Friday, September 26, 2025

ఎస్. ఎల్. భైరప్ప (1931 – 2025): ఒక నివాళి

 

సాహిత్య ప్రపంచం ఒక వెలుగు నక్షత్రాన్ని కోల్పోయింది. కన్నడ సాహిత్యంలో ఆత్మశోధనకు, సత్యాన్వేషణకు, తత్త్వ చింతనకు ప్రతీకగా నిలిచిన ఎస్. ఎల్. భైరప్ప ఇక లేరు. ఆయన కాలం ముగిసినా, ఆయన కలం వెలిగించిన ఆలోచనలు ఇంకా మన మనసుల్లో ప్రతిధ్వనిస్తూనే ఉంటాయి. ఈ నివాళి, ఆ మహానుభావుడి స్మృతులకు అంకితం.

ఎస్. ఎల్. భైరప్ప (1931 – 2025): ఒక నివాళి

2025 సెప్టెంబర్ 24న ఒక మహత్తర ప్రతిభ అస్తమించింది. ఎస్. ఎల్. భైరప్ప ఇకలేరు. కన్నడ సాహిత్యానికి ఆయన ఒక రచయిత మాత్రమే కాదు—ఒక గురువు, ఒక తత్త్వవేత్త, ఒక సత్యాన్వేషి కూడా.

ఆయన రచనలతో పెరిగినవారికి భైరప్ప కేవలం రచయితగానే కాక, జీవితపు లోతుల్లోకి నడిపిన ఒక గురువుగానూ నిలిచారు. పర్వ చదువుతున్నప్పుడు మహాభారతం కేవలం ఇతిహాసం కాదని, మన స్వంత పోరాటాల ప్రతిబింబమని ఆయన మాకు నేర్పించారు. ఆవరణ చరిత్రపు పొరల వెనుక దాగి ఉన్న నిజాలను ఎదుర్కొనమని ప్రేరేపించింది. ప్రతి నవల మమ్మల్ని ప్రశ్నించమని, అసౌకర్యమైన సత్యాలను ధైర్యంగా ఎదుర్కోవాలని కోరింది.

ఆయన భాషకు ఒక ఆచరణాత్మక గంభీరత ఉండేది; ఆలోచనలకు మాత్రం ఎప్పటికీ వంగని దృఢత్వం. కానీ ఆ గంభీరత లోపల ఎల్లప్పుడూ మనుషుల పట్ల కరుణ, ప్రేమ ప్రవహించేది. మనుషులు, కుటుంబాలు, జ్ఞాపకాలు మరియు మార్పు మధ్య తడబడే సంస్కృతులు—ఇవి ఆయన రచనల కేంద్రముగా నిలిచాయి.

పద్మభూషణ్, సాహిత్య అకాడమీ ఫెలోషిప్, సరస్వతి సమ్మాన్ వంటి అనేక గౌరవాలు ఆయనను అనుసరించాయి. కానీ ఆయనకు నిజమైన బహుమతి, పాఠకుల హృదయాల్లో స్థిరంగా నిలిచిన నిశ్శబ్దమైన అభిమానమే.

ఈరోజు మనం దుఃఖిస్తున్నాం; కానీ కృతజ్ఞతను కూడా తెలియజేస్తున్నాం. ఎందుకంటే భైరప్ప వాక్యాలు ఇంకా వెలుగుల దీపాల్లా మనల్ని నడిపిస్తున్నాయి, మనల్ని ప్రశ్నిస్తున్నాయి. ప్రళయకాలం వరకు మాయమయ్యే స్వరం కాదు ఇది అని గుర్తుచేసుకుంటూ, భైరప్పకు నివాళులు అర్పిద్దాం. 🌹

Thursday, September 25, 2025

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

 ಸಾಹಿತ್ಯ ಲೋಕವು ಒಂದು ಹೊಳೆಯುವ ನಕ್ಷತ್ರವನ್ನು ಕಳೆದುಕೊಂಡಿದೆ. ಕನ್ನಡ ಸಾಹಿತ್ಯದಲ್ಲಿ ಆತ್ಮಶೋಧನೆ, ಸತ್ಯಾನ್ವೇಷಣೆ ಮತ್ತು ತಾತ್ವಿಕ ಚಿಂತನೆಯ ಸಂಕೇತವಾಗಿ ನಿಂತಿದ್ದ ಎಸ್.ಎಲ್. ಭೈರಪ್ಪ ಇನ್ನಿಲ್ಲ. ಅವರ ಕಾಲ ಕಳೆದರೂ, ಅವರ ಲೇಖನಿಯಿಂದ ಬೆಳಗಿದ ಆಲೋಚನೆಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲಿವೆ. ಈ ಮೂಲಕ ಎಸ್.ಎಲ್.ಭೈರಪ್ಪನವರಿಗೆ ಅಂತಿಮ ನಮನಗಳನ್ನು ಸಲ್ಲಿಸುವುದಾಗಿದೆ.

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

ಸೆಪ್ಟೆಂಬರ್ 24, 2025 ರಂದು ಎಸ್. ಎಲ್. ಭೈರಪ್ಪ ಎಂಬ ದೈತ್ಯ ಪ್ರತಿಭೆಯೊಂದು ನಮ್ಮನ್ನಗಲಿತು. ಬರೆಹಗಾರನಿಗಿಂತ ಹೆಚ್ಚಿಗೆ ಗುರುವಾಗಿಯೂ, ಚಿಂತಕನಾಗಿಯೂ  ನಿರಂತರ ಸತ್ಯಾನ್ವೇಷಕರೂ ಅವರು ಛಾಪುಗಳನ್ನೊತ್ತಿದವರೆಂದು ನಾವು ನೆನಪಿಸಿಕೊಳ್ಳುತ್ತೇವೆ.

ಭೈರಪ್ಪನವರ ಕೃತಿಗಳೊಂದಿಗೆ ಬೆಳೆದವರಿಗೆ ಅವರು ಬರಿಯ ಬರೆಹಗಾರರಾಗಿರಲಿಲ್ಲ. ಅವರು ಜೀವನದ ಉದ್ದ ಅಗಲಗಳನ್ನು ಕಣ್ಣ ಮುಂದೆ ತೆರೆದಿಟ್ಟ ಪಥಪ್ರದರ್ಶಕನಾದ ಗುರುವೂ ಅವರಾಗಿದ್ದರು. "ಪರ್ವ" ಕೃತಿಯ ಓದಿನೊಂದಿಗೆ ಇತಿಹಾಸಗಳು ಬರಿಯ ಕಟ್ಟುಕಥೆಗಳಲ್ಲ, ಜೀವನದ ಹೋರಾಟಗಳ ಪ್ರತಿಬಿಂಬಗಳು ಅವು ಎಂದು ಭೈರಪ್ಪ ನಮಗೆ ತೋರಿಸಿಕೊಟ್ತರು. "ಆವರಣ", "ಸಾರ್ಥ" ಕೃತಿಗಳು ಸರಿದುಹೋದ ಚರಿತ್ರೆಯ ವಾಸ್ತವಿಕ ಚಿತ್ರಣಗಳನ್ನು ತೆರೆದಿಟ್ಟಿತು. ಪ್ರತಿಯೊಂದು ಕಾದಂಬರಿಯಲ್ಲಿಯೂ ಅವರು ನಮಗೆ ಪ್ರಶ್ನಿಸಲಿಕ್ಕೆ ಮತ್ತು ಅಹಿತಕರ ಸತ್ಯಗಳನ್ನು ಧೈರ್ಯದಿಂದ ಎದುರಿಸಲಿಕ್ಕೆ  ಹೇಳಿಕೊಟ್ಟರು.

ಅವರ ಭಾಷೆ ಗಂಭೀರವಾಗಿತ್ತು ಮತ್ತು ವಿಮರ್ಶೆಗಳಿಗೆ ಬಾಗದ ದೃಢ ನಿಲುವುಗಳು ಅವರವಾಗಿದ್ದುವು. ಆದರೆ ಅವೆಲ್ಲದರ ಅಂತರಾಳದಲ್ಲಿ ಸದಾ ಸ್ಫುರಿಸುವ ಮಾನವಪ್ರೇಮ ನೆಲೆಗೊಂಡಿತ್ತು. ಮನುಷ್ಯರು ಮತ್ತು ಅವರ ಕುಟುಂಬಗಳು, ನೆನಪುಗಳು ಮತ್ತು ಬದಲಾವಣೆಗಳ ನಡುವೆ ಸಿಲುಕಿ ನರಳುವ ಸ್ಥಳೀಯ ಸಂಸ್ಕೃತಿಗಳು ಅವರ ಕೃತಿಗಳ ಕೇಂದ್ರಬಿಂದುಗಳು.

ಭೈರಪ್ಪನವರು ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದರು. ಆದರೆ ಅವರಿಗೆ ಸಂದ ನಿಜವಾದ ಪ್ರಶಸ್ತಿ ಅವರ ಓದುಗರ ಹೃದಯದ ಮೌನವಾಗಿ ನೆಲೆಸಿದ ಆರಾಧನೆಯ ಭಾವನೆ.

ನಮಗಿಂದು ದುಃಖವಿದೆ; ಅದರೊಂದಿಗೆ ನಾವು ಭೈರಪ್ಪನವರಿಗೆ ಕೃತಜ್ಞತೆಗಳನ್ನೂ ಸಲ್ಲಿಸುತ್ತೇವೆ. ಏಕೆಂದರೆ ಭೈರಪ್ಪನವರ ಮಾತುಗಳು, ಎಂದಿಗೂ ಬೆಳಗುವ ನಂದಾದೀಪಗಳಾಗಿ ನಮಗೆ ಮಾರ್ಗದರ್ಶನ ನೀಡುತ್ತಲಿರಬಲ್ಲುವು ಮತ್ತು ಪ್ರಶ್ನಿಸಲು ಪ್ರೇರಣೆ ನೀಡುತ್ತಲಿರಬಲ್ಲುವು. ಇದು ಯುಗಗಳ ಅಂತ್ಯಕಾಲದವರೆಗೆ ಮಸುಕಾಗದ ಧ್ವನಿಯೆಂದು ನೆನಪಿಸಿಕೊಳ್ಳುತ್ತ ಭೈರಪ್ಪನವರಿಗೆ ಅಂತಿಮ ನಮನಗಳು.

 ಕೃಷ್ಣಪ್ರಕಾಶ ಬೊಳುಂಬು



Tuesday, September 23, 2025

ಇದು ಕಾಸರಗೋಡಿನಲ್ಲಿ ಆದ ಘಟನೆಯೇ?

 ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆಯೊಂದನ್ನು ಕಟ್ಟಿ ಕ್ಲಾಸ್ ಮಾಡುತ್ತಿರುವ ಚಿತ್ರವೊಂದು ಕಾಸರಗೋಡಿನಲ್ಲಿ ಆದ ಘಟನೆ ಎಂಬಂತೆ ಕನ್ನಡ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಲಿದೆ. ಇದು ಕಾಸರಗೋಡಿನಲ್ಲಿ ಆದುದು ನಿಜವೇ? ಈಚೆಗೆ ಕನ್ನಡ ಪತ್ರಿಕೆಗಳು ಕೇರಳದ ಯಾವುದೇ ಸುದ್ದಿಗೆ ಕಾಸರಗೋಡು ಎಂದು ಬರೆಯುತ್ತಿವೆ. ಕೇರಳದ ಅನ್ಯ ಸ್ಥಾನದಲ್ಲಿ ನಡೆದ ಘಟನೆಗೆ ಕಾಸರಗೋಡು ಎಂಬ ಉಪಶೀರ್ಷಿಕೆ ಕೊಟ್ಟುದು ನಿಜವೇ ಆಗಿದ್ದರೆ ಇದು ಅಕ್ಷಮ್ಯ ಅಪರಾಧ. ಕೇರಳದಲ್ಲಿ ನಡೆದ ಯಾವುದೇ ಘಟನೆಯನ್ನು ಕಾಸರಗೋಡಿನಲ್ಲಿ ನಡೆದುದು ಎಂಬಂತೆ ಬಿಂಬಿಸುವುದು ಕನ್ನಡದ ಮಾಧ್ಯಮ ವರದಿಗಾರರಲ್ಲಿ ಬೇರೂರುತ್ತಿರುವ ದುರಭ್ಯಾಸವೂ ಆಗಿ ಬದಲಾಗುತ್ತಲಿದೆ.  

ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರ ಸಂಖ್ಯೆ ಇಳಿಮುಖವಾಗಿ ಆ ಸ್ಥಾನದಲ್ಲಿ ಅಬ್ಬರದಲ್ಲಿ ಬೊಬ್ಬೆ ಹೊಡೆಯುವ ಮುಜಾಹಿದರು ಹೆಚ್ಚಿಕೊಳ್ಳುತ್ತಿದ್ದಾರೆ. ಅವರಿಗೆ ಆದರೆ ಸ್ತ್ರೀ ಪುರುಷರ ಮಧ್ಯೆ ಪರದೆ ಇರಲೇ ಬೇಕು ಮತ್ತು ಹಧೀಸುಗಳ ಪಾಲನೆ 100% ಆಗಬೇಕು. ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರಾದರೋ ಅಲ್ಲೊಬ್ಬ ಮಹಿಳೆ ಬುರುಕ ತೊಟ್ಟು ಊರಿನ ಸಾಂಸ್ಕತಿಕ ಆಚರಣೆಯಲ್ಲಿ ಭಾಗಿಯಾಗುವುದು, ಇಲ್ಲೊಬ್ಬ ಮಾನಸಾಂತರ ಪೂರ್ವದ ತನ್ನ ಸಾಂಸ್ಕತಿಕ ಹಿನ್ನೆಲೆಯನ್ನು ಒಪ್ಪುವುದು ಎಂದು ಮುಂತಾದ ರೀತಿಗಳಲ್ಲಿ ಇದ್ದುಕೊಂಡಿದೆ.

ನಿಜವಾಗಿ ಈ ಘಟನೆ ಕೊಚ್ಚಿಯಲ್ಲಿ ನಡೆದುದು. ತೀವ್ರ ಇಸ್ಲಾಮಿಕ್ ದೃಷ್ಟಿಕೋನವಾದ ಮುಜಾಹಿದ್ ಚಳುವಳಿಯ ಅನುಯಾಯಿಗಳು ಸಂಘಟಿಸಿದ ಕಾರ್ಯಕ್ರಮ ಇದು. ಮುಜಾಹಿದ್ ದೃಷ್ಟಿಕೋನದಿಂದ ಇದಕ್ಕೆ ಉತ್ತರವನ್ನು ಈ ಕೆಳಗಿನಂತೆ ಊಹಿಸಬಹುದು.

೧. ನಾವು ಸ್ತ್ರೀಯರನ್ನು ಪರದೆ ಕಟ್ಟಿ ದೂರ ಇಟ್ಟಿಲ್ಲ, ಬದಲಿಗೆ ಪುರುಷರನ್ನು ಸ್ತ್ರೀಯರಿಂದ ದೂರ ಇಟ್ಟಿದ್ದೇವೆ. ಸ್ತ್ರೀ ಪುರುಷರ ಮಧ್ಯೆ ನಾವು ಕಟ್ಟಿದ ಪರದೆ ಸ್ತ್ರೀ ವಿರುದ್ಧವಾದುದು ಎಂದು ತಿಳಿಯುವುದು ತಪ್ಪು. ಅದನ್ನು ಯಾಕೆ ಪುರುಷ ವಿರುದ್ಧ ಎಂದು ಕರೆಯಬಾರದು? ಇದು ಸ್ತ್ರೀ ವಿರುದ್ಧವಲ್ಲ ಎಂದು ನಾವು ತಿಳಿಯುತ್ತೇವೆ. ಸ್ತ್ರೀ ಪುರುಷರ ಮಧ್ಯೆ ಇರುವ ಪ್ರತ್ಯೇಕತೆ ವಾಸ್ತವವೇ ಆಗಿದೆ. ಅದು ಇಂದು ನಿನ್ನೆಯದಲ್ಲ. ಅಲ್ಲಾಹು ನಮ್ಮನ್ನು ಸೃಷ್ಟಿಸಿದುದು ಹೀಗೆಯೇ ಎಂದು ತಿಳಿಯಬೇಕು.

೨. ಸ್ತ್ರೀ ಪುರುಷರ ಮಧ್ಯೆ ಇರುವ ಪರದೆಯನ್ನು ನೀವು ನೋಡುತ್ತೀರಿ ಆದರೆ ಮಸೀದಿಗಳಲ್ಲಿ ಸ್ತ್ರೀ ಪುರುಷರ ಮಧ್ಯೆ ಇರುವ ಗೋಡೆಯನ್ನು ಯಾಕೆ ನೋಡುವುದಿಲ್ಲ. [ಕೆಲವು ಪಂಥಗಳಿಗೆ ಸೇರಿದ ಮಸೀದಿಗಳಲ್ಲಿ ಸ್ತ್ರೀಯರಿಗೂ ನಮಾಜ್ಃ ಸಲ್ಲಿಸುವ ಅವಕಾಶವಿದೆ.]

೩. ಮುಸ್ಲಿಮರು ಯಾಕೆ ಯಾವಾಗಲೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಲೇ ಇರಬೇಕು? ಅದು ಸಾಧ್ಯವಿಲ್ಲ- ನಾವು (ಮುಸಲ್ಮಾನರು) ಇರುವುದೇ ಹೀಗೆ, ನಮ್ಮ ಜೀವನವೇ ಹೀಗೆ ಎನ್ನುತ್ತೇವೆ. 

೪.  ಅನ್ಯ ಸ್ತ್ರೀ ಪುರುಷರು ನಿರ್ದಿಷ್ಟ ಮಿತಿಯನ್ನು ಮೀರಿ ಒಡನಾಡಿದರೆ ಏನಾಗಬಹುದು ಎಂದು ನಾವು ಊಹಿಸಬಹುದು. ಪಾಪಗಳಿಗೆ ದಾರಿ ಮಾಡಿಕೊಡುವುದು ಇಂತಹ ಪ್ರವೃತ್ತಿಗಳು ಎಂದು ತಿಳಿಯಬೇಕು. ವ್ಯಭಿಚಾರ ತಪ್ಪೆಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಪುರುಷರಲ್ಲಿ ಹಾರ್ಮೋನುಗಳ ವ್ಯತ್ಯಯದ ಮೂಲಕ ಮತ್ತು ಸ್ತ್ರೀಯರಿಗೆ ತಮ್ಮೊಡನೆ ಕಾಳಜಿ ತೋರಿಸುವವರೊಂದಿಗೆ ಮೂಲಕ ಉಂಟಾಗುವ ಪ್ರೀತಿ ಪರಸ್ಪರ ಆತ್ಮೀಯತೆಗೆ ದಾರಿಮಾಡಿಕೊಡುತ್ತದೆ. ಆತ್ಮೀಯತೆ ನಿರ್ದಿಷ್ಟ ಮಿತಿಯನ್ನು ಮೀರಿದಾಗಲೇ ಅದು ವ್ಯಭಿಚಾರ ಎನಿಸಿಕೊಳ್ಳುತ್ತದೆ.      

೫. ಯಾವುದೇ ರೀತಿಯ ಅನಾಚಾರಗಳಿಗೆ ಆಸ್ಪದ ಕೊಡದಿರುವುದು ಇಸ್ಲಾಮ್ ಮತದ ವೈಶಿಷ್ಟ್ಯ. ವ್ಯಭಿಚಾರಕ್ಕೆ ಆಸ್ಪದ ಕೊಡುವ ದಾರಿಗಳನ್ನೂ ಕೂಡ ಇಸ್ಲಾಮ್ ಇಲ್ಲವಾಗಿಸುತ್ತದೆ. "ವಾಲಾ ತಕ್ರಬು ಝಿಃನ" - (ವ್ಯಭಿಚಾರದಿಂದ ದೂರವಿರಿ) ಎನ್ನುವುದು ಇಸ್ಲಾಮಿನ ವೈಶಿಷ್ಟ್ಯ, ವ್ಯಭಿಚಾರ ಮಾಡಬಾರದು ಎಂದು ಮಾತ್ರವೇ ಅಲ್ಲ ಎಂದು ತಿಳಿಯಬೇಕು. ತಪ್ಪುಗಳನ್ನು ಮಾಡಬಾರದು ಎಂದು ಮಾತ್ರವಲ್ಲ ತಪ್ಪುಗಳತ್ತ ಮುನ್ನಡೆಸುವ ದಾರಿಗಳನ್ನೂ ಸಹ ಕುರಾನ್ ಇಲ್ಲವಾಗಿಸುತ್ತದೆ. ಸ್ತ್ರೀಯರು ಪುರುಷರನ್ನು ನೋಡಿದರೆ ಅಥವಾ ಪುರುಷರು ಸ್ತ್ರೀಯರನ್ನು ನೋಡಿದೊಡನೆ ಲೈಂಗಿಕ ಭಾವನೆಗಳು ಮಾತ್ರವಲ್ಲದೆ ಸ್ನೇಹದ ಅಥವಾ ಇತರ ಭಾವನೆಗಳು ಕೂಡ ಉಂಟಾಗಬಹುದು. ಅದನ್ನು ನಾವು ಅಲ್ಲಗಳೆಯುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟೂ ಪ್ರತ್ಯೇಕತೆಯನ್ನು ಪಾಲಿಸುವುದು ನಾವು ಇಸ್ಲಾಮನ್ನು ಅನುಸರಿಸುವ ರೀತಿ.  

೬. ಪ್ರತ್ಯೇಕತೆಯೆಂಬುದು ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದೆ. ಹಾಗಾಗಿ ನಾವು ಸ್ವಯಂ ಹಿಜಾಬ್ ಧರಿಸಬೇಕು. ಸ್ತ್ರೀಯರಿಗೂ ಪುರುಷರಿಗೂ ಹಿಜಾಬ್ ಇದೆ. ಸ್ತ್ರೀಯರು ಧರಿಸುವ ಪರದಾ ಹಿಜಾಬ್ ಆಗಿದ್ದರೆ ಪುರುಷರಿಗೆ ತಮ್ಮ ದೃಷ್ಟಿಯನ್ನು ಕೆಳಗೆ ಹಾಯಿಸುವುದು ಅವರಿಗೆ ಹಿಜಾಬ್ ಆಗಿದೆ. ಇಸ್ಲಾಂ ದೈವಿಕ ಮತವಾದ ಕಾರಣ ಪಾಪಕ್ಕೆ ದಾರಿಮಾಡಿಕೊಡುವ ಯಾವುದೇ ಅಂಶಗಳನ್ನು ಇಲ್ಲವಾಗಿಸುವುದು ಸಹಜ. ಇದನ್ನು ಎಲ್ಲರೂ ಮಾಡಬೇಕೆಂದು ನಾವು ಹೇಳುವುದಿಲ್ಲ. ಮುಸಲ್ಮಾನರು ಇದನ್ನು ಅನುಸರಿಸಿದರೆ ಇತರರು ಯಾಕೆ ಪ್ರಶ್ನೆ ಮಾಡಬೇಕು?

 ----------------

ಊಹೆ ಸರಿಯಾಗಿದೆಯೋ ತಪ್ಪೋ ಎಂದು ಅನುಮಾನವಿದ್ದರೆ ಕೆಳಗಿನ ವಿಡಿಯೋ ನೋಡಬಹುದು. [https://www.youtube.com/watch?v=oFULP4uF9T4&t=31s] ಅದು ಮಲೆಯಾಳ ಭಾಷೆಯಲ್ಲಿ ಇರುವ ಕಾರಣ ೧೦೦% ಅರ್ಥವಾಗದೆಯೂ ಇರಬಹುದು. ಒಟ್ಟಂದದಲ್ಲಿ ಆ ಸಂಭಾಷಣೆಯ ಭಾವಗ್ರಹಣ ಇಲ್ಲಿ ಆಗಿದೆ ಎಂದು ತಿಳಿದುಕೊಳ್ಳಬಹುದು. 

~ಕೃಷ್ಣಪ್ರಕಾಶ ಬೊಳುಂಬು

#ಕಾಸರಗೋಡು  #ಹಿಜಾಬ್ #ಮುಜಾಹಿದ್ 


Sunday, September 7, 2025

ಸಾರ್ವಜನಿಕ ಜೀವನದಲ್ಲಿ ಶಿರ್ಕ್ ಅಂಶಗಳು

ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮುಸಲ್ಮಾನರ ಸಂಪ್ರದಾಯದಲ್ಲಿ 'ಶಿರ್ಕ್' ಎಂಬ ಅಂಶವಿದೆ. ಇದು ಅಲ್ಲಾಹುವಿನ ಹೊರತಾದ ಅನ್ಯದೇವತಾರಾಧನೆಗಳನ್ನು ಪ್ರಾರ್ಥನೆಗಳಲ್ಲಿ ಸೇರಿಸಿಕೊಳ್ಳುವುದನ್ನು ಖಡಾಖಡಿ ನಿರಾಕರಿಸುವ ಅಂಶ. ಇದು ಇಸ್ಲಾಮಿಕ್ ಮತಾಚರಣೆಯೆಂಬ ವಿಚಾರ ವಿದಿತವೇ ಆಗಿದ್ದರೂ ಸಾರ್ವಜನಿಕ ಆಚರಣೆಗಳಲ್ಲಿ ಮಿತತ್ವವನ್ನು ರೂಢಿಸಿಕೊಂಡ ನಾಗರಿಕರು ಸರ್ವಸಾಮಾನ್ಯವಾಗಿ ನಮ್ಮ ಮುಂದಿರುವ ಮುಸಲ್ಮಾನರು. ಮಿತತ್ವವನ್ನು ರೂಢಿಸಿಕೊಳ್ಳಬಲ್ಲವರಾದ ನಟ ಮಮ್ಮುಟ್ಟಿಯೇ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸುತ್ತಾರೆ. (ಮಿತತ್ವವನ್ನು ರೂಢಿಸಿಕೊಂಡವರು ಸೆಲೆಬ್ರಿಟಿಗಳು ಮಾತ್ರ ಎನ್ನುವುದು ನನ್ನ ಉದ್ದೇಶವಾಗಿಲ್ಲ.) ಆದರೆ ಇಸ್ಲಾಮ್ ಮತಸ್ಥರೇ ಆದ ಇನ್ನು ಕೆಲವರು 'ಶಿರ್ಕ್' ಮುಂದಿಟ್ಟುಕೊಂಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಲು ನಿರಾಕರಿಸುತ್ತಾರೆ.

ಆ ಇನ್ನು ಕೆಲವರು ಯಾರು ಎಂದು ಗಮನಿಸುವುದಾದರೆ ಅವರು ತೀವ್ರ ಮತಧೋರಣೆಯನ್ನು ಹೊಂದಿರುವವರು. ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳ ಮುಖೇನ ತೀವ್ರ ಇಸ್ಲಾಮಿಕ್ ಪ್ರಚಾರವನ್ನು ಕೈಗೊಳ್ಳುತ್ತಿರುವವರು ಇವರೇ. ಇವರ ಅನುಯಾಯಿಗಳು ಕಂಡಕಂಡಲ್ಲಿ ದಾವಾ ಕಾರ್ಯಕ್ರಮ ನಡೆಯಿಸಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಸ್ಲಾಮಿಗೆ ಅನುಯಾಯಿಗಳನ್ನು ಸೇರಿಸಿಕೊಳ್ಳಬೇಕು ಎನ್ನುವವರು ಇವರು. ಅಲ್ಲಾಹುವಿನ ಹೊರತಾದ ಅನ್ಯದೇವತೆಗಳನ್ನು ಆರಾಧಿಸಿದರೆ ನರಕದ ಬೆಂಕಿಯಿಂದ ವಿಮುಕ್ತಿಯಿಲ್ಲ ಎಂದು ತೀವ್ರವಾಗಿ ನಂಬಿದವರು. "ಲವ್ ಜಿಹಾದ್" ಸೇರಿದಂತೆ ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎಂದು ಸಾರುವುದು ತಪ್ಪು. ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎನ್ನುವಾಗ ತಮ್ಮ ವೈಯಕ್ತಿಕ ಆಚರಣೆಗಳನ್ನು "ಜಿಹಾದ್" ಎಂದು ಬಗೆದು ಅತೀವ ಶ್ರದ್ಧೆಯಿಂದ ತಮ್ಮ ಮತಾಚರಣೆಗಳನ್ನು ಅನುಸರಿಸುವ ಮಿತತ್ವವಾದಿಗಳಿಗೆ ಘಾಸಿಯಾಗುವುದು ಸಹಜವೇ ಆಗಿದೆ. ಹೀಗಾಗಿ "ಲವ್ ಜಿಹಾದ್" ಎಂಬ ಪದಪ್ರಯೋಗ ತಪ್ಪಾಗಿದೆಯೆಂದು ಮನಗಾಣಬೇಕು.

ಮುಸಲ್ಮಾನ ಸಾಹಿತಿಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಸಂದರ್ಭವಿದ್ದರೆ ಅವರ ಮತಾಚಾರ ಪೂರ್ವಕವಾದ ಅಂಶಗಳಿಗೆ ಪೂರಕವೋ ಬಾಧಕವೋ ಆಗಿರಬಹುದಾದ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟು ಅವರ ಸಮ್ಮತವಿದೆಯೆಂದು ದೃಢೀಕರಿಸಿದ ನಂತರವೇ ಅವರನ್ನು ಔಪಚಾರಿಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸೂಕ್ತ.


ತಮ್ಮ ಸಂಪ್ರದಾಯಗಳನ್ನು ಟೀಕಿಸಿಯೋ ದೂರುತ್ತಲೋ ಬರೆಯುವ ಮುಸಲ್ಮಾನ ಸಾಹಿತಿಗಳು ತೀವ್ರ ಮತಧೋರಣೆಯನ್ನು ಹೊಂದಿರುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಆದರೂ ಅವರ ಸಾಹಿತ್ಯದಲ್ಲಿ; ತಮ್ಮಲ್ಲಿ ಇರಬಹುದಾದ ಆಚರಣೆಗಳಲ್ಲಿ ಅನಪೇಕ್ಷಣೀಯವೆಂದು ಅವರಿಗೆ ತೋರಿದ ವಿಷಯಗಳನ್ನು ಟೀಕಿಸುತ್ತಲೋ ಪ್ರತಿರೋಧಿಸುತ್ತಲೋ ಬರೆಯುವಾಗಲೂ ಇಂದಿನ ಕಾಲದಲ್ಲಿ ಜಾರಿಗೆ ಬಂದಿರುವ ತೀವ್ರ ಮತಧೋರಣೆಯನ್ನು ನಿರಾಕರಿಸುವುದು ಕಂಡುಬಾರದಿರುವುದೂ ವಾಸ್ತವವೇ. ಉದಾಹರಣೆಗೆ, ಕಾಸರಗೋಡಿನ ತಳಂಗರೆ ಮಸೀದಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೆಂದೂ ಅದು ಪ್ರವಾದಿಗಳ ಕಾಲದಲ್ಲಿ ಕಟ್ಟಲ್ಪಟ್ಟ ಮಸೀದಿಯೆಂದೂ ಎಡಪಂಥೀಯರಾದ ಸಾರಾ ಅಬೂಬಕ್ಕರ್ ಬರೆದಿದ್ದಾರೆ. 

~ಕೃಷ್ಣಪ್ರಕಾಶ ಬೊಳುಂಬು

#ಶಿರ್ಕ್ 

Sunday, August 31, 2025

ಅಹ್ಮದಿಯಾ ಮುಸ್ಲಿಂ ಜಮಾಯತ್

 ಅಹ್ಮದಿಯಾ ಮುಸ್ಲಿಂ ಜಮಾಯತ್ (ಭಾರತದ ಅಹ್ಮದಿಯಾ ಸಂಘಟನೆ) ಚೌಧರಿ ಜಾಪರುಲ್ಲಾ ಖಾನ್ ಮುಂತಾದವರ ನೇತೃತ್ವದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿತು, ತನ್ಮೂಲಕ ಪಾಕಿಸ್ಥಾನದ ನಿರ್ಮಾಣದಲ್ಲಿ ಮಹತ್ತರ ಪಾತ್ರವನ್ನು ವಹಿಸಿತು. ಆದರೆ ಕಾಲಕ್ರಮೇಣ ಅಹ್ಮದಿಯಾ ಪಂಥದವರನ್ನು ಪಾಕಿಸ್ಥಾನ ಕಡೆಗಣಿಸಿರುವುದು ಚರಿತ್ರೆ. ಈಗ ಪಾಕಿಸ್ಥಾನದ ಅಹ್ಮದಿಯಾ ಮುಸ್ಲಿಮರ ಮುಂದಿರುವ ಏಕೈಕ ಆಯ್ಕೆ ಏನೆಂದರೆ ದ್ವಿರಾಷ್ಟ್ರ ಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಮತ್ತು ಭಾರತೀಯರು ಎಲ್ಲರೂ ಒಂದೇ ಮತ್ತು ತಾವು ಭಾರತ ಮೂಲದವರೆಂದು ಪ್ರತಿಪಾದಿಸುವುದು. ತಾವು ಭಾರತ ಮೂಲದವರೆಂದು ಪ್ರತಿಪಾದಿಸಿ ಸಾಂಸ್ಕೃತಿಕವಾಗಿ ತಾವು ಭಾರತೀಯರೇ ಆಗಿರುವುದನ್ನು ಒಪ್ಪಿದರೆ ಅವರಿಗೆ ಭಾರತದೊಂದಿಗೆ ಯಾವುದೇ ಸಮಸ್ಯೆ ಇರಬೇಕಾದ ಅಗತ್ಯ ಇರುವುದಿಲ್ಲ. 

ಭಾರತದಲ್ಲಿ ಅಹ್ಮದಿಯಾ ಮತ್ತು ಮೂಲ ಸೂಫಿ ಪರಂಪರೆಗೆ ಪ್ರತ್ಯೇಕ ಸ್ಥಾನ ಕೊಡಬೇಕು ಮತ್ತು ಅಹ್ಮದಿಯಾ ಮತ್ತು ಮೂಲ ಸೂಫಿ ಪರಂಪರೆಯನ್ನು ಅವಮಾನಿಸುವವರಿಗೆ ಕಠಿನ ಶಿಕ್ಷೆ ವಿಧಿಸಬೇಕು. ಇದರಿಂದ ತೀವ್ರವಾದಿ ಸ್ವಭಾವದವರಾದ ಜಮಾತೆ ಮತ್ತು ವಹಾಬೀ ಪಂಥದವರಿಗೆ (ದೇವಾಲಯಗಳು ವೇಶ್ಯಾಲಯಗಳೆಂದು ಪ್ರತಿಪಾದಿಸುವ) ಹಿನ್ನಡೆಯಾಗುವುದು ನಿಶ್ಚಿತ.


~ಕೃಷ್ಣಪ್ರಕಾಶ ಬೊಳುಂಬು

#ಅಹ್ಮದಿಯಾ_ಮುಸ್ಲಿಂ_ಜಮಾಯತ್

Wednesday, August 27, 2025

ತಳಂಗರೆ ಶಿಲಾಶಾಸನ

 ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ.

ವಿಜಯ ಕರ್ನಾಟಕ

ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ ಇಚ್ಛೆಯೇನೆಂದು ಜಯಸಿಂಹ ರಾಜ ಕೇಳಿದಾಗ ಅವಳು ನಿರ್ಜನವಾದ ಕಲ್ಲು ಮುಳ್ಳುಗಳಿಂದ ಕೂಡಿದ ಬರಪೀಡಿತ ಪ್ರದೇಶವೊಂದಕ್ಕಾಗಿ ಬೇಡಿದಳು. ಮಾತಿಗೆ ತಪ್ಪದ ಜಯಸಿಂಹ ರಾಜ ಅವಳು ಬಯಸಿದಂತೆ ರಾಜಧಾನಿಯಿಂದ ಬಲು ದೂರದಲ್ಲಿದ್ದ ನಿರ್ಜನ ಪ್ರದೇಶವೊಂದನ್ನು ಅವಳಿಗೆ ಉಡುಗೊರೆಯಾಗಿ ನೀಡಿದನು.

ಮೋಚಿಕಬ್ಬೆ ಆ ಭೂಮಿಯನ್ನು ಸ್ವಚ್ಛವಾಗಿಸಿ ನೀರಾವರಿಗಾಗಿ ಕಾಲುವೆಯೊಂದನ್ನು ಅಲ್ಲಿಗೆ ಹರಿಯುವಂತೆ ಮಾಡಿದಳು. ನೀರಿನ ಉಳಿತಾಯಕ್ಕಾಗಿ ಯೋಜನೆಗಳನ್ನು ಹಾಕಿ ಬರಪೀಡಿತ ಭೂಮಿಯನ್ನು ಜನವಾಸಕ್ಕೂ ಕೃಷಿಗೂ ಯೋಗ್ಯವಾಗುವಂತೆ ಪರಿವರ್ತಿಸಿದಳು. ಉದ್ಯಾನಗಳನ್ನೂ ಹಂಚಿನ ಮನೆಗಳನ್ನೂ ನಿರ್ಮಿಸಿ ಅದನ್ನು ಜನರ ಉಪಯೋಗಕ್ಕಾಗಿ ಮೋಚಿಕಬ್ಬೆ ದಾನ ಕೊಟ್ಟಳು.

ಮೇಲ್ಕಂಡ ಶಿಲಾಶಾಸನದಿಂದಲೇ ತಿಳಿದುಬರುವಂತೆ ಆ ಭೂಮಿ ಕಳ್ಳಕಾಕರ ಆಡುಂಬೊಲವಾಯಿತು. ರಾಣಿ ಮೋಚಿಕಬ್ಬೆ ಕೊಲೆ ಕಳ್ಳತನದಂಥ ಅಪರಾಧಗಳನ್ನು ಎಸಗಿದವರಿಗೆ ತಾತ್ಕಾಲಿಕ ಕ್ಷಮಾದಾನವನ್ನೂ ನೀಡಿದ್ದಳು. ರಾಣಿ ಮನುಷ್ಯರ ಮನಸ್ಸನ್ನು ಬಲ್ಲವಳಾಗಿದ್ದಳು. ಅಪರಾಧಗಳನ್ನು ಎಸಗಲು ಪ್ರೇರಣೆಯೊದಗಿಸುವ ವಿಚಾರಗಳನ್ನು ಅರಿತುಕೊಂಡು ಅಪರಾಧಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅನುವಾಗುವ ತಾಣವೊದನ್ನು ರಾಣಿ ಮೋಚಿಕಬ್ಬೆ ಒದಗಿಸಿದಳು. ಶಿಲಾಶಾಸನ ಮುಂದುವರಿದು ಅಪರಾಧಿಗಳು ಅಧಿಕಾರಿಗಳಿಗೆ ಶರಣಾದರೆಂದೂ ರಾಣಿ ಮೋಚಿಕಬ್ಬೆಯಿಂದಲಾಗಿ ರಾಜ್ಯದಲ್ಲಿ ಶಾಂತಿ ನೆಲಸುವಂತಾಯಿತೆಂದೂ ಸಾರುತ್ತದೆ.

ಹೆಚ್ಚಿಗೆ ಓದಲು
*ಡಾ. ಜ್ಯೋತ್ಸ್ನಾ ಕಾಮತ್ http://www.kamat.com/jyotsna/blog/blog.php?BlogID=452

*ಪಿ. ಗುರುರಾಜ ಭಟ್ (1975). Studies in Tuluva History and Culture.

*ಡಾ. ಸದಾನಂದ ಪೆರ್ಲ - ಕಾಸರಗೋಡಿನ ಕನ್ನಡ ಹೋರಾಟ , ಕನ್ನಡ ಪುಸ್ತಕ ಪ್ರಾಧಿಕಾರ 

*ವಿಜಯ ಕರ್ನಾಟಕ https://vijaykarnataka.com/news/kasaragod/kasaragod-news-in-kannada/articleshow/58240024.cms



Sunday, August 24, 2025

ಮಹಾರಾಜ ಶುದ್ಧೋದನ ಮತ್ತು ಮಹಾರಾಣಿ ಮಾಯಾದೇವಿ

 ಶಾಕ್ಯ ಜನಾಂಗದ ರಾಜ ಶುದ್ಧೋದನನು ಅನೇಕ ರಾಣಿಯರನ್ನು ಮದುವೆಯಾಗಿದ್ದನು. ಅವರಲ್ಲಿ ಅವನಿಗೆ ಅತ್ಯಂತ ಪ್ರಿಯವಾದವಳು ಮಾಯಾದೇವಿ.

ಅವಳು ಅತ್ಯಂತ ಸುಂದರಿಯಾಗಿದ್ದಳು. ಲಕ್ಷ್ಮಿಯೇ ದಾರಿ ತಪ್ಪಿ ಭೂಲೋಕಕ್ಕಿಳಿದಂತೆ ಅವಳಿದ್ದಳು. ಅವಳ ಮಾತುಗಳು ವಸಂತಕಾಲದ ಹಕ್ಕಿಗಳ ಕಲರವವಾಗಿದ್ದುವು. ಅವಳ ಬೆನ್ನಿಗೆ ಇಳಿಯಬಿಡಲ್ಪಟ್ಟಿದ್ದ ಹೆಣೆದ ಕೂದಲಿನ ಜಡೆ ಸುಗಂಧಗಳನ್ನು ಸೂಸುವ ಹೂವುಗಳಿಂದ ಅಲಂಕೃತವಾಗಿತ್ತು. ಅವಳ ಹಣೆ ವಜ್ರದಂತೆ ಪರಿಶುದ್ಧವಾಗಿತ್ತು. ಅವಳ ಕಣ್ಣುಗಳು ಕಮಲದ ಹೂವುಗಳನ್ನು ಹೋಲುತ್ತಿದ್ದುವು. ಅವಳ ಸೊಗಸಾದ ಹುಬ್ಬುಗಳ ವಕ್ರರೇಖೆ ರಾಜನಿಗೆ ಅತ್ಯಂತ ಆಪ್ಯಾಯಮಾನವಾಗಿತ್ತು. ಅವಳ ಬೆರಳುಗಳು ಕಮಲದ ಮೊಗ್ಗುಗಳೇ ತಾವಾಗಿದ್ದುವು.

ಮಾಯಾದೇವಿ ಗುಣವಂತೆ; ಅವಳು ಸದಾ ತನ್ನ ಪ್ರಜೆಗಳ ಸುಖವನ್ನು ಬಯಸುತ್ತಿದ್ದವಳು. ಅವಳು ತನ್ನ ಕುಲಗುರುಗಳ ಆಜ್ಞೆಗಳನ್ನು ಎಂದಿಗೂ ಮೀರಿದವಳಲ್ಲ. ಅವಳು ಸತ್ಯಕ್ಕೆ ನಿಷ್ಠಳಾಗಿದ್ದಳು ಮತ್ತು ಧರ್ಮದ ಹಾದಿಯಲ್ಲಿ ನಡೆಯುವವಳಾಗಿದ್ದಳು. ಇಂತು ಮಹಾರಾಜ ಶುದ್ಧೋದನ ಮತ್ತು ಮಹಾರಾಣಿ ಮಾಯಾದೇವಿ ಕಪಿಲವಸ್ತುವಿನಲ್ಲಿ ಶಾಂತವಾಗಿಯೂ ಸಂತೋಷದಿಂದಲೂ ಜೀವಿಸುತ್ತಲಿದ್ದರು.

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...