ವೈಷ್ಣವ ಬಂಧುವೆಂದವನನ್ನೇ ಕರೆವರು
ಪರರ ದುಃಖಗಳನ್ನರಿತವನ
ದುರ್ಬಲರಿಂಗುಪಕರಿಪವನವನು
ಮನದೊಳಭಿಮಾನವ ತಾಳದೆಯೆ
ಎಲ್ಲವರೊಡ ಸಹನೆಯಿಂದೇಗುತ್ತ
ಯಾರನ್ನೂ ತೆಗಳದೆ ಜೀವಿಸುವ
ನಡೆನುಡಿಯಿಂದ ಸಮಚಿತ್ತನವನು
ಆ ವೈಷ್ಣವನವ್ವೆಯೋ ಧನ್ಯೆಯಲ
ಸಮತೆಯ ಕಾಣುತ ದಾಹವ ತೊರೆಯುತ
ಪರಸ್ತ್ರೀಯರ ತಾಯೆಂದೆಣಿಸುವನು
ನಾಲಗೆಯಿಂದಲಸತ್ಯವ ನುಡಿಯನು
ಪರಸ್ವತ್ತುಗಳನ್ನುಣದಿರುವವನು
ಮೋಹಮಾಯೆಯೊಳು ಮುಳುಗಿರದವನು
ದೃಢವೈರಾಗ್ಯವ ತಾಳ್ದವನು
ರಾಮನಾಮವೇ ಅಮೃತವವಂಗೆ
ಧಾಮಂಗಳೆಲ್ಲವ ಜಾನಿಸಿರೆ*
ದುರಾಶೆಯ ತಾಳನು ಕಪಟರಹಿತನು
ಕಾಮಕ್ರೋಧಂಗಳ ಗೆಲಿದವನು
ಕುಲವ ಉದ್ಧರಿಪವನವನನ್ನೇ ಕಾದಿಹೆ
ದೀನ ನರಸಯ್ಯ ನಾನು ದರುಶನಕೆ
ಮೂಲಸಾಹಿತ್ಯ - ನರಸಿಂಹ ಮೆಹತಾ, ವೈಷ್ಣವ ಜನತೋ ತೇನೇ ಕಹಿಯೇ.
*ಜಾನಿಸು = ಧ್ಯಾನಿಸು
ಇದರ ಹಳೆಯ ಆವೃತ್ತಿಯೊಂದನ್ನು ಕೆಳಗಣ ತಾಣದಲ್ಲಿ ಕೇಳಬಹುದು:
No comments:
Post a Comment