ಅಳಿಯ ಸಂತಾನ ಕಟ್ಟಿನ ನಿಜವಾದ ಚರಿತ್ರೆ ಪಾದೂರು ಗುರುರಾಜ ಭಟ್ಟರು ಕಂಡಂತೆ
ಅಳಿಯ ಸಂತಾನ ಕಟ್ಟು ಭೂತಾಳ ಪಾಂಡ್ಯನಿಂದ ಆರಂಭವಾದುದಲ್ಲ. ಪ್ರಸಕ್ತ ಕಾಲಮಾನ 1441ರಿಂದ 1444ರವರೆಗೆ ತುಳುವವನ್ನಾಳಿದ ಕುಲಶೇಖರನು ಅಧಿಕಾರವನ್ನು ತನ್ನ ಸೋದರಳಿಯನಿಗೆ ಬಿಟ್ಟುಕೊಟ್ಟು ತನ್ನ ಅಲೂಪ ವಂಶದಲ್ಲಿ ಅಳಿಯ ಸಂತಾನ ಕಟ್ಟನ್ನು ಜಾರಿಗೆ ತಂದನು ಮತ್ತು ಪ್ರಸಕ್ತ ಕಾಲಮಾನ 1506ರಲ್ಲಿ ಕೆಳದಿಯ ರಾಜನಾಗಿದ್ದ ಚೌಡಪ್ಪ ನಾಯಕನು 'ಅಳಿಯ ಸಂತಾನ ಕಟ್ಟಿ'ಗೆ ಶಿಲಾಶಾಸನದ ಮುಖಾಂತರ ಮುದ್ರೆಯೊತ್ತಿದನು. ಹೀಗೆ ಸುಮಾರು ಹದಿಮೂರನೆಯ ಶತಮಾನದವರೆಗೆ ಬರಿಯ ಪದ್ಧತಿಯಾಗಿದ್ದ 'ಅಳಿಯ ಸಂತಾನ ಕಟ್ಟು' ಕ್ರಮೇಣ ರಾಜರುಗಳ ಮನ್ನಣೆಗೆ ಪಾತ್ರವಾಗಿ ಅಲೂಪ ರಾಜರುಗಳಿಂದ ಸ್ವೀಕರಿಸಲ್ಪಟ್ಟು ಕೆಳದಿಯ ರಾಜರ ಅಂಗೀಕಾರ ಮುದ್ರೆಯನ್ನೂ ಪಡೆದು ಪ್ರಸಕ್ತ ಕಾಲಮಾನ ಹದಿನಾರನೆಯ ಶತಮಾನದಿಂದ ಅದೊಂದು ರಾಜಶಾಸನವಾಗಿ ಪರಿಣಮಿಸಿರುವುದು ಚರಿತ್ರೆಯ ಭಾಗ.
#ಪಾದೂರು ಗುರುರಾಜ ಭಟ್ಟರು, #ತುಳುನಾಡು, #ಭೂತಾಳ ಪಾಂಡ್ಯ
No comments:
Post a Comment