Monday, March 30, 2026

ಕಗ್ಗಮಾಲಿಕೆ - ೧: ಬುದ್ಧಿಯ ಬೆಳಗು

 ಕಗ್ಗಮಾಲಿಕೆ - ೧: ಬುದ್ಧಿಯ ಬೆಳಗು


ಬುದ್ಧಿಯ ಪ್ರಚೋದನೆಯೇ ಪರಮ ಶ್ರೇಯಸ್ಸು


ಕಗ್ಗ:

ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |

ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ||

ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |

ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ||


ವ್ಯಾಖ್ಯಾನ:

"ನಮ್ಮ ಪೂರ್ವಿಕರು ಐಶ್ವರ್ಯವೂ ಆಯುಸ್ಸೂ ಬಲವೂ ಜೊತೆಗೆ ಗೆಲುವೂ ಬೇಕೆಂದು ನಿತ್ಯವೂ ಪರಮಾತ್ಮನನ್ನು ಬೇಡಿಕೊಂಡಿದ್ದರೂ ವಿಶೇಷವಾಗಿ ಬುದ್ಧಿಯನ್ನು ಪ್ರಚೋದಿಸೆಂದು ಬೇಡುವ ಗಾಯತ್ರಿ ಮಂತ್ರವನ್ನು ಪರಮಮಂತ್ರವೆಂದು ಕರೆದರು. ಶ್ರೇಯಸ್ಸೆಂಬುದು ಬುದ್ಧಿಯ ಮಹಿಮೆ. ಅದು ಬುದ್ಧಿಯ ಪರಮ ಔನ್ನತ್ಯದಲ್ಲಿ ಸಿದ್ದಿಸುವಂತಹುದು."


ತಾತ್ಪರ್ಯ:

ಶ್ರೇಯಸ್ಸೆಂಬುದು ಬುದ್ಧಿಯ ಮಹಿಮೆ. ಅದು ಬುದ್ಧಿಯ ಪರಮ ಔನ್ನತ್ಯದಲ್ಲಿ ಸಿದ್ಧಿಸುವಂತಹುದು - ಇದು ಈ ಕಗ್ಗದ ವಿಷಯವಸ್ತು. ಕನ್ನಡದ ಭಗವದ್ಗೀತೆಯೆಂದು ಮನ್ನಣೆ ಗಳಿಸಿದ; ಡಿ. ವಿ. ಗುಂಡಪ್ಪನವರ ಕಗ್ಗದ ಸಾಲುಗಳು ಇಲ್ಲಿ ಗಾಯತ್ರಿ ಮಂತ್ರದ ಸಾರ ಮತ್ತು ಲೌಕಿಕ ಜೀವನದ ನಡುವಣ ಸಮನ್ವಯವನ್ನು ತೋರಿಸಿಕೊಟ್ಟಿದೆ. 


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.  ನಿಧಾನಗತಿಯ ಅನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.


#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻


ಕೃಷ್ಣಪ್ರಕಾಶ ಬೊಳುಂಬು



No comments:

Post a Comment

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...