ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳಕ್ಕಿಂತ ಹೆಚ್ಚು ಜಾತಿಗಳು ಭಾರತದಲ್ಲಿ ಚಾಲ್ತಿಯಲ್ಲಿರುವ ಮುಸ್ಲಿಂ ಮತದಲ್ಲಿದ್ದು ಇವುಗಳಲ್ಲಿ ಕನಿಷ್ಠ ಮೂರಾದರೂ ಜಾತಿಗಳು ಕರ್ಣಾಟಕದಲ್ಲಿ ಇರಲೇಬೇಕು. ಜಾತಿಗಳ ಹೆಸರುಗಳು ನವಾಯತ, ಬ್ಯಾರಿ, ಮುಂತಾಗಿ. ಅವುಗಳಲ್ಲಿ ಹನಫಿ ಮತ್ತು ಶಾಫಿ ಸಂಪ್ರದಾಯಗಳ ವ್ಯತ್ಯಾಸ ಇದ್ದೇ ಇದೆ. ಶಾಫಿ ಸುನ್ನಿಗಳಲ್ಲಿ ಮುಜಾಹಿದ್ ವಿಭಾಗವಿದೆ. ಇದನ್ನು ಮುಸಲ್ಮಾನರ ನಡುವಣ ಪ್ರಜ್ಞಾವಂತರು ಒಪ್ಪುತ್ತಾರೆ. ಇನ್ನೂ ಕೆಲವರು ರಾಜಕೀಯ ದೃಷ್ಟಿಯಿಂದ ಎಲ್ಲರೂ ಒಂದೇ ಎನ್ನುವುದು, ಸಾಮಾಜಿಕವಾಗಿ ಬೇರೆ ಎನ್ನುವ ಶೈಲಿಯನ್ನು ಪ್ರಜ್ಞಾವಂತ ಜನಸಮೂಹ ಒಪ್ಪಬಾರದು. ನಿಜವಾದ ಪ್ರಭುತ್ವ ಇರುವುದು ಪ್ರಜೆಗಳ ಕೈಯಲ್ಲಿ ಎಂಬುದನ್ನು ಮನವೆರಿಕೆ ಮಾಡಿಕೊಡಬೇಕು.
Sunday, April 13, 2025
Monday, March 31, 2025
ಹೂಮಾಲೆಯೊಂದಿಗೆ ಸ್ವಾಗತಿಸಿದರೆ ಹೂಮಳೆ ಸುರಿಸುತ್ತಾರೆ
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ್ಲ. ಆದರೆ ಇವರಿಬ್ಬರನ್ನೂ ಪರಸ್ಪರ ವೈರಿಗಳಂತೆ ಬಿಂಬಿಸುವ ಒಂದು ತಂಡ ಇದೆ. \\
ಇವರನ್ನು ಪರಸ್ಪರ ವೈರಿಗಳೆಂದು ಬಿಂಬಿಸುವ ಗುಂಪೊಂದು ಇದೆ ಎಂದು ಬರೆದಿದ್ದಾರೆ. ಅವರು ಯಾವುದೆಂದು ಸ್ಪಷ್ಟಪಡಿಸಿದರೆ ಲೇಖಕರ ನಿಲುವು ಸ್ಪಷ್ಟವಾಗಬಲ್ಲುದು.
ಈ ಗುಂಪು ಯಾವುದೆಂದು ಲೇಖನದ ಭಾವದಿಂದಲೇ ಊಹಿಸಬಹುದು, ಆದರೆ ಊಹೆ ನಿಜವಾಗಬೇಕೆಂದಿಲ್ಲ. ಆದರೆ, ಅನುಮಾನ ಪರಿಹಾರಕ್ಕಾಗಿ ಲೇಖಕರ ನಿಲುವು ಕೇಳಿದುದಕ್ಕೆ ಅವರು ನೀಡಿದ ಪ್ರತ್ಯುತ್ತರದಿಂದ ಅವರು ಉದ್ದೇಶಿಸಿದ ಆ ಗುಂಪು ಯಾವುದೆಂದು ಸ್ಪಷ್ಟವಾಯಿತು. "ಅದನ್ನು ಊಹಿಸಿದರೆ ಸಾಕು ಎಂಬ ಕಾರಣಕ್ಕಾಗಿಯೇ ನಿರ್ದಿಷ್ಟವಾಗಿ ಹೆಸರಿಸಲಿಲ್ಲ" - ಇದು ಲೇಖಕರ ಮಾತು.
\\ಅವರನ್ನು ಮುಖ್ಯ ವಾಹಿನಿಯಿಂದ ಹೊರದಬ್ಬಬೇಕಾದರೆ ರಾಜಸ್ಥಾನದಲ್ಲಿ ನಡೆದಂತಹ ಬೆಳವಣಿಗೆಗಳು ಈ ದೇಶದ ಎಲ್ಲ ಕಡೆಯೂ ನಡೆಯಬೇಕು. ಮುಸ್ಲಿಮರು ಈ ಕುರಿತಂತೆ ಹೆಚ್ಚು ಜವಾಬ್ದಾರಿಯನ್ನು ವಹಿಸಿಕೊಂಡರೆ ಬಹಳ ಒಳ್ಳೆಯದು.\\
ಇಷ್ಟರಿಂದ ಲೇಖನದ ಉದ್ದೇಶ ಸ್ಪಷ್ಟವಾಗಿದೆ, - "ಮುಸ್ಲಿಮರು ಆರೆಸೆಸ್ಸನ್ನು ದೂರ ಇಡಬೇಕು!"
ಅಂದರೆ ಈ ದೇಶದಲ್ಲಿ ಹಿಂದು ಮುಸ್ಲಿಂ ಭಾಯಿ ಭಾಯಿ ಎಂಬ ಭಾವನೆಯೊಂದಿಗೆ ಸಾವಿರಾರು ವರ್ಷಗಳಿಂದ ಬದುಕುತ್ತ ಬಂದಿದ್ದಾರೆ, ಆರೆಸೆಸ್ಸಿನ ಉಗಮ ಯಾವ ವಿಷಮ ಘಳಿಗೆಯಲ್ಲಿ ಆಯಿತೋ ಅಂದಿನಿಂದ ಈ ದೇಶದಲ್ಲಿ ಹಿಂದು ಮುಸ್ಲಿಂ ಸಹೋದರರು ಪರಸ್ಪರ ಕಚ್ಚಾಡುತ್ತಿದ್ದಾರೆ. ಇಷ್ಟು ಮಾತುಗಳು ಲೇಖಕರ ಇಂಗಿತವಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿಕೊಂಡು ಮುಂದಿನದನ್ನು ನೋಡುವ.
ಮುಸಲ್ಮಾನರಿಗಾಗಿ ಪ್ರತ್ಯೇಕ ದೇಶವೊಂದನ್ನು ಬಿಟ್ಟುಕೊಡಬೇಕು ಎಂಬ ವಾದ ಆರೆಸ್ಸೆಸ್ ಸ್ಥಾಪನೆಗೊಳ್ಳುವುದಕ್ಕಿಂತ ಎಷ್ಟೋ ದಶಕಗಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದಿತು ಮತ್ತು ಅದಕ್ಕಾಗಿ ನಡೆದ ಪ್ರಯತ್ನಗಳಲ್ಲಿ ದೇಶದ ಸಾಮಾನ್ಯ ಪ್ರಜೆಗಳು ಬಲಿಯಾದುದು ಚರಿತ್ರೆ. ಮೊದಲಿಗೆ 'ಬಂಗಾಳ ವಿಭಜನೆ' ಹೋರಾಟದಲ್ಲಿ ಸಾಮಾನ್ಯ ಮುಸಲ್ಮಾನರ ದಾರಿ ತಪ್ಪಿಸಿದ ಮುಖಂಡರ ದೆಸೆಯಿಂದ ಅಸಂಖ್ಯಾತ ಹಿಂದು ಜೀವಗಳು ನೆಲೆ ಕಳೆದುಕೊಂಡುವು ಮತ್ತು ಚರಿತ್ರೆಯಲ್ಲಿ ಮತಗಳ ಹಿನ್ನೆಲೆಯ ವಿಭಜನೆ ನಡೆದೇ ಹೋಯಿತು. ಆಗ ಇನ್ನೂ ಆರೆಸೆಸ್ಸಿನ ಉಗಮ ಆಗಿರಲಿಲ್ಲ. ಹಾಗಾದರೆ "ಇವರಿಬ್ಬರನ್ನು ವೈರಿಗಳಂತೆ ಬಿಂಬಿಸುವ ಗುಂಪು" ಆರೆಸ್ಸೆಸ್ ಅಲ್ಲವೆಂದು ಸ್ಪಷ್ಟವಾಯಿತು. ಆ ಗುಂಪು ಯಾವುದೆಂದು ಮುಂದೆ ನೋಡುವ.
ಆರೆಸ್ಸೆಸ್ ಕ್ರಿ. ಶ. ೧೯೨೫ರಲ್ಲಿ ಸ್ಥಾಪನೆಗೊಂಡಿತು, ಆದರೆ ಹಿಂದುಗಳೇ ಪ್ರತ್ಯೇಕ ರಾಷ್ಟ್ರ, ಅವರಿಗಾಗಿ ಪ್ರತ್ಯೇಕ ದೇಶವೊಂದನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆ ಆರೆಸೆಸ್ಸಿನಿಂದ ಬಂದಿರಲಿಲ್ಲ. ನಿಜವಾಗಿ ನೋಡಿದರೆ ತೀವ್ರ ಮುಸ್ಲಿಂ ಉಗ್ರಗಾಮಿತ್ವದ ಹಿನ್ನೆಲೆಯನ್ನು ಹೊಂದಿದ ಮಲಬಾರ್ ಕಲಾಪದ ಪರಿಣಾಮವಾಗಿ ಆರೆಸ್ಸೆಸ್ ಸ್ಥಾಪನೆಗೆ ಪ್ರೇರಣೆ ದೊರಕಿತು. ಮಲಬಾರ್ ಕಲಾಪದ ವಿವರಗಳನ್ನು ಬರೆಯುವುದಿದ್ದರೆ ಅದೊಂದು ಪ್ರತ್ಯೇಕ ಅಧ್ಯಾಯವಾಗುತ್ತದೆ. ಮಲಬಾರ್ ಕಲಾಪ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವೆಂದು ನಂಬಿದ ಮುಗ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಮತ್ತು ಇನ್ನು ಕೆಲವರು ಅದು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವೆಂದು ಬಿಂಬಿಸುವುದರಲ್ಲಿ ನಿರತರಾದವರೂ ಇದ್ದಾರೆ.
ಮುಸಲ್ಮಾನರೇ ಪ್ರತ್ಯೇಕ ರಾಷ್ಟ್ರ, ಅವರಿಗಾಗಿ ಪ್ರತ್ಯೇಕ ದೇಶವೊಂದನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆ ದಾರಿ ತಪ್ಪಿದ ಮುಖಂಡರಿಂದ ಬಂದಿತು ಮತ್ತು ಸಾಮಾನ್ಯ ಮುಸಲ್ಮಾನ ಅದನ್ನು ಒಪ್ಪಿರಲಿಲ್ಲ. ಇಂಥ ದಾರಿ ತಪ್ಪಿದ ಮುಖಂಡರ ನಡುವೆಯೂ "ಹುಬ್ಬುಲ್ ವತನ್ ಮಿನಲ್ ಈಮಾನ್" ಎಂದು ದೇಶಕ್ಕಾಗಿ ಪಣತೊಟ್ಟ ಮುಸಲ್ಮಾನರನ್ನು ಸೃಷ್ಟಿಸಿದ ಇಮಾಮರುಗಳೂ ಇದ್ದರೆಂಬುದನ್ನು ಮರೆಯಲಾಗದು. ಆದರೆ ದಾರಿ ತಪ್ಪಿದ ಮುಖಂಡರ ಸ್ವರವೇ ತೀವ್ರವಾಗಿತ್ತು ಮತ್ತು ಪ್ರತ್ಯೇಕ ದೇಶದ ಸ್ಥಾಪನೆಯೇ ಆಗಿಹೋಯಿತು, ತನ್ಮೂಲಕ ಪ್ರಪಂಚದ ಇತಿಹಾಸ ಕಂಡು ಕೇಳರಿಯದ ದೌರ್ಜನ್ಯವೊಂದಕ್ಕೆ ಈ ದೇಶ ಸಾಕ್ಷಿಯಾಯಿತು. ಮತಗಳ ಆಧಾರದಲ್ಲಿ ವಿಭಜನೆಗೊಂಡ ಎರಡು ದೇಶಗಳು! ಆದರೆ ಮತಗಳ ಆಧಾರದಲ್ಲಿ ಪ್ರತ್ಯೇಕ ದೇಶಗಳನ್ನು ಬಿಟ್ಟುಕೊಡುತ್ತ ಸಾಗಿದರೆ ಕೊನೆಗೆ ಉಳಿದೀತು ಎಂಬ ಆತಂಕಕ್ಕೂ ದಾರಿಯಾಯಿತು. ಆ ಆತಂಕ ಕೆಲವೇ ದಶಕಗಳ ನಂತರ ಸತ್ಯವಾಯಿತು ಮತ್ತು ಕ್ರೈಸ್ತ ಮತದ ಆಧಾರದಲ್ಲಿ ಪ್ರತ್ಯೇಕ ದೇಶ ಬೇಕೆಂಬ ಕೂಗು ಈಶಾನ್ಯ ಮೂಲೆಯಿಂದ ಕೇಳಿಬಂದಿತು. ತಮ್ಮ ಆಚಾರ, ಅನುಷ್ಠಾನಗಳಿಂದ ಹಿಂದುಗಳೇ ಆಗಿದ್ದ ಸಿಕ್ಖರು ಪ್ರತ್ಯೇಕತೆಯನ್ನು ಅನುಭವಿಸತೊಡಗಿದರು. ಕ್ರಮೇಣ ಸಿಕ್ಖರು ತಮ್ಮ ಪ್ರತ್ಯೇಕತೆಯನ್ನು ಅನುಭವಿಸುವುದರ ಜೊತೆಗೆ ಪ್ರತ್ಯೇಕ ದೇಶದ ಬೇಡಿಕೆಯನ್ನೂ ಇಟ್ಟರು. ಇದಕ್ಕಾಗಿ ನಡೆದ ಹೋರಾಟಗಳು ಕೊನೆಗೆ ದೇಶದ ಪ್ರಮುಖ ನಾಯಕರನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಹೊರದೇಶದಲ್ಲಿದ್ದುಕೊಂಡು ಭಾರತಕ್ಕೆ ಸೆಡ್ಡು ಹೊಡೆಯುವ ಸಿಕ್ಖ ಗುಂಪುಗಳೂ ಸೃಷ್ಟಿಯಾದುವು.
"ಹುಬ್ಬುಲ್ ವತನ್ ಮಿನಲ್ ಈಮಾನ್" ಎಂಬ ಮಾತು ಖುರಾನಿನಲ್ಲಿ ಇಲ್ಲದಿದ್ದರೂ ಅದನ್ನು ಪ್ರಚಾರ ಮಾಡುವ ಮೂಲಕ ದೇಶಪ್ರೇಮವನ್ನು ಮೆರೆದ ಮಹಾನುಭಾವರನ್ನು ಈ ಸಂದರ್ಭದಲ್ಲಿ ನೆನೆಯುವುದು ಅನಿವಾರ್ಯ.
ವಿಭಜನೆ ಆಯಿತು, ಅತ್ತ ಕಡೆ ಏನಾಯಿತೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ.
ಹೀಗಿರುವಾಗ "ಈ ಇಬ್ಬರನ್ನು ಪರಸ್ಪರ ವೈರಿಗಳಂತೆ ಬಿಂಬಿಸುವುದರಲ್ಲಿ" ಆರೆಸ್ಸೆಸ್ಸಿನ ಪಾತ್ರ ಎಲ್ಲಿ ಆರಂಭಗೊಂಡಿತು, ಎಲ್ಲಿ ಕೊನೆಗೊಂಡಿತು ಎಂಬುದನ್ನು ಓದುಗರ "ಊಹೆಗೆ" ಬಿಡುತ್ತೇನೆ.
Saturday, March 1, 2025
Three Language Policy
Effective three language policy would be to assign one more language in addition to the existing state languages, e.g. Kannada could be assigned to Gujarat, Tamil to UP, Konkani to Maharashtra and so on. This could be an effective three language policy. Then nobody should feel the imposition of Hindi over regional languages. In fact, Hindi should not be imposed over the south. More prominence should be given to the regional languages of the North such as Punjabi and Bengali. At the end of the day, what one learns is the essence of Indic language Base.
Thursday, December 12, 2024
ಸರಕಾರದಿಂದಾಗುವ ಅಪವ್ಯಯ
1000 ಕೆಜಿ ಗಂಧದ ಕಟ್ಟಿಗೆಗೆ 12000x1000 = 1,20,00,000 ಆಗುತ್ತದೆ. ಅಷ್ಟು ಕಟ್ಟಿಗೆಯನ್ನು ಅರಣ್ಯ ಇಲಾಖೆಯಿಂದ (ರಾಜ್ಯದ ಬೊಕ್ಕಸದಿಂದ) ಪೂರೈಸಿ ಅಂತ್ಯ ಸಂಸ್ಕಾರ ನೆರವೇರಿಸುವ ಬದಲಿಗೆ ಅಗಲಿದವರ ಹೆಸರಿನಲ್ಲಿ ಜನೋಪಯೋಗಿ ಯೋಜನೆಗಳಿಗೆ ವಿನಿಯೋಗಿಸಬಾರದೇಕೆ?
Sunday, November 24, 2024
ಅನ್ಯವನ್ನು ಒಳಗೊಳ್ಳುವ ಕಷ್ಟ
ನಂಬಿಕೆಯ ಬುಡಕ್ಕೆ ಕೈ ಹಾಕಿದರೆ ಪ್ರತಿಯೊಂದು ಮತಪಂಥದಲ್ಲಿ ಹುಳುಕುಗಳು ಸಿಕ್ಕಬಹುದು. ಎಕ್ಸ್-ಮುಸ್ಲಿಂ ಎಂಬ ಆ಼ಷಾಢಭೂತಿ ಸಮಯಸಾಧಕ ಇಸ್ಲಾಂ ಮತದ ಮೂಲಕ್ಕೆ ಕೈ ಹಾಕಿ ಯಾರಿಗೋ ನ್ಯಾಯ ಒದಗಿಸುತ್ತಾನೆ ಎನ್ನುವುದು ಭ್ರಮೆ. ಇವನು ತನ್ನ ಬೆಂಬಲಿಗರನ್ನೇ ಹೀಯಾಳಿಸುವ ಪೋಸ್ಟುಗಳು ಈ ಮೂರ್ಖನಿಂದ ಈ ಹಿಂದೆಯೇ ಬಂದಿವೆ. ಸೋಜಿಗದ ವಿಷಯ ಏನೆಂದರೆ ಸನಾತನ ಧರ್ಮಾವಲಂಬಿಗಳಾದವರು ಇವನ ಬೆಣ್ಣೆ ಮಾತುಗಳಿಗೆ ಬಲಿಯಾಗಿ ಇಸ್ಲಾಂ ಮತದ ದೂಷಣೆಗೆ ತೊಡಗುತ್ತಾರೆ. ಆದರೆ ಇವನು ತನ್ನ ಸಮಯ ನೋಡಿಕೊಂಡು ಸನಾತನ ಧರ್ಮದ ಅವಹೇಳನ ಮಾಡುವವನು. ಆಧುನಿಕ ಕಾಲದ ಪೊಲಿಟಿಕಲ್ ಇಸ್ಲಾಂ ಎಂಬ ಮತೀಯ ಭ್ರಾಂತಿಯನ್ನು ವಿರೋಧಿಸುವುದು ಬೇರೆ, ಇಸ್ಲಾಂ ಮತ ಎಂಬ ಮೂಲ ಸತ್ತ್ವವನ್ನು ವಿರೋಧಿಸುವುದು ಬೇರೆ. ಶಾಂತವಾಗಿ ಮುನ್ನಡೆಯುವ ಸಮಾಜದಲ್ಲಿ ಇನ್ನೊಬ್ಬನನ್ನು ವಿರೋಧಿಸುವುದು ಜೀವನದ ಮಾರ್ಗ ಆಗದಿರಲಿ. ಅನ್ಯವನ್ನು ಒಳಗೊಳ್ಳುವುದು ಕಷ್ಟದ ಕೆಲಸ, ಆದರೆ ಅದು ಅನಿವಾರ್ಯದ ಹಾದಿ.
Wednesday, October 30, 2024
ಸಂತ ಬದರುದ್ದಿನ್ - ಬದರಿನಾಥ
ಶಬರಿಮಲೆಯಲ್ಲಿ ವಾವರ ಸ್ವಾಮಿ ಇರುವಂತೆ ಬದರಿನಾಥದಲ್ಲಿ ಅದೇ ಸ್ಥಾನ ಸಂತ ಬದರುದ್ದಿನ್ ಅವರಿಗೆ ಇದೆ ಎಂದು ತಿಳಿಯಬಹುದು. ವಾವರ ಸ್ವಾಮಿ ನಿಜವಾಗಿ ಅಯ್ಯಪ್ಪನ ಭಕ್ತನಾಗಿದ್ದನೆಂಬುದು ಭಕ್ತರ ಅಂಬೋಣ. ಆದರೆ ಇಂದು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ವಾವರ ಸ್ವಾಮಿಯ ಭೇಟಿ ಮಾಡದಿದ್ದರೆ ಅಯ್ಯಪ್ಪನ ದರ್ಶನ ಸಂಪೂರ್ಣವಲ್ಲ ಎಂದು ತಿಳಿಯುತ್ತಾರೆ. ಭಕ್ತನಾಗಿದ್ದ ವಾವರ ಸ್ವಾಮಿಯ ಭೇಟಿ ಮಾಡಿ ಕಾಣಿಕೆ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಮುಸಲ್ಮಾನ ವಾವರನ ಭೇಟಿಗಾಗಿ ಕಾಣಿಕೆ ಕೊಡುವ ಅಥವಾ ಅಲ್ಲಿ ದೊರಕುವ ಭಸ್ಮ ಸ್ವೀಕರಿಸುವ ಅಗತ್ಯವಿಲ್ಲವೆಂದು ತೋರುತ್ತದೆ. ಭಸ್ಮಧಾರಿಯಾದ ಅಯ್ಯಪ್ಪ ಭಕ್ತನನ್ನು ಮುಸ್ಲಿಂ ಎಂದು ಪರಿಗಣಿಸುವ ಅಗತ್ಯವಿಲ್ಲ ಮತ್ತು ಈ ಬಗೆಯ ಕಾಣಿಕೆಗಳನ್ನು ಸ್ವೀಕರಿಸುವುದು ಅವರ ಆಚಾರದ ಪ್ರಕಾರ ಶಿರ್ಕ್ ಎನಿಸಿಕೊಳ್ಳುತ್ತದೆ. ಹೀಗಾಗಿ ನಿಜವಾಗಿ ಅವರ ಮತಾನುಸರಣೆಗೆ ಅದರ ಅಗತ್ಯವಿಲ್ಲ.
ಬದರಿನಾಥದಲ್ಲಿ ಇಂದಿಗೆ ಇರುವ ಅವಧಿ ಭಾಷೆಯ ಆರತಿ ಶ್ಲೋಕವನ್ನು ಬರೆದವರು ಸಂತ ಬದರುದ್ದಿನ್ ಎನ್ನಲಾಗುತ್ತದೆ. ಆದ ಸಂತ ಬದರುದ್ದಿನ್ ಎಂಬವರು ಭಸ್ಮಧಾರಿಯಾದ ಶಿವಭಕ್ತನೆಂದು ಅಲ್ಲಿಯೇ ಹೇಳಲಾಗುತ್ತದೆ. ಭಸ್ಮಧಾರಿಯಾದ ಶಿವಭಕ್ತನನ್ನು ಮುಸಲ್ಮಾನನನ್ನು ಮುಸ್ಲಿಂ ಎಂದು ಪರಿಗಣಿಸುವ ಅಗತ್ಯವಿಲ್ಲ. ಸಂತ ಬದರುದ್ದಿನ್ ಕಥೆಯಲ್ಲ, ನಿಜವಾಗಿ ಇದ್ದವರೆಂದು ಪರಿಗಣಿಸಿದರೂ ಶಿವಭಕ್ತನಾದ ಬದರುದ್ದಿನ್ ಅವರಿಗೆ ದರ್ಗಾ ಇರುವುದಿಲ್ಲ ಎಂದು ತಿಳಿಯಬೇಕು.
ಇನ್ನು ಸೂಫಿ ಬದರುದ್ದಿನ್ ದರ್ಗಾ (ಬಾಘ್ಪತ್) ಎನ್ನಲಾಗುವ ಪ್ರದೇಶವೂ ಸಹ ಆಕ್ರಮಣ ಮಾಡಿಕೊಂಡ ಸ್ಥಳವೆಂಬುದಾಗಿ ವರದಿಗಳಿವೆ.
Saturday, October 5, 2024
ಕಟ್ಟಲೆಡೆಗೊಡುವ ದಾರಿಯೆನಗಿರಲಿ
ಮತಪಂಥಗಳ ಮೂಲತತ್ವಗಳನ್ನು ಅರಿತು ಜೀವಿತದಲ್ಲಿ ಸನ್ಮಾರ್ಗಗಳನ್ನು ರೂಪಿಸಿಕೊಳ್ಳುವ ಸಾಧ್ಯತೆ ನಿಚ್ಚಳವಿದ್ದಾಗಲೂ ಅದರಲ್ಲಿರಬಹುದಾದ ಕುಂದುಕೊರತೆಗಳನ್ನು ನೀಗಿಸಿಕೊಳ್ಳಲಾಗದೆ ತೀವ್ರಗಾಮಿತ್ವಗಳನ್ನಳವಡಿಸಿಕೊಳ್ಳುವ ದಾರಿ ಕೆಡವಲೆಡೆಗೊಡುವ ದಾರಿ, ಅದು ಕಟ್ಟಲೆಡೆಗೊಡುವ ದಾರಿಯಾಗಿರದು.
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...



