ ಒಕ್ಟೋಬರ್ ೩೧ರಂದು ದೆಹಲಿಯ ಸಫ್ದಾರ್‌ಜಂಗ್ ಮಾರ್ಗದಲ್ಲಿ ನಡೆದ ಘಟನೆ ಭದ್ರತಾ ವೈಫಲ್ಯ ಆಗಿರಲಿಲ್ಲವೇ?




#ಪಹಲ್ಗಾಮ್ 

ಕೃಷ್ಣಪ್ರಕಾಶ ಬೊಳುಂಬು

Friday, April 18, 2025

 भारत राज्यों का संघ है


डॉ. बीआर अंबेडकर ने भारत सरकार की राजनीतिक संरचना के बारे में कहा था, "विनाशशील राज्यों का अविनाशी संघ"। भारत संघ राज्यों के बीच आपसी समझौतों के आधार पर नहीं बना है और इस तरह भारत शासन की एकात्मक प्रणाली का पालन कर रहा है। राज्यों को भारत सरकार से अलग होने का कोई अधिकार नहीं है। अगर शासन की संघीय प्रणाली का पालन किया जाता, तो राज्यों को अलग होने का पूरा अधिकार होता क्योंकि वे केंद्र सरकार के साथ आपसी समझौतों से बंधे होते हैं। यह समझा जाना चाहिए कि भारत में शासन की कोई संघीय संरचना नहीं है।

अमेरिका अविनाशी राज्यों का अविनाशी संघ है, जहाँ मौजूदा राज्यों से नए राज्य नहीं बनाए जा सकते या मौजूदा राज्यों की सीमाओं को संबंधित राज्यों की सहमति के बिना बदला नहीं जा सकता।

भारत  राज्यों का संघ होगा। [भारत के संविधान का अनुच्छेद 1]

भारतीय संविधान का अनुच्छेद 3 संसद को नए राज्य बनाने, मौजूदा राज्यों की सीमाओं को बदलने या मौजूदा राज्यों के नाम बदलने की शक्ति देता है। यह शक्ति संसद को भारत के संविधान के अनुच्छेद 3 में वर्णित अनुसार, साधारण बहुमत के माध्यम से राज्य की सीमाओं और नामों को समायोजित करने की अनुमति देती है।


भारत के संविधान में अनुच्छेद 3 में ऐसा कहा गया है:

==नए राज्यों का गठन और मौजूदा राज्यों के क्षेत्रों, सीमाओं या नामों में परिवर्तन==

संसद कानून द्वारा-

(a) किसी राज्य से क्षेत्र को अलग करके या दो या अधिक राज्यों या राज्यों के हिस्सों को मिलाकर या किसी क्षेत्र को किसी राज्य के हिस्से में मिलाकर एक नया राज्य बना सकती है;

(b) किसी राज्य के क्षेत्र को बढ़ा सकती है;

(c) किसी राज्य के क्षेत्र को कम कर सकती है;

(d) किसी राज्य की सीमाओं को बदल सकती है;

(e) किसी राज्य का नाम बदल सकती है;

बशर्ते कि इस प्रयोजन के लिए कोई विधेयक राष्ट्रपति की सिफारिश के बिना संसद के किसी सदन में प्रस्तुत नहीं किया जाएगा और जब तक कि विधेयक में निहित प्रस्ताव किसी राज्य के क्षेत्र, सीमाओं या नाम पर प्रभाव नहीं डालता है, विधेयक को राष्ट्रपति द्वारा उस राज्य के विधानमंडल को उस अवधि के भीतर अपने विचार व्यक्त करने के लिए भेजा गया है, जैसा कि संदर्भ में निर्दिष्ट किया जा सकता है या ऐसी अतिरिक्त अवधि के भीतर, जैसा कि राष्ट्रपति अनुमति दे सकता है और इस प्रकार निर्दिष्ट या अनुमत अवधि समाप्त हो गई है। [संविधान के अनुच्छेद 3 में, परंतुक के लिए, निम्नलिखित परंतुक संविधान (पांचवां संशोधन) अधिनियम, 1955 द्वारा प्रतिस्थापित किया जाएगा]

 ~ कृष्णप्रकाश बोळुंबु

✍️ ಕೃಷ್ಣಪ್ರಕಾಶ ಬೊಳುಂಬು


#Union_of_States #Federalism

India is a Union of States

 India is a Union of States

"An indestructible Union of destructible states", is what Dr. B.R. Ambedkar said about the political structure of the Government of India. The Union of India is not formed on the basis of mutual agreements between the states and as such India is following a Unitary system of governance. The states have no right to secede from the Government of India. Had the federal system of governance been followed, the states would have had all the rights to secede as they are bound by mutual agreements with the central government. It is to be understood that India is having no federal structure of governance.

The USA is an indestructible union of indestructible states, where in new states cannot be formed out of existing states or borders of existing states be altered without the consent of the states concerned. It has got a federal structure for its governance which is not the case with India.

India, that is Bharat, shall be a Union of states. [Article 1 of the Constitution of India]

Article 3 of the Indian Constitution grants Parliament the power to form new states, alter the boundaries of existing states, or change the names of existing states. This power allows the Parliament to adjust state boundaries and names through a simple majority vote, as described in Article 3 of the Constitution of India. 

Article 3 in Constitution of India states so:

==Formation of new States and alteration of areas, boundaries or names of existing States==

Parliament may by law-

(a) Form a new State by separation of territory from any State or by uniting two or more States or parts of States or by uniting any territory to a part of any State;

(b) increase the area of any State;

(c) diminish the area of any State;

(d) alter the boundaries of any State;

(e) alter the name of any State;

Provided that no Bill for the purpose shall be introduced in either House of Parliament except on the recommendation of the President and unless, where the proposal contained in the B ill affects the area, boundaries or name of any of the States , the Bill has been referred by the President to the Legislature of that State for expressing its views thereon within such period as may be specified in the reference or within such further period as the President may allow and the period so specified or allowed has expired.[In article 3 of the Constitution, for the proviso, the following proviso shall be substituted through Constitution (Fifth Amendment) Act, 1955]

Krishnaprakasha Bolumbu

✍️ ಕೃಷ್ಣಪ್ರಕಾಶ ಬೊಳುಂಬು


#Union_of_States #Federalism

Wednesday, April 16, 2025

ಭಾರತದ ರಾಜ್ಯಾಂಗ ವ್ಯವಸ್ಥೆಯಲ್ಲಿ ಫೆಡರಲ್ ಅಂಶಗಳು

ರಾಜ್ಯಾಂಗ ವ್ಯವಸ್ಥೆಯಲ್ಲಿ ರಾಜ್ಯ ಸರಕಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರುವ ವ್ಯವಸ್ಥೆಯನ್ನು ಫೆಡರಲ್ ವ್ಯವಸ್ಥೆ ಎನ್ನಲಾಗುತ್ತದೆ ಮತ್ತು ಕೇಂದ್ರ ಸರಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರುವ ವ್ಯವಸ್ಥೆಯನ್ನು ಏಕೀಕೃತ ರಾಜ್ಯಾಂಗ ವ್ಯವಸ್ಥೆ ಅಥವಾ ಯುನಿಟರಿ ಸ್ಟೇಟ್ ಎನ್ನಲಾಗುತ್ತದೆ.

ಭಾರತದ ಏಕೀಕೃತ ರಾಜ್ಯಾಂಗ ವ್ಯವಸ್ಥೆಯಲ್ಲಿ ಫೆಡರಲ್ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆಯೇ ಹೊರತು ಸಹಜವಾದ ಫೆಡರಲ್ ವ್ಯವಸ್ಥೆ ಭಾರತಕ್ಕಿಲ್ಲ. ಹೀಗಾಗಿಯೇ ಅಮೇರಿಕನ್ ಫೆಡರಲ್ ವ್ಯವಸ್ಥೆಯ ಬಗೆಗೆ ಅಮೇರಿಕದ ಹಿಂದಿನ ಅಧ್ಯಕ್ಷರಾದ ಜೇಮ್ಸ್ ಮೇಡಿಸನ್ ಏನು ಹೇಳಿದರೆಂಬುದು ಭಾರತದ ಸನ್ನಿವೇಶದಲ್ಲಿ ಅಪ್ರಸ್ತುತವೆನಿಸುತ್ತದೆ. ಯಾಕೆಂದರೆ ಅಮೇರಿಕದಲ್ಲಿ ಹಲವಾರು ಸ್ವತಂತ್ರ ರಾಜ್ಯಗಳು ಒಟ್ಟುಗೂಡಿ ಒಂದು ದೇಶವಾದುವು. ಭಾರತದಲ್ಲಿ ಇದು ಹೀಗೆ ಇಲ್ಲ. ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಫೆಡರಲ್ ವ್ಯವಸ್ಥೆಯ ಬಗೆಗೆ ಜೇಮ್ಸ್ ಮೇಡಿಸನ್ ಅವರ ಚಿಂತನೆಯನ್ನು ಉಲ್ಲೇಖಿಸಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭಾರತದ ರಾಜ್ಯಾಂಗ ವ್ಯವಸ್ಥೆಯಲ್ಲಿ ಫೆಡರಲ್ ಅಂಶಗಳನ್ನು ಸೇರಿಸಿಕೊಂಡುದು ಆಡಳಿತವನ್ನು ಸರಳಗೊಳಿಸುವ ಉದ್ದೇಶದಿಂದಲೇ ಹೊರತು ಹಲವಾರು ರಾಜ್ಯಗಳು ಒಟ್ಟುಗೂಡಿ ಮಾಡಿಕೊಂಡ ವ್ಯವಸ್ಥೆ ಇಲ್ಲಿಲ್ಲ ಎಂಬುದು ಗಮನಾರ್ಹ.

 #ಏಕೀಕೃತ ರಾಜ್ಯಾಂಗ ವ್ಯವಸ್ಥೆ #ಫೆಡರಲ್ ವ್ಯವಸ್ಥೆ #ಏಕೀಕೃತ ರಾಜ್ಯಾಂಗ ವ್ಯವಸ್ಥೆ #ಯುನಿಟರಿ ಸ್ಟೇಟ್ 

✍️ ಕೃಷ್ಣಪ್ರಕಾಶ ಬೊಳುಂಬು

ಜಾತಿಗಣತಿಯ ಆ60 ಪ್ರಶ್ನೆಗಳು

ಜಾತಿಗಣತಿಯ ಆ 60 ಪ್ರಶ್ನೆಗಳು  ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ...