ಕಗ್ಗಮಾಲಿಕೆ - ೧: ಬುದ್ಧಿಯ ಬೆಳಗು
ಬುದ್ಧಿಯ ಪ್ರಚೋದನೆಯೇ ಪರಮ ಶ್ರೇಯಸ್ಸು
ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ||
ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |
ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ||
"ನಮ್ಮ ಪೂರ್ವಿಕರು ಐಶ್ವರ್ಯವೂ ಆಯುಸ್ಸೂ ಬಲವೂ ಜೊತೆಗೆ ಗೆಲುವೂ ಬೇಕೆಂದು ನಿತ್ಯವೂ ಪರಮಾತ್ಮನನ್ನು ಬೇಡಿಕೊಂಡಿದ್ದರೂ ವಿಶೇಷವಾಗಿ ಬುದ್ಧಿಯನ್ನು ಪ್ರಚೋದಿಸೆಂದು ಬೇಡುವ ಗಾಯತ್ರಿ ಮಂತ್ರವನ್ನು ಪರಮಮಂತ್ರವೆಂದು ಕರೆದರು. ಶ್ರೇಯಸ್ಸೆಂಬುದು ಬುದ್ಧಿಯ ಮಹಿಮೆ. ಅದು ಬುದ್ಧಿಯ ಪರಮ ಔನ್ನತ್ಯದಲ್ಲಿ ಸಿದ್ದಿಸುವಂತಹುದು."
ಕನ್ನಡದ ಭಗವದ್ಗೀತೆಯೆಂದು ಮನ್ನಣೆ ಗಳಿಸಿದ; ಡಿ. ವಿ. ಗುಂಡಪ್ಪನವರ ಕಗ್ಗದ ಸಾಲುಗಳು ಇಲ್ಲಿ ಗಾಯತ್ರಿ ಮಂತ್ರದ ಸಾರ ಮತ್ತು ಲೌಕಿಕ ಜೀವನದ ನಡುವಣ ಸಮನ್ವಯವನ್ನು ತೋರಿಸಿಕೊಟ್ಟಿದೆ.
ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ. ಶ್ರೇಯಸ್ಸೆಂಬುದು ಬುದ್ಧಿಯ ಮಹಿಮೆ. ಅದು ಬುದ್ಧಿಯ ಪರಮ ಔನ್ನತ್ಯದಲ್ಲಿ ಸಿದ್ಧಿಸುವಂತಹುದು - ಇದು ಈ ಕಗ್ಗದ ವಿಷಯವಸ್ತು.
No comments:
Post a Comment