Wednesday, October 17, 2012

ನಂಬುಗೆ

ನಂಬುವುದು ಆದಿಯೊಳು ಪರಮ ಚೇತನ ವಿಭುವ
ಲೋಕವನು ಸೃಷ್ಟಿಸಿದ ಪರದೈವವ

ತಾನು ತಾನಲ್ಲದಿಹ ತಾನೇ ತಾನಾಗಿರುವ
ತನಗೆ ಮಿಗಿಲಿಲ್ಲದಿಹ ಅಧಿದೈವವ

ಎಲ್ಲವನೂ ಒಳಗೊಂಡ ಎಲ್ಲದರ ಹಿಡಿವಡೆದ
ಎಲ್ಲದಕೂ ಮಿಗಿಲಾದ ಚೈತನ್ಯವ

ತಿರುತಿರುಗಿದಾ ಬುಗರಿ ತಿರುಗೆ ತಿರೆಗುರುಳಿದರೆ
ತಿರಿದುದನು ತೆರೆದೀವ ವೈಚಿತ್ರ್ಯವ

ಎಲ್ಲದಕೂ ಎತ್ತರದ ಆದಿಅಂತ್ಯಗಳಿರದ
ಎಲ್ಲರೊಳು ನೆಲೆಸಿರುವ ಆನಂದವ

ರೂಪಗಳ ಮೀರಿರುವ ರೂಪಿನೊಳೇ
ಮೈದೋರ್ವ ಕಾಲದೇಶಗಳಿರದ ಬ್ರಹ್ಮಾಂಡವ

ಬೇಡಿಕೊಳಲಿಂದಿಲ್ಲ ನೂರು ವರಗಳ ಕೃಪೆಯ
ಮೂರುಮೂರರೊಳು ಕಾಣ್ಗೆ ದಿಟದರಿವನು

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...