Monday, November 3, 2025

ಏಕಾಣ್ಮ ಪಂಚಕಂ - 2

 ಏಕಾಣ್ಮ ಪಂಚಕಂ - 2

ತಾನು ತಾನಾಗಿರುತ್ತಲೂ ತನ್ನ ಸ್ಥಿತಿಯನ್ನು ಅರಿಯಲಾರದ ಕುಡುಕನಿಗೆ ಸಚ್ಚಿದಾನಂದ ಸ್ಥಿತಿಯನ್ನು ಬದಲಿಯಾಗಿ ಕೊಡು.

---------------------------------------------------------------------------------------------------------------------------

                                

ತಾನಿರುಂದುಂ ತಾನಾಗ ತನ್ನೈತ್ತಾ ನಾನೆವನ್

ಯಾನಿರುಕ್ಕುಂ ಸ್ಥಾನಂ ಎದುವೆನಕ್ಕೇಟ್ ಪಾನುಕ್ಕು

ಯಾನೆವನ್ ಎವ್ವಿಡಂ ಯಾನುಳನ್ ಎಂಡ್ರಮಡು

ಪಾನನೈ ಈಡು ಪಗರ್ ಸಚ್ಚಿದಾನಂದ


ತಾನು ತಾನಾಗಿರುತ ತನಗೆ ತಾನಾರೆಂದೊರಲಿ

ಆನಿರ್ಪ ತಾಣವೆದೆಂದೆಂಬನಿಗೆ

ಆನಾವನೆತ್ತಲಾನಿರ್ಪೆನೆಂಬುದನು

ಪಾನಿಗಮೀಡು ಕೊಡು - ಸಚ್ಚಿದಾನಂದ


ಪದವಿಂಗಡಣೆ:

[ತಾಣ+ಎದು+ಎಂದು+ಎಂಬನಿಗೆ] [ಆನು+ಆವನು+ಎತ್ತಲ್+ಆನ್+ಇರ್ಪೆನು+ಎಂಬುದನು] [ಪಾನಿಗಂ+ಈಡು] 


ಅರ್ಥಗಳು:

ಪಾನಿ = ಕುಡುಕ, ಈಡು = ಬದಲಿ, ಪಗರ್ = ಕೊಡು


ವ್ಯಾಖ್ಯಾನ:

ತಾನು ತಾನಾಗಿಯೇ ಇದ್ದಾಗಲೂ ತನ್ನ ನಿಜಸ್ವರೂಪವನ್ನು ಅರಿಯದೆ, “ನಾನು ಯಾರು?”, “ನಾನು ಎಲ್ಲಿರುವೆ?”, “ನಾನು ಹೇಗಿರುವೆ?” ಎಂಬ ಪ್ರಶ್ನೆಗಳನ್ನು ಕೇಳುವ ಅಜ್ಞಾನಿಯಾದ ಆ ಕುಡುಕನಿಗೆ ಆತನ “ನಾನು” ಎಂಬ ಭಾವಕ್ಕೆ ಬದಲಿಯಾಗಿ ಪರಮ ಸತ್ಯವಾದ ಸಚ್ಚಿದಾನಂದ ಸ್ಥಿತಿಯನ್ನು ನೀನು ಕೊಡು!


ತಾತ್ಪರ್ಯ:

ಆತ್ಮಾನುಭವದ ಆ ಸ್ಥಿತಿಯಲ್ಲಿ ಅಹಂಕಾರ ನಾಶಗೊಂಡು, ಪರಿಪೂರ್ಣ ಬೋಧೆಯ ಆನಂದವೊಂದೇ ಉಳಿಯುತ್ತದೆ - ಅದುವೇ ಸಚ್ಚಿದಾನಂದವೆಂಬ ಪರಮ ಸ್ಥಿತಿ.


ಕೃಷ್ಣಪ್ರಕಾಶ ಬೊಳುಂಬು




No comments:

Post a Comment

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ ಬ್ರಿಟಿಷರಿಂದ ಆರಂಭಗೊಂಡಿತೇ ಹೊರತು ಕೇವಲ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಯಿತೆನ್ನುವುದು ಪೆರಮೆ. ದಮನಕಾರಿ ಬ್ರಿಟಿಷ್ ಆಡಳಿತ ನೀತಿಗಳು...