ಎಣೆಯಿಲ್ಲದ ಚೆಲುವೆ,
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂ
ಕಣ್ಣಲ್ಲೆ ನುಡಿವವಳು;
ತನ್ನ ಕಣ್ಣಲ್ಲೆ ನುಡಿವವಳು
ನಾಲಗೆ ನುಡಿಯದ ಮಾತುಗಳೆಲ್ಲವ
ತನ್ನ ಕಣ್ಣಲ್ಲೆ ನುಡಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಮೈಹೊಳಪಿನ ಕಾಂತಿಯೆ ಇಲ್ಲದೆ ಹೋದರೂ
ಬಂಗಾರದಂಥವಳು;
ಮನದೆ ಬಂಗಾರದಂಥವಳು
ಮೈಬಣ್ಣದ ಭ್ರಾಂತಿಗೆ ಸೋಲದೆ ಇದ್ದರೂ ಬಂಗಾರದಂಥವಳು;
ಮನದೆ ಬಂಗಾರದಂಥವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ಮಾತುಗಳಾಡುತ ಮೈಯ ಮರೆವವಳಲ್ಲ
ಮಾತನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ಮಿತಿಗಳನರಿಯದೆ ಆಡದೆ ಇದ್ದರೂ
ಹಿತವನ್ನು ಅರಿತವಳು;
ಮಾತಿನ ಹಿತವನ್ನು ಅರಿತವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
ನಾ ನುಡಿಯದೆ ಇದ್ದರೂ ಮನಸ್ಸಿನ ಮಾತನು
ತಾನಾಗಿ ಅರಿವವಳು
ತಾನಾಡದೆ ಒಂದನೂ ಉಳಿಸದೆ ಇದ್ದರೂ ತಾನಾಗಿ ಅರಿವವಳು;
ಎಲ್ಲವ ತಾನಾಗಿ ಅರಿವವಳು
ನನ್ನ ಮನವನು ಕದ್ದ ಕೋಮಲೆ ಅವಳು;
ಎಣೆಯಿಲ್ಲದ ಚೆಲುವೆ.
Wednesday, September 18, 2019
Subscribe to:
Posts (Atom)
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...