Saturday, August 17, 2024

ನಾದಬ್ರಹ್ಮ

 ವ್ಯಕ್ತಗಳಲ್ಲಿ ಅವ್ಯಕ್ತವಾದ, ಜೀವಗಳಲ್ಲಿ ಜೀವವಾಗಿ ನೆಲೆಸಿರುವ ಪರಮ ಚೈತನ್ಯವನ್ನಾರಾಧಿಸಲಿಕ್ಕೆ ಒದಗಬಲ್ಲ ಉಪಾಸನೆಗಳಲ್ಲಿ ಪ್ರಮುಖವಾದ ನಾದೋಪಾಸನೆ ಮೋಕ್ಷ ಸಾಧನೆಗಿರುವ ಸಾಧನವೆನ್ನಲಾಗಿದೆ. ಭಾರತೀಯ ಪರಂಪರೆಯಲ್ಲಿ ನಾದವನ್ನು ದೈವತ್ವದ ಅಭಿವ್ಯಕ್ತಿಯೆಂದು ಗ್ರಹಿಸಲಾಗಿದೆ. ಶಾರ್ಙ್ಗದೇವನ ಸಂಗೀತರತ್ನಾಕರದಲ್ಲಿ “ಸಮಸ್ತ ಬ್ರಹ್ಮಾಂಡವನ್ನು ವ್ಯಾಪಿಸಿರುವ, ನಿತ್ಯವೂ ಆನಂದವನ್ನು ಕೊಡಬಲ್ಲ, ಜೀವಕಾರಕವಾದ ನಾದಬ್ರಹ್ಮವನ್ನು ಪೂಜಿಸುವುದಾಗಲಿ” ಎನ್ನಲಾಗಿದೆ. ಭವ್ಯವಾದ ಈ ಆಶಯವನ್ನು ವಾಗ್ಗೇಯಕಾರರಾದ ತ್ಯಾಗರಾಜ ಸ್ವಾಮಿಗಳು ಬಲವಾಗಿ ಪ್ರತಿಪಾದಿಸಿದರು. ತ್ಯಾಗರಾಜ ಸ್ವಾಮಿಗಳು “ರಾಗಸುಧಾರಸ ಪಾನಮು ಜೇಸಿ ರಾಜಿಲ್ಲವೇ ಓ ಮನಸಾ” ಎಂದು ಸಾರಿದ್ದಾರೆ. “ರಾಗವೆಂಬ ಅಮೃತವನ್ನು ಕುಡಿದು ಆನಂದಿಸು, ಯಾಕೆಂದರೆ ಇದು ಸಕಲ ಸಂಪದಗಳನ್ನೂ ಕೊಡಬಲ್ಲುದು. ಸದಾಶಿವ ಸ್ವರೂಪವಾದ ಓಂಕಾರವನ್ನು ತಿಳಿದವರು ಜೀವನ್ಮುಕ್ತರಾಗುತ್ತಾರೆ” ಎಂಬುದು ಈ ಕೃತಿಯ ಸಾರ. ಇಲ್ಲಿ ರಾಗವೆಂಬುದು ನಾದ ಮತ್ತು ನಾದಬ್ರಹ್ಮ ಎಂಬುದು ಸಂಗೀತ ರೂಪದ ಪರಬ್ರಹ್ಮವೇ ಆಗಿದೆ. ಇದು ವ್ಯಕ್ತಿಗಳಿಗೆ ಸಲ್ಲುವ ಅಭಿಧಾನವಲ್ಲ.

No comments:

Post a Comment

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...