ನಂಬಿಕೆಯ ಬುಡಕ್ಕೆ ಕೈ ಹಾಕಿದರೆ ಪ್ರತಿಯೊಂದು ಮತಪಂಥದಲ್ಲಿ ಹುಳುಕುಗಳು ಸಿಕ್ಕಬಹುದು. ಎಕ್ಸ್-ಮುಸ್ಲಿಂ ಎಂಬ ಆ಼ಷಾಢಭೂತಿ ಸಮಯಸಾಧಕ ಇಸ್ಲಾಂ ಮತದ ಮೂಲಕ್ಕೆ ಕೈ ಹಾಕಿ ಯಾರಿಗೋ ನ್ಯಾಯ ಒದಗಿಸುತ್ತಾನೆ ಎನ್ನುವುದು ಭ್ರಮೆ. ಇವನು ತನ್ನ ಬೆಂಬಲಿಗರನ್ನೇ ಹೀಯಾಳಿಸುವ ಪೋಸ್ಟುಗಳು ಈ ಮೂರ್ಖನಿಂದ ಈ ಹಿಂದೆಯೇ ಬಂದಿವೆ. ಸೋಜಿಗದ ವಿಷಯ ಏನೆಂದರೆ ಸನಾತನ ಧರ್ಮಾವಲಂಬಿಗಳಾದವರು ಇವನ ಬೆಣ್ಣೆ ಮಾತುಗಳಿಗೆ ಬಲಿಯಾಗಿ ಇಸ್ಲಾಂ ಮತದ ದೂಷಣೆಗೆ ತೊಡಗುತ್ತಾರೆ. ಆದರೆ ಇವನು ತನ್ನ ಸಮಯ ನೋಡಿಕೊಂಡು ಸನಾತನ ಧರ್ಮದ ಅವಹೇಳನ ಮಾಡುವವನು. ಆಧುನಿಕ ಕಾಲದ ಪೊಲಿಟಿಕಲ್ ಇಸ್ಲಾಂ ಎಂಬ ಮತೀಯ ಭ್ರಾಂತಿಯನ್ನು ವಿರೋಧಿಸುವುದು ಬೇರೆ, ಇಸ್ಲಾಂ ಮತ ಎಂಬ ಮೂಲ ಸತ್ತ್ವವನ್ನು ವಿರೋಧಿಸುವುದು ಬೇರೆ. ಶಾಂತವಾಗಿ ಮುನ್ನಡೆಯುವ ಸಮಾಜದಲ್ಲಿ ಇನ್ನೊಬ್ಬನನ್ನು ವಿರೋಧಿಸುವುದು ಜೀವನದ ಮಾರ್ಗ ಆಗದಿರಲಿ. ಅನ್ಯವನ್ನು ಒಳಗೊಳ್ಳುವುದು ಕಷ್ಟದ ಕೆಲಸ, ಆದರೆ ಅದು ಅನಿವಾರ್ಯದ ಹಾದಿ.
Subscribe to:
Post Comments (Atom)
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...
No comments:
Post a Comment