Sunday, August 31, 2025

ಅಹ್ಮದಿಯಾ ಮುಸ್ಲಿಂ ಜಮಾಯತ್

 ಅಹ್ಮದಿಯಾ ಮುಸ್ಲಿಂ ಜಮಾಯತ್ (ಭಾರತದ ಅಹ್ಮದಿಯಾ ಸಂಘಟನೆ) ಚೌಧರಿ ಜಾಪರುಲ್ಲಾ ಖಾನ್ ಮುಂತಾದವರ ನೇತೃತ್ವದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿತು, ತನ್ಮೂಲಕ ಪಾಕಿಸ್ಥಾನದ ನಿರ್ಮಾಣದಲ್ಲಿ ಮಹತ್ತರ ಪಾತ್ರವನ್ನು ವಹಿಸಿತು. ಆದರೆ ಕಾಲಕ್ರಮೇಣ ಅಹ್ಮದಿಯಾ ಪಂಥದವರನ್ನು ಪಾಕಿಸ್ಥಾನ ಕಡೆಗಣಿಸಿರುವುದು ಚರಿತ್ರೆ. ಈಗ ಪಾಕಿಸ್ಥಾನದ ಅಹ್ಮದಿಯಾ ಮುಸ್ಲಿಮರ ಮುಂದಿರುವ ಏಕೈಕ ಆಯ್ಕೆ ಏನೆಂದರೆ ದ್ವಿರಾಷ್ಟ್ರ ಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಮತ್ತು ಭಾರತೀಯರು ಎಲ್ಲರೂ ಒಂದೇ ಮತ್ತು ತಾವು ಭಾರತ ಮೂಲದವರೆಂದು ಪ್ರತಿಪಾದಿಸುವುದು. ತಾವು ಭಾರತ ಮೂಲದವರೆಂದು ಪ್ರತಿಪಾದಿಸಿ ಸಾಂಸ್ಕೃತಿಕವಾಗಿ ತಾವು ಭಾರತೀಯರೇ ಆಗಿರುವುದನ್ನು ಒಪ್ಪಿದರೆ ಅವರಿಗೆ ಭಾರತದೊಂದಿಗೆ ಯಾವುದೇ ಸಮಸ್ಯೆ ಇರಬೇಕಾದ ಅಗತ್ಯ ಇರುವುದಿಲ್ಲ. 

ಭಾರತದಲ್ಲಿ ಅಹ್ಮದಿಯಾ ಮತ್ತು ಮೂಲ ಸೂಫಿ ಪರಂಪರೆಗೆ ಪ್ರತ್ಯೇಕ ಸ್ಥಾನ ಕೊಡಬೇಕು ಮತ್ತು ಅಹ್ಮದಿಯಾ ಮತ್ತು ಮೂಲ ಸೂಫಿ ಪರಂಪರೆಯನ್ನು ಅವಮಾನಿಸುವವರಿಗೆ ಕಠಿನ ಶಿಕ್ಷೆ ವಿಧಿಸಬೇಕು. ಇದರಿಂದ ತೀವ್ರವಾದಿ ಸ್ವಭಾವದವರಾದ ಜಮಾತೆ ಮತ್ತು ವಹಾಬೀ ಪಂಥದವರಿಗೆ (ದೇವಾಲಯಗಳು ವೇಶ್ಯಾಲಯಗಳೆಂದು ಪ್ರತಿಪಾದಿಸುವ) ಹಿನ್ನಡೆಯಾಗುವುದು ನಿಶ್ಚಿತ.


~ಕೃಷ್ಣಪ್ರಕಾಶ ಬೊಳುಂಬು

#ಅಹ್ಮದಿಯಾ_ಮುಸ್ಲಿಂ_ಜಮಾಯತ್

No comments:

Post a Comment

The Hidden Reality of Worship: Christianity, Islam, and the Indic Matrix

  Vigraha–Ārādhana and the Indic Civilizational Matrix Introduction Debates about “idol worship” have long been used in religious polemics i...