ನೀನೊಮ್ಮೆ ಉಲಿಯುವ ತನಕ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
ಇರುಳು ಕಳೆಯುವವರೆಗೆ
ಇರುಳಿನೊಲು ಕಾವೆನು ನಾನು
ಬೆಳಗ್ಗಿನಾ ಬೆಳಕಿನ ಬರವ ತಾಳ್ಮೆಯಲಿ ತಾಳ್ದು
ಬೆಳಗು ಬೆಳಗಲೇ ಬೇಕು
ಇರುಳು ಮಾಸಲೇ ಬೇಕು
ನಿನ್ನಿನಿದಾದ ಮಾತುಗಳ ಹೊಳೆ ಹರಿಯಬೇಕು
ಇನಿದಾದ ಮಾತಿನ ಒಳಗೆ
ಕೇಳರಿಯದಾ ಗಾನ
ಆಕಾಶ ಗೋಪುರವ ಛೇದಿಸಲೇ ಬೇಕು
ಎನ್ನೆದೆಯ ಗೂಡಿನೊಳಿರುವ
ಹಕ್ಕಿಗಳ ಚಿಲಿಪಿಲಿಯಿಂದ
ಗಾನಕ್ಕೆ ಮೇಳವನು ಕೂಡಿಸಲೇ ಬೇಕು
ಆ ಗಾನಮೇಳದಿಂದೆ
ಹೂವುಗಳು ತಾವು ಅರಳಿ
ಇಳೆಯ ಹೂದೋಟಗಳ ವ್ಯಾಪಿಸಲೇ ಬೇಕು
ನೀನೊಮ್ಮೆ ಉಲಿಯುವ ತನಕ
ಕಾಯುತ್ತ ಕಾವೆನು ನಾನು
ಎದೆಯ ಗೂಡಿನ ತುಂಬ ಕಾತರವ ತುಂಬಿ
[soundcloud url="https://api.soundcloud.com/tracks/85846689" width="100%" height="166" iframe="true" /]
Tuesday, August 13, 2013
ಹಳೆಯ ಕವಿತೆಗೆ ಹೊಸ ರೂಪ (ಅಂತರಾತ್ಮ - ೨)
ನೀನೊಮ್ಮೆ ಬಾರೆಯಾ
ನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾ
ಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾ
ಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿ
ಒಳಗಿರುವ ನನ್ನನ್ನು ಎಬ್ಬಿಸಿದೆ ನೀ
ಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆ
ಛಲವನ್ನು ಎನಗಿತ್ತು ನಡೆಯಿಸಿದೆ ನೀ
ಬಾಳ್ವೆಯಲಿ ನಲಿವನ್ನೂ ಹದವಾಗಿ ನೋವನ್ನೂ
ಬೆರೆಸುತ್ತ ಊಡಿಸುತ ಬದುಕಿಸಿದೆ ನೀ
ಕ್ಷಣದೊಂದು ಮಾಯೆಯಲಿ ಹಲವಾರು ಬಣ್ಣಗಳ
ತಡೆಯಿರದೆ ಎಲ್ಲೆಲ್ಲೂ ಪ್ರೋಕ್ಷಿಸಿದೆ ನೀ
ಹಲವಾರು ರೂಪಿನಲಿ ಮಾರೊಡಲನ್ನಾಂತು
ಎಲ್ಲವನ್ನು ಎನಗಿತ್ತು ಬದುಕಿಸಿದೆ ನೀ
[soundcloud url="https://api.soundcloud.com/tracks/87050448" width="100%" height="166" iframe="true" /]
ನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾ
ಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾ
ಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿ
ಒಳಗಿರುವ ನನ್ನನ್ನು ಎಬ್ಬಿಸಿದೆ ನೀ
ಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆ
ಛಲವನ್ನು ಎನಗಿತ್ತು ನಡೆಯಿಸಿದೆ ನೀ
ಬಾಳ್ವೆಯಲಿ ನಲಿವನ್ನೂ ಹದವಾಗಿ ನೋವನ್ನೂ
ಬೆರೆಸುತ್ತ ಊಡಿಸುತ ಬದುಕಿಸಿದೆ ನೀ
ಕ್ಷಣದೊಂದು ಮಾಯೆಯಲಿ ಹಲವಾರು ಬಣ್ಣಗಳ
ತಡೆಯಿರದೆ ಎಲ್ಲೆಲ್ಲೂ ಪ್ರೋಕ್ಷಿಸಿದೆ ನೀ
ಹಲವಾರು ರೂಪಿನಲಿ ಮಾರೊಡಲನ್ನಾಂತು
ಎಲ್ಲವನ್ನು ಎನಗಿತ್ತು ಬದುಕಿಸಿದೆ ನೀ
[soundcloud url="https://api.soundcloud.com/tracks/87050448" width="100%" height="166" iframe="true" /]
ಅಂತರಾತ್ಮ - ೪ (ತೆಲುಗು)
ನುವ್ವೇಗ ನಾಕಿಂತ ಸ್ಫೂರ್ತಿಲು ಇಚ್ಚಿನವಾಡು
ನೀದೈನ ಲೋಕಮುತೊ ಋಣಮು ನಾದುಗಾ
ನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡು
ನೀದೈನ ದಯಮುಲೊ ಸುಖಮು ನಾದುಗಾ
ಒಕ್ಕಟಿಲೊ ರೆಂಡುನಿ | ರೆಂಡುಲೊ ಒಕ್ಕಟಿನಿ |
ಚೇರಿಂಚು ಸೃಷ್ಟಿನಿ ನುವ್ವು ಚೇಯಗಾ
ಅನ್ನಿಟಿಲೊ ಒಕಟಿನಿ | ಅಂದರುಲೊ ಒಕಡುನಿ |
ಚೂಪಿಸ್ತು ಮಾಯನಿ ತುಡಿಚಿಪೆಟ್ಟವುಗಾ
ನುವ್ವೇಗ ನಾಕಿಂತ ಸ್ಫೂರ್ತಿಲು ಇಚ್ಚಿನವಾಡು
ನೀದೈನ ಲೋಕಮುತೊ ಋಣಮು ನಾದುಗಾ
ನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡು
ನೀದೈನ ದಯಮುಲೊ ಸುಖಮು ನಾದುಗಾ
ನೀದೈನ ಲೋಕಮುತೊ ಋಣಮು ನಾದುಗಾ
ನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡು
ನೀದೈನ ದಯಮುಲೊ ಸುಖಮು ನಾದುಗಾ
ಒಕ್ಕಟಿಲೊ ರೆಂಡುನಿ | ರೆಂಡುಲೊ ಒಕ್ಕಟಿನಿ |
ಚೇರಿಂಚು ಸೃಷ್ಟಿನಿ ನುವ್ವು ಚೇಯಗಾ
ಅನ್ನಿಟಿಲೊ ಒಕಟಿನಿ | ಅಂದರುಲೊ ಒಕಡುನಿ |
ಚೂಪಿಸ್ತು ಮಾಯನಿ ತುಡಿಚಿಪೆಟ್ಟವುಗಾ
ನುವ್ವೇಗ ನಾಕಿಂತ ಸ್ಫೂರ್ತಿಲು ಇಚ್ಚಿನವಾಡು
ನೀದೈನ ಲೋಕಮುತೊ ಋಣಮು ನಾದುಗಾ
ನುವ್ವೇಗ ಬ್ರತುಕುಲೊ ವೆಲುಗು ಇಚ್ಚಿನವಾಡು
ನೀದೈನ ದಯಮುಲೊ ಸುಖಮು ನಾದುಗಾ
ಅಂತರಾತ್ಮ - ೩ (ತುಳು)
ಈಯತ್ತ ಎಂಕೀತ್ ಸ್ಫೂರ್ತಿಲುನು ಕೊರ್ನಾಯೆ
ಈ ಪೆದ್ದಿ ಲೋಕೊನು ಸುಗಿತ್ತೋನುವೆ
ಈಯತ್ತ ಬದ್ಕ್ಡ್ ಬೊಳುಪು ಕೊರ್ದಿನ ಗುರುವು
ನಿನ್ನವೊಂಜಿ ದಯೆಟ್ಟಿನಿಲ ಸುಖಿ ಯಾನ್ಗಾ
ಒಂಜೆತುಳಾ ರಡ್ಡ್ನ್ | ರಡ್ಡೆತುಳಾ ಒಂಜೆನ್ |
ಸೇರಾದ್ ಸೃಷ್ಟಿನ್ ಈ ಮಾಲ್ತಗಾ
ಈಯತ್ತ ಎಂಕಿನಿಲ ತೆಲಿಕೆ ನಲಿಕೆದ ತುಡರ್
ಬಾಳುವೆದ ಎದ್ಪುಲು ನಿನ್ನ ದಯೊಟೆಗಾ
ನಿನ್ನವೊಂಜಿ ಒಲುಮೆಡ್ ಮಾಂತ ಗೆಂದೆರೆ ಚಲೊನು
ಕೊರುದು ಕೈ ಪತ್ತ್ದ್ ನಡಪಾಯಗಾ
ಮಾಂತೈಟ್ ಒಂಜೆನ್ | ಮಾಂತೆರೆಡ ಒರಿಯೆನ್ |
ತೋಜಾದ್ ಮಾಯೊನ್ ಪೂಜಾದಗಾ
ಮೂಡಾಯಿ ಅಯ್ತೆ ಸಿರಿ ಮೂಡ್ದ್ ಕಂತುನ ಮುಟ್ಟ
ತುಡಿಟ್ ತುಡಿಪುನ ತಾಳ ಈಯತ್ತಗಾ
ಈ ಪೆದ್ದಿ ಲೋಕೊನು ಸುಗಿತ್ತೋನುವೆ
ಈಯತ್ತ ಬದ್ಕ್ಡ್ ಬೊಳುಪು ಕೊರ್ದಿನ ಗುರುವು
ನಿನ್ನವೊಂಜಿ ದಯೆಟ್ಟಿನಿಲ ಸುಖಿ ಯಾನ್ಗಾ
ಒಂಜೆತುಳಾ ರಡ್ಡ್ನ್ | ರಡ್ಡೆತುಳಾ ಒಂಜೆನ್ |
ಸೇರಾದ್ ಸೃಷ್ಟಿನ್ ಈ ಮಾಲ್ತಗಾ
ಈಯತ್ತ ಎಂಕಿನಿಲ ತೆಲಿಕೆ ನಲಿಕೆದ ತುಡರ್
ಬಾಳುವೆದ ಎದ್ಪುಲು ನಿನ್ನ ದಯೊಟೆಗಾ
ನಿನ್ನವೊಂಜಿ ಒಲುಮೆಡ್ ಮಾಂತ ಗೆಂದೆರೆ ಚಲೊನು
ಕೊರುದು ಕೈ ಪತ್ತ್ದ್ ನಡಪಾಯಗಾ
ಮಾಂತೈಟ್ ಒಂಜೆನ್ | ಮಾಂತೆರೆಡ ಒರಿಯೆನ್ |
ತೋಜಾದ್ ಮಾಯೊನ್ ಪೂಜಾದಗಾ
ಮೂಡಾಯಿ ಅಯ್ತೆ ಸಿರಿ ಮೂಡ್ದ್ ಕಂತುನ ಮುಟ್ಟ
ತುಡಿಟ್ ತುಡಿಪುನ ತಾಳ ಈಯತ್ತಗಾ
ಅಂತರಾತ್ಮ - ೨
ಬರಿದೊಂದು ಸ್ಪರ್ಶದಲಿ ಒಳಗಿರುವ ಎನ್ನನ್ನು
ಮುಟ್ಟಿ ಎಬ್ಬಿಸಿದವನು ನೀನಲ್ಲವೇ
ಬರಿದೊಂದು ದೃಷ್ಟಿಯಲಿ ಎದೆಯೊಳಿಹ ತಂತಿಗಳ
ಮೀಂಟಿ ತಡುಗಿಸಿದವನು ನೀನಲ್ಲವೇ
ನೋವು ನಲಿವಿನ ಬಾಳ್ವೆ ಹದವಾಗಿ ಬೆರೆಸಿಟ್ಟು
ಎನಗೆ ಊಡಿಸಿದವನು ನೀನಲ್ಲವೇ
ನಿನ್ನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ನಡೆಯಿಸಿದವನು ನೀನಲ್ಲವೇ
ಕ್ಷಣದೊಂದು ಮಾಯೆಯಲಿ ಹತ್ತು ಹಲ ಬಣ್ಣಗಳ
ಸಿಂಪರಿಸಿ ಮೆರೆದವನು ನೀನಲ್ಲವೇ
ಹಲವಾರು ರೂಪಿನಲಿ ಧರಿಸಿ ಮಾರೊಡಲುಗಳ
ಅಳವಿರದೆ ಇತ್ತವನು ನೀನಲ್ಲವೇ
ಅಂತರಾತ್ಮ
ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ
ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ
ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ
ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ
ದೂರವಾಗಿದ್ದುದರ ಇರವನ್ನು ತಿಳಿಯಿಸುತ್ತ
ಮಾಯೆಯನು ನೀಗಿಸುತ್ತ ನೀ ಪೊರೆದೆಯೈ
ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ
ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ
ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ
ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ
ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ
ದೂರವಾಗಿದ್ದುದರ ಇರವನ್ನು ತಿಳಿಯಿಸುತ್ತ
ಮಾಯೆಯನು ನೀಗಿಸುತ್ತ ನೀ ಪೊರೆದೆಯೈ
ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ
ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
Wednesday, October 17, 2012
ನಂಬುಗೆ
ನಂಬುವುದು ಆದಿಯೊಳು ಪರಮ ಚೇತನ ವಿಭುವ
ಲೋಕವನು ಸೃಷ್ಟಿಸಿದ ಪರದೈವವ
ತಾನು ತಾನಲ್ಲದಿಹ ತಾನೇ ತಾನಾಗಿರುವ
ತನಗೆ ಮಿಗಿಲಿಲ್ಲದಿಹ ಅಧಿದೈವವ
ಎಲ್ಲವನೂ ಒಳಗೊಂಡ ಎಲ್ಲದರ ಹಿಡಿವಡೆದ
ಎಲ್ಲದಕೂ ಮಿಗಿಲಾದ ಚೈತನ್ಯವ
ತಿರುತಿರುಗಿದಾ ಬುಗರಿ ತಿರುಗೆ ತಿರೆಗುರುಳಿದರೆ
ತಿರಿದುದನು ತೆರೆದೀವ ವೈಚಿತ್ರ್ಯವ
ಎಲ್ಲದಕೂ ಎತ್ತರದ ಆದಿಅಂತ್ಯಗಳಿರದ
ಎಲ್ಲರೊಳು ನೆಲೆಸಿರುವ ಆನಂದವ
ರೂಪಗಳ ಮೀರಿರುವ ರೂಪಿನೊಳೇ
ಮೈದೋರ್ವ ಕಾಲದೇಶಗಳಿರದ ಬ್ರಹ್ಮಾಂಡವ
ಬೇಡಿಕೊಳಲಿಂದಿಲ್ಲ ನೂರು ವರಗಳ ಕೃಪೆಯ
ಮೂರುಮೂರರೊಳು ಕಾಣ್ಗೆ ದಿಟದರಿವನು
ಲೋಕವನು ಸೃಷ್ಟಿಸಿದ ಪರದೈವವ
ತಾನು ತಾನಲ್ಲದಿಹ ತಾನೇ ತಾನಾಗಿರುವ
ತನಗೆ ಮಿಗಿಲಿಲ್ಲದಿಹ ಅಧಿದೈವವ
ಎಲ್ಲವನೂ ಒಳಗೊಂಡ ಎಲ್ಲದರ ಹಿಡಿವಡೆದ
ಎಲ್ಲದಕೂ ಮಿಗಿಲಾದ ಚೈತನ್ಯವ
ತಿರುತಿರುಗಿದಾ ಬುಗರಿ ತಿರುಗೆ ತಿರೆಗುರುಳಿದರೆ
ತಿರಿದುದನು ತೆರೆದೀವ ವೈಚಿತ್ರ್ಯವ
ಎಲ್ಲದಕೂ ಎತ್ತರದ ಆದಿಅಂತ್ಯಗಳಿರದ
ಎಲ್ಲರೊಳು ನೆಲೆಸಿರುವ ಆನಂದವ
ರೂಪಗಳ ಮೀರಿರುವ ರೂಪಿನೊಳೇ
ಮೈದೋರ್ವ ಕಾಲದೇಶಗಳಿರದ ಬ್ರಹ್ಮಾಂಡವ
ಬೇಡಿಕೊಳಲಿಂದಿಲ್ಲ ನೂರು ವರಗಳ ಕೃಪೆಯ
ಮೂರುಮೂರರೊಳು ಕಾಣ್ಗೆ ದಿಟದರಿವನು
Subscribe to:
Posts (Atom)
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...