Sunday, October 12, 2025

Newfound Alchemy in Buddhist premises

Newfound Alchemy in Buddhist premises

When Vijay Mallya offered gold to Buddhist Ayyappa, he probably didn’t expect a practical demonstration of Markist dialectical materialism. Yet in a state where gods and governments lean to the left, even the metals have joined the revolution. Somewhere between the Sopanam and the Secretariat, gold renounced its bourgeois privilege and embraced the proletarian humility of copper.

Under the serene gaze of Comrade Vijayan, this was hailed not as corruption but as conversion - a spiritual redistribution of natural elements. Gold, symbol of capitalist greed, had to evolve; copper, the honest worker’s metal, had to rise. Thus, Buddhist Ayyappa watched silently as Marx met metallurgy and the temple treasury achieved true equality.

Devotees may still murmur “Swamiye Sharanam,” but the new doctrine declares, “Matter is revolutionary.” The alchemists failed for centuries, yet Markism succeeded in one audit cycle. In the People’s Temple, where even gods must align with dialectics, faith has found its final form: copper-coated enlightenment.

After all, in the Mighty Markist laboratory, nothing is impossible - not even gold finding its nirvana as copper.

#satire

ಕೃಷ್ಣಪ್ರಕಾಶ ಬೊಳುಂಬು

Monday, October 6, 2025

The Grand Finale: Karnataka's Reality of Reality Shows

The Grand Finale: Karnataka's Reality of Reality Shows

And now, ladies and gentlemen, after weeks of drama, data and a "dabba" app, we arrive at the Grand Finale of Who Wants to Be Classified? — the only show where everyone is a contestant, nobody volunteered, and the prize is madakke kelsa illa, kudiyoke ganji illa.

In a thrilling twist, the State Government has declared itself the winner — for successfully conducting a survey that no one asked for, on an app that no one could open, using data that no one will ever verify. The audience, otherwise known as mooka prekshakaru, is cheering in disbelief, muttering “idu yava nataka guru?”

Enumerators return from the field like war veterans, armed with stories of broken GPS, missing OTPs and divine beings that refused to reveal their jati. Teachers, who once shaped the future of young kids, now master the sacred art of tracing gotra in MS Excel. Bureaucrats celebrate “digital efficiency” while WhatsApp screenshot serves as official proof of governance.

And as the closing credits roll, our mahaguru intones:

“e vishaada ganadalli ondondu note count agutte. yaru miss madangilla. elru jati mata gotra helibidi. hattu moote akki kodthini, beko beda?”

The anchor chimes in with, “thank you mahagurugale!”

And the curtain falls on this ₹420-crore JMGK (Jati Mata Gotra Karnataka) of bureaucracy. The data drifts away into the crashed server, perhaps never to return. The poor, the backward, and the forward remain exactly where they were — only now, officially tagged, scanned, and confused.

Season One ends, but fear not — Who Wants to Be Classified? has already been renewed for another season. Coming soon: The Reservation Remix – Reloaded with Error Codes.
Stay tuned, pirends!

ಕೃಷ್ಣಪ್ರಕಾಶ ಬೊಳುಂಬು

Sunday, October 5, 2025

ಜಾತಿಗಣತಿಯ ಆ 60 ಪ್ರಶ್ನೆಗಳು

ಜಾತಿಗಣತಿಯ ಆ 60 ಪ್ರಶ್ನೆಗಳು 

ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025) ಜಾರಿಯಲ್ಲಿದೆ. ಸಾಮಾಜಿಕ ನ್ಯಾಯವನ್ನೊದಗಿಸುವ ಅದ್ಭುತ ಪ್ರಕ್ರಿಯೆಯೆಂದು ಕರೆಯಿಸಿಕೊಂಡ ಜಾತಿ ಸಮೀಕ್ಷೆ ಆಡಳಿತಾತ್ಮಕ ಪ್ರಹಸನ ಮತ್ತು ರಾಜಕೀಯ ವಿಡಂಬನೆಯ ವಸ್ತುವಾಗಿ ಒಡ್ಡಿಕೊಳ್ಳುತ್ತಲಿದೆ.


ಸಮೀಕ್ಷೆ ಮುಂದುವರಿಯುತ್ತಿರುವಂತೆಯೇ ವ್ಯವಸ್ಥೆಯಲ್ಲಿ ಒಡಮೂಡಿರುವ ಬಿರುಕುಗಳು  ಎದ್ದುತೋರಿಕೊಳ್ಳುತ್ತಲಿವೆ. ತಾಂತ್ರಿಕ ದೋಷಗಳು, ಶಿಸ್ತು ಕ್ರಮದ ಬೆದರಿಕೆಗಳು, ಸಮುದಾಯಗಳ ನಡುವಣ ಕಲಹ ಮತ್ತು ನ್ಯಾಯಾಂಗದ ಎಚ್ಚರಿಕೆಗಳು - ಇವೆಲ್ಲವೂ ಈ ಪರಿಪಾಟದ ಸಿಂಧುತ್ವವನ್ನು ಪ್ರಶ್ನಿಸುತ್ತಲಿವೆ. 

ಕರ್ನಾಟಕ ರಾಜ್ಯ ಸರಕಾರವು ಸಮಾಜ ಕಲ್ಯಾಣ ಅಥವಾ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಬಹುದಾದರೂ ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸಮಗ್ರ ಜಾತಿ ಜನಗಣತಿಯನ್ನು ನಡೆಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಕಾನೂನುಬದ್ಧವಾಗಿ ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ.

ಆ ಅರುವತ್ತು ಪ್ರಶ್ನೆಗಳು ಯಾವುವು ಎಂದು ಕೇಳಿದರೆ ಉತ್ತರ ಇಲ್ಲಿದೆ.

ಸಮೀಕ್ಷೆಗೆ ಬೇಕಾಗಿರುವ ದಾಖಲೆಗಳು

  • ರೇಷನ್ ಕಾರ್ಡ್
  • ಮನೆಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
  • ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
  • ಚುನಾವಣಾ ಐಡಿ ಕಾರ್ಡ್
ಅದರ ಮಾದರಿಯೊಂದನ್ನು ಇಲ್ಲಿ ನೋಡಬಹುದು.

ಸದ್ದು ಮಾಡುತ್ತಲಿರುವ ಸುದ್ದಿಗಳು

  • ಕೊಡಗಿನಲ್ಲಿ ರೊಚ್ಚಿಗೇಳುತ್ತಿರುವ ಶಿಕ್ಷಕರು: ಕೊಡಗು ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಗಣತಿದಾರರಾಗಿ ಸೇವೆ ಸಲ್ಲಿಸಲು ಒತ್ತಾಯಪೂರ್ವಕವಾಗಿ ನೇಮಿಸಲ್ಪಟ್ಟಿದ್ದಾರೆ. ದುರ್ಬಲ ಮೊಬೈಲ್ ನೆಟ್‌ವರ್ಕ್, ಡೇಟಾವನ್ನು ಅಪ್‌ಲೋಡ್ ಮಾಡುವ ಅಸೌಲಭ್ಯ, ತಪ್ಪಾದ ಜಿಪಿಎಸ್ ನಮೂದುಗಳು ಮತ್ತು ಅರಣ್ಯ ಪ್ರದೇಶದಲ್ಲಿನ ಸುರಕ್ಷತಾ ಅಪಾಯಗಳ ಬಗೆಗೆ ಅವರರು ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
  • ಕೆಲಸ ಮಾಡಲು ನಿರಾಕರಿಸಿದ ಗಣತಿದಾರರ ಮೇಲೆ ರಾಜ್ಯ ಸರಕಾರದ ದೌರ್ಜನ್ಯ: ಸಮೀಕ್ಷೆಯ ಸಂದರ್ಭದಲ್ಲಿ "ಕರ್ತವ್ಯಗಳನ್ನು ನಿರ್ಲಕ್ಷಿಸುವ" ಸರಕಾರಿ ಸಿಬ್ಬಂದಿ ಅಥವಾ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಎಚ್ಚರಿಸಿದೆ.
  • ಎರಡು ದಿನದಲ್ಲಿ 71 ಸಾವಿರ ಮಂದಿಯನ್ನೊಳಗೊಂಡ ಸಮೀಕ್ಷೆ: ಆ್ಯಪ್‌ನಲ್ಲಿ ಮುಂದುವರಿದ ದೋಷ, ಅಡಚಣೆ, ಗೊಂದಲ: ಬೆಂಗಳೂರಿನಲ್ಲಾದ ಸಮೀಕ್ಷೆಯ 2 ನೇ ದಿನದಲ್ಲಿ 18,487 ಮನೆಗಳಲ್ಲಿ 71,004 ಜನರಿಂದ ಡೇಟಾವನ್ನು ಸಂಗ್ರಹಿಸಲಾಗಿದೆ - ಆದರೆ ತಾಂತ್ರಿಕ ದೋಷ, ಸರ್ವರ್‌ ಸಮಸ್ಯೆಗಳು, ಒಟಿಪಿ ವೈಫಲ್ಯಗಳು ಮತ್ತು ಅಜಾಗರೂಕ ಅಪ್‌ಲೋಡ್‌ಗಳಿಂದಾಗಿ ಅನೇಕ ಫಾರ್ಮ್‌ಗಳು ಅಪೂರ್ಣವಾಗಿ ಉಳಿದಿವೆ.
  • ನ್ಯಾಯಾಲಯವು ಎಚ್ಚರಿಕೆಗಳೊಂದಿಗೆ ಸಮೀಕ್ಷೆಯನ್ನು ಮುಂದುವರಿಸಲು ಅನುಮತಿಸಿತು: ಕರ್ನಾಟಕ ಹೈಕೋರ್ಟ್ ಸಮೀಕ್ಷೆಯನ್ನು ತಡೆಯಲು ನಿರಾಕರಿಸಿತು ಆದರೆ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸಬಾರದು ಎಂದು ಆದೇಶಿಸಿತು.
  • ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಗಡುವು ನಿಗದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 7 ರ ಮುನ್ನ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ ಮತ್ತು ರಾಜ್ಯದ 1.43 ಕೋಟಿ ಮನೆಗಳಲ್ಲಿ ದಿನಕ್ಕೆ ಗಣತಿದಾರರು 10% ರಷ್ಟು ಸಮೀಕ್ಷೆಯನ್ನು ಒಳಗೊಳ್ಳುವಂತೆ ಒತ್ತಾಯಿಸಿದ್ದಾರೆ.
  • ಜಾತಿ ಗಣತಿ ಮಾಹಿತಿ ಸ್ವಯಂ ಇಚ್ಛೆಗೆ ಬಿಟ್ಟ ಸಂಗತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಜನರನ್ನೂ ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ ಪ್ರಸ್ತುತ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಜನರ/ ಕುಟುಂಬಗಳ ಸ್ವಯಂ ಇಚ್ಛೆಗೆ ಬಿಟ್ಟಿದ್ದು ಎಂಬುದಾಗಿ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್‌ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
  • ಅಪರ್ಯಾಪ್ತ ವೇತನ ನಿಗದಿ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ 1.20 ಲಕ್ಷ ಸಮೀಕ್ಷಕರಿಗೆ ಮೊದಲ ಕಂತಿನ ಗೌರವಧನವಾಗಿ ತಲಾ 5000 ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 60.36 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ
  • ಮುಸ್ಲಿಮರಿಂದ ಅಪಸ್ವರ: ಜಾತಿ ಸಮೀಕ್ಷೆ - ಮುಸ್ಲಿಮರಲ್ಲಿ ಗೊಂದಲ. ವಿಜಯ ಕರ್ನಾಟಕ ಮಂಗಳೂರು ಆವೃತ್ತಿ ೧೧.೦೯.೨೦೨೫ (ವರದಿ: ಮುಹಮ್ಮದ್ ಆರಿಫ್ ಮಂಗಳೂರು) 
  • ಪ್ರತ್ಯೇಕತಾವಾದಿಗಳಿಗೊಂದು ಸುವರ್ಣಾವಕಾಶ: ಸಂದರ್ಭಕ್ಕಾಗಿ ಕಾದಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರತ್ಯೇಕತಾವಾದಿಗಳು "ಹಿಂದೂ ಧರ್ಮ" ಎಂದು ನಮೂದಿಸದೆ "ಲಿಂಗಾಯತ ಧರ್ಮ" ಎಂದು ನಮೂದಿಸುವಂತೆ ಸಾರ್ವಜನಿಕವಾಗಿ ಕೇಳಿಕೊಂಡಿದ್ದಾರೆ.
  • ನ್ಯಾಯಾಲಯದ ಆದೇಶ ಎತ್ತಿಹಿಡಿದ ಬ್ರಾಹ್ಮಣ ಮಹಾಸಭಾ: ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಒಪ್ಪಿಗೆ ಸ್ವಯಂಪ್ರೇರಿತವಾಗಿರಬೇಕು ಎಂದು ಸಾರುವ ನ್ಯಾಯಾಲಯದ ಆದೇಶವನ್ನು ಬ್ರಾಹ್ಮಣ ಮಹಾಸಭಾ ಎತ್ತಿಹಿಡಿದಿದೆ.  
  • ತನ್ನ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯದ ನಡುವಣ ವ್ಯತ್ಯಾಸ ತಿಳಿಯದ ರಾಜ್ಯ ಸರಕಾರ: ₹420 ಕೋಟಿ ಬಜೆಟ್‌ ಹೊಂದಿದ ಈ ಪರಿಪಾಟವು ಪರಸ್ಪರ ವಿರುದ್ಧವಾದ ಊಹೆಗಳ ಮೇಲೆ ನೆಲೆಗೊಂಡಿದೆ. ಸಾವಿರಾರು ಜಾತಿಗಳನ್ನು ಅಚ್ಚುಕಟ್ಟಾಗಿ ವರ್ಗೀಕರಿಸಬಹುದು, ಅವುಗಳ ಗಣನೆ ಸಂಪೂರ್ಣವಾಗಿ ರಾಜಕೀಯೇತರವಾಗಿದೆ ಮತ್ತು ರಾಜ್ಯ ಸರಕಾರದ ವ್ಯವಸ್ಥೆ ಅವುಗಳನ್ನು ಪರಿಪೂರ್ಣವಾಗಿ ಕಾರ್ಯಗತಗೊಳಿಸಲು ಸಮರ್ಥವಾಗಿದೆ ಎನ್ನುವಂತಹವು ಆ ಊಹೆಗಳು. ಅದೃಷ್ಟವೋ ದುರದೃಷ್ಟವೋ ಎನ್ನುವಂತೆ ಈ ಊಹೆಗಳಲ್ಲಿ ಯಾವುದೂ ನಿಜವಲ್ಲ.






Tuesday, September 30, 2025

ಕರ್ನಾಟಕದ ಜಾತಿಗಣತಿ 2025: ಗಮನಿಸಬೇಕಾದ ಅಂಶಗಳು

 ಕರ್ನಾಟಕದ ಜಾತಿಗಣತಿ 2025: ಗಮನಿಸಬೇಕಾದ ಅಂಶಗಳು


* ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಅವರನ್ನು ಮನವೊಲಿಸಬಾರದು ಎಂದು ಜನರಿಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳುತ್ತದೆ. [1]


* ಪ್ರಸ್ತುತ ಜಾರಿಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಎಂದು ಕರೆಯಿಸಿಕೊಂಡ ಜಾತಿ ಗಣತಿಯನ್ನು ನಿಷೇಧಿಸಲು ಕರ್ನಾಟಕದ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಆದರೆ ನ್ಯಾಯಾಲಯದ ಆದೇಶದ ಪ್ರಕಾರ ಕೆಲವು ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅದರ ಪ್ರಕಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು "ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ ಮತ್ತು ಯಾವುದೇ ವ್ಯಕ್ತಿಯು ಕೋರಿದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಬಾಧ್ಯತೆಯಿಲ್ಲ" ಎಂದು ಜನರಿಗೆ ಸ್ಪಷ್ಟವಾಗಿ ತಿಳಿಯಪಡಿಸುವ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಬೇಕು.


* ಸಮೀಕ್ಷೆಯಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಬಾಧ್ಯತೆ ಗಣತಿದಾರರು ಜನರಿಗೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳುವ ಮೊದಲು, ಮಿತಿ ಹಂತದಲ್ಲಿ ಸಮೀಕ್ಷೆಯಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಬಾಧ್ಯತೆಯಿಲ್ಲ ಎಂದು ಆಯೋಗವು ಎಲ್ಲಾ ಜನರಿಗೆ ತಿಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.


* ಸಮೀಕ್ಷೆಯಲ್ಲಿ ಭಾಗವಹಿಸುವವರು ವಿವರಗಳನ್ನು ಒದಗಿಸಲು ನಿರಾಕರಿಸಿದರೆ ಅವರನ್ನು ಮನವೊಲಿಸುವ ಅಥವಾ ಅನುನಯಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಅನುಮತಿ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


* ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ರಾಜ್ಯ ಸರ್ಕಾರ ಮತ್ತು ಆಯೋಗವು ಅಂತಹ ಸಮೀಕ್ಷೆಯನ್ನು ನಡೆಸುವ ಅಧಿಕಾರವನ್ನು ಪ್ರಶ್ನಿಸಿ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಮಹಾಸಭಾದ ಹಲವಾರು ಸದಸ್ಯರು ಮತ್ತು ಇತರ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳ ಗುಂಪಿನ ಮೇಲೆ ಮಧ್ಯಂತರ ಆದೇಶವನ್ನು ಹೊರಡಿಸಿದೆ.


* ಸಂಗ್ರಹಿಸಿದ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗಿದೆಯೆಂದೂ ಆಯೋಗವನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಸೇರಿದಂತೆ ಯಾವುದೇ ವ್ಯಕ್ತಿಗೆ ಪ್ರವೇಶಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳನ್ನು ಬಹಿರಂಗಪಡಿಸುವ ಒಂದು ಕೆಲಸದ ದಿನದೊಳಗೆ ಅಫಿಡವಿಟ್ ಸಲ್ಲಿಸಲು ನ್ಯಾಯಪೀಠ ಆಯೋಗಕ್ಕೆ ನಿರ್ದೇಶನ ನೀಡಿತು.


ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬ ನೆಪದಲ್ಲಿ ಜಾತಿ ಜನಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಕಾನೂನಿನಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರು ಗುರುತಿಸಿದ್ದಾರೆ. ಅದಲ್ಲದೆ ಆಧಾರ್ ಮತ್ತು ಇತರ ಮಾಹಿತಿಗಳನ್ನು ರಾಜ್ಯ ಸರಕಾರ ಸಂಗ್ರಹಿಸುವುದು ಜನರ ಗೌಪ್ಯತೆಯ ಹಕ್ಕಿಗೆ ವಿರುದ್ಧವಾಗಿದೆ ಎಂಬುದು ಕೂಡ ಅರ್ಜಿದಾರರ ಅಹವಾಲಾಗಿತ್ತು.


* ಈ ಹಿಂದಣ ವಿಚಾರಣೆಯ ಸಂದರ್ಭದಲ್ಲಿ "ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಸಂಗ್ರಹಿಸಿದ ಡೇಟಾವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಆಯೋಗ ಕೈಗೊಳ್ಳಲಿದೆ" ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನ್ಯಾಯಾಲಯಕ್ಕೆ ತಿಳಿಯಪಡಿಸಿತ್ತು.


ತಿಳಿದಿರಲಿ:

ಭಾರತದ ಸಂವಿಧಾನದ ಪ್ರಕಾರ ಜಾತಿ ಮಾಹಿತಿಯನ್ನೊಳಗೊಂಡ ಜನಗಣತಿಯನ್ನು ನಡೆಸುವ ಪ್ರಾಥಮಿಕ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. 246 ನೇ ವಿಧಿ ಮತ್ತು ಏಳನೇ ಷೆಡ್ಯೂಲ್ "ಜನಗಣತಿ ಮತ್ತು ಅಂಕಿಅಂಶಗಳನ್ನು" ಯೂನಿಯನ್ ಪಟ್ಟಿಯಲ್ಲಿ ವರ್ಗೀಕರಿಸುತ್ತದೆ ಮತ್ತು ಸಂಸತ್ತಿಗೆ ಅದರ ಮೇಲೆ ಕಾನೂನು ರಚಿಸಲು ವಿಶೇಷ ಅಧಿಕಾರವನ್ನು ನೀಡುತ್ತದೆ. ರಾಜ್ಯಗಳು ರಾಜ್ಯ ಪಟ್ಟಿಯ ಅಡಿಯಲ್ಲಿ ಸಾಮಾಜಿಕ-ಆರ್ಥಿಕ ಮಾಹಿತಿಗಳನ್ನು ಸಂಗ್ರಹಿಸಬಹುದಾಗಿದೆ. ಆದರೆ ಪೂರ್ಣ ಪ್ರಮಾಣದ ಜಾತಿ ಸಮೀಕ್ಷೆ ಕೇಂದ್ರ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಭಾರತದ ಸಂವಿಧಾನದ 246 ನೇ ವಿಧಿ ಹೀಗೆ ಸಾರುತ್ತದೆ:


"ಯೂನಿಯನ್  ಪಟ್ಟಿಯಲ್ಲಿ ನಮೂದಿಸಲಾದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲು ಸಂಸತ್ತು ವಿಶೇಷ ಅಧಿಕಾರವನ್ನು ಹೊಂದಿದೆ; ರಾಜ್ಯ ಪಟ್ಟಿಯಲ್ಲಿ ನಮೂದಿಸಲಾದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲು ರಾಜ್ಯದ ಶಾಸಕಾಂಗವು ವಿಶೇಷ ಅಧಿಕಾರವನ್ನು ಹೊಂದಿದೆ."


ಕರ್ನಾಟಕವು ಸಮಾಜ ಕಲ್ಯಾಣ ಅಥವಾ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಬಹುದಾದರೂ, ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸಮಗ್ರ ಜಾತಿ ಜನಗಣತಿಯನ್ನು ನಡೆಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಕಾನೂನುಬದ್ಧವಾಗಿ ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ.

Friday, September 26, 2025

ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು

 ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು 

ಅತ್ತ ಬಲಕ್ಕೂ ವಾಲದೆ ಇತ್ತ ಎಡಕ್ಕೂ ವಾಲದಿದ್ದ ಭೈರಪ್ಪನವರು ಎಡಪಂಥೀಯರಿಗೆ ಅಪಥ್ಯರಾಗಿಯೇ ಉಳಿದರು. ಕಾಲದಲ್ಲಿ ಸರಿದುಹೋದ ಘಟನೆಗಳ ವಾಸ್ತವಿಕ ಚಿತ್ರಣ ಆವರಣದೊಳಗೆ ಬಂದಿಯಾದ ಸತ್ಯಗಳ ಅನಾವರಣವೂ ಆದಾಗ ಹಿಂದು ಮೂಲಭೂತವಾದಿಯಂತೆ ಕಂಡವರು; ಸಾಂಪ್ರದಾಯಿಕ ಸಮಾಜದ ಅಹಿತ ಸತ್ಯಗಳ ಚಿತ್ರಣದ ಮೂಲಕ ಸಾಂಪ್ರದಾಯಿಕರಿಂದಲೂ ದೂರ ಉಳಿದರು. ಅದ್ಭುತ ಬರೆಹಗಾರರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಲಿದ್ದವರೊಬ್ಬರು ಭೈರಪ್ಪನವರಿಗೆ ಕಾದಂಬರಿ ಬರೆಯಲು ಗೊತ್ತಿಲ್ಲ ಎಂದು ಜರೆದಿದ್ದೂ ಉಂಟು. ಆದರೆ ತಮ್ಮ ಸತ್ಯಾನ್ವೇಷಣೆಯಲ್ಲಿ ತಾವು ಕಂಡುಕೊಂಡ ವಿಚಾರಗಳನ್ನು ವಿಶದಪಡಿಸಿದಾಗ ಆ ಅದ್ಭುತ ಬರೆಹಗಾರರಿಂದ ತಾರ್ಕಿಕ ಪ್ರತ್ಯುತ್ತರಗಳು ಬಂದ ಮಾಹಿತಿ ಇಂದಿನವರೆಗೆ ದೊರಕಲಿಲ್ಲ.


ಹೌದು—ಭೈರಪ್ಪ ಎಲ್ಲರೂ ಇಷ್ಟಪಡುವ ವ್ಯಕ್ತಿಯೇನೂ ಆಗಿರಲಿಲ್ಲ. ಆದರೆ ಅವರು ಎಲ್ಲರಿಗೂ ಇಷ್ಟವಾಗಬೇಕೆಂದು ಬದುಕಿದ ವ್ಯಕ್ತಿಯೂ ಆಗಿರಲಿಲ್ಲ. ಸಾಹಿತ್ಯದ ಉದ್ದೇಶ ಸಾಂತ್ವನ ನೀಡುವುದು ಮಾತ್ರವಲ್ಲ, ಸತ್ಯವನ್ನು ಬಹಿರಂಗಪಡಿಸುವುದು ಕೂಡ ಆಗಿರುತ್ತದೆ ಎಂಬುದನ್ನು ತಮ್ಮ ಜೀವನದುದ್ದಕ್ಕೂ ಸಾಬೀತುಪಡಿಸುತ್ತ ಬದುಕಿದವರು ಅವರು . ಇದೇ ಕಾರಣದಿಂದ ಭೈರಪ್ಪ ಎಂದಿಗೂ ಪ್ರಸಕ್ತರು.


~ಕೃಷ್ಣಪ್ರಕಾಶ ಬೊಳುಂಬು

எஸ். எல். பயிரப்ப (1931 – 2025): ஒரு அஞ்சலி

 இலக்கிய உலகம் ஒரு ஒளிரும் நட்சத்திரத்தை இழந்துவிட்டது. கன்னட இலக்கியத்தில் ஆன்மா தேடல், உண்மை தேடுதல் மற்றும் தத்துவ சிந்தனையின் அடையாளமாக நின்ற எஸ்.எல். பைரப்பா இப்போது இல்லை. அவரது காலம் கடந்துவிட்டாலும், அவரது பேனாவால் ஒளிரும் எண்ணங்கள் இன்னும் நம் மனதில் எதிரொலிக்கின்றன. இந்த அஞ்சலி அந்த மகத்தான மனிதரின் நினைவுகளுக்கு அர்ப்பணிக்கப்பட்டுள்ளது.

எஸ். எல். பயிரப்ப (1931 – 2025): ஒரு அஞ்சலி

2025 செப்டம்பர் 24 அன்று ஒரு மாபெரும் திறமை மறைந்தது. எஸ். எல். பயிரப்ப எம்மை விட்டுப் போய்விட்டார். கன்னட இலக்கியத்திற்கு அவர் ஒரு எழுத்தாளர் மட்டுமல்ல—ஒரு குரு, ஒரு சிந்தனையாளர், ஒரு சத்தியத் தேடுபவர்.

அவரது படைப்புகளுடன் வளர்ந்த எங்களுக்கு, பயிரப்ப ஒரு எழுத்தாளர் மட்டுமல்ல—வாழ்க்கையின் ஆழங்களில் எங்களை அழைத்துச் சென்ற ஒரு வழிகாட்டி. பர்வ வாசிக்கும் போது, புராணங்கள் வெறும் கதைகள் அல்ல, நம் சொந்தப் போராட்டங்களின் பிரதிபலிப்புகள் என்று அவர் கற்றுக் கொடுத்தார். ஆவரண எங்களை வரலாற்றின் மறைகளைக் களைந்து உண்மையை எதிர்கொள்ளச் செய்தது. ஒவ்வொரு நாவலிலும் அவர் எங்களை கேள்வி கேட்கவும், அசௌகரியமான சத்தியங்களைத் தைரியமாகச் சந்திக்கவும் வற்புறுத்தினார்.

அவரது மொழிக்குச் சடங்கு போன்ற ஒரு கம்பீரம் இருந்தது; சிந்தனைகளுக்கு ஒருபோதும் வணங்காத உறுதியும் இருந்தது. ஆனால் அதன் அடியில் மனிதர்களின் மீதான பரிவு, கருணை எப்போதும் ஓடியது. மனிதர்கள், குடும்பங்கள், நினைவும் மாற்றமும் இடையில் திணறும் பண்பாட்டுகள்—இவை அனைத்தும் அவரது எழுத்தின் மையமாக இருந்தன.

பத்மபூஷண், சாகித்ய அகாடமி புலமைப்பரிசில், சரஸ்வதி சம்மான் போன்ற பல விருதுகள் அவரை நாடி வந்தன. ஆனால், அவரது உண்மையான பரிசு வாசகர்களின் இதயங்களில் நிலைத்திருந்த அமைதியான பக்தியே.

இன்று நாம் துயரப்படுகிறோம்; அதே நேரத்தில் நன்றியும் செலுத்துகிறோம். ஏனெனில் பயிரப்பாவின் சொற்கள் இன்னும் ஒளிரும் விளக்குகள் போல நம்மை வழிநடத்துகின்றன, நம்மை கேள்வி கேட்க வைக்கின்றன. காலம் கடந்து மறையாத ஓசை இதுவே என்பதை நினைவுகூர்ந்து, பயிரப்பாவிற்கு எங்களின் அஞ்சலிகள். 🌹

ఎస్. ఎల్. భైరప్ప (1931 – 2025): ఒక నివాళి

 

సాహిత్య ప్రపంచం ఒక వెలుగు నక్షత్రాన్ని కోల్పోయింది. కన్నడ సాహిత్యంలో ఆత్మశోధనకు, సత్యాన్వేషణకు, తత్త్వ చింతనకు ప్రతీకగా నిలిచిన ఎస్. ఎల్. భైరప్ప ఇక లేరు. ఆయన కాలం ముగిసినా, ఆయన కలం వెలిగించిన ఆలోచనలు ఇంకా మన మనసుల్లో ప్రతిధ్వనిస్తూనే ఉంటాయి. ఈ నివాళి, ఆ మహానుభావుడి స్మృతులకు అంకితం.

ఎస్. ఎల్. భైరప్ప (1931 – 2025): ఒక నివాళి

2025 సెప్టెంబర్ 24న ఒక మహత్తర ప్రతిభ అస్తమించింది. ఎస్. ఎల్. భైరప్ప ఇకలేరు. కన్నడ సాహిత్యానికి ఆయన ఒక రచయిత మాత్రమే కాదు—ఒక గురువు, ఒక తత్త్వవేత్త, ఒక సత్యాన్వేషి కూడా.

ఆయన రచనలతో పెరిగినవారికి భైరప్ప కేవలం రచయితగానే కాక, జీవితపు లోతుల్లోకి నడిపిన ఒక గురువుగానూ నిలిచారు. పర్వ చదువుతున్నప్పుడు మహాభారతం కేవలం ఇతిహాసం కాదని, మన స్వంత పోరాటాల ప్రతిబింబమని ఆయన మాకు నేర్పించారు. ఆవరణ చరిత్రపు పొరల వెనుక దాగి ఉన్న నిజాలను ఎదుర్కొనమని ప్రేరేపించింది. ప్రతి నవల మమ్మల్ని ప్రశ్నించమని, అసౌకర్యమైన సత్యాలను ధైర్యంగా ఎదుర్కోవాలని కోరింది.

ఆయన భాషకు ఒక ఆచరణాత్మక గంభీరత ఉండేది; ఆలోచనలకు మాత్రం ఎప్పటికీ వంగని దృఢత్వం. కానీ ఆ గంభీరత లోపల ఎల్లప్పుడూ మనుషుల పట్ల కరుణ, ప్రేమ ప్రవహించేది. మనుషులు, కుటుంబాలు, జ్ఞాపకాలు మరియు మార్పు మధ్య తడబడే సంస్కృతులు—ఇవి ఆయన రచనల కేంద్రముగా నిలిచాయి.

పద్మభూషణ్, సాహిత్య అకాడమీ ఫెలోషిప్, సరస్వతి సమ్మాన్ వంటి అనేక గౌరవాలు ఆయనను అనుసరించాయి. కానీ ఆయనకు నిజమైన బహుమతి, పాఠకుల హృదయాల్లో స్థిరంగా నిలిచిన నిశ్శబ్దమైన అభిమానమే.

ఈరోజు మనం దుఃఖిస్తున్నాం; కానీ కృతజ్ఞతను కూడా తెలియజేస్తున్నాం. ఎందుకంటే భైరప్ప వాక్యాలు ఇంకా వెలుగుల దీపాల్లా మనల్ని నడిపిస్తున్నాయి, మనల్ని ప్రశ్నిస్తున్నాయి. ప్రళయకాలం వరకు మాయమయ్యే స్వరం కాదు ఇది అని గుర్తుచేసుకుంటూ, భైరప్పకు నివాళులు అర్పిద్దాం. 🌹

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...