ತೇಲುದೋಣಿಯ ತೆರದೆ ತೇಲುತೇಲುತ ಸಾಗಿ
ಕೊನೆಗಳನ್ನರಿಯದಲೆ ತೊಳತೊಳಲಿ ಪರಿತಪಿಸಿ
ಹಗರಣದ ರಗಳೆಯದಾವುದೊಂದನ್ನರಿಯದಿರೆ ||
ತೀರವಿಲ್ಲದ ಕಡಲ ನಡುನಡುವೆ ಮೌನದಲಿ
ಮಂದಹಾಸದ ಗಾನ ಗುನುಗುನುಗುತ್ತಿರುವಾಗ
ಕೇಳಬಯಸಿದೆ ಪದವ ಮೀರಿದ ಮಧು ಮಧುರತಮ ಗಾನ ||
ಕಾಲ ಬಾರದದೇಕೋ ಕಾರ್ಯ ತೀರದದಿನ್ನೇಕೋ
ಸಂಜೆಯಾಗಸ ಕೆಂಪು ಕೆಂಪನೆ ಮಸೆವಾಗ
ಮಸುಮಸುಕಿನಾ ಬೆಳಕು ಮೋಡದಲಿ ಮರೆಗೊಳಲು
ತೇಲ್ವ ದೋಣಿಯ ಹುಟ್ಟದಲುಗಾಡದಿರದೇ ||
Thursday, January 16, 2014
Subscribe to:
Post Comments (Atom)
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ
ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...
-
ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಬಹಿರಂಗಪಡಿಸಿದ ರೀತಿ ಅನ್ಯಾದೃಶವಾದುದು. ರಮಣ ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ...
-
Appeasement and the Mirage of Harmony: Lessons from History Across Indian history, well-intentioned efforts to create harmony through com...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...
No comments:
Post a Comment