Tuesday, September 30, 2025

ಕರ್ನಾಟಕದ ಜಾತಿಗಣತಿ 2025: ಗಮನಿಸಬೇಕಾದ ಅಂಶಗಳು

 ಕರ್ನಾಟಕದ ಜಾತಿಗಣತಿ 2025: ಗಮನಿಸಬೇಕಾದ ಅಂಶಗಳು


* ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಅವರನ್ನು ಮನವೊಲಿಸಬಾರದು ಎಂದು ಜನರಿಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳುತ್ತದೆ. [1]


* ಪ್ರಸ್ತುತ ಜಾರಿಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಎಂದು ಕರೆಯಿಸಿಕೊಂಡ ಜಾತಿ ಗಣತಿಯನ್ನು ನಿಷೇಧಿಸಲು ಕರ್ನಾಟಕದ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಆದರೆ ನ್ಯಾಯಾಲಯದ ಆದೇಶದ ಪ್ರಕಾರ ಕೆಲವು ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅದರ ಪ್ರಕಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು "ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ ಮತ್ತು ಯಾವುದೇ ವ್ಯಕ್ತಿಯು ಕೋರಿದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಬಾಧ್ಯತೆಯಿಲ್ಲ" ಎಂದು ಜನರಿಗೆ ಸ್ಪಷ್ಟವಾಗಿ ತಿಳಿಯಪಡಿಸುವ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಬೇಕು.


* ಸಮೀಕ್ಷೆಯಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಬಾಧ್ಯತೆ ಗಣತಿದಾರರು ಜನರಿಗೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳುವ ಮೊದಲು, ಮಿತಿ ಹಂತದಲ್ಲಿ ಸಮೀಕ್ಷೆಯಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವ ಬಾಧ್ಯತೆಯಿಲ್ಲ ಎಂದು ಆಯೋಗವು ಎಲ್ಲಾ ಜನರಿಗೆ ತಿಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.


* ಸಮೀಕ್ಷೆಯಲ್ಲಿ ಭಾಗವಹಿಸುವವರು ವಿವರಗಳನ್ನು ಒದಗಿಸಲು ನಿರಾಕರಿಸಿದರೆ ಅವರನ್ನು ಮನವೊಲಿಸುವ ಅಥವಾ ಅನುನಯಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಅನುಮತಿ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


* ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ರಾಜ್ಯ ಸರ್ಕಾರ ಮತ್ತು ಆಯೋಗವು ಅಂತಹ ಸಮೀಕ್ಷೆಯನ್ನು ನಡೆಸುವ ಅಧಿಕಾರವನ್ನು ಪ್ರಶ್ನಿಸಿ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಮಹಾಸಭಾದ ಹಲವಾರು ಸದಸ್ಯರು ಮತ್ತು ಇತರ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳ ಗುಂಪಿನ ಮೇಲೆ ಮಧ್ಯಂತರ ಆದೇಶವನ್ನು ಹೊರಡಿಸಿದೆ.


* ಸಂಗ್ರಹಿಸಿದ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗಿದೆಯೆಂದೂ ಆಯೋಗವನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಸೇರಿದಂತೆ ಯಾವುದೇ ವ್ಯಕ್ತಿಗೆ ಪ್ರವೇಶಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳನ್ನು ಬಹಿರಂಗಪಡಿಸುವ ಒಂದು ಕೆಲಸದ ದಿನದೊಳಗೆ ಅಫಿಡವಿಟ್ ಸಲ್ಲಿಸಲು ನ್ಯಾಯಪೀಠ ಆಯೋಗಕ್ಕೆ ನಿರ್ದೇಶನ ನೀಡಿತು.


ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬ ನೆಪದಲ್ಲಿ ಜಾತಿ ಜನಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಕಾನೂನಿನಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರು ಗುರುತಿಸಿದ್ದಾರೆ. ಅದಲ್ಲದೆ ಆಧಾರ್ ಮತ್ತು ಇತರ ಮಾಹಿತಿಗಳನ್ನು ರಾಜ್ಯ ಸರಕಾರ ಸಂಗ್ರಹಿಸುವುದು ಜನರ ಗೌಪ್ಯತೆಯ ಹಕ್ಕಿಗೆ ವಿರುದ್ಧವಾಗಿದೆ ಎಂಬುದು ಕೂಡ ಅರ್ಜಿದಾರರ ಅಹವಾಲಾಗಿತ್ತು.


* ಈ ಹಿಂದಣ ವಿಚಾರಣೆಯ ಸಂದರ್ಭದಲ್ಲಿ "ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಸಂಗ್ರಹಿಸಿದ ಡೇಟಾವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಆಯೋಗ ಕೈಗೊಳ್ಳಲಿದೆ" ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನ್ಯಾಯಾಲಯಕ್ಕೆ ತಿಳಿಯಪಡಿಸಿತ್ತು.


ತಿಳಿದಿರಲಿ:

ಭಾರತದ ಸಂವಿಧಾನದ ಪ್ರಕಾರ ಜಾತಿ ಮಾಹಿತಿಯನ್ನೊಳಗೊಂಡ ಜನಗಣತಿಯನ್ನು ನಡೆಸುವ ಪ್ರಾಥಮಿಕ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. 246 ನೇ ವಿಧಿ ಮತ್ತು ಏಳನೇ ಷೆಡ್ಯೂಲ್ "ಜನಗಣತಿ ಮತ್ತು ಅಂಕಿಅಂಶಗಳನ್ನು" ಯೂನಿಯನ್ ಪಟ್ಟಿಯಲ್ಲಿ ವರ್ಗೀಕರಿಸುತ್ತದೆ ಮತ್ತು ಸಂಸತ್ತಿಗೆ ಅದರ ಮೇಲೆ ಕಾನೂನು ರಚಿಸಲು ವಿಶೇಷ ಅಧಿಕಾರವನ್ನು ನೀಡುತ್ತದೆ. ರಾಜ್ಯಗಳು ರಾಜ್ಯ ಪಟ್ಟಿಯ ಅಡಿಯಲ್ಲಿ ಸಾಮಾಜಿಕ-ಆರ್ಥಿಕ ಮಾಹಿತಿಗಳನ್ನು ಸಂಗ್ರಹಿಸಬಹುದಾಗಿದೆ. ಆದರೆ ಪೂರ್ಣ ಪ್ರಮಾಣದ ಜಾತಿ ಸಮೀಕ್ಷೆ ಕೇಂದ್ರ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಭಾರತದ ಸಂವಿಧಾನದ 246 ನೇ ವಿಧಿ ಹೀಗೆ ಸಾರುತ್ತದೆ:


"ಯೂನಿಯನ್  ಪಟ್ಟಿಯಲ್ಲಿ ನಮೂದಿಸಲಾದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲು ಸಂಸತ್ತು ವಿಶೇಷ ಅಧಿಕಾರವನ್ನು ಹೊಂದಿದೆ; ರಾಜ್ಯ ಪಟ್ಟಿಯಲ್ಲಿ ನಮೂದಿಸಲಾದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡಲು ರಾಜ್ಯದ ಶಾಸಕಾಂಗವು ವಿಶೇಷ ಅಧಿಕಾರವನ್ನು ಹೊಂದಿದೆ."


ಕರ್ನಾಟಕವು ಸಮಾಜ ಕಲ್ಯಾಣ ಅಥವಾ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸಬಹುದಾದರೂ, ಕೇಂದ್ರ ಸರಕಾರದ ಅನುಮತಿಯಿಲ್ಲದೆ ಸಮಗ್ರ ಜಾತಿ ಜನಗಣತಿಯನ್ನು ನಡೆಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಕಾನೂನುಬದ್ಧವಾಗಿ ಪ್ರಶ್ನಿಸಲು ಅನುವು ಮಾಡಿಕೊಡುತ್ತದೆ.

Friday, September 26, 2025

ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು

 ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು 

ಅತ್ತ ಬಲಕ್ಕೂ ವಾಲದೆ ಇತ್ತ ಎಡಕ್ಕೂ ವಾಲದಿದ್ದ ಭೈರಪ್ಪನವರು ಎಡಪಂಥೀಯರಿಗೆ ಅಪಥ್ಯರಾಗಿಯೇ ಉಳಿದರು. ಕಾಲದಲ್ಲಿ ಸರಿದುಹೋದ ಘಟನೆಗಳ ವಾಸ್ತವಿಕ ಚಿತ್ರಣ ಆವರಣದೊಳಗೆ ಬಂದಿಯಾದ ಸತ್ಯಗಳ ಅನಾವರಣವೂ ಆದಾಗ ಹಿಂದು ಮೂಲಭೂತವಾದಿಯಂತೆ ಕಂಡವರು; ಸಾಂಪ್ರದಾಯಿಕ ಸಮಾಜದ ಅಹಿತ ಸತ್ಯಗಳ ಚಿತ್ರಣದ ಮೂಲಕ ಸಾಂಪ್ರದಾಯಿಕರಿಂದಲೂ ದೂರ ಉಳಿದರು. ಅದ್ಭುತ ಬರೆಹಗಾರರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಲಿದ್ದವರೊಬ್ಬರು ಭೈರಪ್ಪನವರಿಗೆ ಕಾದಂಬರಿ ಬರೆಯಲು ಗೊತ್ತಿಲ್ಲ ಎಂದು ಜರೆದಿದ್ದೂ ಉಂಟು. ಆದರೆ ತಮ್ಮ ಸತ್ಯಾನ್ವೇಷಣೆಯಲ್ಲಿ ತಾವು ಕಂಡುಕೊಂಡ ವಿಚಾರಗಳನ್ನು ವಿಶದಪಡಿಸಿದಾಗ ಆ ಅದ್ಭುತ ಬರೆಹಗಾರರಿಂದ ತಾರ್ಕಿಕ ಪ್ರತ್ಯುತ್ತರಗಳು ಬಂದ ಮಾಹಿತಿ ಇಂದಿನವರೆಗೆ ದೊರಕಲಿಲ್ಲ.


ಹೌದು—ಭೈರಪ್ಪ ಎಲ್ಲರೂ ಇಷ್ಟಪಡುವ ವ್ಯಕ್ತಿಯೇನೂ ಆಗಿರಲಿಲ್ಲ. ಆದರೆ ಅವರು ಎಲ್ಲರಿಗೂ ಇಷ್ಟವಾಗಬೇಕೆಂದು ಬದುಕಿದ ವ್ಯಕ್ತಿಯೂ ಆಗಿರಲಿಲ್ಲ. ಸಾಹಿತ್ಯದ ಉದ್ದೇಶ ಸಾಂತ್ವನ ನೀಡುವುದು ಮಾತ್ರವಲ್ಲ, ಸತ್ಯವನ್ನು ಬಹಿರಂಗಪಡಿಸುವುದು ಕೂಡ ಆಗಿರುತ್ತದೆ ಎಂಬುದನ್ನು ತಮ್ಮ ಜೀವನದುದ್ದಕ್ಕೂ ಸಾಬೀತುಪಡಿಸುತ್ತ ಬದುಕಿದವರು ಅವರು . ಇದೇ ಕಾರಣದಿಂದ ಭೈರಪ್ಪ ಎಂದಿಗೂ ಪ್ರಸಕ್ತರು.


~ಕೃಷ್ಣಪ್ರಕಾಶ ಬೊಳುಂಬು

எஸ். எல். பயிரப்ப (1931 – 2025): ஒரு அஞ்சலி

 இலக்கிய உலகம் ஒரு ஒளிரும் நட்சத்திரத்தை இழந்துவிட்டது. கன்னட இலக்கியத்தில் ஆன்மா தேடல், உண்மை தேடுதல் மற்றும் தத்துவ சிந்தனையின் அடையாளமாக நின்ற எஸ்.எல். பைரப்பா இப்போது இல்லை. அவரது காலம் கடந்துவிட்டாலும், அவரது பேனாவால் ஒளிரும் எண்ணங்கள் இன்னும் நம் மனதில் எதிரொலிக்கின்றன. இந்த அஞ்சலி அந்த மகத்தான மனிதரின் நினைவுகளுக்கு அர்ப்பணிக்கப்பட்டுள்ளது.

எஸ். எல். பயிரப்ப (1931 – 2025): ஒரு அஞ்சலி

2025 செப்டம்பர் 24 அன்று ஒரு மாபெரும் திறமை மறைந்தது. எஸ். எல். பயிரப்ப எம்மை விட்டுப் போய்விட்டார். கன்னட இலக்கியத்திற்கு அவர் ஒரு எழுத்தாளர் மட்டுமல்ல—ஒரு குரு, ஒரு சிந்தனையாளர், ஒரு சத்தியத் தேடுபவர்.

அவரது படைப்புகளுடன் வளர்ந்த எங்களுக்கு, பயிரப்ப ஒரு எழுத்தாளர் மட்டுமல்ல—வாழ்க்கையின் ஆழங்களில் எங்களை அழைத்துச் சென்ற ஒரு வழிகாட்டி. பர்வ வாசிக்கும் போது, புராணங்கள் வெறும் கதைகள் அல்ல, நம் சொந்தப் போராட்டங்களின் பிரதிபலிப்புகள் என்று அவர் கற்றுக் கொடுத்தார். ஆவரண எங்களை வரலாற்றின் மறைகளைக் களைந்து உண்மையை எதிர்கொள்ளச் செய்தது. ஒவ்வொரு நாவலிலும் அவர் எங்களை கேள்வி கேட்கவும், அசௌகரியமான சத்தியங்களைத் தைரியமாகச் சந்திக்கவும் வற்புறுத்தினார்.

அவரது மொழிக்குச் சடங்கு போன்ற ஒரு கம்பீரம் இருந்தது; சிந்தனைகளுக்கு ஒருபோதும் வணங்காத உறுதியும் இருந்தது. ஆனால் அதன் அடியில் மனிதர்களின் மீதான பரிவு, கருணை எப்போதும் ஓடியது. மனிதர்கள், குடும்பங்கள், நினைவும் மாற்றமும் இடையில் திணறும் பண்பாட்டுகள்—இவை அனைத்தும் அவரது எழுத்தின் மையமாக இருந்தன.

பத்மபூஷண், சாகித்ய அகாடமி புலமைப்பரிசில், சரஸ்வதி சம்மான் போன்ற பல விருதுகள் அவரை நாடி வந்தன. ஆனால், அவரது உண்மையான பரிசு வாசகர்களின் இதயங்களில் நிலைத்திருந்த அமைதியான பக்தியே.

இன்று நாம் துயரப்படுகிறோம்; அதே நேரத்தில் நன்றியும் செலுத்துகிறோம். ஏனெனில் பயிரப்பாவின் சொற்கள் இன்னும் ஒளிரும் விளக்குகள் போல நம்மை வழிநடத்துகின்றன, நம்மை கேள்வி கேட்க வைக்கின்றன. காலம் கடந்து மறையாத ஓசை இதுவே என்பதை நினைவுகூர்ந்து, பயிரப்பாவிற்கு எங்களின் அஞ்சலிகள். 🌹

ఎస్. ఎల్. భైరప్ప (1931 – 2025): ఒక నివాళి

 

సాహిత్య ప్రపంచం ఒక వెలుగు నక్షత్రాన్ని కోల్పోయింది. కన్నడ సాహిత్యంలో ఆత్మశోధనకు, సత్యాన్వేషణకు, తత్త్వ చింతనకు ప్రతీకగా నిలిచిన ఎస్. ఎల్. భైరప్ప ఇక లేరు. ఆయన కాలం ముగిసినా, ఆయన కలం వెలిగించిన ఆలోచనలు ఇంకా మన మనసుల్లో ప్రతిధ్వనిస్తూనే ఉంటాయి. ఈ నివాళి, ఆ మహానుభావుడి స్మృతులకు అంకితం.

ఎస్. ఎల్. భైరప్ప (1931 – 2025): ఒక నివాళి

2025 సెప్టెంబర్ 24న ఒక మహత్తర ప్రతిభ అస్తమించింది. ఎస్. ఎల్. భైరప్ప ఇకలేరు. కన్నడ సాహిత్యానికి ఆయన ఒక రచయిత మాత్రమే కాదు—ఒక గురువు, ఒక తత్త్వవేత్త, ఒక సత్యాన్వేషి కూడా.

ఆయన రచనలతో పెరిగినవారికి భైరప్ప కేవలం రచయితగానే కాక, జీవితపు లోతుల్లోకి నడిపిన ఒక గురువుగానూ నిలిచారు. పర్వ చదువుతున్నప్పుడు మహాభారతం కేవలం ఇతిహాసం కాదని, మన స్వంత పోరాటాల ప్రతిబింబమని ఆయన మాకు నేర్పించారు. ఆవరణ చరిత్రపు పొరల వెనుక దాగి ఉన్న నిజాలను ఎదుర్కొనమని ప్రేరేపించింది. ప్రతి నవల మమ్మల్ని ప్రశ్నించమని, అసౌకర్యమైన సత్యాలను ధైర్యంగా ఎదుర్కోవాలని కోరింది.

ఆయన భాషకు ఒక ఆచరణాత్మక గంభీరత ఉండేది; ఆలోచనలకు మాత్రం ఎప్పటికీ వంగని దృఢత్వం. కానీ ఆ గంభీరత లోపల ఎల్లప్పుడూ మనుషుల పట్ల కరుణ, ప్రేమ ప్రవహించేది. మనుషులు, కుటుంబాలు, జ్ఞాపకాలు మరియు మార్పు మధ్య తడబడే సంస్కృతులు—ఇవి ఆయన రచనల కేంద్రముగా నిలిచాయి.

పద్మభూషణ్, సాహిత్య అకాడమీ ఫెలోషిప్, సరస్వతి సమ్మాన్ వంటి అనేక గౌరవాలు ఆయనను అనుసరించాయి. కానీ ఆయనకు నిజమైన బహుమతి, పాఠకుల హృదయాల్లో స్థిరంగా నిలిచిన నిశ్శబ్దమైన అభిమానమే.

ఈరోజు మనం దుఃఖిస్తున్నాం; కానీ కృతజ్ఞతను కూడా తెలియజేస్తున్నాం. ఎందుకంటే భైరప్ప వాక్యాలు ఇంకా వెలుగుల దీపాల్లా మనల్ని నడిపిస్తున్నాయి, మనల్ని ప్రశ్నిస్తున్నాయి. ప్రళయకాలం వరకు మాయమయ్యే స్వరం కాదు ఇది అని గుర్తుచేసుకుంటూ, భైరప్పకు నివాళులు అర్పిద్దాం. 🌹

Thursday, September 25, 2025

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

 ಸಾಹಿತ್ಯ ಲೋಕವು ಒಂದು ಹೊಳೆಯುವ ನಕ್ಷತ್ರವನ್ನು ಕಳೆದುಕೊಂಡಿದೆ. ಕನ್ನಡ ಸಾಹಿತ್ಯದಲ್ಲಿ ಆತ್ಮಶೋಧನೆ, ಸತ್ಯಾನ್ವೇಷಣೆ ಮತ್ತು ತಾತ್ವಿಕ ಚಿಂತನೆಯ ಸಂಕೇತವಾಗಿ ನಿಂತಿದ್ದ ಎಸ್.ಎಲ್. ಭೈರಪ್ಪ ಇನ್ನಿಲ್ಲ. ಅವರ ಕಾಲ ಕಳೆದರೂ, ಅವರ ಲೇಖನಿಯಿಂದ ಬೆಳಗಿದ ಆಲೋಚನೆಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲಿವೆ. ಈ ಮೂಲಕ ಎಸ್.ಎಲ್.ಭೈರಪ್ಪನವರಿಗೆ ಅಂತಿಮ ನಮನಗಳನ್ನು ಸಲ್ಲಿಸುವುದಾಗಿದೆ.

ಎಸ್. ಎಲ್. ಭೈರಪ್ಪ (1931 – 2025): ಅಂತಿಮ ನಮನಗಳು

ಸೆಪ್ಟೆಂಬರ್ 24, 2025 ರಂದು ಎಸ್. ಎಲ್. ಭೈರಪ್ಪ ಎಂಬ ದೈತ್ಯ ಪ್ರತಿಭೆಯೊಂದು ನಮ್ಮನ್ನಗಲಿತು. ಬರೆಹಗಾರನಿಗಿಂತ ಹೆಚ್ಚಿಗೆ ಗುರುವಾಗಿಯೂ, ಚಿಂತಕನಾಗಿಯೂ  ನಿರಂತರ ಸತ್ಯಾನ್ವೇಷಕರೂ ಅವರು ಛಾಪುಗಳನ್ನೊತ್ತಿದವರೆಂದು ನಾವು ನೆನಪಿಸಿಕೊಳ್ಳುತ್ತೇವೆ.

ಭೈರಪ್ಪನವರ ಕೃತಿಗಳೊಂದಿಗೆ ಬೆಳೆದವರಿಗೆ ಅವರು ಬರಿಯ ಬರೆಹಗಾರರಾಗಿರಲಿಲ್ಲ. ಅವರು ಜೀವನದ ಉದ್ದ ಅಗಲಗಳನ್ನು ಕಣ್ಣ ಮುಂದೆ ತೆರೆದಿಟ್ಟ ಪಥಪ್ರದರ್ಶಕನಾದ ಗುರುವೂ ಅವರಾಗಿದ್ದರು. "ಪರ್ವ" ಕೃತಿಯ ಓದಿನೊಂದಿಗೆ ಇತಿಹಾಸಗಳು ಬರಿಯ ಕಟ್ಟುಕಥೆಗಳಲ್ಲ, ಜೀವನದ ಹೋರಾಟಗಳ ಪ್ರತಿಬಿಂಬಗಳು ಅವು ಎಂದು ಭೈರಪ್ಪ ನಮಗೆ ತೋರಿಸಿಕೊಟ್ತರು. "ಆವರಣ", "ಸಾರ್ಥ" ಕೃತಿಗಳು ಸರಿದುಹೋದ ಚರಿತ್ರೆಯ ವಾಸ್ತವಿಕ ಚಿತ್ರಣಗಳನ್ನು ತೆರೆದಿಟ್ಟಿತು. ಪ್ರತಿಯೊಂದು ಕಾದಂಬರಿಯಲ್ಲಿಯೂ ಅವರು ನಮಗೆ ಪ್ರಶ್ನಿಸಲಿಕ್ಕೆ ಮತ್ತು ಅಹಿತಕರ ಸತ್ಯಗಳನ್ನು ಧೈರ್ಯದಿಂದ ಎದುರಿಸಲಿಕ್ಕೆ  ಹೇಳಿಕೊಟ್ಟರು.

ಅವರ ಭಾಷೆ ಗಂಭೀರವಾಗಿತ್ತು ಮತ್ತು ವಿಮರ್ಶೆಗಳಿಗೆ ಬಾಗದ ದೃಢ ನಿಲುವುಗಳು ಅವರವಾಗಿದ್ದುವು. ಆದರೆ ಅವೆಲ್ಲದರ ಅಂತರಾಳದಲ್ಲಿ ಸದಾ ಸ್ಫುರಿಸುವ ಮಾನವಪ್ರೇಮ ನೆಲೆಗೊಂಡಿತ್ತು. ಮನುಷ್ಯರು ಮತ್ತು ಅವರ ಕುಟುಂಬಗಳು, ನೆನಪುಗಳು ಮತ್ತು ಬದಲಾವಣೆಗಳ ನಡುವೆ ಸಿಲುಕಿ ನರಳುವ ಸ್ಥಳೀಯ ಸಂಸ್ಕೃತಿಗಳು ಅವರ ಕೃತಿಗಳ ಕೇಂದ್ರಬಿಂದುಗಳು.

ಭೈರಪ್ಪನವರು ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಪಡೆದರು. ಆದರೆ ಅವರಿಗೆ ಸಂದ ನಿಜವಾದ ಪ್ರಶಸ್ತಿ ಅವರ ಓದುಗರ ಹೃದಯದ ಮೌನವಾಗಿ ನೆಲೆಸಿದ ಆರಾಧನೆಯ ಭಾವನೆ.

ನಮಗಿಂದು ದುಃಖವಿದೆ; ಅದರೊಂದಿಗೆ ನಾವು ಭೈರಪ್ಪನವರಿಗೆ ಕೃತಜ್ಞತೆಗಳನ್ನೂ ಸಲ್ಲಿಸುತ್ತೇವೆ. ಏಕೆಂದರೆ ಭೈರಪ್ಪನವರ ಮಾತುಗಳು, ಎಂದಿಗೂ ಬೆಳಗುವ ನಂದಾದೀಪಗಳಾಗಿ ನಮಗೆ ಮಾರ್ಗದರ್ಶನ ನೀಡುತ್ತಲಿರಬಲ್ಲುವು ಮತ್ತು ಪ್ರಶ್ನಿಸಲು ಪ್ರೇರಣೆ ನೀಡುತ್ತಲಿರಬಲ್ಲುವು. ಇದು ಯುಗಗಳ ಅಂತ್ಯಕಾಲದವರೆಗೆ ಮಸುಕಾಗದ ಧ್ವನಿಯೆಂದು ನೆನಪಿಸಿಕೊಳ್ಳುತ್ತ ಭೈರಪ್ಪನವರಿಗೆ ಅಂತಿಮ ನಮನಗಳು.

 ಕೃಷ್ಣಪ್ರಕಾಶ ಬೊಳುಂಬು



Tuesday, September 23, 2025

ಇದು ಕಾಸರಗೋಡಿನಲ್ಲಿ ಆದ ಘಟನೆಯೇ?

 ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆಯೊಂದನ್ನು ಕಟ್ಟಿ ಕ್ಲಾಸ್ ಮಾಡುತ್ತಿರುವ ಚಿತ್ರವೊಂದು ಕಾಸರಗೋಡಿನಲ್ಲಿ ಆದ ಘಟನೆ ಎಂಬಂತೆ ಕನ್ನಡ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಲಿದೆ. ಇದು ಕಾಸರಗೋಡಿನಲ್ಲಿ ಆದುದು ನಿಜವೇ? ಈಚೆಗೆ ಕನ್ನಡ ಪತ್ರಿಕೆಗಳು ಕೇರಳದ ಯಾವುದೇ ಸುದ್ದಿಗೆ ಕಾಸರಗೋಡು ಎಂದು ಬರೆಯುತ್ತಿವೆ. ಕೇರಳದ ಅನ್ಯ ಸ್ಥಾನದಲ್ಲಿ ನಡೆದ ಘಟನೆಗೆ ಕಾಸರಗೋಡು ಎಂಬ ಉಪಶೀರ್ಷಿಕೆ ಕೊಟ್ಟುದು ನಿಜವೇ ಆಗಿದ್ದರೆ ಇದು ಅಕ್ಷಮ್ಯ ಅಪರಾಧ. ಕೇರಳದಲ್ಲಿ ನಡೆದ ಯಾವುದೇ ಘಟನೆಯನ್ನು ಕಾಸರಗೋಡಿನಲ್ಲಿ ನಡೆದುದು ಎಂಬಂತೆ ಬಿಂಬಿಸುವುದು ಕನ್ನಡದ ಮಾಧ್ಯಮ ವರದಿಗಾರರಲ್ಲಿ ಬೇರೂರುತ್ತಿರುವ ದುರಭ್ಯಾಸವೂ ಆಗಿ ಬದಲಾಗುತ್ತಲಿದೆ.  

ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರ ಸಂಖ್ಯೆ ಇಳಿಮುಖವಾಗಿ ಆ ಸ್ಥಾನದಲ್ಲಿ ಅಬ್ಬರದಲ್ಲಿ ಬೊಬ್ಬೆ ಹೊಡೆಯುವ ಮುಜಾಹಿದರು ಹೆಚ್ಚಿಕೊಳ್ಳುತ್ತಿದ್ದಾರೆ. ಅವರಿಗೆ ಆದರೆ ಸ್ತ್ರೀ ಪುರುಷರ ಮಧ್ಯೆ ಪರದೆ ಇರಲೇ ಬೇಕು ಮತ್ತು ಹಧೀಸುಗಳ ಪಾಲನೆ 100% ಆಗಬೇಕು. ಕೇರಳದ ಸೌಮ್ಯ ಸ್ವಭಾವದ ಸೂಫಿ ಮುಸಲ್ಮಾನರಾದರೋ ಅಲ್ಲೊಬ್ಬ ಮಹಿಳೆ ಬುರುಕ ತೊಟ್ಟು ಊರಿನ ಸಾಂಸ್ಕತಿಕ ಆಚರಣೆಯಲ್ಲಿ ಭಾಗಿಯಾಗುವುದು, ಇಲ್ಲೊಬ್ಬ ಮಾನಸಾಂತರ ಪೂರ್ವದ ತನ್ನ ಸಾಂಸ್ಕತಿಕ ಹಿನ್ನೆಲೆಯನ್ನು ಒಪ್ಪುವುದು ಎಂದು ಮುಂತಾದ ರೀತಿಗಳಲ್ಲಿ ಇದ್ದುಕೊಂಡಿದೆ.

ನಿಜವಾಗಿ ಈ ಘಟನೆ ಕೊಚ್ಚಿಯಲ್ಲಿ ನಡೆದುದು. ತೀವ್ರ ಇಸ್ಲಾಮಿಕ್ ದೃಷ್ಟಿಕೋನವಾದ ಮುಜಾಹಿದ್ ಚಳುವಳಿಯ ಅನುಯಾಯಿಗಳು ಸಂಘಟಿಸಿದ ಕಾರ್ಯಕ್ರಮ ಇದು. ಮುಜಾಹಿದ್ ದೃಷ್ಟಿಕೋನದಿಂದ ಇದಕ್ಕೆ ಉತ್ತರವನ್ನು ಈ ಕೆಳಗಿನಂತೆ ಊಹಿಸಬಹುದು.

೧. ನಾವು ಸ್ತ್ರೀಯರನ್ನು ಪರದೆ ಕಟ್ಟಿ ದೂರ ಇಟ್ಟಿಲ್ಲ, ಬದಲಿಗೆ ಪುರುಷರನ್ನು ಸ್ತ್ರೀಯರಿಂದ ದೂರ ಇಟ್ಟಿದ್ದೇವೆ. ಸ್ತ್ರೀ ಪುರುಷರ ಮಧ್ಯೆ ನಾವು ಕಟ್ಟಿದ ಪರದೆ ಸ್ತ್ರೀ ವಿರುದ್ಧವಾದುದು ಎಂದು ತಿಳಿಯುವುದು ತಪ್ಪು. ಅದನ್ನು ಯಾಕೆ ಪುರುಷ ವಿರುದ್ಧ ಎಂದು ಕರೆಯಬಾರದು? ಇದು ಸ್ತ್ರೀ ವಿರುದ್ಧವಲ್ಲ ಎಂದು ನಾವು ತಿಳಿಯುತ್ತೇವೆ. ಸ್ತ್ರೀ ಪುರುಷರ ಮಧ್ಯೆ ಇರುವ ಪ್ರತ್ಯೇಕತೆ ವಾಸ್ತವವೇ ಆಗಿದೆ. ಅದು ಇಂದು ನಿನ್ನೆಯದಲ್ಲ. ಅಲ್ಲಾಹು ನಮ್ಮನ್ನು ಸೃಷ್ಟಿಸಿದುದು ಹೀಗೆಯೇ ಎಂದು ತಿಳಿಯಬೇಕು.

೨. ಸ್ತ್ರೀ ಪುರುಷರ ಮಧ್ಯೆ ಇರುವ ಪರದೆಯನ್ನು ನೀವು ನೋಡುತ್ತೀರಿ ಆದರೆ ಮಸೀದಿಗಳಲ್ಲಿ ಸ್ತ್ರೀ ಪುರುಷರ ಮಧ್ಯೆ ಇರುವ ಗೋಡೆಯನ್ನು ಯಾಕೆ ನೋಡುವುದಿಲ್ಲ. [ಕೆಲವು ಪಂಥಗಳಿಗೆ ಸೇರಿದ ಮಸೀದಿಗಳಲ್ಲಿ ಸ್ತ್ರೀಯರಿಗೂ ನಮಾಜ್ಃ ಸಲ್ಲಿಸುವ ಅವಕಾಶವಿದೆ.]

೩. ಮುಸ್ಲಿಮರು ಯಾಕೆ ಯಾವಾಗಲೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಲೇ ಇರಬೇಕು? ಅದು ಸಾಧ್ಯವಿಲ್ಲ- ನಾವು (ಮುಸಲ್ಮಾನರು) ಇರುವುದೇ ಹೀಗೆ, ನಮ್ಮ ಜೀವನವೇ ಹೀಗೆ ಎನ್ನುತ್ತೇವೆ. 

೪.  ಅನ್ಯ ಸ್ತ್ರೀ ಪುರುಷರು ನಿರ್ದಿಷ್ಟ ಮಿತಿಯನ್ನು ಮೀರಿ ಒಡನಾಡಿದರೆ ಏನಾಗಬಹುದು ಎಂದು ನಾವು ಊಹಿಸಬಹುದು. ಪಾಪಗಳಿಗೆ ದಾರಿ ಮಾಡಿಕೊಡುವುದು ಇಂತಹ ಪ್ರವೃತ್ತಿಗಳು ಎಂದು ತಿಳಿಯಬೇಕು. ವ್ಯಭಿಚಾರ ತಪ್ಪೆಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಪುರುಷರಲ್ಲಿ ಹಾರ್ಮೋನುಗಳ ವ್ಯತ್ಯಯದ ಮೂಲಕ ಮತ್ತು ಸ್ತ್ರೀಯರಿಗೆ ತಮ್ಮೊಡನೆ ಕಾಳಜಿ ತೋರಿಸುವವರೊಂದಿಗೆ ಮೂಲಕ ಉಂಟಾಗುವ ಪ್ರೀತಿ ಪರಸ್ಪರ ಆತ್ಮೀಯತೆಗೆ ದಾರಿಮಾಡಿಕೊಡುತ್ತದೆ. ಆತ್ಮೀಯತೆ ನಿರ್ದಿಷ್ಟ ಮಿತಿಯನ್ನು ಮೀರಿದಾಗಲೇ ಅದು ವ್ಯಭಿಚಾರ ಎನಿಸಿಕೊಳ್ಳುತ್ತದೆ.      

೫. ಯಾವುದೇ ರೀತಿಯ ಅನಾಚಾರಗಳಿಗೆ ಆಸ್ಪದ ಕೊಡದಿರುವುದು ಇಸ್ಲಾಮ್ ಮತದ ವೈಶಿಷ್ಟ್ಯ. ವ್ಯಭಿಚಾರಕ್ಕೆ ಆಸ್ಪದ ಕೊಡುವ ದಾರಿಗಳನ್ನೂ ಕೂಡ ಇಸ್ಲಾಮ್ ಇಲ್ಲವಾಗಿಸುತ್ತದೆ. "ವಾಲಾ ತಕ್ರಬು ಝಿಃನ" - (ವ್ಯಭಿಚಾರದಿಂದ ದೂರವಿರಿ) ಎನ್ನುವುದು ಇಸ್ಲಾಮಿನ ವೈಶಿಷ್ಟ್ಯ, ವ್ಯಭಿಚಾರ ಮಾಡಬಾರದು ಎಂದು ಮಾತ್ರವೇ ಅಲ್ಲ ಎಂದು ತಿಳಿಯಬೇಕು. ತಪ್ಪುಗಳನ್ನು ಮಾಡಬಾರದು ಎಂದು ಮಾತ್ರವಲ್ಲ ತಪ್ಪುಗಳತ್ತ ಮುನ್ನಡೆಸುವ ದಾರಿಗಳನ್ನೂ ಸಹ ಕುರಾನ್ ಇಲ್ಲವಾಗಿಸುತ್ತದೆ. ಸ್ತ್ರೀಯರು ಪುರುಷರನ್ನು ನೋಡಿದರೆ ಅಥವಾ ಪುರುಷರು ಸ್ತ್ರೀಯರನ್ನು ನೋಡಿದೊಡನೆ ಲೈಂಗಿಕ ಭಾವನೆಗಳು ಮಾತ್ರವಲ್ಲದೆ ಸ್ನೇಹದ ಅಥವಾ ಇತರ ಭಾವನೆಗಳು ಕೂಡ ಉಂಟಾಗಬಹುದು. ಅದನ್ನು ನಾವು ಅಲ್ಲಗಳೆಯುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟೂ ಪ್ರತ್ಯೇಕತೆಯನ್ನು ಪಾಲಿಸುವುದು ನಾವು ಇಸ್ಲಾಮನ್ನು ಅನುಸರಿಸುವ ರೀತಿ.  

೬. ಪ್ರತ್ಯೇಕತೆಯೆಂಬುದು ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದೆ. ಹಾಗಾಗಿ ನಾವು ಸ್ವಯಂ ಹಿಜಾಬ್ ಧರಿಸಬೇಕು. ಸ್ತ್ರೀಯರಿಗೂ ಪುರುಷರಿಗೂ ಹಿಜಾಬ್ ಇದೆ. ಸ್ತ್ರೀಯರು ಧರಿಸುವ ಪರದಾ ಹಿಜಾಬ್ ಆಗಿದ್ದರೆ ಪುರುಷರಿಗೆ ತಮ್ಮ ದೃಷ್ಟಿಯನ್ನು ಕೆಳಗೆ ಹಾಯಿಸುವುದು ಅವರಿಗೆ ಹಿಜಾಬ್ ಆಗಿದೆ. ಇಸ್ಲಾಂ ದೈವಿಕ ಮತವಾದ ಕಾರಣ ಪಾಪಕ್ಕೆ ದಾರಿಮಾಡಿಕೊಡುವ ಯಾವುದೇ ಅಂಶಗಳನ್ನು ಇಲ್ಲವಾಗಿಸುವುದು ಸಹಜ. ಇದನ್ನು ಎಲ್ಲರೂ ಮಾಡಬೇಕೆಂದು ನಾವು ಹೇಳುವುದಿಲ್ಲ. ಮುಸಲ್ಮಾನರು ಇದನ್ನು ಅನುಸರಿಸಿದರೆ ಇತರರು ಯಾಕೆ ಪ್ರಶ್ನೆ ಮಾಡಬೇಕು?

 ----------------

ಊಹೆ ಸರಿಯಾಗಿದೆಯೋ ತಪ್ಪೋ ಎಂದು ಅನುಮಾನವಿದ್ದರೆ ಕೆಳಗಿನ ವಿಡಿಯೋ ನೋಡಬಹುದು. [https://www.youtube.com/watch?v=oFULP4uF9T4&t=31s] ಅದು ಮಲೆಯಾಳ ಭಾಷೆಯಲ್ಲಿ ಇರುವ ಕಾರಣ ೧೦೦% ಅರ್ಥವಾಗದೆಯೂ ಇರಬಹುದು. ಒಟ್ಟಂದದಲ್ಲಿ ಆ ಸಂಭಾಷಣೆಯ ಭಾವಗ್ರಹಣ ಇಲ್ಲಿ ಆಗಿದೆ ಎಂದು ತಿಳಿದುಕೊಳ್ಳಬಹುದು. 

~ಕೃಷ್ಣಪ್ರಕಾಶ ಬೊಳುಂಬು

#ಕಾಸರಗೋಡು  #ಹಿಜಾಬ್ #ಮುಜಾಹಿದ್ 


Sunday, September 7, 2025

ಸಾರ್ವಜನಿಕ ಜೀವನದಲ್ಲಿ ಶಿರ್ಕ್ ಅಂಶಗಳು

ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮುಸಲ್ಮಾನರ ಸಂಪ್ರದಾಯದಲ್ಲಿ 'ಶಿರ್ಕ್' ಎಂಬ ಅಂಶವಿದೆ. ಇದು ಅಲ್ಲಾಹುವಿನ ಹೊರತಾದ ಅನ್ಯದೇವತಾರಾಧನೆಗಳನ್ನು ಪ್ರಾರ್ಥನೆಗಳಲ್ಲಿ ಸೇರಿಸಿಕೊಳ್ಳುವುದನ್ನು ಖಡಾಖಡಿ ನಿರಾಕರಿಸುವ ಅಂಶ. ಇದು ಇಸ್ಲಾಮಿಕ್ ಮತಾಚರಣೆಯೆಂಬ ವಿಚಾರ ವಿದಿತವೇ ಆಗಿದ್ದರೂ ಸಾರ್ವಜನಿಕ ಆಚರಣೆಗಳಲ್ಲಿ ಮಿತತ್ವವನ್ನು ರೂಢಿಸಿಕೊಂಡ ನಾಗರಿಕರು ಸರ್ವಸಾಮಾನ್ಯವಾಗಿ ನಮ್ಮ ಮುಂದಿರುವ ಮುಸಲ್ಮಾನರು. ಮಿತತ್ವವನ್ನು ರೂಢಿಸಿಕೊಳ್ಳಬಲ್ಲವರಾದ ನಟ ಮಮ್ಮುಟ್ಟಿಯೇ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸುತ್ತಾರೆ. (ಮಿತತ್ವವನ್ನು ರೂಢಿಸಿಕೊಂಡವರು ಸೆಲೆಬ್ರಿಟಿಗಳು ಮಾತ್ರ ಎನ್ನುವುದು ನನ್ನ ಉದ್ದೇಶವಾಗಿಲ್ಲ.) ಆದರೆ ಇಸ್ಲಾಮ್ ಮತಸ್ಥರೇ ಆದ ಇನ್ನು ಕೆಲವರು 'ಶಿರ್ಕ್' ಮುಂದಿಟ್ಟುಕೊಂಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಲು ನಿರಾಕರಿಸುತ್ತಾರೆ.

ಆ ಇನ್ನು ಕೆಲವರು ಯಾರು ಎಂದು ಗಮನಿಸುವುದಾದರೆ ಅವರು ತೀವ್ರ ಮತಧೋರಣೆಯನ್ನು ಹೊಂದಿರುವವರು. ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳ ಮುಖೇನ ತೀವ್ರ ಇಸ್ಲಾಮಿಕ್ ಪ್ರಚಾರವನ್ನು ಕೈಗೊಳ್ಳುತ್ತಿರುವವರು ಇವರೇ. ಇವರ ಅನುಯಾಯಿಗಳು ಕಂಡಕಂಡಲ್ಲಿ ದಾವಾ ಕಾರ್ಯಕ್ರಮ ನಡೆಯಿಸಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಸ್ಲಾಮಿಗೆ ಅನುಯಾಯಿಗಳನ್ನು ಸೇರಿಸಿಕೊಳ್ಳಬೇಕು ಎನ್ನುವವರು ಇವರು. ಅಲ್ಲಾಹುವಿನ ಹೊರತಾದ ಅನ್ಯದೇವತೆಗಳನ್ನು ಆರಾಧಿಸಿದರೆ ನರಕದ ಬೆಂಕಿಯಿಂದ ವಿಮುಕ್ತಿಯಿಲ್ಲ ಎಂದು ತೀವ್ರವಾಗಿ ನಂಬಿದವರು. "ಲವ್ ಜಿಹಾದ್" ಸೇರಿದಂತೆ ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎಂದು ಸಾರುವುದು ತಪ್ಪು. ಇವರ ಚಟುವಟಿಕೆಗಳು "ಜಿಹಾದ್" ಆಗಿವೆ ಎನ್ನುವಾಗ ತಮ್ಮ ವೈಯಕ್ತಿಕ ಆಚರಣೆಗಳನ್ನು "ಜಿಹಾದ್" ಎಂದು ಬಗೆದು ಅತೀವ ಶ್ರದ್ಧೆಯಿಂದ ತಮ್ಮ ಮತಾಚರಣೆಗಳನ್ನು ಅನುಸರಿಸುವ ಮಿತತ್ವವಾದಿಗಳಿಗೆ ಘಾಸಿಯಾಗುವುದು ಸಹಜವೇ ಆಗಿದೆ. ಹೀಗಾಗಿ "ಲವ್ ಜಿಹಾದ್" ಎಂಬ ಪದಪ್ರಯೋಗ ತಪ್ಪಾಗಿದೆಯೆಂದು ಮನಗಾಣಬೇಕು.

ಮುಸಲ್ಮಾನ ಸಾಹಿತಿಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಸಂದರ್ಭವಿದ್ದರೆ ಅವರ ಮತಾಚಾರ ಪೂರ್ವಕವಾದ ಅಂಶಗಳಿಗೆ ಪೂರಕವೋ ಬಾಧಕವೋ ಆಗಿರಬಹುದಾದ ವಿಷಯಗಳನ್ನು ಮನವರಿಕೆ ಮಾಡಿಕೊಟ್ಟು ಅವರ ಸಮ್ಮತವಿದೆಯೆಂದು ದೃಢೀಕರಿಸಿದ ನಂತರವೇ ಅವರನ್ನು ಔಪಚಾರಿಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸೂಕ್ತ.


ತಮ್ಮ ಸಂಪ್ರದಾಯಗಳನ್ನು ಟೀಕಿಸಿಯೋ ದೂರುತ್ತಲೋ ಬರೆಯುವ ಮುಸಲ್ಮಾನ ಸಾಹಿತಿಗಳು ತೀವ್ರ ಮತಧೋರಣೆಯನ್ನು ಹೊಂದಿರುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಆದರೂ ಅವರ ಸಾಹಿತ್ಯದಲ್ಲಿ; ತಮ್ಮಲ್ಲಿ ಇರಬಹುದಾದ ಆಚರಣೆಗಳಲ್ಲಿ ಅನಪೇಕ್ಷಣೀಯವೆಂದು ಅವರಿಗೆ ತೋರಿದ ವಿಷಯಗಳನ್ನು ಟೀಕಿಸುತ್ತಲೋ ಪ್ರತಿರೋಧಿಸುತ್ತಲೋ ಬರೆಯುವಾಗಲೂ ಇಂದಿನ ಕಾಲದಲ್ಲಿ ಜಾರಿಗೆ ಬಂದಿರುವ ತೀವ್ರ ಮತಧೋರಣೆಯನ್ನು ನಿರಾಕರಿಸುವುದು ಕಂಡುಬಾರದಿರುವುದೂ ವಾಸ್ತವವೇ. ಉದಾಹರಣೆಗೆ, ಕಾಸರಗೋಡಿನ ತಳಂಗರೆ ಮಸೀದಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೆಂದೂ ಅದು ಪ್ರವಾದಿಗಳ ಕಾಲದಲ್ಲಿ ಕಟ್ಟಲ್ಪಟ್ಟ ಮಸೀದಿಯೆಂದೂ ಎಡಪಂಥೀಯರಾದ ಸಾರಾ ಅಬೂಬಕ್ಕರ್ ಬರೆದಿದ್ದಾರೆ. 

~ಕೃಷ್ಣಪ್ರಕಾಶ ಬೊಳುಂಬು

#ಶಿರ್ಕ್ 

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ ಬ್ರಿಟಿಷರಿಂದ ಆರಂಭಗೊಂಡಿತೇ ಹೊರತು ಕೇವಲ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಯಿತೆನ್ನುವುದು ಪೆರಮೆ. ದಮನಕಾರಿ ಬ್ರಿಟಿಷ್ ಆಡಳಿತ ನೀತಿಗಳು...