ಶಬರಿಮಲೆಯಲ್ಲಿ ವಾವರ ಸ್ವಾಮಿ ಇರುವಂತೆ ಬದರಿನಾಥದಲ್ಲಿ ಅದೇ ಸ್ಥಾನ ಸಂತ ಬದರುದ್ದಿನ್ ಅವರಿಗೆ ಇದೆ ಎಂದು ತಿಳಿಯಬಹುದು. ವಾವರ ಸ್ವಾಮಿ ನಿಜವಾಗಿ ಅಯ್ಯಪ್ಪನ ಭಕ್ತನಾಗಿದ್ದನೆಂಬುದು ಭಕ್ತರ ಅಂಬೋಣ. ಆದರೆ ಇಂದು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ವಾವರ ಸ್ವಾಮಿಯ ಭೇಟಿ ಮಾಡದಿದ್ದರೆ ಅಯ್ಯಪ್ಪನ ದರ್ಶನ ಸಂಪೂರ್ಣವಲ್ಲ ಎಂದು ತಿಳಿಯುತ್ತಾರೆ. ಭಕ್ತನಾಗಿದ್ದ ವಾವರ ಸ್ವಾಮಿಯ ಭೇಟಿ ಮಾಡಿ ಕಾಣಿಕೆ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಮುಸಲ್ಮಾನ ವಾವರನ ಭೇಟಿಗಾಗಿ ಕಾಣಿಕೆ ಕೊಡುವ ಅಥವಾ ಅಲ್ಲಿ ದೊರಕುವ ಭಸ್ಮ ಸ್ವೀಕರಿಸುವ ಅಗತ್ಯವಿಲ್ಲವೆಂದು ತೋರುತ್ತದೆ. ಭಸ್ಮಧಾರಿಯಾದ ಅಯ್ಯಪ್ಪ ಭಕ್ತನನ್ನು ಮುಸ್ಲಿಂ ಎಂದು ಪರಿಗಣಿಸುವ ಅಗತ್ಯವಿಲ್ಲ ಮತ್ತು ಈ ಬಗೆಯ ಕಾಣಿಕೆಗಳನ್ನು ಸ್ವೀಕರಿಸುವುದು ಅವರ ಆಚಾರದ ಪ್ರಕಾರ ಶಿರ್ಕ್ ಎನಿಸಿಕೊಳ್ಳುತ್ತದೆ. ಹೀಗಾಗಿ ನಿಜವಾಗಿ ಅವರ ಮತಾನುಸರಣೆಗೆ ಅದರ ಅಗತ್ಯವಿಲ್ಲ.
ಬದರಿನಾಥದಲ್ಲಿ ಇಂದಿಗೆ ಇರುವ ಅವಧಿ ಭಾಷೆಯ ಆರತಿ ಶ್ಲೋಕವನ್ನು ಬರೆದವರು ಸಂತ ಬದರುದ್ದಿನ್ ಎನ್ನಲಾಗುತ್ತದೆ. ಆದ ಸಂತ ಬದರುದ್ದಿನ್ ಎಂಬವರು ಭಸ್ಮಧಾರಿಯಾದ ಶಿವಭಕ್ತನೆಂದು ಅಲ್ಲಿಯೇ ಹೇಳಲಾಗುತ್ತದೆ. ಭಸ್ಮಧಾರಿಯಾದ ಶಿವಭಕ್ತನನ್ನು ಮುಸಲ್ಮಾನನನ್ನು ಮುಸ್ಲಿಂ ಎಂದು ಪರಿಗಣಿಸುವ ಅಗತ್ಯವಿಲ್ಲ. ಸಂತ ಬದರುದ್ದಿನ್ ಕಥೆಯಲ್ಲ, ನಿಜವಾಗಿ ಇದ್ದವರೆಂದು ಪರಿಗಣಿಸಿದರೂ ಶಿವಭಕ್ತನಾದ ಬದರುದ್ದಿನ್ ಅವರಿಗೆ ದರ್ಗಾ ಇರುವುದಿಲ್ಲ ಎಂದು ತಿಳಿಯಬೇಕು.
ಇನ್ನು ಸೂಫಿ ಬದರುದ್ದಿನ್ ದರ್ಗಾ (ಬಾಘ್ಪತ್) ಎನ್ನಲಾಗುವ ಪ್ರದೇಶವೂ ಸಹ ಆಕ್ರಮಣ ಮಾಡಿಕೊಂಡ ಸ್ಥಳವೆಂಬುದಾಗಿ ವರದಿಗಳಿವೆ.