ಮರೆತೊಂದು ನೆನಪನ್ನು ಮೀಂಟಿ ಮೀಂಟುತ ಮತ್ತೆ
ಕೇಳಲು ಇಂಪಾದ ನಾದವಾಗಿಸು
ಇರದಿದ್ದ ಕನಸುಗಳ ತೋರಿ ತೋರುತ ಮತ್ತೆ
ಇರುಳಿನ ನಶೆಯೊಳಗೆ ತೇಲಿತೇಲಿಸು
ಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳ
ಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸು
ಬಂಧದೊಳು ಸಿಲುಕಿದ ಶೂನ್ಯವಾದ ಮನಸ್ಸಿಗೆ
ದಿಕ್ಕುಗಳ ತೋರಿಸುತ್ತ ವಿಷಾದವ ನೀಗಿಸು || ೧||
ಕವಿದಿರುಳಲಿ ತುಂಬು ಬೆಳದಿಂಗಳ
ಮೊಗೆ ಮೊಗೆದೀಯುತ ಬೊಗಸೆಯಲಿ
ಇರದೊಂದು ಕನಸನ್ನು ಇರಗೊಡುತಲಿ ಮತ್ತೆ
ರಾಗಗಳಲೆಯೊಳು ತೇಲಿತೇಲಿಸು || ೨ ||
[soundcloud url="https://api.soundcloud.com/tracks/69280433" width="100%" height="166" iframe="true" /]
Tuesday, August 13, 2013
ಸನಿಹ
ದೂರದೊಳಿದ್ದೂ ಸನಿಹದೊಳಿರುವೆ
ಮನಸ್ಸಿನ ಭ್ರಾಮಕ ಪಟಲದೊಳು
ಈ ಕ್ಷಣ ನೀನೆಲ್ಲಿಲ್ಲಿಹೆಯೋ
ಪ್ರತಿ ಕ್ಷಣದೊಳೂ ನಿನ್ನ ಧ್ಯಾನಿಸುವೆ
ಪ್ರತಿ ಜೀವದಲೂ ನಿನ್ನನೇ ಕಾಣುವೆ
ಹಿಂಬಾಲಿಸುವೆ ನಿನ್ನ ನೆರಳಾಗಿ
ನೀನಲ್ಲದೆ ಬೇರೆ ಲೋಕವ ಕಾಣೆನು
ಎಲ್ಲಿದ್ದರೂ ಕಾಣುವೆ ನಿನ್ನಿರವ
ಮರಕೆಯ ಕಾಣೆನು ಇರುಳುಗಳಲ್ಲಿ
ಬಂಧಿಯೇ ಆದೆನು ಮಾಯೆಯೊಳು
ದೂರದೊಳಿದ್ದೂ ಸನಿಹದೊಳಿರುವೆ
ಮನಸ್ಸಿನ ಭ್ರಾಮಕ ಪಟಲದೊಳು
ಮನಸ್ಸಿನ ಭ್ರಾಮಕ ಪಟಲದೊಳು
ಈ ಕ್ಷಣ ನೀನೆಲ್ಲಿಲ್ಲಿಹೆಯೋ
ಪ್ರತಿ ಕ್ಷಣದೊಳೂ ನಿನ್ನ ಧ್ಯಾನಿಸುವೆ
ಪ್ರತಿ ಜೀವದಲೂ ನಿನ್ನನೇ ಕಾಣುವೆ
ಹಿಂಬಾಲಿಸುವೆ ನಿನ್ನ ನೆರಳಾಗಿ
ನೀನಲ್ಲದೆ ಬೇರೆ ಲೋಕವ ಕಾಣೆನು
ಎಲ್ಲಿದ್ದರೂ ಕಾಣುವೆ ನಿನ್ನಿರವ
ಮರಕೆಯ ಕಾಣೆನು ಇರುಳುಗಳಲ್ಲಿ
ಬಂಧಿಯೇ ಆದೆನು ಮಾಯೆಯೊಳು
ದೂರದೊಳಿದ್ದೂ ಸನಿಹದೊಳಿರುವೆ
ಮನಸ್ಸಿನ ಭ್ರಾಮಕ ಪಟಲದೊಳು
ಪ್ರೇಮ ನಿವೇದನೆ
ಪ್ರಣಯ
ಪೌರ್ಣಮಿ
ನೀನಿರದೆ
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು
ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು
ನೀನಿರದೆ ಜೇನಿಲ್ಲ
ನೀನಿರದೆ ತುಟಿಯಿಲ್ಲ
ನೀನಿರದೆ ಮೆಲ್ದುಟಿಗಳ ಹೆಜ್ಜೇನನು ಸವಿವ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಕಾವಿಲ್ಲ
ನೀನಿರದೆ ನೋವಿಲ್ಲ
ನೀನಿರದೆ ಸುಡುಬಿಸಿಯಲಿ ಹದಗಾವನು ಈವ ಬಗೆಯೆಂತು
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಮಾತಿಲ್ಲ
ನೀನಿರದೆ ಕನಸಿಲ್ಲ
ನೀನಿರದೆ ಮೆಲುಮಾತಿನ ಸವಿಗನಸನು ಕಾಂಬ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು
ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು
ನೀನಿರದೆ ಜೇನಿಲ್ಲ
ನೀನಿರದೆ ತುಟಿಯಿಲ್ಲ
ನೀನಿರದೆ ಮೆಲ್ದುಟಿಗಳ ಹೆಜ್ಜೇನನು ಸವಿವ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಕಾವಿಲ್ಲ
ನೀನಿರದೆ ನೋವಿಲ್ಲ
ನೀನಿರದೆ ಸುಡುಬಿಸಿಯಲಿ ಹದಗಾವನು ಈವ ಬಗೆಯೆಂತು
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಮಾತಿಲ್ಲ
ನೀನಿರದೆ ಕನಸಿಲ್ಲ
ನೀನಿರದೆ ಮೆಲುಮಾತಿನ ಸವಿಗನಸನು ಕಾಂಬ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ಚಿತ್ರಪಟ
ನೋಡನೋಡುತ್ತಿರೆ ಮೂಡಿಬಂದಿತು ಕಣ್ಣ ಮುಂದೊಂದು ಪಟಲ
ತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲ
ಕೇಳಿದರು ಗೆಳತಿಯರು ಯಾರವನು ಯಾರವನು
ನಿನ್ನ ಪಟಲವನು ತುಂಬಿದವನು
ಉತ್ತರವ ನಾನರಿಯೆ ನಾನರಿಯೆ ಎನದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಎದೆಯ ಕೆನ್ವಾಸಿನ ಮೇಲೆ ಬರೆದಿದ್ದೆ ಪಟವೊಂದು
ಕಂಡ ಕನಸುಗಳ ಮಾರೊಡಲನಾಂತು
ಎದೆಯೊಳವಿತಿಟ್ಟ ಗುಟ್ಟುಗಳಿ ಗುತ್ತರವ ನೀಯದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಬಲು ದೀರ್ಘವಾಗಿದ್ದ ಕನಸಿನಿಂದೆಚ್ಚರಗೊಂಡೆ
ಸುತ್ತ ಕಂಡುಬಂದುದು ಬರಿಯ ಹೊದಿಕೆಯ ಅರಿವೆ
ತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲ
ಕೇಳಿದರು ಗೆಳತಿಯರು ಯಾರವನು ಯಾರವನು
ನಿನ್ನ ಪಟಲವನು ತುಂಬಿದವನು
ಉತ್ತರವ ನಾನರಿಯೆ ನಾನರಿಯೆ ಎನದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಎದೆಯ ಕೆನ್ವಾಸಿನ ಮೇಲೆ ಬರೆದಿದ್ದೆ ಪಟವೊಂದು
ಕಂಡ ಕನಸುಗಳ ಮಾರೊಡಲನಾಂತು
ಎದೆಯೊಳವಿತಿಟ್ಟ ಗುಟ್ಟುಗಳಿ ಗುತ್ತರವ ನೀಯದಾದೆ
ನಿನ್ನ ಮೌನದಿಂಗಿತ ವನ್ನರಿಯದಾದೆ
ಬಲು ದೀರ್ಘವಾಗಿದ್ದ ಕನಸಿನಿಂದೆಚ್ಚರಗೊಂಡೆ
ಸುತ್ತ ಕಂಡುಬಂದುದು ಬರಿಯ ಹೊದಿಕೆಯ ಅರಿವೆ
Subscribe to:
Posts (Atom)
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...