ಜೀವವಾಹ
ಹಗಲಿರುಳು ಎಡೆಬಿಡದೆ
ನನ್ನೊಳಗೆ ನನ್ನಂತೆ
ಹರಿವ ಜೀವದ ವಾಹ ನೀನಲ್ಲವೇ
ಮಣ್ಣ ಕಣ-ಕಣದಿಂದ
ಸ್ಫುರಣಗೊಳೆ ಭವವಾಗಿ
ಅರಳ್ವ ಜೀವದ ವಾಹ ನೀನಲ್ಲವೇ
ಅಳವಿರದಾ ಕಾಶದಿಂದ
ಹರಿವ ಬಲ್ಝರಿಯಂತೆ
ಸುರಿವ ಜೀವದ ವಾಹ ನೀನಲ್ಲವೇ
ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟನೀಯುವ ವಾಹ ನೀನಲ್ಲವೇ
ಚಣಚಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನಲ್ಲವೇ
Monday, August 26, 2013
ಎಲ್ಲೆ
ಎಲ್ಲೆ ಮೀರಿದ ಕ್ಷಣವ
ನಾನರಿಯದಾದೆನೇಕೋ
ಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿ
ಎರಗಿದುವು ಸಿಡಿಲುಗಳು
ನಡುಗಿಸುವ ಗುಡುಗಿನ ತೆರದೆ
ಸುಟ್ಟು ಕರಟಿದ ಒಡಲ ಅರಿಯದಾದೆನು
ದಟ್ಟ ಕಾಡಿನ ನಡುವೆ
ಚಿಗಿತ ಮೊಲ್ಲೆ ಮೊಗ್ಗುಗಳ
ನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನು
ಉತ್ತುಂಗದುತ್ಕಟತೆಯಲಿ
ಜಗವ ಮರೆತಿರುವಾಗ
ಕಳೆದುಹೋದುದನೇಕೋ ತಿಳಿಯದಾದೆನು
ನಾನರಿಯದಾದೆನೇಕೋ
ಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿ
ಎರಗಿದುವು ಸಿಡಿಲುಗಳು
ನಡುಗಿಸುವ ಗುಡುಗಿನ ತೆರದೆ
ಸುಟ್ಟು ಕರಟಿದ ಒಡಲ ಅರಿಯದಾದೆನು
ದಟ್ಟ ಕಾಡಿನ ನಡುವೆ
ಚಿಗಿತ ಮೊಲ್ಲೆ ಮೊಗ್ಗುಗಳ
ನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನು
ಉತ್ತುಂಗದುತ್ಕಟತೆಯಲಿ
ಜಗವ ಮರೆತಿರುವಾಗ
ಕಳೆದುಹೋದುದನೇಕೋ ತಿಳಿಯದಾದೆನು
Tuesday, August 13, 2013
ತಿರುಗಿನೋಡಿದ ಮೋರೆ
ತಿರುಗಿನೋಡಿದ ಮೋರೆ ಮರೆಯಾಗಿ ಹೋಯ್ತೇಕೆ
ತಿರುಗೆ ತಿರುತಿರುಗಿ ನೋಡದೇಕೆ
ಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು
ತನ್ನ ಮೆಯ್ಯ ಮಾಟವನ್ನು ತೋರದೇಕೆ
ಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳು
ತಂತಮ್ಮ ಗಮ್ಯಗಳ ಸೇರವೇಕೆ
ಕೊನೆಯ ಕೊಳ್ಳುವನ್ನಕ ಇಡಿದಿಡಿವ ಚಾಣಗಳು
ಅರೆಯಿಂದ ರೂಪೊಂದ ಕಡೆಯವೇಕೆ
ಮತ್ತೆ ಒರೆಯುವ ಮುನ್ನ ತಡವರಿಸಿ ಮಾತುಗಳು
ಪಿಸಿಯುತ್ತ ತಾವ್ತಾವೇ ಉಲಿಯವೇಕೆ
ಮತ್ತೆ ಕರೆಯುವ ಮುನ್ನ ಕರೆದಿದ್ದ ಧ್ವನಿಗಳು
ತಂತಮ್ಮ ಜಾಡುಗಳ ತೋರವೇಕೆ
ತಿರುಗೆ ತಿರುತಿರುಗಿ ನೋಡದೇಕೆ
ಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು
ತನ್ನ ಮೆಯ್ಯ ಮಾಟವನ್ನು ತೋರದೇಕೆ
ಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳು
ತಂತಮ್ಮ ಗಮ್ಯಗಳ ಸೇರವೇಕೆ
ಕೊನೆಯ ಕೊಳ್ಳುವನ್ನಕ ಇಡಿದಿಡಿವ ಚಾಣಗಳು
ಅರೆಯಿಂದ ರೂಪೊಂದ ಕಡೆಯವೇಕೆ
ಮತ್ತೆ ಒರೆಯುವ ಮುನ್ನ ತಡವರಿಸಿ ಮಾತುಗಳು
ಪಿಸಿಯುತ್ತ ತಾವ್ತಾವೇ ಉಲಿಯವೇಕೆ
ಮತ್ತೆ ಕರೆಯುವ ಮುನ್ನ ಕರೆದಿದ್ದ ಧ್ವನಿಗಳು
ತಂತಮ್ಮ ಜಾಡುಗಳ ತೋರವೇಕೆ
ಕೊಡು ಗುರುವೇ ಹೊಸ ಕನಸುಗಳನ್ನು
'ಪಿಟಿ ದ ನೇಷನ್' ಎಂಬ ಖಲೀಲ್ ಗಿಬ್ರಾನ್ ಕವಿತೆಯ ಛಾಯಾನುವಾದವನ್ನು ಇಲ್ಲಿ ಓದಬಹುದು. ಮೂಲ ಕವಿತೆಯನ್ನೂ ಓದಿರಿ. ~ ಕೆ.ಪಿ. ಬೊಳುಂಬು
ಕೊಡು ಗುರುವೇ ಹೊಸ ಕನಸುಗಳನ್ನು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು
ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ ತಂತ್ರದಿಂದಲೇ ಆಳ್ವವವರನ್ನು
ಆದರದಿಂದಲಿ ಬರಮಾಡವರನ್ನು ನಾಡನ್ನು ಕಾಯ್ವವವರನ್ನೆತ್ತರಿಸು
ಓಲಗದೊಂದಿಗೆ ಬರುವಂಥವರನ್ನು ನಾಡಿನ ಮಕ್ಕಳ ಏಳ್ಗೆಗಾಗೆಚ್ಚರಿಸು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು
ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು
ಕೊಡು ಗುರುವೇ ಹೊಸ ನೇತಾರರ್ಕಳನ್ನು
ನೇರ ತಂತ್ರದಿಂದಲೇ ಆಳ್ವವವರನ್ನು
ಆದರದಿಂದಲಿ ಬರಮಾಡವರನ್ನು ನಾಡನ್ನು ಕಾಯ್ವವವರನ್ನೆತ್ತರಿಸು
ಓಲಗದೊಂದಿಗೆ ಬರುವಂಥವರನ್ನು ನಾಡಿನ ಮಕ್ಕಳ ಏಳ್ಗೆಗಾಗೆಚ್ಚರಿಸು
ಕೊಡು ಗುರುವೇ ಹೊಸ ಗುರುವರ್ಯಕ್ಕಳ
ನಾಡಿನೊಳ್ಳಿತಿಗಾಗಿ ಹಾರಯಿಸುವವರನ್ನು
ಕೊಡು ಗುರುವೇ ಹೊಸ ಕನಸುಗಳನ್ನು
ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ
ಕನಸು
ಬತ್ತಿಹೋದ ಸಾರದಿಂದ
ಹೊಸೆದು ಹೊಸದೊಂದನು
ಹೊಸೆದು ಹೊಸದೊಂದನು
ಹೊತ್ತಿ ಉರಿವ ದೀಪವಾಗಿ ನನ್ನಲೀಗ ಬೆಳಗಿಸು || ಪ ||
ಒಮ್ಮೆ ತೊಟ್ಟ ಬಾಣವನ್ನು
ಮರಳಿ ತೊಡದೆ ಇರುವಂಥ
ಮಹಾ ಶಪಥವೊಂದನು ನನ್ನಲೀಗ ಮಾಡಿಸು || ಅ. ಪ ||
ಅರಳಿದಂಥ ಮಲ್ಲಿಗೆ
ಹಳದಿ ಎರವಂತಿಗೆ
ಹೂಗಳಿಂದು ಕಾಣಿಕೆ ನಿನ್ನದೊಂದು ಸೇವೆಗೆ || ೧ ||
ನಿನ್ನ ಹೂಬಾಣಗಳು
ತುಂಟ ಕುಡಿನೋಟಗಳು
ಮಾಸದಂಥ ಗಾಯವ ನನ್ನಲಿಂದು ಮಾಡಿವೆ || ೨ ||
ನಿನ್ನ ಸವಿಮಾತುಗಳು
ನೆನಸದಂಥ ನೆನಕೆಗಳು
ಕಾಣದಂಥ ಕನಸನು ಕಾಣುವಂತೆ ಮಾಡಿವೆ || ೩ ||
ಕೋಪ-ತಾಪ
ನಿನ್ನನಿಂದು ದ್ವೇಷಿಸಲಾರೆ,
ನಿನ್ನನಿಂದು ಸೈರಿಸಲಾರೆ.
ನಿನ್ನನಿಂದು ತಾಳಲಾರೆ,
ನಿನ್ನನಿಂದು ಅಗಲಿರಲಾರೆ.
ಕಟುವಾದ ಮಾತುಗಳು ,
ನಿನ್ನ ಕಡೆಗಣ್ಣ ನೋಟಗಳು;
ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ?
ನಾನಿಂದು ತಾಳದಾದೆ,
ಕೋಪಿಸುತ್ತ ಇದ್ದಿರದಾದೆ;
ಜೇನಿನೊಳದ್ದಿದ ಆ ಕೆಂದುಟಿ ಮತ್ತೆ ಎನ್ನ ಕೋಪವ ಕರಗಿಸದೇ?
ನಿನ್ನ ಕಡೆಗಣ್ಣ ನೋಟಗಳು;
ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ?
ನಾನಿಂದು ತಾಳದಾದೆ,
ಕೋಪಿಸುತ್ತ ಇದ್ದಿರದಾದೆ;
ಜೇನಿನೊಳದ್ದಿದ ಆ ಕೆಂದುಟಿ ಮತ್ತೆ ಎನ್ನ ಕೋಪವ ಕರಗಿಸದೇ?
ಕಾರಣವ ತಿಳಿಯದಾದೆ,
ನಿನ್ನ ಪೂರ್ತಿ ಅರಿಯದಾದೆ;
ಮುಚ್ಚಿಟ್ಟ ಭಾವನೆ ಮೊಗದಲಿ ಮಡುವನು ಕಟ್ಟಿಸದೇ?
ನೀನೇಕೆ ಮೌನವಾದೆ,
ಮಾತೊಂದ ನುಡಿಯದಾದೆ;
ಎದೆಯೊಳಗಿನ ಮಾತುಗಳನ್ನು ಬಿಚ್ಚಿಡದೆ ಉಳಿದೆ?
ಹೇಳಿಬಿಡು ಕಾರಣವನ್ನು,
ಕಟ್ಟೆಯೊಡೆದು ಹರಿಯಲಿ ಮಾತು;
ನೀನೊರಲಿದ ಅಣಿಮುತ್ತುಗಳೆನಗೆ ಮುಗುಳ್ನಗೆಯನ್ನು ತರವೇ?
ಯುದ್ಧವೀಗ ಏತಕೆ ಬೇಕು,
ಮೃದುಲ ಸ್ಪರ್ಶವೊಂದೇ ಸಾಕು;
ಎಷ್ಟಾದರೂ ಆಗಲಿ ಕೊನೆಗೆ ಹನಿ ಪ್ರೇಮವ ಚಿಮ್ಮಿಸದೇ?
ನಿನ್ನನಿಂದು ದ್ವೇಷಿಸಲಾರೆ,
ನಿನ್ನನಿಂದು ಸೈರಿಸಲಾರೆ.
ನಿನ್ನನಿಂದು ತಾಳಲಾರೆ,
ನಿನ್ನನಿಂದು ಅಗಲಿರಲಾರೆ.
ಶೂನ್ಯ
ನೀನಿರದ ಈ ರಾತ್ರಿ
ಮೇಲೆಲ್ಲ ಶೂನ್ಯವಾಗಿ
ಬಾನ ನಕ್ಷತ್ರಗಳೂ ಕಾಣದಿಹವು
ಕದವ ತೆರೆದಿಟ್ಟಿಂದು
ನಿನ್ನ ಕಾಯುತ್ತಲಿರುವೆ
ಶೂನ್ಯ ತಿಮಿರದೊಳು ಬಾನ ನಕ್ಷತ್ರಗಳೂ ಕಾಣದಿಹವು
ದಾರಿ ಕಾಯುತ್ತ ನಿಂತು
ಹಗಲಿರುಳು ನೆನಸುತ್ತ
ನಿದ್ದೆಗೆಟ್ಟಿರಲು ಬಾನ ನಕ್ಷತ್ರಗಳೂ ಕಾಣದಿಹವು
ಕಡಲ ಗರ್ಜನೆ ಕೇಳಿ
ನಡುನಡುಗಿ ನಿಂತಿರುವೆ
ಒಡಲ ಬೇಗೆಯಲಿ ಬಾನ ನಕ್ಷತ್ರಗಳೂ ಕಾಣದಿಹವು
ಬಾನ ಮೊರೆತವ ಕೇಳಿ
ನರನರಳಿ ಮುಲುಗಿರುವೆ
ಎದೆಯ ಕೊರೆತಕೆ ಬಾನ ನಕ್ಷತ್ರಗಳೂ ಕಾಣದಿಹವು
ಕೊನೆಯಿರದ ಕತ್ತಲೊಳು
ಬೆಳಕ ಕಾಣುವ ಪರಿಯ
ಅರಿಯೆ ನಾನೆನಲು ಬಾನ ನಕ್ಷತ್ರಗಳೂ ಕಾಣದಿಹವು
[soundcloud url="https://api.soundcloud.com/tracks/86309646" width="100%" height="166" iframe="true" /]
Subscribe to:
Posts (Atom)
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...