Saturday, November 16, 2013

ವೈಷ್ಣವ ಬಂಧು

ವೈಷ್ಣವ ಬಂಧುವೆಂದವನನ್ನೇ ಕರೆವರು
ಪರರ ದುಃಖಗಳನ್ನರಿತವನ
ದುರ್ಬಲರಿಂಗುಪಕರಿಪವನವನು
ಮನದೊಳಭಿಮಾನವ ತಾಳದೆಯೆ

ಎಲ್ಲವರೊಡ ಸಹನೆಯಿಂದೇಗುತ್ತ
ಯಾರನ್ನೂ ತೆಗಳದೆ ಜೀವಿಸುವ
ನಡೆನುಡಿಯಿಂದ ಸಮಚಿತ್ತನವನು
ಆ ವೈಷ್ಣವನವ್ವೆಯೋ ಧನ್ಯೆಯಲ

ಸಮತೆಯ ಕಾಣುತ ದಾಹವ ತೊರೆಯುತ
ಪರಸ್ತ್ರೀಯರ ತಾಯೆಂದೆಣಿಸುವನು 
ನಾಲಗೆಯಿಂದಲಸತ್ಯವ ನುಡಿಯನು
ಪರಸ್ವತ್ತುಗಳನ್ನುಣದಿರುವವನು

ಮೋಹಮಾಯೆಯೊಳು ಮುಳುಗಿರದವನು
ದೃಢವೈರಾಗ್ಯವ ತಾಳ್ದವನು
ರಾಮನಾಮವೇ ಅಮೃತವವಂಗೆ
ಧಾಮಂಗಳೆಲ್ಲವ ಜಾನಿಸಿರೆ*

ದುರಾಶೆಯ ತಾಳನು ಕಪಟರಹಿತನು
ಕಾಮಕ್ರೋಧಂಗಳ ಗೆಲಿದವನು
ಕುಲವ ಉದ್ಧರಿಪವನವನನ್ನೇ ಕಾದಿಹೆ
ದೀನ ನರಸಯ್ಯ ನಾನು ದರುಶನಕೆ

ಮೂಲಸಾಹಿತ್ಯ - ನರಸಿಂಹ ಮೆಹತಾ, ವೈಷ್ಣವ ಜನತೋ ತೇನೇ ಕಹಿಯೇ.

*ಜಾನಿಸು = ಧ್ಯಾನಿಸು

ಇದರ ಹಳೆಯ ಆವೃತ್ತಿಯೊಂದನ್ನು ಕೆಳಗಣ ತಾಣದಲ್ಲಿ ಕೇಳಬಹುದು:

No comments:

Post a Comment

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ ಬ್ರಿಟಿಷರಿಂದ ಆರಂಭಗೊಂಡಿತೇ ಹೊರತು ಕೇವಲ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಯಿತೆನ್ನುವುದು ಪೆರಮೆ. ದಮನಕಾರಿ ಬ್ರಿಟಿಷ್ ಆಡಳಿತ ನೀತಿಗಳು...