ಬಂದೇ ಬರುವುದದೊಂದು ದಿನ ಭೂಮಿಯೊಳು
ಜೀವಮೌನದ ಭಾವ ಸಾಂದ್ರತೆಯನಡರ್ದು
ಕಣ್ಣ ಪಟಲದ ಮುಂದೆ ಬಿರಿದು ನಕ್ಷತ್ರಗಳು
ಉದಯದೊಳು ಮಗುದೊಮ್ಮೆ ದಿನಚರಿಯ ಬಿಡದೆ
ಕಡಲ ತೀರದೊಳು ಬಡಿ-ಬೀಸುತಲೆಗಳು
ನೋವಿನೊಳೂ ನಲಿವಿನೊಳೂ ಭೇದಗಳನ್ನೆಣಿಸದೆಯೆ
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು
ಅಪರೂಪದಾ ತಾಣ ಅಪರೂಪದಾ ಜೀವ
ಅಂತರಾತ್ಮದ ಭಾವ ನಿಜದಿ ಬಯಸಿದುದನ್ನುಳಿದು
ಉಳಿದೇ ಉಳಿವುದದೊಂದು ನಿಜ ಭವದೊಳಗೆ
ಅಂತರಾತ್ಮದ ಭಾವ ಆವರಿಸಿದುದನ್ನುಳಿದು
Thursday, January 16, 2014
ತೇಲುದೋಣಿ
ತೇಲುದೋಣಿಯ ತೆರದೆ ತೇಲುತೇಲುತ ಸಾಗಿ
ಕೊನೆಗಳನ್ನರಿಯದಲೆ ತೊಳತೊಳಲಿ ಪರಿತಪಿಸಿ
ಹಗರಣದ ರಗಳೆಯದಾವುದೊಂದನ್ನರಿಯದಿರೆ ||
ತೀರವಿಲ್ಲದ ಕಡಲ ನಡುನಡುವೆ ಮೌನದಲಿ
ಮಂದಹಾಸದ ಗಾನ ಗುನುಗುನುಗುತ್ತಿರುವಾಗ
ಕೇಳಬಯಸಿದೆ ಪದವ ಮೀರಿದ ಮಧು ಮಧುರತಮ ಗಾನ ||
ಕಾಲ ಬಾರದದೇಕೋ ಕಾರ್ಯ ತೀರದದಿನ್ನೇಕೋ
ಸಂಜೆಯಾಗಸ ಕೆಂಪು ಕೆಂಪನೆ ಮಸೆವಾಗ
ಮಸುಮಸುಕಿನಾ ಬೆಳಕು ಮೋಡದಲಿ ಮರೆಗೊಳಲು
ತೇಲ್ವ ದೋಣಿಯ ಹುಟ್ಟದಲುಗಾಡದಿರದೇ ||
ಕೊನೆಗಳನ್ನರಿಯದಲೆ ತೊಳತೊಳಲಿ ಪರಿತಪಿಸಿ
ಹಗರಣದ ರಗಳೆಯದಾವುದೊಂದನ್ನರಿಯದಿರೆ ||
ತೀರವಿಲ್ಲದ ಕಡಲ ನಡುನಡುವೆ ಮೌನದಲಿ
ಮಂದಹಾಸದ ಗಾನ ಗುನುಗುನುಗುತ್ತಿರುವಾಗ
ಕೇಳಬಯಸಿದೆ ಪದವ ಮೀರಿದ ಮಧು ಮಧುರತಮ ಗಾನ ||
ಕಾಲ ಬಾರದದೇಕೋ ಕಾರ್ಯ ತೀರದದಿನ್ನೇಕೋ
ಸಂಜೆಯಾಗಸ ಕೆಂಪು ಕೆಂಪನೆ ಮಸೆವಾಗ
ಮಸುಮಸುಕಿನಾ ಬೆಳಕು ಮೋಡದಲಿ ಮರೆಗೊಳಲು
ತೇಲ್ವ ದೋಣಿಯ ಹುಟ್ಟದಲುಗಾಡದಿರದೇ ||
Subscribe to:
Posts (Atom)
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...