ರಾಹುಲ್ ಗಾಂಧಿಯ ನಿಜವಾದ ಉದ್ದೇಶವೇನು?
ರಾಹುಲ್ ಗಾಂಧಿ ನಮ್ಮ ದೇಶದ ಮಿಲಿಟರಿಯನ್ನು ನಂಬದಿದ್ದರೂ ಚೀನಾ, ಪಾಕಿಸ್ತಾನ ಮತ್ತು ಅಮೇರಿಕವನ್ನು ನಂಬುತ್ತಾನೆ. ಹಾಗೆಯೇ ರಾಹುಲ್ ಗಾಂಧಿ ನ್ಯಾಯಾಲಯಗಳನ್ನು ನಂಬದಿದ್ದರೂ ತನಗೆ ಅಗತ್ಯವಿದ್ದರೆ ಮಾತ್ರ ನ್ಯಾಯಾಲಯಗಳ ಆದೇಶಗಳನ್ನು ಎತ್ತಿ ಹಿಡಿಯುತ್ತಾನೆ.
ಈಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ನಂಬಿಕೆ ಕಳೆದುಕೊಂಡಿದ್ದಾನೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಮತ್ತು ಅದನ್ನು ಮಾಡಿದ್ದು ಬಿಜೆಪಿ ಎಂಬ ಹೇಳಿಕೆಯೂ ಇದರ ಒಂದು ಭಾಗವಾಗಿತ್ತು.
ಸುಳ್ಳು ಮಾಹಿತಿಯನ್ನು ತರುವ ಮೂಲಕ ತನಗೆ ತಾನೇ ಕೊಡಲಿಯೇಟು ಕೊಟ್ಟುಕೊಂಡ ಪರಿಸ್ಥಿತಿ ಈಗ ರಾಹುಲ್ ಗಾಂಧಿಯದ್ದಾಗಿದೆ. ಇಷ್ಟೇ ಸಾಲದೆಂಬಂತೆ, ತನ್ನ ಸ್ವಂತ ಕ್ಷೇತ್ರ ರಾಯ್ ಬರೇಲಿ ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಅವರ ವಯನಾಡ್ ಕ್ಷೇತ್ರ ಸೇರಿದಂತೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳಾಗಿವೆ ಎಂದು ಗೋಳಿಡುವ ಮೂಲಕ ಬಿಜೆಪಿಯನ್ನು ಎದುರಿಸಲು ಹವಣಿಸುತ್ತಿದ್ದಾನೆ.
ರಾಹುಲ್ ಗಾಂಧಿ ಸ್ಫೋಟಿಸಿದ ಅಣು ಬಾಂಬ್ ಬಿಜೆಪಿಗೆ ಇನ್ನೊಂದು ಅವಕಾಶವನ್ನು ತೆರೆದುಕೊಟ್ಟಿರುವುದು ಇಂದಿನ ವಾಸ್ತವ.
NRC ಅಥವಾ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೆ ತರುವ ಮೂಲಕ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ಕೂಡಲೆ ಗುರುತಿಸಿ ಅವರಿಗೆ ದಾರಿತೋರಿಸುವುದು ಜಾಗರೂಕ ಸರಕಾರದ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲಿಕ್ಕೆ ಸಂವಿಧಾನದ ಪ್ರಕಾರ ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (S.I.R) ನಡೆಸುವ ಅವಕಾಶ ಇದೀಗ ಒದಗಿಬಂದಿದೆ. ಅದಾದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಮತಗಣನೆ ಮಾಡಿ ನಾಗರಿಕ ನೋಂದಣಿಯನ್ನು ರಚಿಸಲು ಅವಕಾಶಗಳಿವೆ.
# ರಾಹುಲ್ ಗಾಂಧಿ
No comments:
Post a Comment