Tuesday, July 8, 2025

ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರು ಸೂಚನೆ

 ಪಿ ಮಹಮ್ಮದ್ ಹೇಳುತ್ತಾರೆ: 

~~ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರನ್ನು (<ವ್ಯಕ್ತಿಯೊಬ್ಬರ ಹೆಸರು>) ಸೂಚಿಸಿದ್ದಾರೆ...~~

ನಿಜವಾಗಿ ನೋಬೆಲ್ ಪುರಸ್ಕಾರಕ್ಕೆ ಟ್ರಂಪ್ ಹೆಸರು ಸೂಚಿಸಿದವನು ಪಾಕಿಸ್ಥಾನದ ಫೇಲ್ಡ್ ಮಾರ್ಷಲ್ ಆಸಿಫ್ ಮುನೀರನ ಕೈಗೊಂಬೆ ಪ್ರಧಾನಮಂತ್ರಿ ಶೆಹಬಾಜ್ ಶರೀಫ್. ಇದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ವರದಿಯಾಗಿದೆ.



 "ನಮಗೆ ನಿಮ್ಮ ವಾಯುಪ್ರದೇಶ ಬೇಕಾಗಬಹುದು", "ಅಂತಾರಾಷ್ಟ್ರೀಯ ರಾಜ್ಯತಂತ್ರದ ನಿರ್ಣಾಯಕ ಘಟ್ಟಗಳಲ್ಲಿ ನಮಗೆ ನಿಮ್ಮ ಮೌನ ಬೇಕಾಗಬಹುದು" ಮುಂತಾದ ಬಗೆಯಲ್ಲಿ ಅನ್ಯ ದೇಶಗಳು ತೋರಿಸುವ ಪ್ರೀತಿಗೆ ಪಾಕಿಸ್ಥಾನ ಅರ್ಹವೇ ಆಗಿದೆ. ಆದರೆ ಭಾರತ ದೇಶಕ್ಕೆ ಈ ಬಗೆಯ ಪ್ರೀತಿ ಅಗತ್ಯವಿಲ್ಲ ಮತ್ತು ಇಂಥ ಅಗತ್ಯಗಳಿಂದ ಭಾರತ ಎಂದೋ ಮುಂದೆ ಸರಿದಾಗಿದೆ.

ಕೃಷ್ಣಪ್ರಕಾಶ ಬೊಳುಂಬು

#ಭಾರತ #ಟ್ರಂಪ್  #ಪಾಕಿಸ್ಥಾನ #ವಾರ್ತಾಭಾರತಿ

Sunday, June 22, 2025

ಪಾಕಿಸ್ಥಾನ ಪ್ರೇಮಿ ಡೊನಾಲ್ಡ್ ಟ್ರಂಪ್

 ರಾಷ್ಟ್ರಗಳೊಳಗಿನ ಪರಸ್ಪರ ಮೈತ್ರಿಗಳು, ಪೈಪೋಟಿಗಳು ಮತ್ತು ರಾಜಕೀಯದ ಬಗ್ಗೆ ಮಾತನಾಡುವಾಗ ನಾವು ಶತಮಾನಗಳ ಚಾರಿತ್ರಿಕ ಘಟನೆಯೊಂದನ್ನು ಗ್ರಹಿಸಿ ಅದರ ಸುತ್ತ ಸಮಸ್ತ ವಿದ್ಯಮಾನಗಳನ್ನು ಒಂದು ವಾಕ್ಯದಲ್ಲಿ ವಿವರಿಸುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಆದರೆ ಆ ಘಟನೆಗಳ ಹಿಂದಿರುವ ಅದಕ್ಕಿಂತ ಆಳವಾದ ಏನೋ ಒಂದನ್ನು ಗ್ರಹಿಸದಿರುತ್ತೇವೆ. ಯಾರಾದರೂ "ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಬಗ್ಗೆ ಮೆಚ್ಚುಗೆಯನ್ನು ಏಕೆ ತೋರಿಸುತ್ತಾನೆ?" ಅಥವಾ "ಯುನೈಟೆಡ್ ಸ್ಟೇಟ್ಸ್ ಭಾರತದ ಬಗ್ಗೆ ಏಕೆ ನಿರ್ಲಿಪ್ತವಾಗಿದೆ?" ಎಂದು ಕೇಳಿದರೆ ಅವರು ನಿಜವಾಗಿ ಕೇಳುತ್ತಿರುವುದು ಅದಕ್ಕಿಂತ ಆಳವಾದ ವಿಷಯವೆಂದು ಗ್ರಹಿಸಬೇಕು. ತೆರೆಮರೆಯ ಕಥೆಗಳನ್ನು, ಭಾವನೆಗಳನ್ನು, ಇತಿಹಾಸಗಳನ್ನು ಗ್ರಹಿಸದೆ ಇದನ್ನು ಅರ್ಥೈಸಿಕೊಳ್ಳುವುದು ಅಸಂಭವವೇ ಹೌದು.

ದೇಶವೊಂದು ಆರ್ಥಿಕವಾಗಿ ವಿಕಸಿಸುವ ಘಟ್ಟದಲ್ಲಿ ಅದು ಆರ್ಥಿಕತೆಯಲ್ಲಿ ಮುಂದುವರಿಯುವುದು ಮಾತ್ರವಲ್ಲದೆ ಆ ದೇಶದೆಡೆಗಿನ ಜಾಗತಿಕ ದೃಷ್ಟಿಕೋನವೂ ಬದಲಾಗತೊಡಗುತ್ತದೆ. ಜಾಗತಿಕ ಉಪಸ್ಥಿತಿಯಲ್ಲಿ ಅದು ನಿಜವಾಗಿ ಮೇಲುಮೇಲಕ್ಕೆ ಏರುವುದು ಗಮನಕ್ಕೆ ಬರುತ್ತದೆ. ಇದನ್ನು ಕೆಲವರು ಸಂತೋಷದಿಂದ ಸ್ವೀಕರಿಸಿದರೆ ಇನ್ನು ಕೆಲವರು ಭಯಭೀತರಾಗಬಹುದು, ಮತ್ತೂ ಕೆಲವರು ನಿರ್ಲಿಪ್ತರಾಗಿರಬಹುದು. ಭಾರತ ಈಗ ಬೆಳೆಯುತ್ತಿರುವ ದೇಶವಲ್ಲ, ಅದು ಪ್ರಜ್ವಲಿಸುತ್ತಿದೆ. ಹಳೆಯ ಕಾಲದ ವ್ಯವಸ್ಥೆಯಲ್ಲಿ ಎಂದಿಗೂ ಯೋಜಿಸಲಾಗದ ಸಂಗತಿಗಳು ಇಲ್ಲಿ ಘಟಿಸುತ್ತಲಿವೆ. ದೇಶವೊಂದು ತನ್ನ ವಿಧಿಯನ್ನು ತಾನೇ ನಿರ್ಣಯಿಸಿಕೊಳ್ಳುವುದು ಇಲ್ಲಿ ಗಮನಕ್ಕೆ ಬಂದಿದೆ. 

ಪಾಕಿಸ್ಥಾನವನ್ನು ನಾನು ಪ್ರೀತಿಸುತ್ತೇನೆ ಎನ್ನುವ ಟ್ರಂಪ್ ಇನ್ನೇನಾದರೂ ಗುರಿಯಿಟ್ಟುಕೊಂಡು ಇದನ್ನು ಹೇಳುತ್ತಿದ್ದಾನೆಯೇ ಎಂದು ಯೋಚಿಸಬೇಕು. ಪಾಕಿಸ್ಥಾನದ ಸೇನಾ ಮುಖ್ಯಸ್ಥನಿಗೆ ಪಾಕಿಸ್ಥಾನದ ಮೇಲಣ ಪರಮ ಪ್ರೀತಿಯಿಂದ ಊಟ ಬಡಿಸಿದ ಡೊನಾಲ್ಡ್ ಟ್ರಂಪ್ ನೋಬೆಲ್ ಪುರಸ್ಕಾರವನ್ನು ಗುರಿಯಾಗಿಟ್ಟುಕೊಂಡುದು ನಿಜವೇ ಆಗಿದ್ದರೆ ಆ ಪ್ರೀತಿಯನ್ನು ಈ ಬಗೆಯಲ್ಲಿ ವಿಶ್ಲೇಷಿಸಬಹುದು. ಒಂದು ದೇಶ ಇನ್ನೊಂದು ದೇಶವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ ಆ ಮೆಚ್ಚುಗೆಗೆ ಏನು ಬೆಲೆ ಮತ್ತು ಅದು ಏನು ಖರೀದಿಸುತ್ತದೆ ಎಂದು ಕೇಳಬೇಕಾಗುತ್ತದೆ. ಅದು ಪ್ರೀತಿಯೋ ಅಥವಾ ಹತೋಟಿಯೋ; ಅದು ನಿಜವಾದದ್ದೋ ಅಥವಾ ಸ್ವಂತ ಅನುಕೂಲಕ್ಕಾಗಿ ಮಾಡಿಕೊಂಡ ಸಂಬಂಧವೋ? ಇವು ಸರಳ ಪ್ರಶ್ನೆಗಳಲ್ಲ ಮತ್ತು ಅವುಗಳ ಉತ್ತರಗಳೂ ಸರಳವಾಗಿರಲೊಲ್ಲವು.ಸತ್ಯವೇನೆಂದರೆ ಶಕ್ತಿಶಾಲಿ ತನ್ನ ನೆಲೆಯಲ್ಲಿ ತಾನು ಸ್ಥಿತವಾಗಿರುತ್ತಾನೆ. ಅವನಿಗೆ ಯಾರ ಅನುಮತಿಯೂ ಬೇಕಾಗದು. ನಿಜವಾದ ಶಕ್ತಿಯೆಂಬುದು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ ಅಥವಾ ಎಂದಿಗೂ ಯಾರಿಗೂ ತಲೆಬಾಗುವುದಿಲ್ಲ. 

ಡೊನಾಲ್ಡ್ ಟ್ರಂಪ್ ಅವರಂತಹ ಯಾರಾದರೂ ಪಾಕಿಸ್ಥಾನವನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗ ಆ ಪ್ರೀತಿ ಸರಸಮಯ ಪ್ರೇಮ ಸಂಭಾಷಣೆಯದಲ್ಲ, ತೋರಿಸಿದ ಪ್ರೀತಿ ಪ್ರೀತಿಯ ಬಗೆಗಿನದಲ್ಲ, ಅದು ಇತಿಹಾಸ ಅಥವಾ ಸ್ನೇಹದ ಬಗೆಗಿನದ್ದೂ ಅಲ್ಲ. ಇದು ಅನುಕೂಲಸಿಂಧು, ಇದು ರಾಜ್ಯತಂತ್ರಕ್ಕೆ ಸಂಬಂಧಪಟ್ಟುದು ಮತ್ತು ಚದುರಂಗದ ಹಲಗೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ಚಾತುರ್ಯವೆಂದು ಯೋಚಿಸಬೇಕು. ರಾಜಕೀಯ ಜಗತ್ತಿನಲ್ಲಿ ಪ್ರೀತಿ ಪದಗಳಿಗಿಂತ ಹೆಚ್ಚಾಗಿ ಕ್ರಿಯೆಗಳ ಮೂಲಕ ಮಾತನಾಡುತ್ತದೆ. ಒಬ್ಬ ಪ್ರಭಾವಿ ವ್ಯಕ್ತಿ ವೇದಿಕೆಯ ಮೇಲೆ ನಿಂತು "ನಾನು ಈ ದೇಶವನ್ನು ಪ್ರೀತಿಸುತ್ತೇನೆ" ಎಂದು ಹೇಳಿದಾಗ ಅವನ ನಿಜವಾದ ಉದ್ದೇಶ ಸುತ್ತಲಿನ ದೇಶಗಳಿಗೆ ಸೂಚನೆ ಕೊಡುವುದೇ ಆಗಿರುತ್ತದೆ. ಇದು ಆಟದ ಭಾಗವಾದ ಚಲನೆ ಮತ್ತು ನಾವು ನೋಡುತ್ತಿರುವುದು ಬಹಿರಂಗವಾದ ಚಲನೆಗಳನ್ನು ಮಾತ್ರ. ಹೊರಗೆ ಕಂಡುಬರುವುದು ನಗುವ ಮುಖಗಳು, ವ್ಯಂಗ್ಯವಾಡುವ ನಾಲಗೆಗಳು ಮತ್ತು ಬಾಹ್ಯ ಪರಿಣಾಮಗಳು ಮಾತ್ರ. ಹಾಗಾದರೆ ಪಾಕಿಸ್ಥಾನ ಎಲ್ಲಿದೆ ಎಂದು ಕೇಳಿದರೆ ಪಾಕಿಸ್ಥಾನವು ಈ ಮೊದಲು ಎಲ್ಲಿತ್ತೋ ಈಗಲೂ ಅದೇ ಸ್ಥಾನದಲ್ಲಿದೆ. ಅದು ಎಷ್ಟೇ ಆಂತರಿಕ ಹೋರಾಟಗಳನ್ನು ಕಂಡಿರುವ ದೇಶವಾದರೂ ಆರ್ಥಿಕತೆಯಲ್ಲಿ ಎಷ್ಟೇ ಕುಸಿದುಹೋಗಿದ್ದರೂ ಜಾಗತಿಕ ರಾಜ್ಯತಂತ್ರದ ಪ್ರಮುಖ ನೆಲೆಗಳಾದ ಅಫ್ಘಾನಿಸ್ಥಾನ, ಚೀನಾ ಮತ್ತು ಮಧ್ಯಪ್ರಾಚ್ಯ ದೇಶಗಳೊಂದಿಗೆ ಆಳವಾದ ಸಂಬಂಧಗಳನ್ನು ಹೊಂದಿರುವ ದೇಶ ಅದು. ಜನರು ಇಷ್ಟಪಟ್ಟರೂ ಇಷ್ಟಪಡದಿದ್ದರೂ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ದೇಶಗಳಲ್ಲಿ ಒಂದಾಗಿದೆ. ಅವರ ಪ್ರೀತಿಯಿದ್ದರೆ ಯಾರಿಗಾದರೂ ಎಂದಿಗಾದರೂ ಪ್ರಯೋಜನ ಆಗಬಲ್ಲುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ "ನಮಗೆ ನಿಮ್ಮ ವಾಯುಪ್ರದೇಶ ಬೇಕಾಗಬಹುದು", "ಅಂತಾರಾಷ್ಟ್ರೀಯ ರಾಜ್ಯತಂತ್ರದ ನಿರ್ಣಾಯಕ ಘಟ್ಟಗಳಲ್ಲಿ ನಮಗೆ ನಿಮ್ಮ ಮೌನ ಬೇಕಾಗಬಹುದು" ಮುಂತಾದ ಬಗೆಯಲ್ಲಿ ಅನ್ಯ ದೇಶಗಳು ತೋರಿಸುವ ಪ್ರೀತಿಗೆ ಪಾಕಿಸ್ಥಾನ ಅರ್ಹವೇ ಆಗಿದೆ. ಆದರೆ ಭಾರತ ದೇಶಕ್ಕೆ ಈ ಬಗೆಯ ಪ್ರೀತಿ ಅಗತ್ಯವಿಲ್ಲ ಮತ್ತು ಇಂಥ ಅಗತ್ಯಗಳಿಂದ ಭಾರತ ಎಂದೋ ಮುಂದೆ ಸರಿದಾಗಿದೆ.


ಪಾಕಿಸ್ಥಾನವನ್ನು ಪ್ರೀತಿಸುವವರು ಭಾರತದಲ್ಲಿ ಯಾವ ಕೊರತೆ ಕಂಡಿದ್ದಾರೆ ಎಂದು ಚಿಂತಿಸುವ ಅಗತ್ಯವೇ ಇಲ್ಲ. ಭಾರತ ನೆತ್ತಿಯ ಮೇಲಿನ ಸೂರ್ಯ. ಇದು ಇಲ್ಲಿನ ಲಭ್ಯ ತಂತ್ರಜ್ಞಾನದಿಂದಲೂ, ಸ್ಟಾರ್ಟ್‌ಅಪ್‌ಗಳಲ್ಲಿ ಹೆಚ್ಚಿನ ತೊಡಗುವಿಕೆಯಿಂದಲೂ, ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಾಗಿಯಾಗುವ ರೀತಿಯಿಂದಲೂ ವೇದ್ಯವಾಗುತ್ತದೆ. ಭಾರತದ ಪರವಾದ ಮತ್ತು ಭಾರತದ್ದಾದ ಧ್ವನಿಗಳು ಪ್ರಪಂಚದ ಪ್ರತಿಯೊಂದು ಭಾಗದಲ್ಲಿ ಗಟ್ಟಿಯಾಗಿಯೂ ಹೆಮ್ಮೆಯಿಂದಲೂ ಮೊಳಗುತ್ತಲಿರುವುದು ಇದೇ ಮೊದಲಿಗೆ ಎಂಬಂತೆ ಗೋಚರಿಸುತ್ತಲಿದೆ. ಇದು ನಿಶ್ಶಬ್ದವಾದ ವಿಕಸನವಲ್ಲ; ಇದು ಪರಾಕ್ರಮಶಾಲಿಯೂ ಉತ್ಸಾಹಭರಿತವೂ ಆಧ್ಯಾತ್ಮಿಕವೂ ಬೌದ್ಧಿಕವೂ ಆದ ವಿಕಸನವಾಗಿದೆ. ಇದು ಹೊಸದಾದ ಆತ್ಮವಿಶ್ವಾಸ; ಇಂದಿನ ದಿನಮಾನಗಳಲ್ಲಿ ಭಾರತವನ್ನು ತಡೆಯಬಲ್ಲ ಶಕ್ತಿ ಈ ಲೋಕದಲ್ಲಿಲ್ಲ.

ಕೃಷ್ಣಪ್ರಕಾಶ ಬೊಳುಂಬು

#ಭಾರತ #ಟ್ರಂಪ್  #ಪಾಕಿಸ್ಥಾನ

Saturday, June 21, 2025

ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು

ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು



ತುಳುನಾಡಿನ ಬಗೆಗಿನ  "ತುಳುನಾಡು"  ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾರೆ:

"ಮುಳಿಯ ತಿಮ್ಮಪ್ಪಯ್ಯನವರು ಹೇಳಿದಂತೆ ಕಾಸರಗೋಡು ತಾಲೂಕಿನ ಚಂದ್ರಗಿರಿ ಹೊಳೆಯಿಂದ ಬಡಗಣ ಭಾಗದಲ್ಲಿ (ಕುಂಬಳೆ ಸೀಮೆ) ಹಿಂದಿನಿಂದ ಇಂದಿನವರೆಗೆ ಒಂದೇ ಒಂದು ಮಲೆಯಾಳ ಸಾಹಿತ್ಯ ಗ್ರಂಥವಾಗಲಿ, ಮಲೆಯಾಳ ಶಾಸನವಾಗಲಿ ತಲೆದೋರಿದಂತೆ ಕಂಡುಬರುವುದಿಲ್ಲ. ಬದಲಾಗಿ ಕನ್ನಡ ಯಕ್ಷಗಾನ ಪ್ರಬಂಧಗಳೇ ಮೊದಲಾದ ಉತ್ತಮ ಸಾಹಿತ್ಯ ಗ್ರಂಥಗಳೂ ಹಲವಾರು ಕನ್ನಡ ಶಾಸನಗಳೂ ಉದಯಿಸಿದುದು ಕಂಡುಬರುತ್ತದೆ."

ಕೃಷ್ಣಪ್ರಕಾಶ ಬೊಳುಂಬು

#ಕಾಸರಗೋಡು

Saturday, June 7, 2025

ತಮಿಳಿನಿಂದ ಕನ್ನಡ ಎನ್ನುವ ಅಂಧಾಭಿಮಾನಿಗಳು

 ತಮಿಳಿನಿಂದ ಕನ್ನಡ ಎನ್ನುವ ಅಂಧಾಭಿಮಾನಿಗಳು ತಮಿಳು ಎಲ್ಲಿಂದ ಸೇರಿಕೊಳ್ಳುತ್ತದೆಂದು ಗಮನಿಸಬೇಕು.


Monday, May 19, 2025

ಗುಳ್ಳೆನರಿಗಳು

ಗುಳ್ಳೆನರಿಗಳಾದ ಶಶಿ ತರೂರ್ ಮತ್ತು ಜೋನ್ ಬ್ರಿಟಾಸ್ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಲು ಹೊರದೇಶಗಳಿಗೆ ಕಳುಹಿಸುವ ನಿಯೋಗದ ಮುಖ್ಯ ಸದಸ್ಯರು! ಜೊತೆಗೆ ಅಸಾದುದಿನ್ ಒವೈಸಿ!! 

#ಗುಳ್ಳೆನರಿ

ಕೃಷ್ಣಪ್ರಕಾಶ ಬೊಳುಂಬು


Thursday, May 15, 2025

How to verify your architect?

Not everyone who calls himself an “Architect” is an architect. That is why it is important to verify your architect. The process to verify your architect is very simple.  It is as follows:

1Go to https://www.coa.gov.in/ver_arch.php?lang=1

2.Type in the CA Reg. No. in the box shown and enter captcha details.

3.  The format for entering Reg. No. is CA/XXXX/XXXXX wherein XXXX is the year of registration and XXXXX is the registration number.

4. Look for the picture below for easy understanding.

#architect

ಕೃಷ್ಣಪ್ರಕಾಶ ಬೊಳುಂಬು

Sunday, May 4, 2025

Essence of Nationalism


Nationalism should be that which allows you to express yourself. One need not forego of one's identity in the name of nationalism. One's true identity is based on regional cultures. In fact, one has to recognize the true identity of oneself and then he will be able to evolve out of it to accept the larger nationalist identity. In that sense, Hindi cannot be the national language the way it is being propagated right now. To be able to make Hindi the national language, the essence of Indic language Base needs to be recognized. Three Language Policy is a good initiative in that sense and an effective way to propagate it would be to assign one more language in addition to the existing state languages. Then nobody should feel the imposition of Hindi over regional languages. 

In that sense, if someone is a nationalist, he can also demand for a Kannada song in a limited atmosphere where the audience is Kannadigas by and large. To identify oneself with the regional culture should not be a crime. It would be a broad gesture to learn the regional language is spite of getting the best of offers. People have always accepted "outsiders" like PBS, SPB, Chitra, et al and they would have sung a Kannada song even before you would have made a demand for it.  


#Nationalism 

ಕೃಷ್ಣಪ್ರಕಾಶ ಬೊಳುಂಬು


ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...